ಆಷಾಢದಲ್ಲಿ ಮದುವೆ, ಗೃಹಪ್ರವೇಶ ನಿಷೇಧ ಏಕೆ? ನವದಂಪತಿಗಳು ಒಟ್ಟಿಗೆ ಇರಬಾರದು! ಕಾರಣ ಆಶ್ಚರ್ಯಕರವಾಗಿದೆ

ಹಿಂದೂ ಪಂಚಾಂಗದಲ್ಲಿ ಆಷಾಢ ಮಾಸಕ್ಕೆ ವಿಶೇಷ ಮಹತ್ವವಿದೆ. ಈ ತಿಂಗಳು ಆರಂಭವಾದ ತಕ್ಷಣ ಮದುವೆ, ಗೃಹಪ್ರವೇಶ, ನಾಮಕರಣ, ಹೊಸ ವ್ಯವಹಾರ ಆರಂಭ ಸೇರಿದಂತೆ ಹಲವು ಶುಭ ಕಾರ್ಯಗಳನ್ನು ಸಾಮಾನ್ಯವಾಗಿ ಮುಂದೂಡಲಾಗುತ್ತದೆ. ಈ ಬಾರಿ ಜುಲೈ 15ರಿಂದ ಆರಂಭವಾಗಿದ್ದು, ಆಷಾಢ ಮಾಸದಲ್ಲಿ ಇಂತಹ ಆಚರಣೆಗಳನ್ನು ಏಕೆ ತಪ್ಪಿಸಲಾಗುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತದೆ. ವಾಸ್ತವದಲ್ಲಿ ಇದರ ಹಿಂದೆ ಧಾರ್ಮಿಕ ನಂಬಿಕೆಯ ಜೊತೆಗೆ ಪ್ರಕೃತಿ, ಕೃಷಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಯೋಗಿಕ ಕಾರಣಗಳೂ ಅಡಗಿವೆ. ಆಷಾಢವನ್ನು ‘ಶೂನ್ಯ ಮಾಸ’ ಎಂದು […]
ಮೂತ್ರಪಿಂಡದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ಮಾಡಬೇಡಿ: ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿದೆ ಮೂತ್ರಪಿಂಡದ ಎಲ್ಲಾ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ

ಉಡುಪಿ: ಮೂತ್ರಪಿಂಡಗಳು (ಕಿಡ್ನಿ) ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ರಕ್ತವನ್ನು ಶುದ್ಧೀಕರಿಸಿ ದೇಹದ ತ್ಯಾಜ್ಯವನ್ನು ಹೊರಹಾಕುವ ಮಹತ್ವದ ಕಾರ್ಯ ನಿರ್ವಹಿಸುತ್ತವೆ. ಆದರೆ ಆರಂಭಿಕ ಹಂತದಲ್ಲಿ ಮೂತ್ರಪಿಂಡದ ಸಮಸ್ಯೆಗಳು ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದ್ದರಿಂದ ಕೆಲವು ಎಚ್ಚರಿಕೆ ಸೂಚನೆಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ನಿಮ್ಮ ಎಲ್ಲಾ ಮೂತ್ರಪಿಂಡದ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿದ್ದು ಈ ಸಮಸ್ಯೆ ಕಂಡರೆ ತಕ್ಷಣ ಭೇಟಿ ನೀಡಿ ಪರಿಹಾರ […]
ಮನೆಯಲ್ಲಿ ಚಿನ್ನ ಇಟ್ಟಿದ್ದೀರಾ? ಇನ್ನು ಬಡ್ಡಿಯೂ ಸಿಗಲಿದೆ! ಕೇಂದ್ರದ ಹೊಸ ‘ಗೋಲ್ಡ್ ಮಾನಿಟೈಸೇಷನ್’ ಯೋಜನೆ ಏನು?

ಮನೆಯಲ್ಲಿರುವ ಹಳೆಯ ಚಿನ್ನವನ್ನು ಮಾರದೇ, ಲಾಕರ್ನಲ್ಲಿ ಇಡದೇ ಅದರಿಂದಲೇ ಆದಾಯ ಗಳಿಸುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಲು ಮುಂದಾಗಿದೆ. ‘ಚಿನ್ನ ನಗದೀಕರಣ ಯೋಜನೆ’ (Gold Monetisation Scheme)ಗೆ ಹೊಸ ರೂಪ ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ. ದೇಶದಲ್ಲಿ ಚಿನ್ನದ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಭಾರತೀಯರ ಮನೆಗಳಲ್ಲಿ ಅಪಾರ ಪ್ರಮಾಣದ ಚಿನ್ನ ಬಳಕೆಯಾಗದೆ ಉಳಿದಿದ್ದು, ಅದರ ಒಂದು ಭಾಗವನ್ನು ಆರ್ಥಿಕ ಚಟುವಟಿಕೆಗೆ ತರಲು ಸರ್ಕಾರ […]
ಡೇಂಜರ್ ಝೋನ್ ನಲ್ಲಿದೆ ದ.ಕ.ಜಿಲ್ಲೆಯ 88 ಸ್ಥಳಗಳು, ಮಳೆ ಜಾಸ್ತಿಯಾದ್ರೆ ಇಲ್ಲೂ ಸಂಭವಿಸಬಹುದು ದೊಡ್ಡ ಭೂಕುಸಿತ!

ದಕ್ಷಿಣ ಕನ್ನಡ: ನಿರಂತರ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಹೆಚ್ಚಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನರಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಜಿಲ್ಲೆಯ 88 ಸ್ಥಳಗಳನ್ನು ಭೂಕುಸಿತದ ಅತಿ ಅಪಾಯಕಾರಿ ಪ್ರದೇಶಗಳೆಂದು ಗುರುತಿಸಲಾಗಿದೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಘಟನೆಗಳಲ್ಲಿ 17 ಮಂದಿ ಮೃತಪಟ್ಟಿದ್ದು, ಈ ವರ್ಷವೂ ಈಗಾಗಲೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್, ನೆರಿಯ, ಶಿಶಿಲ […]
ವಾಟ್ಸಾಪ್ನಲ್ಲಿ ಬಿಗ್ ಅಪ್ಡೇಟ್! ಇನ್ಮುಂದೆ ಫೋನ್ ನಂಬರ್ ಇಲ್ಲದೇ ಚಾಟ್ ಮಾಡಬಹುದು

ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ಗಳಲ್ಲಿ ಒಂದಾದ ವಾಟ್ಸಾಪ್ ತನ್ನ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೊಸ ಫೀಚರ್ ಅನ್ನು ಘೋಷಿಸಿದೆ. ಇನ್ನು ಮುಂದೆ ಹೊಸ ವ್ಯಕ್ತಿಯೊಂದಿಗೆ ಚಾಟ್ ಮಾಡಲು ಅಥವಾ ಸಂಪರ್ಕ ಸಾಧಿಸಲು ಕಡ್ಡಾಯವಾಗಿ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವ ಅಗತ್ಯ ಇರುವುದಿಲ್ಲ. ಕಂಪನಿಯು ಪರಿಚಯಿಸುತ್ತಿರುವ ಹೊಸ ವ್ಯವಸ್ಥೆಯಡಿ ಪ್ರತಿಯೊಬ್ಬ ಬಳಕೆದಾರರು ತಮ್ಮದೇ ಆದ ವಿಶಿಷ್ಟ (Unique) ಯೂಸರ್ನೇಮ್ ಆಯ್ಕೆ ಮಾಡಿಕೊಳ್ಳಬಹುದು. ಇದೇ ಯೂಸರ್ನೇಮ್ ಮೂಲಕ ಇತರರು ಅವರನ್ನು ವಾಟ್ಸಾಪ್ನಲ್ಲಿ ಹುಡುಕಿ ಸಂಪರ್ಕಿಸಬಹುದಾಗಿದೆ. […]