‘ಪ್ರಿಟಿ’ ಎಂದು ಮೆಸೇಜ್ ಮಾಡಿದ್ದಕ್ಕೆ ಕೇಸ್: ವಿದ್ಯಾರ್ಥಿಗೆ ಹೈಕೋರ್ಟ್ ರಿಲೀಫ್: ಇನ್‌ಸ್ಟಾಗ್ರಾಂನಿಂದ ಹೀಗೂ ಆಗುತ್ತೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿ!

ಬೆಂಗಳೂರು : ಕಾಲೇಜಿನ ಸಹಪಾಠಿಗೆ ಇನ್‌ಸ್ಟಾಗ್ರಾಂನಲ್ಲಿ “ಪ್ರಿಟಿ” ಮತ್ತು “ಬ್ಯೂಟಿಫುಲ್“ ಎಂದು ಮೆಸೇಜ್ ಕಳುಹಿಸಿದ್ದ ವಿದ್ಯಾರ್ಥಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಯುವಜನರ ನಡುವಿನ ಖಾಸಗಿ ಸಂಭಾಷಣೆಯನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಥಾಮಸ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಪಡಿಸಿ, ತನಿಖೆ ವೇಳೆ ವಶಪಡಿಸಿಕೊಳ್ಳಲಾಗಿದ್ದ ಮೊಬೈಲ್ ಹಾಗೂ ಲ್ಯಾಪ್‌ಟಾಪ್ […]

ಅಪರಿಚಿತ ವಾಟ್ಸಪ್‌ ಸಂಖ್ಯೆಯಿಂದ ಬಂತು ಮದುವೆ ಆಹ್ವಾನ ಪತ್ರಿಕೆ, ಓಪನ್ ಮಾಡಿದ್ದೇ ಬ್ಯಾಂಕ್ ಖಾತೆಯಿಂದ ₹9.96 ಲಕ್ಷ ಢಮಾರ್, ನಿಮಗೂ ಹೀಗಾಗಬಹುದು ಎಚ್ಚರ!

ಬೆಂಗಳೂರು: ವಾಟ್ಸಪ್‌ಗೆ ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳು, ಲಿಂಕ್‌ಗಳು ಅಥವಾ ಫೈಲ್‌ಗಳನ್ನು ತೆರೆಯುವ ಮುನ್ನ ಎಚ್ಚರಿಕೆ ವಹಿಸುವಂತೆ ಸೈಬರ್ ತಜ್ಞರು ಸಲಹೆ ನೀಡುತ್ತಿದ್ದಾರೆ. ಆದರೂ ಪ್ರತೀ ದಿನವೂ ಒಂದಿಲ್ಲೊಂದು ಸೈಬರ್ ಪ್ರಕರಣ ಆಗುತ್ತಲೇ ಇದೆ. ಮದುವೆ ಆಹ್ವಾನ ಪತ್ರಿಕೆ ಎಂದು ನಂಬಿ APK ಫೈಲ್ ತೆರೆದ ಸರ್ಕಾರಿ ಅಧಿಕಾರಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಸುಮಾರು ₹9.96 ಲಕ್ಷ ಕಳೆದುಕೊಂಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬಾಬು ಅವರಿಗೆ ಜುಲೈ 14ರಂದು ಸಂಜೆ […]

ಭಾರವಾದ ಕಬ್ಬಿಣದ ಗ್ಯಾಸ್ ಸಿಲಿಂಡರ್‌ಗೆ ಗುಡ್‌ಬೈ ಹೇಳೋ ಕಾಲ ಬಂತು, ಮಾರುಕಟ್ಟೆಗೆ ಬಂದಿದೆ ಹಗುರ, ಪಾರದರ್ಶಕ LPG ಸಿಲಿಂಡರ್

ಭಾರವಾದ ಕಬ್ಬಿಣದ ಅಡುಗೆ ಅನಿಲ (LPG) ಸಿಲಿಂಡರ್‌ಗಳ ಬಳಕೆಗೆ ಪರ್ಯಾಯವಾಗಿ ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಹೊಸ ತಂತ್ರಜ್ಞಾನದ ಸಂಯೋಜಿತ (Composite) LPG ಸಿಲಿಂಡರ್‌ಗಳನ್ನು ಪರಿಚಯಿಸಿವೆ. ‘ಭಾರತ್ ಗ್ಯಾಸ್ ಲೈಟ್‌ಜಿಪ್’ ಹಾಗೂ ‘HP ನವ್ಯ’ ಹೆಸರಿನಲ್ಲಿ ಬಿಡುಗಡೆಯಾಗಿರುವ ಈ ಹೊಸ ಸಿಲಿಂಡರ್‌ಗಳು ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳಿಗಿಂತ ಹಗುರ, ಸುರಕ್ಷಿತ ಮತ್ತು ಬಳಕೆದಾರ ಸ್ನೇಹಿಯಾಗಿವೆ. 50% ಕಡಿಮೆ ತೂಕ ಹೊಸ ಕಾಂಪೋಸಿಟ್ ಸಿಲಿಂಡರ್‌ಗಳು ಸಾಮಾನ್ಯ ಕಬ್ಬಿಣದ ಸಿಲಿಂಡರ್‌ಗಳಿಗಿಂತ […]

ಟೈ ಧರಿಸದಿದ್ದಕ್ಕೆ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ರು, ಇಂಡಿಗೋ ನಲ್ಲಾದ ಕಹಿ ಘಟನೆ ಬಿಚ್ಚಿಟ್ಟ ಮಾಜಿ ಉದ್ಯೋಗಿ, ಹೀಗೂ ದುಡಿಸಿಕೊಳ್ತಾರಾ ಎಂದು ಶಾಕ್ ಆದ ನೆಟ್ಟಿಗರು!

ಬೆಂಗಳೂರು: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ವಿರುದ್ಧ ಮಾಜಿ ಉದ್ಯೋಗಿಯೊಬ್ಬರು ಮಾಡಿರುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಗ್ರೌಂಡ್ ಸ್ಟಾಫ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್ ಜಂಶೀದ್ ವೈ., ಸಂಸ್ಥೆಯಲ್ಲಿನ “ಮಾನವೀಯತೆ ಇಲ್ಲದ ಕೆಲಸದ ಸಂಸ್ಕೃತಿ”ಯಿಂದಲೇ ತಮ್ಮ ಕನಸಿನ ಉದ್ಯೋಗ ತೊರೆಯಬೇಕಾಯಿತು ಎಂದು ಆರೋಪಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಜಂಶೀದ್, ಕೇವಲ ಟೈ ಧರಿಸದೆ ಕೆಲಸಕ್ಕೆ ಬಂದಿದ್ದಕ್ಕಾಗಿ ತಮ್ಮನ್ನು ಸಾರ್ವಜನಿಕವಾಗಿ ಅವಮಾನ ಮಾಡಲಾಗಿದ್ದು, […]

ಮಣಿಪಾಲ MSDC ಯಲ್ಲಿ ಜಪಾನೀಸ್ ಭಾಷೆ ಕಲಿಯುವ ಒಂದೊಳ್ಳೆ ಅವಕಾಶ,ಜಪಾನೀಸ್ ಭಾಷಾ ಕೋರ್ಸ್‌ಗೆ ಅರ್ಜಿ ಆಹ್ವಾನ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC), ಕೆಟಿಸಿ (KTC) ಹಾಗೂ ಜಪಾನ್‌ನ ಚುಒಹ್ ಪಬ್ಲಿಷಿಂಗ್ ಕಂಪನಿಯ ಸಹಯೋಗದಲ್ಲಿ ಜಪಾನೀಸ್ ಭಾಷಾ ಕೋರ್ಸ್ (N5 – Beginner Level) ಆರಂಭಿಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೋರ್ಸ್ ಜುಲೈ 20, 2026 ರಿಂದ ಆರಂಭವಾಗಲಿದ್ದು, ಜಪಾನ್‌ನಲ್ಲಿ ಕೌಶಲ್ಯಾಧಾರಿತ ಉದ್ಯೋಗಗಳನ್ನು ಗುರಿಯಾಗಿಸಿಕೊಂಡವರಿಗೆ ಇದು ಉತ್ತಮ ಅವಕಾಶವಾಗಿದೆ. ಈ ತರಬೇತಿಯಲ್ಲಿ ಜಪಾನೀಸ್ ಭಾಷೆಯನ್ನು ಓದುವುದು, ಬರೆಯುವುದು, ಬರವಣಿಗೆ ಪದ್ಧತಿಗಳನ್ನು ಕಲಿಯುವುದು, ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವುದು, ಕಂಜಿ (Kanji) ಅಕ್ಷರಗಳ ಪಾಂಡಿತ್ಯ, ಸಂಭಾಷಣಾ […]