ಹುಲಿಯಾದನು ಹಿರಿಯಡ್ಕದ ಈ ಹುಡುಗ: ವಿತಿನ್ ಅನ್ನೋ ಹುಲಿ ವೇಷದಾರಿ ಹೇಗೆ ಕುಣಿತಾನೆ ಅಂದ್ರೆ..

ಸರತಿಸಾಲಿನಲ್ಲಿ ಹಬ್ಬಗಳು ಮೇಳೈಸುತಿದ್ದರೆ ಇತ್ತ ಮಂಗಳೂರು ಸುತ್ತಮುತ್ತ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಒಂದೆರಡು ಹುಲಿ ಕುಣಿತದ ತಾಸೆಯ ಸದ್ದುಗಳು ಕೇಳುತ್ತಿವೆ. ಈ ವರುಷ ಕೊರೋನ ಲಾಕ್ಡೌನ್ ಎಫೆಕ್ಟ್ ನಿಂದ ಹುಲಿವೇಷಕ್ಕೆ ಅನುಮತಿ ಸಿಕ್ಕರೂ ದೇವಾಲಯದ ಕೆಲವು ಭಾಗಗಳಲ್ಲಿ ಮಾತ್ರ ತಾಸೆಯ ಸದ್ದು ಕೇಳಿಸುತ್ತಿದೆ. ಮೈಗೆ ಹಳದಿ, ಕಪ್ಪು ಬಣ್ಣಗಳ ಪಟ್ಟೆ ಬಳಿದುಕೊಂಡು, ತಲೆಗೆ ಹುಲಿ ವೇಷದ ಮುಖವಾಡ ಹಾಕಿಕೊಂಡ ನಾಲ್ಕಾರು ಮಂದಿಯ ತಂಡ, ಕಾಲು–ಕೈಗಳನ್ನು ಆಡಿಸುತ್ತಾ ತಾಸೆ ಪೆಟ್ಟಿನ ಹೆಜ್ಜೆ ಹಾಕುತ್ತಿದ್ದರೆ, ಅಲ್ಲಿಗೆ ಕರಾವಳಿಯಲ್ಲಿ ದಸರಾ ಸಡಗರ […]

ನಾಟ್ಕದೂರು ಕಟ್ಟಿ ರಾಷ್ಟ್ರ ರಂಗಭೂಮಿಯ ಚಿತ್ತ ತನ್ನತ್ತ ಸೆಳೆದ ಕಲಾವಿದ ಸುಕುಮಾರ್ ಮೋಹನ್ ಕತೆ ಒಮ್ಮೆ ಕೇಳಿ!

ರಂಗಭೂಮಿಯ ಸೆಳೆತಕ್ಕೊಳಗಾಗಿ, ಆ ರಂಗದಲ್ಲಿ ಸಾಧಿಸುವ ಮಿಡಿತ ಮನದೊಳಗೆ ತುಡಿತವಾಗಿ ಬಿಟ್ಟರೆ, ರಾಜ್ಯ,ದೇಶ-ಭಾಷೆಗಳನ್ನು ಮೀರಿ ಅದ್ಭುತವಾಗಿ ಬೆಳೆಯಬಹುದೆಂಬುವುದಕ್ಕೆ ಈ ಕಲಾವಿದ ಸಾಕ್ಷಿ. ಪುಟ್ಟ ಊರು ಮುದ್ರಾಡಿಯಲ್ಲಿ ರಂಗಭೂಮಿ ಕಲಾಸಂಘಟನೆ ಕಟ್ಟಿ ಮುದ್ರಾಡಿ ಅನ್ನೋ ಊರನ್ನು ನಾಟ್ಕದೂರಾಗಿ ಪರಿವರ್ತಿಸಿದ ಕಲಾವಿದ ಸುಕುಮಾರ್ ಮೋಹನ್ ಅವರ ಕತೆಯಿದು. ಹೈದರಾಬಾದ್, ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ, ಮುಂಬಯಿ, ಪೂನಾ, ಮೈಸೂರು, ಬೆಂಗಳೂರು ಮಾತ್ರವಲ್ಲದೆ ನಾನಾ ಕಡೆಯ ಹೆಸರಾಂತ ಥಿಯೇಟರ್/ರೆಫೆರ್ಟರಿಗಳ ಪ್ರಬುದ್ಧ ನಾಟಕ ತಂಡಗಳು ಕನಸುಗಳ ಕಥೆ ಕಟ್ಟಿ ಕರ್ನಾಟಕದ ಉಡುಪಿ ಜಿಲ್ಲೆಯ […]

ಇವರು ತಯಾರಿಸೋ ಕ್ರಿಕೆಟ್ ಬ್ಯಾಟ್ ಗೆ ಭಾರೀ ಡಿಮ್ಯಾಂಡ್: ನೆಲ್ಲಿಕಾರಿನ ಚಂದ್ರಶೇಖರ್ ಆಚಾರ್ಯರು ಮಾಡೋ ಬ್ಯಾಟ್ ಕ್ರಿಕೆಟ್ ಪ್ರೇಮಿಗಳ ಅಚ್ಚುಮೆಚ್ಚು

ಇವರು ತಯಾರಿಸೋ ಕ್ರಿಕೆಟ್ ಬ್ಯಾಟ್ ಗೆ ಭಾರೀ ಡಿಮ್ಯಾಂಡಿದೆ.ದೀರ್ಘ ಬಾಳಿಕೆ ಬರುವ ಇವರು ತಯಾರಿಸೋ ಬ್ಯಾಟ್ ಗಾಗಿ ಹುಡುಕಿಕೊಂಡು ಬರುವ ಕ್ರಿಕೆಟ್ ಪ್ರೇಮಿಗಳಿದ್ದಾರೆ, ಹೌದು. ಕ್ರಿಕೆಟ್ ಬ್ಯಾಟ್ ತಯಾರಿಕೆ ಮಾಡುವ ನೆಲ್ಲಿಕಾರಿನ ಚಂದ್ರಶೇಖರ್ ಆಚಾರ್ಯ ತುಳುನಾಡಿನ ಜನರ ಮನಗೆದ್ದಿದ್ದಾರೆ ಕಳೆದ ಹತ್ತೊಂಬತ್ತು ವರ್ಷಗಳ ಬ್ಯಾಟ್ ಸೇರಿದಂತೆ ಮರದ ಕೆಲಸಗಳಲಕ್ಲಿ ತೊಡಗಿರುವ ಇವರು ಬ್ಯಾಟ್ ತಯಾರಿಸುವಲ್ಲಿ ಸಿದ್ಧಹಸ್ತರು. ಇವರು ತಯಾರಿಸುವ ಬ್ಯಾಟ್ ಗಳಿಗೆ ಪುತ್ತೂರು ಮಂಗಳೂರು ಉಡುಪಿ ಬೆಳ್ತಂಗಡಿ ದಾವಣಗೆರೆಯಾದ್ಯಂತ ಭಾರಿ ಬೇಡಿಕೆ, ಕ್ರಿಕೆಟ್ ಪ್ರೇಮಿಗಳ ಬೇಡಿಕೆಗೆ ಅನುಗುಣವಾಗಿ […]

ಹವ್ಯಾಸಿ ನಾಣ್ಯ ಸಂಗ್ರಹಕಾರ ಮಂಜುನಾಥ್ ಸಂಗ್ರಹದಲ್ಲಿದೆ ರೂ.20 ನಾಣ್ಯ

ಪ್ರಾಚ್ಯ ವಸ್ತು ಸಂಗ್ರಾಹಕಾರರಾದ ಕುಕ್ಕುಂದೂರಿನ ಕೆ. ಮಂಜುನಾಥ್ ಇವರ ಹವ್ಯಾಸಿ ಸಂಗ್ರಹಕ್ಕೆ ಎಂದಿನಂತೆ ಈ ಬಾರಿಯೂ ಕೂಡಾ ಹೊಸ ಮಾದರಿ ಹಾಗೂ ವಿನ್ಯಾಸದ ರೂಪಾಯಿ 2, 5, 10 ಮತ್ತು ಭಾರತದ ನಾಣ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚಲಾವಣೆಗೆ ಬಿಡುವಂತಹ ರೂ. 20ರ ನಾಣ್ಯವನ್ನು ತನ್ನ ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ. ಈ ನಾಣ್ಯವು ಸದ್ಯದಲ್ಲೇ ಸಾರ್ವಜನಿಕರಿಗೆ ಚಲಾವಣೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಗೆ ಬಿಡುತ್ತದೆ. ಮೂಲತಃ ಬ್ಯಾಂಕ್ ಉದ್ಯೋಗಿಯಾಗಿರುವ ಇವರು ತನ್ನ ಹವ್ಯಾಸಿ ಸಂಗ್ರಹದಲ್ಲಿ ಈ ಮೊದಲು ಕೂಡ […]

ಈ ಪರಿಸರ ಸ್ನೇಹಿ ಬಿದಿರಿನ ಬುಟ್ಟಿ, ಸೇರು ಖರೀದಿಸಿ: ಬಡ ಕುಟುಂಬದ ಬದುಕಿನ ಬುಟ್ಟಿಗೆ ಖುಷಿ ತುಂಬಿಸಿ!

ಬಡತನದ ಬೇಗೆಯಿಂದ ಬಳಲುತ್ತಿರುವ ಕುಟುಂಬಗಳು ಕಾರ್ಕಳ ತಾಲೂಕಿನ ಕಡ್ತಲದ ಚೆನ್ನಿಬೆಟ್ಟು ಸಮೀಪ ನೂರಾರು ಬಿದಿರಿನ ಉತ್ಪನ್ನಗಳನ್ನು ಮಾಡಿ ಅದನ್ನೇ ನಂಬಿ ಕೂತಿದೆ. ಈ ಕುಟುಂಬ ಇದೀಗ ಸಾಂಪ್ರದಾಯಿಕ ಬೆತ್ತದ ಬುಟ್ಟಿ, ಸೇರು,ಅಕ್ಕಿ ತಡಪೆಗಳನ್ನು ತಯಾರಿಸಿಟ್ಟುಕೊಂಡು ಯಾರಾದರೂ ಕೊಳ್ಳುವರಾ ಅಂತ ಕಾಯುತ್ತಾ ಕೂತಿದ್ದಾರೆ. ಕೋಲ ಕಟ್ಟಳೆಗಳು ಹೀಗೆ ಸಾಂಪ್ರದಾಯಿಕ ಶೈಲಿಯ ತುಳುನಾಡಿನ ಕಲೆಯನ್ನು ಉಳಿಸಿಕೊಂಡು ಕಲಿಸಿಕೊಂಡು ಬರುವ ವಂಶ ಅವರದ್ದು. ಇವರ ಹೆಸರು ಸುಧಾಕರಣ್ಣ, ಕೋಲ ಮೊದಲಾದ ವೇಷಗಳನ್ನು ಹಾಕುತ್ತ ಕೋಲ ಕಟ್ಟುವಲ್ಲಿ ತುಳುನಾಡಿನಲ್ಲಿ ಹೆಸರನ್ನು ಪಡೆದ ವ್ಯಕ್ತಿ […]