ಪ್ಲಾಸ್ಟಿಕ್ ಚೀಲಕ್ಕೆ ಹೇಳಿ ಗುಡ್ ಬೈ… ಪರಿಸರ ಕಾಳಜಿ ನಮ್ಮಿಂದ ಆರಂಭವಾಗಲಿ

ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ: ಇಂದು ಒಂದು ಚೀಲ ಬದಲಿಸಿದರೆ, ನಾಳೆ ಒಂದು ಭೂಮಿ ಉಳಿಯುತ್ತದೆ. ನಿಮ್ಮ ಮಕ್ಕಳ ಭವಿ‍ಷ್ಯವನ್ನು ಯೋಚಿಸಿಯಾದರೂ ಪ್ಲಾಸ್ಟಿಕ್ ಬಳಕೆ ತ್ಯಜಿಸಿ. ಮಕ್ಕಳಿಗೆ ಜನ್ಮ ನೀಡುವುದು ಮಾತ್ರ ಕರ್ತವ್ಯವಲ್ಲ. ಮಕ್ಕಳಿಗೋಸ್ಕರ ಪರಿಸರ, ಗಾಳಿ ಶುದ್ಧವಾಗಿಡುವುದೂ ನಮ್ಮ ಮುಖ್ಯ ಕರ್ತವ್ಯ. ಪ್ರತಿ ವರ್ಷ ಜುಲೈ 3ರಂದು ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ (International Plastic Bag Free Day)ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ಚೀಲಗಳ ಅತಿಯಾದ ಬಳಕೆಯಿಂದ ಪರಿಸರ, ಜಲಚರಗಳು, ಪ್ರಾಣಿಗಳು […]

ಹೊಲದ ಕಸಕ್ಕೂ ಚಿನ್ನದ ಬೆಲೆ! ರೈತರೇ, ಕೃಷಿ ತ್ಯಾಜ್ಯದಿಂದ ₹50 ಸಾವಿರ ಆದಾಯವಿದೆ ಗಮನಿಸಿ

ಬೆಂಗಳೂರು: ಬೆಳೆ ಕಟಾವಿನ ಬಳಿಕ ಹೊಲದಲ್ಲಿ ಉಳಿಯುವ ಕೃಷಿ ತ್ಯಾಜ್ಯವನ್ನು ಸುಟ್ಟು ಹಾಕುವ ಬದಲು ಅದನ್ನೇ ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಳ್ಳುವ ಹೊಸ ಅವಕಾಶ ರೈತರಿಗೆ ಲಭ್ಯವಾಗಿದೆ. ಕಾರ್ಬನ್ ಕ್ರೆಡಿಟ್ ವ್ಯವಸ್ಥೆಯ ಮೂಲಕ ಕಬ್ಬು, ಜೋಳ, ಬಾಳೆ ಸೇರಿದಂತೆ ವಿವಿಧ ಬೆಳೆಗಳ ತ್ಯಾಜ್ಯದಿಂದ ವರ್ಷಕ್ಕೆ ₹30 ಸಾವಿರದಿಂದ ₹50 ಸಾವಿರಕ್ಕೂ ಹೆಚ್ಚು ಹೆಚ್ಚುವರಿ ಆದಾಯ ಗಳಿಸುವ ಸಾಧ್ಯತೆ ಇದೆ. ಈ ಹೊಸ ಪರಿಕಲ್ಪನೆಯನ್ನು ಬೆಂಗಳೂರಿನ ರಿನ್ಯೂಕ್ರೆಡ್ (RenewCred) ಸ್ಟಾರ್ಟ್‌ಅಪ್ ಪರಿಚಯಿಸಿದೆ. ಅಭಿಮನ್ಯು ರಾಠಿ ಮತ್ತು ಯೋಗೇಂದ್ರ ಪಾಂಚಾಲ್ ಸ್ಥಾಪಿಸಿರುವ […]

ವನಮಹೋತ್ಸವ ಆಚರಣೆ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ, ಉಡುಪಿ ಹಾಗೂ ಸಹಕಾರ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಡಾ. ವಿ.ಎಸ್. ಆಚಾರ್ಯ ಜಿಲ್ಲಾ ತರಬೇತಿ ಕೇಂದ್ರ, ಪ್ರಗತಿ ನಗರ, ಮಣಿಪಾಲದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಭಾರತ್ […]

ನೇರಳೆ ಹಣ್ಣಿನ ಸಮೃದ್ಧ ಫಸಲು ಬರಗಾಲದ ಮುನ್ಸೂಚನೆಯೇ? ಪೂರ್ವಜರ ನಂಬಿಕೆಗೆ ಇಲ್ಲಿದೆ ವೈಜ್ಞಾನಿಕ ವಿವರಣೆ

ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ಹೇರಳವಾಗಿ ಕಂಡುಬರುತ್ತಿರುವ ನೇರಳೆ ಹಣ್ಣಿನ ಫಸಲು ಬರಗಾಲದ ಸೂಚನೆಯೇ ಎಂಬ ಚರ್ಚೆ ಜೋರಾಗಿದೆ. “ನೇರಳೆ ಹಣ್ಣು ಹೆಚ್ಚು ಬಂದರೆ ಆ ವರ್ಷ ಬರಗಾಲ ಬರುತ್ತದೆ” ಎಂಬುದು ಜನಪದದಲ್ಲಿ ಹಿರಿಯರಿಂದ ಬಂದಿರುವ ನಂಬಿಕೆ. ಇದೇ ವೇಳೆ ಮುಂಗಾರು ಮಳೆ ನಿರೀಕ್ಷೆಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯೂ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಎಲ್‌ನಿನೋ ಪರಿಣಾಮದಿಂದ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗುವ […]

ಹುಟ್ಟುಹಬ್ಬದ ಸಂಭ್ರಮಕ್ಕೆ ಹಸಿರು ಸ್ಪರ್ಶ: ನಮ್ಮ ಹುಟ್ಟನ್ನು ಹೀಗೆ ಹಬ್ಬವಾಗಿಸೋಣ

ಹುಟ್ಟುಹಬ್ಬವು ಪ್ರತಿಯೊಬ್ಬರ ಜೀವನದಲ್ಲಿಯೂ ವಿಶೇಷ ದಿನ. ಸಾಮಾನ್ಯವಾಗಿ ನಾವು ಈ ದಿನವನ್ನು ಕೇಕ್ ಕತ್ತರಿಸುವುದು, ಉಡುಗೊರೆಗಳನ್ನು ಸ್ವೀಕರಿಸುವುದು ಮತ್ತು ಸ್ನೇಹಿತರೊಂದಿಗೆ ಸಂಭ್ರಮಿಸುವ ಮೂಲಕ ಆಚರಿಸುತ್ತೇವೆ. ಆದರೆ ನಮ್ಮ ಸಂತೋಷದ ಜೊತೆಗೆ ಪರಿಸರಕ್ಕೂ ಒಂದು ಸಣ್ಣ ಕೊಡುಗೆ ನೀಡಿದರೆ, ಆ ಹುಟ್ಟುಹಬ್ಬ ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಇಂದಿನ ಪರಿಸರ ಸಮಸ್ಯೆಗಳಾದ ಹವಾಮಾನ ಬದಲಾವಣೆ, ಅರಣ್ಯ ನಾಶ, ಮಾಲಿನ್ಯ ಮತ್ತು ನೀರಿನ ಕೊರತೆಗಳನ್ನು ಗಮನಿಸಿದರೆ, ಪ್ರತಿಯೊಬ್ಬರೂ ತಮ್ಮ ಮಟ್ಟಿಗೆ ಪರಿಸರ ಸಂರಕ್ಷಣೆಯಲ್ಲಿ ಭಾಗವಹಿಸುವುದು ಅತ್ಯಗತ್ಯವಾಗಿದೆ. ಒಂದು ಗಿಡ ನೆಡುವ ಸಂಕಲ್ಪ ಹುಟ್ಟುಹಬ್ಬದಂದು […]