ನಾಗರ ಪಂಚಮಿ: ಹುತ್ತಕ್ಕೆ ಹಾಲೆರೆಯುವ ಮುನ್ನ ಈ ವಿಷಯ ತಿಳಿಯಿರಿ; ನಾಗನಿಗೆ ಬೇಕಿರುವುದು ಹಾಲಲ್ಲ!

ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಬ್ಬಗಳ ಸಂಭ್ರಮವೂ ಶುರುವಾಗುತ್ತದೆ. ಮಳೆಯಿಂದ ಹಸಿರಾದ ಪ್ರಕೃತಿ, ತುಂಬಿ ಹರಿಯುವ ನದಿಗಳು, ಹೊಲ-ಗದ್ದೆಗಳಲ್ಲಿ ಕಾಣಿಸುವ ಹೊಸ ಚೈತನ್ಯ… ಇವೆಲ್ಲದರ ನಡುವೆ ಮನೆಮನೆಗಳಲ್ಲೂ ಹಬ್ಬದ ಸಡಗರ ಮನೆ ಮಾಡುತ್ತದೆ. ಶ್ರಾವಣದ ಮೊದಲ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವುದು ನಾಗರ ಪಂಚಮಿ. ನಾಗನ ಕಲ್ಲಿಗೆ ಪೂಜೆ ಸಲ್ಲಿಸುವುದು, ಹುತ್ತಕ್ಕೆ ಹಾಲು ಎರೆಯುವುದು, ಹೂವು, ಅರಿಶಿನ-ಕುಂಕುಮ ಅರ್ಪಿಸುವುದು ನಮ್ಮಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಈ ಬಾರಿ ನಾಗರ ಪಂಚಮಿಯಂದು ಪೂಜೆ ಮಾಡುವಾಗ ಒಂದು ಪ್ರಶ್ನೆಯನ್ನು […]

ನಮ್ಮ ದೇಶದ ಹೆಮ್ಮೆ, ನಮ್ಮ ತಿರಂಗಾ… ಹೇಗೆ ತಯಾರಾಗುತ್ತದೆ ಗೊತ್ತೇ?

ಭಾರತದ ರಾಷ್ಟ್ರಧ್ವಜವು ದೇಶದ ಗೌರವ, ಏಕತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮೂರು ಪಟ್ಟಿಗಳನ್ನು ಹೊಂದಿರುವ ನಮ್ಮ ತಿರಂಗಾದ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದೆ. ಕೇಸರಿ ಧೈರ್ಯ ಮತ್ತು ತ್ಯಾಗವನ್ನು, ಬಿಳಿ ಶಾಂತಿ ಮತ್ತು ಸತ್ಯವನ್ನು ಹಾಗೂ ಹಸಿರು ಸಮೃದ್ಧಿ ಮತ್ತು ಪ್ರಕೃತಿಯನ್ನು ಪ್ರತಿನಿಧಿಸುತ್ತದೆ. ನಮ್ಮ ರಾಷ್ಟ್ರಧ್ವಜ ಎಲ್ಲಿ ತಯಾರಾಗುತ್ತದೆ? ರಾಷ್ಟ್ರಧ್ವಜ ತಯಾರಿಕೆಯಲ್ಲಿ ಕರ್ನಾಟಕಕ್ಕೂ ವಿಶೇಷ ಸ್ಥಾನವಿದೆ. ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಮತ್ತು ಧಾರವಾಡ ತಾಲ್ಲೂಕಿನ […]

ಕನಸಿಗೆ ರೆಕ್ಕೆ ಕಟ್ಟಿ ಆಕಾಶಕ್ಕೆ ಹಾರಿದ ಶೈನಿ ಅಸ್ಮಾ ಸಲ್ಡಾನ, ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಎನ್ನುವ ಹೆಗ್ಗಳಿಕೆ

ಕಾರ್ಕಳ: ಐದು ವರ್ಷದ ಬಾಲಕಿಯ ಮನದಲ್ಲಿ ಮೂಡಿದ್ದ ಪೈಲಟ್ ಆಗಬೇಕೆಂಬ ಕನಸು, ವರ್ಷಗಳ ಕಠಿಣ ಪರಿಶ್ರಮ, ಛಲ ಮತ್ತು ತಾಳ್ಮೆಯ ಮೂಲಕ ನನಸಾಗಿದೆ. ಕಾರ್ಕಳ ತಾಲೂಕಿನ ಕೌಡೂರು ರಂಗನಪಲ್ಕೆಯ ಶೈನಿ ಅಸ್ಮಾ ಸಲ್ಡಾನ ಅವರು ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್‌ (CPL) ಪಡೆಯುವ ಮೂಲಕ ಉಡುಪಿ ಜಿಲ್ಲೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೌಡೂರು ರಂಗನಪಲ್ಕೆಯ ಅಶೋಕ್ ಜಾಕೋಬ್ ಸಲ್ಡಾನ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನ ದಂಪತಿಯ ಪುತ್ರಿಯಾಗಿರುವ ಶೈನಿ […]

ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕೇ? ಇಂದಿನಿಂದಲೇ ಹೀಗೆ ಮಾಡಿ

ಜು.28 ವಿಶ್ವ ಪ್ರಕೃತಿ ಸಂರಕ್ಷಣಾ ದಿನ: ಪ್ರಕೃತಿಯನ್ನು ಉಳಿಸುವುದು ಇಂದು ಆಯ್ಕೆಯಲ್ಲ, ನಮ್ಮೆಲ್ಲರ ಜವಾಬ್ದಾರಿ! ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕೆಂದರೆ, ಅವರಿಗೆ ಸ್ವಚ್ಛ ಗಾಳಿ, ನೀರು ದೊರೆಯಬೇಕಾದರೆ ನಾವು ಇಂದು ಎಚ್ಚೆತ್ತುಕೊಳ್ಳಬೇಕಿದೆ. ಪ್ರಕೃತಿ ಎಂದರೆ ಕೇವಲ ಕಾಡು, ಬೆಟ್ಟ, ನದಿ, ಸಮುದ್ರಗಳಲ್ಲ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರದಿಂದ ಹಿಡಿದು ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರಕೃತಿಯ ಕೊಡುಗೆ ಇದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ನಗರೀಕರಣ, ಕಾಡುಗಳ ನಾಶ, ಪ್ಲಾಸ್ಟಿಕ್ […]

ಮಣ್ಣಿಲ್ಲದೇ ನಿಮ್ಮ ಮನೆಯೊಳಗೇ, ಬಾಲ್ಕನಿ, ಟೆರೇಸ್ ಗಳಲ್ಲಿ ಗಿಡ ಬೆಳೆಸಬಹುದು! ಸುಲಭ ವಿಧಾನ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ತರಕಾರಿ, ಹಣ್ಣುಗಳ ಬೆಲೆ ಏರಿಕೆಯಾಗುತ್ತಿದೆ ಮಾತ್ರವಲ್ಲದೇ ರಾಸಾಯನಿಕಗಳ ಬಳಕೆ ಅತಿಯಾಗುತ್ತಿದೆ. ಹಾಗಾಗಿ ಪೇಟೆಗಳಲ್ಲೂ ಮನೆಯ ಸುತ್ತಮುತ್ತ ಜಾಗ ಇಲ್ಲದಿದ್ದರೂ, ಬಾಲ್ಕನಿ, ಟೆರೇಸ್ ಗಾರ್ಡನಿಂಗ್ ಕಾನ್ಸೆಪ್ಟ್ ಹೆಚ್ಚಾಗುತ್ತಿದೆ. ಆದರೆ ಮಣ್ಣು ಇಲ್ಲದೇ ಅಥವಾ ಕಡಿಮೆ ಮಣ್ಣಿನ ಬಳಕೆಯಿಂದ ಗಿಡ ಬೆಳಸಲು ಸಾಧ್ಯವಿದೆ. ಮಣ್ಣಿಗೆ ಪರ್ಯಾಯವಾಗಿ ಅಥವಾ ಮಣ್ಣಿನೊಂದಿಗೆ ಮಿಶ್ರಣವಾಗಿ ಬಳಸಬಹುದಾದ ಕೋಕೋಪೀಟ್, ಗಿಡಗಳ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಿದೆ. ವಿಶೇಷವಾಗಿ ಕಡಿಮೆ ಜಾಗದಲ್ಲಿ ಗಿಡಗಳನ್ನು ಬೆಳೆಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಕೋಕೋಪೀಟ್ ಎಂದರೇನು? ತೆಂಗಿನಕಾಯಿಯ ಸಿಪ್ಪೆಯಿಂದ ನಾರು […]