ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಫ್ರಾಂಚೈಸಿ ಮಾರಾಟ: ಅದಾನಿ ಸೇರಿದಂತೆ ಹಲವು ಕಂಪನಿಗಳಿಂದ ಖರೀದಿಗೆ ಆಸಕ್ತಿ!

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಮಾರಾಟ ಇದೀಗ ಅಧಿಕೃತಗೊಂಡಿದೆ. ಆರ್‌ಸಿಬಿಯ ಮಾತೃಸಂಸ್ಥೆ ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಬಾಂಬೆ ಷೇರುಪೇಟೆಗೆ ಈ ಮಾರಾಟದ ಮಾಹಿತಿಯನ್ನು ನೀಡಿದೆ. 2026ರ ಮಾ.31ರೊಳಗೆ ಮಾರಾಟ ಪ್ರಕ್ರಿಯೆ ಪೂರ್ಣ ಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದೆ. “ಯುನೈಟೆಡ್‌ ಸ್ಪಿರಿಟ್‌ ಲಿಮಿಟೆಡ್‌ನ‌ ಅಂಗಸಂಸ್ಥೆಯಾದ ಆರ್‌ ಸಿಎಸ್‌ಪಿಎಲ್‌ ಸಂಸ್ಥೆಯನ್ನು ಮಾರಾಟ ಮಾಡಲು ಮುಂದಾಗಿದ್ದೇವೆ. ಇದು ಆರ್‌ಸಿಬಿ ಪುರುಷ ಹಾಗೂ ಮಹಿಳಾ ತಂಡಗಳ ಮೇಲಿನ ನಿಯಂತ್ರಣವನ್ನು ವರ್ಗಾಯಿಸುತ್ತದೆ’ ಷೇರುಪೇಟೆಗೆ ಬರೆದಿರುವ ಪತ್ರದಲ್ಲಿ ಉಲ್ಲೇಖೀಸಲಾಗಿದೆ.17000 ಕೋಟಿ ರೂ.ಗೆ ಬೇಡಿಕೆ: ಆರ್‌ಸಿಬಿ […]

ಈ ವರ್ಷದ ಅತ್ಯಂತ ಪ್ರಕಾಶಮಾನ ಹುಣ್ಣಿಮೆ ಚಂದ್ರನ ದರ್ಶನ

ಬೆಂಗಳೂರು: ಪ್ರಸಕ್ತ ವರ್ಷದ ಅತಿದೊಡ್ಡ ಹಾಗೂ ಅತ್ಯಂತ ಪ್ರಕಾಶಮಾನವಾದ ಚಂದ್ರ (ಸೂಪರ್‌ ಮೂನ್‌) ಬುಧವಾರ ಗೋಚರಿಸಿದೆ. ‘ನವೆಂಬರ್‌ ಸೂಪರ್‌ ಮೂನ್‌’ ಎಂದು ಕರೆಯಲಾಗುವ ಈ ಚಂದ್ರ, ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತಲೂ ಭೂಮಿಗೆ ಬರೋಬ್ಬರಿ 17,000 ಮೈಲಿಗಳಷ್ಟು ಸಮೀಪದಲ್ಲಿದ್ದದ್ದು ವಿಶೇಷ. 2025ನೇ ಸಾಲಿನಲ್ಲಿ ಕಾಣಿಸಿಕೊಳ್ಳುವ ಮೂರು ಸೂಪರ್‌ ಮೂನ್‌ಗಳ ಪೈಕಿ ಇದು ಎರಡನೆಯದ್ದಾಗಿದ್ದು, ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ ಈ ಸೂಪರ್‌ ಮೂನ್‌ ಶೇಕಡ 14ರಷ್ಟು ದೊಡ್ಡದಾಗಿ ಹಾಗೂ ಶೇ 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿದೆ. ಭೂಮಿಯಿಂದ 3,57,000 ಕಿ.ಮೀ.ದೂರದಲ್ಲಿ […]

ಕ್ರೈಮ್ ಥ್ರಿಲ್ಲರ್ ಜನಪ್ರಿಯ ವೆಬ್‌ ಸರಣಿ ‘ದೆಹಲಿ ಕ್ರೈಮ್ ಸೀಸನ್-3’ ನ.13ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್!

ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ದೆಹಲಿ ಕ್ರೈಮ್ ಸೀಸನ್-3’ ಇದೀಗ ತನ್ನ ಹೊಸ ಅಧ್ಯಾಯದೊಂದಿಗೆ ಮರಳಿ ಬರುತ್ತಿದೆ. ಹಿಂದಿನ ಎರಡು ಸೀಸನ್‌ಗಳ ಯಶಸ್ಸಿನ ನಂತರ, ಕ್ರೈಮ್ ಥ್ರಿಲ್ಲರ್ ಪ್ರಕಾರದ ಈ ಜನಪ್ರಿಯ ವೆಬ್‌ ಸರಣಿ ಮತ್ತೆ ಒಂದು ಗಂಭೀರ ಸಾಮಾಜಿಕ ವಿಷಯವಾದ ಮಾನವ ಕಳ್ಳಸಾಗಣೆ ಕುರಿತ ಕಥೆಯನ್ನು ತೆರೆಮೇಲೆ ತರುತ್ತಿದೆ. ನವೆಂಬರ್ 13ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಇದು ಅಧಿಕೃತವಾಗಿ ಸ್ಟ್ರೀಮಿಂಗ್ ಆಗಲಿದ್ದು, ಅದರ ಟ್ರೈಲರ್ ಇಂದು (ನವೆಂಬರ್ 4ರಂದು) ಬಿಡುಗಡೆಗೊಂಡಿದೆ. ಈ ಸೀಸನ್‌ನಲ್ಲೂ ಪ್ರಮುಖ ಪಾತ್ರದಲ್ಲಿ ನಟಿ ಶೆಫಾಲಿ ಶಾ […]

BSNL’ಗೆ 44.18 ಕೋಟಿ ರೂ. ಬಿಲ್ ಬಾಕಿ: ಕ್ರಮ ಕೈಗೊಳ್ಳುವಂತೆ ಸೂಚನೆ!

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್‌ ಸಂಚಾರ್‌ ನಿಗಮಕ್ಕೆ (ಬಿಎಸ್‌ಎನ್‌ಎಲ್‌) ಒಟ್ಟು ₹44.18 ಕೋಟಿ ಮೊತ್ತದ ಬಿಲ್‌ ಪಾವತಿಸಲು ಉಳಿಸಿಕೊಂಡಿವೆ.ಈ ಪೈಕಿ, ಗೃಹ ಇಲಾಖೆಯು ಅತೀ ಹೆಚ್ಚು ಅಂದರೆ, ₹15.89 ಕೋಟಿ ಪಾವತಿಸಲು ಬಾಕಿ ಇದೆ. ಉಳಿದಂತೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಸೆಂಟರ್‌ ಫಾರ್‌ ಇ– ಗರ್ವರ್ನೆನ್ಸ್‌ ₹4.25 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆ (ಗ್ರಾಮ ಪಂಚಾಯತ್‌) ₹3.50 ಕೋಟಿ, ಕಿಯೋನಿಕ್ಸ್‌ ₹2 ಕೋಟಿ ಪಾವತಿಸಬೇಕಿದೆ. ಬಿಲ್‌ ಬಾಕಿ […]

ರಾಜಸ್ಥಾನ: ನಿಂತಿದ್ದ ಟ್ರಕ್ ಗೆ ಟೆಂಪೋ ಟ್ರಾವೆಲರ್ ಡಿಕ್ಕಿ; 15 ಮಂದಿ ಸ್ಥಳದಲ್ಲಿ ಮೃತ್ಯು, ಮೂವರಿಗೆ ಗಾಯ.

ಜೈಪುರ: ರಾಜಸ್ಥಾನದ ಫಲೋಡಿ ಜಿಲ್ಲೆಯ ಭಾರತ ಮಾಲಾ ಹೆದ್ದಾರಿಯಲ್ಲಿ ಭಾನುವಾರ(ನ. 02) ಸಂಜೆ ನಿಂತಿದ್ದ ಟ್ರಕ್​ಗೆ ಟೆಂಪೋ ಟ್ರಾವೆಲರ್​​ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು (Horrific accident), ಘಟನೆಯಲ್ಲಿ 15 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತಪಟ್ಟವರು ಜೋಧ್​​ಪುರದ ಸುರ್​ಸಾಗರ್ ಪ್ರದೇಶದ ನಿವಾಸಿಗಳು. ಕಪಿಲ್ ಮುನಿ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಬಿಕಾನೇರ್‌ನ ಕೊಲಾಯತ್ ದೇವಸ್ಥಾನ ದರ್ಶನ ಮಾಡಿಕೊಂಡು ವಾಪಾಸ್ ಆಗುವಾಗುವಾಗ ಭಾರತ ಮಾಲಾ ಹೆದ್ದಾರಿಯಲ್ಲಿರುವ ಮಾಡೋಡಾ ಗ್ರಾಮದ ಬಳಿ ಘಟನೆ […]