ಹುಲಿಯಾದನು ಹಿರಿಯಡ್ಕದ ಈ ಹುಡುಗ: ವಿತಿನ್ ಅನ್ನೋ ಹುಲಿ ವೇಷದಾರಿ ಹೇಗೆ ಕುಣಿತಾನೆ ಅಂದ್ರೆ..

ಸರತಿಸಾಲಿನಲ್ಲಿ ಹಬ್ಬಗಳು ಮೇಳೈಸುತಿದ್ದರೆ ಇತ್ತ ಮಂಗಳೂರು ಸುತ್ತಮುತ್ತ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಒಂದೆರಡು ಹುಲಿ ಕುಣಿತದ ತಾಸೆಯ ಸದ್ದುಗಳು ಕೇಳುತ್ತಿವೆ. ಈ ವರುಷ ಕೊರೋನ ಲಾಕ್ಡೌನ್ ಎಫೆಕ್ಟ್ ನಿಂದ ಹುಲಿವೇಷಕ್ಕೆ ಅನುಮತಿ ಸಿಕ್ಕರೂ ದೇವಾಲಯದ ಕೆಲವು ಭಾಗಗಳಲ್ಲಿ ಮಾತ್ರ ತಾಸೆಯ ಸದ್ದು ಕೇಳಿಸುತ್ತಿದೆ.

ಮೈಗೆ ಹಳದಿ, ಕಪ್ಪು ಬಣ್ಣಗಳ ಪಟ್ಟೆ ಬಳಿದುಕೊಂಡು, ತಲೆಗೆ ಹುಲಿ ವೇಷದ ಮುಖವಾಡ ಹಾಕಿಕೊಂಡ ನಾಲ್ಕಾರು ಮಂದಿಯ ತಂಡ, ಕಾಲು–ಕೈಗಳನ್ನು ಆಡಿಸುತ್ತಾ ತಾಸೆ ಪೆಟ್ಟಿನ ಹೆಜ್ಜೆ ಹಾಕುತ್ತಿದ್ದರೆ, ಅಲ್ಲಿಗೆ ಕರಾವಳಿಯಲ್ಲಿ ದಸರಾ ಸಡಗರ ಆರಂಭವಾಯಿತು ಎಂದೇ ಅರ್ಥ.

 

ಕರಾವಳಿ ಕರ್ನಾಟಕ ದಸರಾ, ಕೃಷ್ಣ ಅಷ್ಟಮಿ, ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಹುಲಿವೇಷಕ್ಕೆ ಬಲು ಬೇಡಿಕೆ. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಹುಲಿವೇಷ ಕುಣಿತಕ್ಕೆ ಅದರದೇ ಆದ ಮಹತ್ವವಿದೆ. ಈ ಹುಲಿವೇಷ ಸಾಧಕನೊಬ್ಬರ ಕತೆಯನ್ನು ನಾವ್ ಹೇಳ್ತೇವೆ.

ಹುಲಿ ವೇಷದ ಸಾಧಕನ ಹೆಸರು ಹೆಸರು ವಿತಿನ್. ಹಿರಿಯಡ್ಕದ ಗುಡ್ಡೆಯಂಗಡಿಯ ಹುಡುಗ. ಆತನ ಯಶೋಗಾಥೆಯೇ ವಿಭಿನ್ನ,  ಈಗ 23 ವರ್ಷದ ಯುವಕ,  ಐದನೆಯ ತರಗತಿಯಲ್ಲಿ ಓದುತ್ತಿದ್ದಾಗಲೇ ಚಿಕ್ಕ ಮರಿ ಹುಲಿಯಾಗಿ ಬಣ್ಣ ಹಚ್ಚುತ್ತಿದ್ದ ಹುಡುಗ ವಿತಿನ್.  ಮಂಗಳೂರು- ಉಡುಪಿ- ಹಿರಿಯಡ್ಕ- ಬಂಟ್ವಾಳ- ಹೆಬ್ರಿ- ಪೆರ್ಡೂರು- ಕಾರ್ಕಳ ಹೀಗೆ ಕರಾವಳಿತ ಎಲ್ಲೆಡೆ  ಅಪಾರ ಪ್ರದರ್ಶನ ನೀಡುತ್ತಾ ಬಂದಿದ್ದಾನೆ ಈ ಹುಡುಗ.

ಅಣಿಯಾಗುವ ಬಗೆ
ವಿಶೇಷ ಹಬ್ಬಗಳಾದ ನವರಾತ್ರಿಯ ಅಷ್ಟಮಿಯಂದು ತಮ್ಮ ಹುಲಿಯ ಮುಖವಾಡಗಳನ್ನು ಇಟ್ಟು, ಊದು ಪೂಜೆಯನ್ನು ನೆರವೇರಿಸಿ ಬಣ್ಣ ಹಚ್ಚಲು ತಯಾರಾಗುತ್ತಾನೆ ಈ ಹುಡುಗ. ಪಟ್ಟೆಪಿಲಿ, ಚಿಟ್ಟೆಪಿಲಿ, ಬಂಗಾಲಿ ಪಿಲಿ, ಕರಿ ಪಿಲಿಗಳೆಂಬ ಅನೇಕ ಕಲೆಗಳ ಬಣ್ಣವನ್ನು ಹಾಕುತ್ತಾನೆ.

ಹಬ್ಬಗಳ ಸಂದರ್ಭದಲ್ಲಿ ಯಾವುದೇ ಮಾಂಸ ಹಾಗೂ ಮದ್ಯ ಸೇವನೆ ಮಾಡುವಂತಿಲ್ಲ. ಸದಾ ಮಡಿಯಾಗಿರಬೇಕು ಎಂಬ ಸಂಪ್ರದಾಯ ಪಾಲಿಸಿಕೊಂಡು ಬರುತ್ತಾರೆ ವೇಷಗಾರರು.

ಹುಲಿವೇಷ ಸೌಹಾರ್ದತೆಯ ಪ್ರತೀಕ. ತಮ್ಮ ಹುಲಿವೇಷಕ್ಕೆ ಎಲ್ಲಾ ಧರ್ಮದವರು ಪ್ರೋತ್ಸಾಹ ನೀಡುತ್ತಾರೆ, ಬಣ್ಣ ಹಚ್ಚುವ ಕಲಾವಿದರು ನನ್ನ ಬಗ್ಗೆ ತುಂಬ ಶ್ರಮವಹಿಸುತ್ತಾರೆ ಎನ್ನುತ್ತಾರೆ ವಿತಿನ್ ಗುಡ್ಡೆಯಂಗಡಿ.

» ರಾಂ ಅಜೆಕಾರು ಕಾರ್ಕಳ