ಉಡುಪಿ ಜನರ ಬಾಯಿಗೆ ಸೈಲೆಂಟಾಗಿ ರುಚಿ ಹತ್ತಿಸ್ತಿದೆ ಶೀನ ನಾಯ್ಕರು ತಯಾರಿಸೋ ಸ್ಪೆಷಲ್ ಗೋಲಿಸೋಡಾ!: ಒಮ್ಮೆ ಕುಡಿದು ನೋಡ, ಈ ಗೋಲಿ ಸೋಡ

ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಸೂರ್ಯನ ತಾಪ ಮಾತ್ರ ಏರುತ್ತಿದ್ದು ಸೆಖೆಯೂ ಶುರುವಾಗಿದೆ. ಇದೀಗ ಬಿಸಿಲಿನ ತಾಪ ತಡೆಯಲಾಗದೇ ಜನರು ತಂಪುಪಾನೀಯದತ್ತ ಮುಖ ಮಾಡುತ್ತಿದ್ದಾರೆ. ಪೆಪ್ಸಿ ಕೋಲಾಗಳ  ಭರಾಟೆಯ ನಡುವೆಯೂ ಪಕ್ಕ ದೇಸೀ ತಂಪು ಗೋಲಿ‌ಸೋಡ ಸೈಲೆಂಟ್ ಸುದ್ದಿ ಮಾಡುತ್ತಿದೆ.ಹೀಗೆ ಗೋಲಿಸೋಡ ಮಾರುತ್ತಲೇ ಉಡುಪಿಯಲ್ಲಿ ಜನಜನಿತರಾದವರು ದೊಡ್ಡಣಗುಡ್ಡೆಯ ಶೀನ ನಾಯ್ಕರು. ಉಡುಪಿಯ ದೊಡ್ಡಣಗುಡ್ಡೆಯ ಶೀನ ನಾಯ್ಕರ  ಸಾಹಸಮಯ ಯಶೋಗಾಥೆಯನ್ನು ಕೇಳಿದರೆ ನಿಜಕ್ಕೂ ನೀವು ಹೆಮ್ಮೆ ಪಡುತ್ತೀರಾ. ಅವರ ವಯಸ್ಸು ಸರಿ ಸುಮಾರು ಎಪ್ಪತೈದು ವರ್ಷ. ಹಳೆಯ ಸೈಕಲ್‌ […]

ಕಣ್ಣು ಕೊರೈಸುವ ಮೋಹಕ ಚಿತ್ರ ಬಿಡಿಸ್ತಾಳೆ ಉಂಚಳ್ಳಿ ಅನ್ನೋ ಜಲಪಾತದೂರಿನ ಈ ಹುಡುಗಿ:

ಇವರು ಬಿಡಿಸಿದ ಕಲಾಕೃತಿಗಳನ್ನು ನೋಡುತ್ತಿದ್ದರೆ ಬೆರಗಿನಿಂದ ಅಬ್ಬಾ ಎನ್ನುವ ಉದ್ಗಾರ ಮೂಡುತ್ತದೆ. ಪ್ರತಿಭೆ ಇದ್ದರೆ, ಸಾಧಿಸುವ ಮನಸ್ಸಿದ್ದರೆ, ಒಂದು ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಮನುಷ್ಯ ಏನೆನೆಲ್ಲಾ ಸಾಧಿಸಬಹುದಲ್ಲವೇ ಅನ್ನೋ ಅಚ್ಚರಿ ಮೂಡುತ್ತದೆ. ಇವರು ಜಲಪಾತದ ಜಿಲ್ಲೆಯಾದ ಉತ್ತರ ಕನ್ನಡದ ಉಂಚಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಸಿ೦ಧು ಭಟ್. ಗ್ರಾಮೀಣ ಭಾಗದ ಸೊಗಡು, ಶೈಲಿ, ಚೆಂದ, ಬೆರಗು ಎಲ್ಲವೂ ಇವರ ಕಲಾಕೃತಿಯಲ್ಲಿ ಕಾಡುತ್ತದೆ. ಸಿಂಧುಗೆ ಚಿತ್ರಕಲೆಯ ಕುರಿತು ಇಷ್ಟೊಂದು ಆಸಕ್ತಿ ಮೂಡಿದ್ದು ಹೇಗೆ?ಮತ್ತೆ ಬೇರೆ ಯಾವ ಯಾವ ಆಸಕ್ತಿ  […]

ತನ್ನ ಎಮೋಷನಲ್ ಕತೆ ಹೇಳಿ ಕುಡ್ಲ ಕಾಡಿಸಿದ ಮದ್ವೆ ಹುಡ್ಗಿ:ಎಲ್ಲೆಲ್ಲೂ ವೈರಲ್ ಆಯ್ತು”ಎನ್ನ ಕುಡ್ಲ”

ಯಾವುದೇ ಊರಿನ ಹುಡುಗಿಯಾಗಲಿ, ಮದುವೆಯ ಸಂದರ್ಭದಲ್ಲಿ ಒಂದೂರನ್ನು ಬಿಟ್ಟು ಗಂಡನ ಊರನ್ನು ಹಿಡಿಯುವ ಪ್ರಸಂಗ ಬರುತ್ತದೆ.ತಾವು ಹುಟ್ಟಿ ಬೆಳೆದ, ಆಟವಾಡಿ ಸಂಭ್ರಮಪಟ್ಟ,ಮೋಜು ಮಸ್ತಿ ಮಾಡಿದ ಊರನ್ನು ಬಿಟ್ಟು ಮತ್ತೊಂದು ಊರಿನ ದಾರಿ ಹಿಡಿಯುವಾಗ ಆಗುವ ನೋವು, ಬೇಸರ ವರ್ಣಿಸಲು ಸಾಧ್ಯವಿಲ್ಲ. ಇಲ್ಲೊಂದು ಎಮೋಷನಲ್ ವಿಡಿಯೋ ಇದೆ ನೋಡಿ. ಈ ವಿಡಿಯೋದಲ್ಲಿ ಮದುವೆಯಾಗುವ ಹುಡುಗಿ ತಾನು ಹುಟ್ಟಿ ಬೆಳೆದ ಮಂಗಳೂರನ್ನು ಬಿಟ್ಟು ಬೇರೆ ಊರಿಗೆ ಹೋಗುವ ಮೊದಲು, ತನ್ನನ್ನು ಬೆಳೆಸಿದ ಮಂಗಳೂರು ಹೇಗಿತ್ತು? ಮಂಗಳೂರು ತನ್ನ ಬದುಕಿಗೆ ಏನೇನೆಲ್ಲ […]

ಕೊರೊನಾ ಸಂಹಾರ ಮಾಡುವ ನವದುರ್ಗೆ:ವೈರಲ್ ಆಗ್ತಿದೆ ಈ ಫೋಟೋ

ಎಲ್ಲೆಡೆ ನವರಾತ್ರಿಯ ಸಂಭ್ರಮ ಕಳೆಗಟ್ಟಿದೆ.ಕೊರೋನಾ ಕಾಲದಲ್ಲಿಯೂ ಜನರ ಸಂಭ್ರಮಕ್ಕೆ ತೊಂದರೆಯಾಗದೇ ಎಲ್ಲರೂ ನವರಾತ್ರಿ ಹಬ್ಬವನ್ನು ಆಚರಿಸುತ್ತಲೇ ಇದ್ದಾರೆ. ನವರಾತ್ರಿಯ ನವದುರ್ಗೆಯರ ಕೃಪೆಯಿಂದ, ಆರಾಧನೆಯಿಂದ ಕೊರೋನಾ ಅನ್ನೋ ಭೂತ ತೊಗಲಲಿ ಎನ್ನುವ ಪ್ರಾರ್ಥನೆ ಎಲ್ಲ ಕಡೆ ನಡೆಯುತ್ತಿದೆ.ನವದುರ್ಗೆ ಕೊರೋನಾವನ್ನು ಮಟ್ಟ ಹಾಕುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದ್ದು ಸಖತ್ ಸದ್ದು ಮಾಡ್ತಿದೆ.ಯಸ್ ಬೆಳ್ತಂಗಡಿಯ ಯುವ ಕಲಾವಿದೆ ಪೂರ್ಣಿಮಾ ಪೆರ್ಗಣ್ಣ ಅವರು ಶಕ್ತಿ ಸ್ವರೂಪಿಣಿ ನವದುರ್ಗೆಯ ವೇಷ ಧರಿಸಿ ಕೊರೋನಾ ಸಂಹಾರ ಮಾಡುವ ಮತ್ತು ಕೊರೋನಾಗೆ ವಿದಾಯ […]

ವ್ಹಾವ್ ಎಷ್ಟ್ ಚೆಂದ ಚಿತ್ರ ಬಿಡಿಸ್ತಾಳೆ ಈ ಯುವತಿ: ಬೆರಗಿನ ಕೈಗಳ ಚಿತ್ರಗಾರ್ತಿ ಕಾರ್ಕಳದ ಜ್ಯೋತ್ಸ್ನಾ ಶೆಣೈ

ಕಲ್ಪನೆಗೆ ರಂಗುರಂಗಿನ ಬಣ್ಣ ತುಂಬಿ ಅದ್ಬುತ ಕಲಾಕೃತಿ ಮೂಡಿಸುವ ಯುವ ಕಲಾವಿದೆ ಕಾರ್ಕಳದ ಜ್ಯೋತ್ಸ್ಯಾ ಶೆಣೈ. ಇವರ ಕೈಯಲ್ಲರಳಿದ ಚಿತ್ರದಲ್ಲಿ ಬೆರಗಿದೆ, ವ್ಹಾವ್ ಅಂತ ಅನ್ನಿಸುವ ಸೊಗಸಿದೆ, ಸೃಜನಶೀಲ ಕುಸುರಿ, ಮುಗ್ದತೆ, ಜೀವನಪ್ರೀತಿ ಎಲ್ಲವೂ ಇವರ ಕಲಾಕೃತಿಗಳಲ್ಲಿ ಕಾಡುತ್ತದೆ.      ಜ್ಯೋತ್ಸ್ಯಾ ಶೆಣೈ ಮೂಲತಃ ಕಾರ್ಕಳದವರು, ಕಾರ್ಕಳ ಆರ್.ಸುರೇಶ್ ಶೆಣೈ, ಆರ್.ಸುಜಾತಾ ಶೆಣೈ ದಂಪತಿಯ ಪುತ್ರಿ. ಸದ್ಯ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರೋ ಜ್ಯೋತ್ಸ್ಯಾಗೆ ಬಾಲ್ಯದಿಂದಲೂ ಚಿತ್ರ ಬರೆಯೋದು ನೆಚ್ಚಿನ ಆಸಕ್ತಿ. https://m.facebook.com/story.php?story_fbid=750967682370108&id=329044147895799 […]