ಮಣಿಪಾಲದ MSDC ಯಲ್ಲಿ ರಕ್ಷಾಬಂಧನಕ್ಕೆ ವಿಶೇಷ ಕೊಡುಗೆ: ಕಾಸ್ಮೆಟಾಲಜಿ ಕೋರ್ಸ್ಗಳಿಗೆ ಭರ್ಜರಿ ರಿಯಾಯಿತಿ

ಮಣಿಪಾಲ: ರಕ್ಷಾಬಂಧನ ಹಬ್ಬದ ಅಂಗವಾಗಿ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಸಹಯೋಗದಲ್ಲಿ ಒರೇನ್ ಇಂಟರ್ನ್ಯಾಷನಲ್ ವತಿಯಿಂದ ಕಾಸ್ಮೆಟಾಲಜಿ ಕೌಶಲಾಭಿವೃದ್ಧಿ ಕೋರ್ಸ್ಗಳಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ‘ಈ ರಕ್ಷಾಬಂಧನಕ್ಕೆ ಆಕೆಗೆ ಕಾಸ್ಮೆಟಾಲಜಿ ಕೌಶಲ ನೀಡಿ’ ಎಂಬ ಆಶಯದೊಂದಿಗೆ ಈ ವಿಶೇಷ ಕೊಡುಗೆ ನೀಡಲಾಗುತ್ತಿದ್ದು, ಎಲ್ಲಾ ಕೋರ್ಸ್ಗಳ ಶುಲ್ಕದಲ್ಲಿ ಗರಿಷ್ಠ ಶೇ.30ರವರೆಗೆ ರಿಯಾಯಿತಿ ಲಭ್ಯವಿದೆ. ಈ ಕೊಡುಗೆ ಆಗಸ್ಟ್ 31ರವರೆಗೆ ಮಾತ್ರ ಮಾನ್ಯವಾಗಿರಲಿದೆ. ಕಾಸ್ಮೆಟಾಲಜಿ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿ ಪಡೆದು ಉದ್ಯೋಗಾವಕಾಶಗಳನ್ನು ಪಡೆಯಲು ಹಾಗೂ ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ […]
ಕಿದಿಯೂರ್ಸ್ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ವತಿಯಿಂದ ಮುದ್ದು ಕೃಷ್ಣ ಸ್ಪರ್ಧೆ 2026: ವಿಜೇತರಿಗೆ ಕಾದಿದೆ ಭರ್ಜರಿ ಬಹುಮಾನಗಳು

ಉಡುಪಿ: ಕಿದಿಯೂರುಸ್ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ವತಿಯಿಂದ ‘ಮುದ್ದು ಕೃಷ್ಣ ಸ್ಪರ್ಧೆ 2026’ ಆಯೋಜಿಸಲಾಗಿದೆ. Yad Bhavam Tad Bhavati’ ಎಂಬ ಧ್ಯೇಯವಾಕ್ಯದೊಂದಿಗೆ ಪುಟಾಣಿಗಳ ಪ್ರತಿಭೆ ಹಾಗೂ ಸಂಭ್ರಮಕ್ಕೆ ವೇದಿಕೆ ಕಲ್ಪಿಸಲು ಶಾಲೆ ಮುಂದಾಗಿದೆ. ಪುಟಾಣಿ ಕೃಷ್ಣಪ್ರೇಮಿಗಳಿಗಾಗಿ ವಿಶೇಷವಾಗಿ ಆಯೋಜಿಸಿರುವ ಈ ವರ್ಣರಂಜಿತ ಕಾರ್ಯಕ್ರಮವು ಸೆಪ್ಟೆಂಬರ್ 2 ರಂದು ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ. ಉಡುಪಿಯ ನಿಟ್ಟೂರಿನ ಜ್ಞಾನಕಾಶಿ ಕ್ಯಾಂಪಸ್ನಲ್ಲಿರುವ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ನ ಜ್ಞಾನ ವೇದಿಕೆಯಲ್ಲಿ ಸ್ಪರ್ಧೆ ನಡೆಯಲಿದೆ. 2ರಿಂದ 5 ವರ್ಷದ […]
ಉಡುಪಿ: ಮನೆಯ ಶೆಡ್ನಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ರಿಕ್ಷಾಕ್ಕೆ ಬೆಂಕಿ- ಪಕ್ಕದಲ್ಲಿದ್ದ ಕಾರು, ಸ್ಕೂಟರ್ಗೂ ತಗುಲಿದ ಬೆಂಕಿ; ಇಬ್ಬರು ಯುವಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಉಡುಪಿ: ಮನೆಯ ಶೆಡ್ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ರಿಕ್ಷಾ ಏಕಾಏಕಿ ಹೊತ್ತಿ ಉರಿದು, ಪಕ್ಕದಲ್ಲಿದ್ದ ಕಾರು ಹಾಗೂ ಸ್ಕೂಟರ್ಗೂ ಬೆಂಕಿ ವ್ಯಾಪಿಸಿದ ಘಟನೆ ಭಾನುವಾರ ಬೆಳಿಗ್ಗೆ ಪೆರಂಪಳ್ಳಿ ಸಮೀಪ ನಡೆದಿದೆ.ಘಟನೆ ವೇಳೆ ಸಮಯಪ್ರಜ್ಞೆ ಮೆರೆದ ಇಂಜಿನಿಯರ್ ಮನೋಜ್ ಹಾಗೂ ಯುವ ಉದ್ಯಮಿ ಶರತ್ ಅವರು ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆದು ಮನೆಯವರನ್ನು ಹಾಗೂ ಆಸ್ತಿಯನ್ನು ರಕ್ಷಿಸುವಲ್ಲಿ ನೆರವಾದರು.ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಮನೆಯ ಶೆಡ್ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ರಿಕ್ಷಾದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ತೀವ್ರಗೊಂಡು […]
ಮಣಿಪಾಲದ MSDC ಯಿಂದ CNC ಮೆಷಿನ್ ತರಬೇತಿ: ಯುವಜನರ ಕೌಶಲ್ಯಾಭಿವೃದ್ಧಿಗೆ ಇಲ್ಲಿದೆ ಅದ್ಬುತ ಅವಕಾಶ

ಮಣಿಪಾಲ: ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಅಗತ್ಯವಾದ ಕೌಶಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ CNC ಮೆಷಿನ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಪಾವಧಿಯ ಈ ತರಬೇತಿಯಲ್ಲಿ CNC ಲೇಥ್ ಮತ್ತು ಮಿಲ್ಲಿಂಗ್ ಯಂತ್ರಗಳ ರಚನೆ ಹಾಗೂ ಕಾರ್ಯಾಚರಣೆ, CNC ವರ್ಕ್ಫ್ಲೋ, ಪ್ರೋಗ್ರಾಮಿಂಗ್ನ ಮೂಲಭೂತ ಅಂಶಗಳು, ಸುರಕ್ಷತಾ ಕ್ರಮಗಳು ಮತ್ತು ಲ್ಯಾಬ್ ಶಿಸ್ತು ಕುರಿತು ತರಬೇತಿ ನೀಡಲಾಗುತ್ತದೆ. ತರಬೇತಿಯ ಭಾಗವಾಗಿ ನೈಜ CNC ಲೇಥ್ ಮತ್ತು ಮಿಲ್ ಯಂತ್ರಗಳಲ್ಲಿ ಪ್ರಾಯೋಗಿಕ ಅನುಭವ […]
ಮೀನಿನ ಮುಳ್ಳು ಕಸವಲ್ಲ, ದಂತ ಚಿಕಿತ್ಸೆಗೆ ರಸ! ಮಂಗಳೂರಿನಲ್ಲಿ ನಡೆದ ಈ ಮಹತ್ವಪೂರ್ಣ ಸಂಶೋಧನೆ ಸೃಷ್ಟಿಸಿತು ಹೊಸ ಸಾಧ್ಯತೆ!

ಮೀನು ತಿಂದ ಬಳಿಕ ಉಳಿಯುವ ಮುಳ್ಳು, ಮೂಳೆ ಸೇರಿದಂತೆ ತ್ಯಾಜ್ಯವನ್ನು ಸಾಮಾನ್ಯವಾಗಿ ಕಸವೆಂದು ಎಸೆಯಲಾಗುತ್ತದೆ. ಆದರೆ ಇದೇ ತ್ಯಾಜ್ಯಕ್ಕೆ ಇದೀಗ ಹೊಸ ಮೌಲ್ಯ ದೊರೆಯುವ ಸಾಧ್ಯತೆ ಮೂಡಿದೆ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ (College of Fisheries) ನಡೆಸಿರುವ ಸಂಶೋಧನೆಯು ಮೀನಿನ ಮೂಳೆ ತ್ಯಾಜ್ಯದಿಂದ ಹೈಡ್ರಾಕ್ಸಿ ಅಪಟೈಟ್ (Hydroxyapatite) ಎಂಬ ಪ್ರಮುಖ biomaterial ಪಡೆಯುವ ಸಾಧ್ಯತೆಯನ್ನು ತೋರಿಸಿದೆ. ಹೈಡ್ರಾಕ್ಸಿ ಅಪಟೈಟ್ ಎಂಬುದು calcium-phosphate ಆಧಾರಿತ ಖನಿಜವಾಗಿದ್ದು, ಮಾನವನ ಮೂಳೆ ಮತ್ತು ಹಲ್ಲುಗಳಲ್ಲಿ ಸ್ವಾಭಾವಿಕವಾಗಿ ಕಂಡುಬರುತ್ತದೆ. ಹೀಗಾಗಿ biomedical ಕ್ಷೇತ್ರದಲ್ಲಿ […]