ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕೇ? ಇಂದಿನಿಂದಲೇ ಹೀಗೆ ಮಾಡಿ

ಜು.28 ವಿಶ್ವ ಪ್ರಕೃತಿ ಸಂರಕ್ಷಣಾ ದಿನ: ಪ್ರಕೃತಿಯನ್ನು ಉಳಿಸುವುದು ಇಂದು ಆಯ್ಕೆಯಲ್ಲ, ನಮ್ಮೆಲ್ಲರ ಜವಾಬ್ದಾರಿ! ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕೆಂದರೆ, ಅವರಿಗೆ ಸ್ವಚ್ಛ ಗಾಳಿ, ನೀರು ದೊರೆಯಬೇಕಾದರೆ ನಾವು ಇಂದು ಎಚ್ಚೆತ್ತುಕೊಳ್ಳಬೇಕಿದೆ. ಪ್ರಕೃತಿ ಎಂದರೆ ಕೇವಲ ಕಾಡು, ಬೆಟ್ಟ, ನದಿ, ಸಮುದ್ರಗಳಲ್ಲ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರದಿಂದ ಹಿಡಿದು ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರಕೃತಿಯ ಕೊಡುಗೆ ಇದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ನಗರೀಕರಣ, ಕಾಡುಗಳ ನಾಶ, ಪ್ಲಾಸ್ಟಿಕ್ […]

ಪುರುಷರೇ ಮಳೆಗಾಲದಲ್ಲಿ ಈ ಒಂದು ತಪ್ಪು ಮಾಡ್ಬೇಡಿ, ಕೂದಲು ಹೀಗಾಯ್ತು ಅಂತ ಆ ಮೇಲೆ ಗೋಳಾಗಬೇಡಿ!

ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದ್ದು, ವಿಶೇಷವಾಗಿ ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತದೆ. ಜೀವನಶೈಲಿಯ ಕೆಲವು ತಪ್ಪು ಅಭ್ಯಾಸಗಳು ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಎಂಬಿಬಿಎಸ್ ವೈದ್ಯೆ ಡಾ. ಅಪರಾಜಿತಾ ಲಂಬಾ ಅವರ ಪ್ರಕಾರ, ಮಳೆಗಾಲದಲ್ಲಿ ಕೂದಲಿಗೆ ಹೆಚ್ಚು ಸಮಯ ಎಣ್ಣೆ ಹಚ್ಚಿಕೊಂಡಿರುವುದು ಹಾಗೂ ಅತಿಯಾಗಿ ಎಣ್ಣೆ ಬಳಸುವುದು ಕೂದಲಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ನೆತ್ತಿಯಲ್ಲಿ ತೇವಾಂಶ ಹೆಚ್ಚಾಗಿ ಕೂದಲಿನ ಕಿರುಚೀಲಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. […]

ನಿಮ್ಮ ತಿಂಗಳ ಸಂಬಳ ಎಷ್ಟೇ ಇರಲಿ, ಈ ಸರಳ ಸೂತ್ರ ಪಾಲಿಸಿದರೆ ಭವಿಷ್ಯಕ್ಕೆ ಉಳಿತಾಯ ಮಾಡಬಹುದು!

ತಿಂಗಳಿಗೆ 15-20 ಸಾವಿರದ ಒಳಗೆ ಸಂಬಳ ಪಡೆಯುವವರು ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣ ಉಳಿಯುವುದಿಲ್ಲ ಎಂದು ಚಿಂತೆಪಡುತ್ತಿರುತ್ತಾರೆ. ಆದರೆ ಆದಾಯ ಕಡಿಮೆ ಇದ್ದರೂ ಸರಿಯಾದ ರೀತಿಯಲ್ಲಿ ಹಣವನ್ನು ನಿರ್ವಹಿಸಿದರೆ ದಿನನಿತ್ಯದ ಖರ್ಚು, ಉಳಿತಾಯ ಮತ್ತು ಭವಿಷ್ಯದ ಅಗತ್ಯಗಳನ್ನು ಸಮತೋಲನಗೊಳಿಸಬಹುದು. ಸಂಬಳ ಬಂದ ತಕ್ಷಣವೇ ಎಲ್ಲ ಹಣವನ್ನು ಖರ್ಚು ಮಾಡುವ ಬದಲು ಮೊದಲೇ ಒಂದು ಬಜೆಟ್ ರೂಪಿಸಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಿಮ್ಮ ಸಂಬಳ ಎಷ್ಟೇ ಇರಲಿ ಅದರಲ್ಲಿ ಸಣ್ಣ ಮೊತ್ತವನ್ನು ಉಳಿತಾಯಕ್ಕೆ ನೀವು ಮೀಸಲಿಡಲೇಬೇಕು. ಸಂಬಳ ಕೈಗೆ […]

ಡಾರ್ಕ್ ಚಾಕ್ಲೇಟ್ ಎಂದು ಲೈಟಾಗಿ ತಗೋಬೇಡಿ, ಒಂದು ಪೀಸ್ ಡಾರ್ಕ್ ಚಾಕ್ಲೇಟ್ ತಿಂದ್ರೂ ಆರೋಗ್ಯಕ್ಕೆ ಎಷ್ಟೊಂದೆಲ್ಲಾ ಲಾಭವಿದೆ ಗೊತ್ತೆ!

ಚಾಕೊಲೇಟ್ ಎಂದರೆ ಮಕ್ಕಳು ಮಾತ್ರವಲ್ಲ, ಯುವಕರು ಮತ್ತು ಹಿರಿಯರಿಗೂ ಅಚ್ಚುಮೆಚ್ಚು. ಅದರಲ್ಲೂ ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಉತ್ತಮ ಎನ್ನುವ ಮಾತು ಸಾಮಾನ್ಯವಾಗಿದೆ. ಆದರೆ ಯಾವುದೇ ಡಾರ್ಕ್ ಚಾಕೊಲೇಟ್ ಅಲ್ಲ, ಕನಿಷ್ಠ 70% ಅಥವಾ ಅದಕ್ಕಿಂತ ಹೆಚ್ಚು ಕೋಕೋ ಇರುವ ಡಾರ್ಕ್ ಚಾಕೊಲೇಟ್ ಅನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಮುಂಬೈನ ಡಾ. ಡಿ.ವೈ. ಪಾಟೀಲ್ ಮೆಡಿಕಲ್ ಕಾಲೇಜಿನ ಡಾ. ಅಮಿತಾ ವರ್ಮಾ ಮತ್ತು ಡಾ. ಅರ್ಚನಾ ಕಾದಮ್ ನಡೆಸಿದ ಅಧ್ಯಯನದ […]

ಮನೆಯಲ್ಲೇ ರೆಡಿ ಮಾಡಿ ಈ ಸ್ಪ್ರೇ! ಜಿರಳೆಗೆ ಹೇಳಿ ಗುಡ್ ಬೈ….

ಅಡುಗೆಮನೆಯಲ್ಲಿ ಜಿರಳೆಗಳ ಕಾಟ ಶುರುವಾದರೆ ಅದನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ. ವಿಶೇಷವಾಗಿ ರಾತ್ರಿ ವೇಳೆ ಅಡುಗೆಮನೆಯ ಲೈಟ್‌ ಆಫ್ ಮಾಡಿದ ಬಳಿಕ ಜಿರಳೆಗಳು ಹೊರಬಂದು ಓಡಾಡುವುದು ಸಾಮಾನ್ಯ. ಆಹಾರ, ನೀರು ಮತ್ತು ಬೆಚ್ಚಗಿನ ಜಾಗಗಳು ಸಿಕ್ಕರೆ ಜಿರಳೆಗಳು ಬೇಗ ಹೆಚ್ಚಾಗಬಹುದು. ಜಿರಳೆಗಳು ಆಹಾರ ಮತ್ತು ಅಡುಗೆಮನೆಯ ಮೇಲ್ಮೈಗಳನ್ನು ಕಲುಷಿತಗೊಳಿಸುವ ಸಾಧ್ಯತೆ ಇರುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ. ಜಿರಳೆಗಳನ್ನು ನಿಯಂತ್ರಿಸಲು ಹಲವರು ಕೀಟನಾಶಕ ಸ್ಪ್ರೇಗಳನ್ನು ಬಳಸುತ್ತಾರೆ. ಆದರೆ ಇವುಗಳನ್ನು ಬಳಸುವಾಗ ಮಕ್ಕಳು, ಸಾಕುಪ್ರಾಣಿಗಳು ಮತ್ತು ಉಸಿರಾಟದ […]