ಉಡುಪಿ: ಆತ್ರಾಡಿಯಲ್ಲಿ ಮನೆ ಮನೆಯಲ್ಲಿ ಭಜನೆ – ವರ ಮಹಾಲಕ್ಷ್ಮಿ ಪೂಜೆ, ರಕ್ಷಾ ಬಂಧನ – ಸಾಧಕರಿಗೆ ಸನ್ಮಾನ

ಉಡುಪಿ: ಮಂಜುನಾಥ ಭಜನಾ ಮಂಡಳಿ ಆತ್ರಾಡಿ ವತಿಯಿಂದ ಶ್ರೀಮತಿ ಕವಿತಾ ಸತ್ಯಾನಂದ ನಾಯಕ್ರವರ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಮತ್ತು ಭಜನಾ ಮಹೋತ್ಸವ ವನ್ನು ಆಚರಿಸಲಾಯಿತು. ಒಂದು ಗಂಟೆಗಳ ಕಾಲ ಭಜನೆ ನಂತರ ಲಕ್ಷೀ ದೇವರಿಗೆ ಮಂಗಳಾರತಿ ಮಾಡಲಾಯಿತು. ಶ್ರೀಮತಿ ಕವಿತಾರವರು ಸೇರಿರುವ ಅಕ್ಕಂದಿರಿಗೆ ಅರಶಿನ -ಕುಂಕುಮ ಹಚ್ಚಿ ರವಿಕೆ ಕಣ ಗುಲಾಬಿ ಪುಷ್ಪವನ್ನು ನೀಡಿದರು. ಕಳೆದ ಹಲವು ವರ್ಷಗಳಿಂದ ಪ್ರತಿ ಶುಕ್ರವಾರ ಗ್ರಾಮದ ವಿವಿಧ ಮನೆಗಳಿಗೆ ತೆರಳಿ ಭಜನೆ ಮಾಡುವ ಕಾರ್ಯಕ್ರಮದ ಉಸ್ತುವಾರಿಯನ್ನು ಬಹಳ ನಿಷ್ಠೆಯಿಂದ […]
ಜಗತ್ತಿಗೆ ಸಮಾನತೆ ಎಂಬ ಜ್ಞಾನದ ಬೆಳಕನ್ನು ಚೆಲ್ಲಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು: ಶಾಸಕ ಯಶ್ಪಾಲ್ ಎ ಸುವರ್ಣ

ಉಡುಪಿ: ದೇಶ ಕಂಡ ಮಹಾನ್ ಸಂತರಲ್ಲಿ ಒಬ್ಬರಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜ ಸುಧಾರಣೆಯಲ್ಲಿ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುವ ಮೂಲಕ ಹಿಂದುಳಿದ ಸಮಾಜದವರು ಮುಖ್ಯ ವಾಹಿನಿಗೆ ಬರಲು ದಾರಿ ಮಾಡಿಕೊಟ್ಟಿದ್ದಾರೆ. ಸಾಮಾಜಿಕ ಕಳಕಳಿಯ ಚಟುವಟಿಕೆಗಳ ಮೂಲಕ ದೇಶದೆಲ್ಲೆಡೆ ಸಂಚರಿಸಿ, ಜಗತ್ತಿಗೆ ಸಮಾನತೆ ಎಂಬ ಜ್ಞಾನದ ಬೆಳಕನ್ನು ಹರಿಸಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ಹೇಳಿದರು. ಅವರು ಇಂದು ನಗರದ ಬನ್ನಂಜೆ ನಾರಾಯಣ ಗುರು ಆಡಿಟೋರಿಯಂ ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು […]
TDF – ದಿ ಡೈಮಂಡ್ ಫ್ಯಾಕ್ಟರಿ ವಿಶೇಷ ಜ್ಯುವೆಲ್ಲರಿ ಎಕ್ಸಿಬಿಷನ್ ಗೆ ಚಾಲನೆ

ಬ್ರಹ್ಮಾವರ: ಆಭರಣ ಪ್ರಿಯರ ಮನಸೂರೆಗೊಳ್ಳುವ ವಿಶೇಷ ಜ್ಯುವೆಲ್ಲರಿ ಎಕ್ಸಿಬಿಷನ್ಗೆ ಗಣ್ಯ ಅತಿಥಿಗಳಾದ ಲತಾ ಸತೀಶ್ ಚಂದ್ರ ಹೆಗ್ಡೆ ,ಗೀತಾ ಜಯಚಂದ್ರ ಹೆಗ್ಡೆ, ಸಹನ ಶೆಟ್ಟಿ,ಶ್ರೀವಲ್ಲಿ ಶೆಟ್ಟಿ, ದಿವ್ಯ ಹೆಗ್ಡೆ, ಡಾ. ಶಕೀಲಾ ಸಚಿನ್ , ನೀತಾ ಶೆಟ್ಟಿ ,ಸೌಮ್ಯ ಶೆಟ್ಟಿ ಇವರಿಂದ ಉದ್ಘಾಟನೆಗೊಂಡಿತು . TDF – ದಿ ಡೈಮಂಡ್ ಫ್ಯಾಕ್ಟರಿ ವತಿಯಿಂದ ಆಗಸ್ಟ್ 28, 29 ಮತ್ತು 30ರಂದು ಮೂರು ದಿನಗಳ ಕಾಲ ವಿಶೇಷ ಆಭರಣ ಪ್ರದರ್ಶನ ಬ್ರಹ್ಮಾವರದ ಫಾರ್ಚೂನ್ ಪ್ಲಾಜಾ ಹೋಟೆಲ್ನಲ್ಲಿ ಬೆಳಿಗ್ಗೆ 10 […]
ಹೆಬ್ರಿ ತಾಲೂಕು ಮಟ್ಟದ 10ನೇ ವರ್ಷದ ಚಿತ್ರಕಲಾ ಸ್ಪರ್ಧೆ; ಕಲಾ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ – ರವೀಂದ್ರ ಹೆಗ್ಡೆ

ಹೆಬ್ರಿ: ಗ್ರಾಮೀಣ ಪ್ರದೇಶವಾದ ಹೆಬ್ರಿಯಲ್ಲಿ ಚಾಣಕ್ಯ ಶಿಕ್ಷಣ ಸಂಸ್ಥೆ ಕಳೆದ 12 ವರ್ಷಗಳಿಂದ ಗುಣಮಟ್ಟದ ವಿವಿಧ ಕಲಾಪ್ರಕಾರಗಳ ತರಬೇತಿ ಜೊತೆಗೆ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತ ಚಿತ್ರಕಲಾ ತರಬೇತಿ ನೀಡಿ ಅವರಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿರುತ್ತಿರುವುದು ಶ್ಲಾಘನೀಯ ಎಂದು ಮುದ್ರಾಡಿ ನೆಲ್ಲಿಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆ ಹೇಳಿದರು. ಅವರು ಚಾಣಕ್ಯ ಚಿತ್ರಕಲಾ ತರಬೇತಿ ಕೇಂದ್ರ ಹೆಬ್ರಿ ಇದರ ನೇತೃತ್ವದಲ್ಲಿ ನೇತಾಜಿ ಫ್ರೆಂಡ್ಸ್ ಕ್ಲಬ್ ಮುದ್ರಾಡಿ ,ಲಯನ್ಸ್ ಕ್ಲಬ್ ಹೆಬ್ರಿ […]
ಮಣಿಪಾಲದ MSDC ಯಲ್ಲಿ ರಕ್ಷಾಬಂಧನಕ್ಕೆ ವಿಶೇಷ ಕೊಡುಗೆ: ಕಾಸ್ಮೆಟಾಲಜಿ ಕೋರ್ಸ್ಗಳಿಗೆ ಭರ್ಜರಿ ರಿಯಾಯಿತಿ

ಮಣಿಪಾಲ: ರಕ್ಷಾಬಂಧನ ಹಬ್ಬದ ಅಂಗವಾಗಿ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಸಹಯೋಗದಲ್ಲಿ ಒರೇನ್ ಇಂಟರ್ನ್ಯಾಷನಲ್ ವತಿಯಿಂದ ಕಾಸ್ಮೆಟಾಲಜಿ ಕೌಶಲಾಭಿವೃದ್ಧಿ ಕೋರ್ಸ್ಗಳಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ‘ಈ ರಕ್ಷಾಬಂಧನಕ್ಕೆ ಆಕೆಗೆ ಕಾಸ್ಮೆಟಾಲಜಿ ಕೌಶಲ ನೀಡಿ’ ಎಂಬ ಆಶಯದೊಂದಿಗೆ ಈ ವಿಶೇಷ ಕೊಡುಗೆ ನೀಡಲಾಗುತ್ತಿದ್ದು, ಎಲ್ಲಾ ಕೋರ್ಸ್ಗಳ ಶುಲ್ಕದಲ್ಲಿ ಗರಿಷ್ಠ ಶೇ.30ರವರೆಗೆ ರಿಯಾಯಿತಿ ಲಭ್ಯವಿದೆ. ಈ ಕೊಡುಗೆ ಆಗಸ್ಟ್ 31ರವರೆಗೆ ಮಾತ್ರ ಮಾನ್ಯವಾಗಿರಲಿದೆ. ಕಾಸ್ಮೆಟಾಲಜಿ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿ ಪಡೆದು ಉದ್ಯೋಗಾವಕಾಶಗಳನ್ನು ಪಡೆಯಲು ಹಾಗೂ ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ […]