80ನೇ ಸ್ವಾತಂತ್ರ್ಯ ದಿನಾಚರಣೆ: ತ್ರಿರಂಗ ಧ್ವಜವನ್ನು ಗೌರವದಿಂದ ಮಡಚುವ ಮತ್ತು ಸಂಗ್ರಹಿಸಲು ಒಂದು ಕ್ರಮವಿದೆ ಗೊತ್ತೇ? ರಾಷ್ಟ್ರಧ್ವಜ ನಮ್ಮ ಗರಿಮೆ ಮತ್ತು ಗೌರವ

ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿರುವಾಗ, ದೇಶದಾದ್ಯಂತ ಲಕ್ಷಾಂತರ ನಾಗರಿಕರು ‘ಹರ್ ಘರ್ ತ್ರಿರಂಗ’ ಅಭಿಯಾನದ ಅಡಿಯಲ್ಲಿ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸುತ್ತಿದ್ದಾರೆ. ಆದರೆ, ಸ್ವಾತಂತ್ರ್ಯ ದಿನದ ಆಚರಣೆ ಮುಗಿದ ನಂತರ ಧ್ವಜವನ್ನು ಸರಿಯಾದ ಗೌರವದೊಂದಿಗೆ ತೆರವುಗೊಳಿಸಿ, ಸುರಕ್ಷಿತವಾಗಿ ಮಡಚಿಡುವುದು ಸಹ ಅಷ್ಟೇ ಮುಖ್ಯವಾಗಿದೆ. ಸಂಸ್ಕೃತಿ ಸಚಿವಾಲಯ ಮತ್ತು ಭಾರತೀಯ ಧ್ವಜ ಸಂಹಿತೆ (Flag Code of India) ನೀಡಿರುವ ಮಾರ್ಗದರ್ಶನದಂತೆ, ರಾಷ್ಟ್ರಧ್ವಜವನ್ನು ಮಡಚಲು ಹಾಗೂ ಸಂಗ್ರಹಿಸಿಡಲು ಅನುಸರಿಸಬೇಕಾದ ಪೂರ್ಣ ವಿಧಾನ ಇಲ್ಲಿದೆ: […]
ನಮ್ಮ ದೇಶದ ಹೆಮ್ಮೆ, ನಮ್ಮ ತಿರಂಗಾ… ಹೇಗೆ ತಯಾರಾಗುತ್ತದೆ ಗೊತ್ತೇ?

ಭಾರತದ ರಾಷ್ಟ್ರಧ್ವಜವು ದೇಶದ ಗೌರವ, ಏಕತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮೂರು ಪಟ್ಟಿಗಳನ್ನು ಹೊಂದಿರುವ ನಮ್ಮ ತಿರಂಗಾದ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದೆ. ಕೇಸರಿ ಧೈರ್ಯ ಮತ್ತು ತ್ಯಾಗವನ್ನು, ಬಿಳಿ ಶಾಂತಿ ಮತ್ತು ಸತ್ಯವನ್ನು ಹಾಗೂ ಹಸಿರು ಸಮೃದ್ಧಿ ಮತ್ತು ಪ್ರಕೃತಿಯನ್ನು ಪ್ರತಿನಿಧಿಸುತ್ತದೆ. ನಮ್ಮ ರಾಷ್ಟ್ರಧ್ವಜ ಎಲ್ಲಿ ತಯಾರಾಗುತ್ತದೆ? ರಾಷ್ಟ್ರಧ್ವಜ ತಯಾರಿಕೆಯಲ್ಲಿ ಕರ್ನಾಟಕಕ್ಕೂ ವಿಶೇಷ ಸ್ಥಾನವಿದೆ. ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಮತ್ತು ಧಾರವಾಡ ತಾಲ್ಲೂಕಿನ […]
ಕನಸಿಗೆ ರೆಕ್ಕೆ ಕಟ್ಟಿ ಆಕಾಶಕ್ಕೆ ಹಾರಿದ ಶೈನಿ ಅಸ್ಮಾ ಸಲ್ಡಾನ, ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಎನ್ನುವ ಹೆಗ್ಗಳಿಕೆ

ಕಾರ್ಕಳ: ಐದು ವರ್ಷದ ಬಾಲಕಿಯ ಮನದಲ್ಲಿ ಮೂಡಿದ್ದ ಪೈಲಟ್ ಆಗಬೇಕೆಂಬ ಕನಸು, ವರ್ಷಗಳ ಕಠಿಣ ಪರಿಶ್ರಮ, ಛಲ ಮತ್ತು ತಾಳ್ಮೆಯ ಮೂಲಕ ನನಸಾಗಿದೆ. ಕಾರ್ಕಳ ತಾಲೂಕಿನ ಕೌಡೂರು ರಂಗನಪಲ್ಕೆಯ ಶೈನಿ ಅಸ್ಮಾ ಸಲ್ಡಾನ ಅವರು ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ (CPL) ಪಡೆಯುವ ಮೂಲಕ ಉಡುಪಿ ಜಿಲ್ಲೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೌಡೂರು ರಂಗನಪಲ್ಕೆಯ ಅಶೋಕ್ ಜಾಕೋಬ್ ಸಲ್ಡಾನ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನ ದಂಪತಿಯ ಪುತ್ರಿಯಾಗಿರುವ ಶೈನಿ […]
ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕೇ? ಇಂದಿನಿಂದಲೇ ಹೀಗೆ ಮಾಡಿ

ಜು.28 ವಿಶ್ವ ಪ್ರಕೃತಿ ಸಂರಕ್ಷಣಾ ದಿನ: ಪ್ರಕೃತಿಯನ್ನು ಉಳಿಸುವುದು ಇಂದು ಆಯ್ಕೆಯಲ್ಲ, ನಮ್ಮೆಲ್ಲರ ಜವಾಬ್ದಾರಿ! ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕೆಂದರೆ, ಅವರಿಗೆ ಸ್ವಚ್ಛ ಗಾಳಿ, ನೀರು ದೊರೆಯಬೇಕಾದರೆ ನಾವು ಇಂದು ಎಚ್ಚೆತ್ತುಕೊಳ್ಳಬೇಕಿದೆ. ಪ್ರಕೃತಿ ಎಂದರೆ ಕೇವಲ ಕಾಡು, ಬೆಟ್ಟ, ನದಿ, ಸಮುದ್ರಗಳಲ್ಲ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರದಿಂದ ಹಿಡಿದು ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರಕೃತಿಯ ಕೊಡುಗೆ ಇದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ನಗರೀಕರಣ, ಕಾಡುಗಳ ನಾಶ, ಪ್ಲಾಸ್ಟಿಕ್ […]
ನಿಮ್ಮ ತಿಂಗಳ ಸಂಬಳ ಎಷ್ಟೇ ಇರಲಿ, ಈ ಸರಳ ಸೂತ್ರ ಪಾಲಿಸಿದರೆ ಭವಿಷ್ಯಕ್ಕೆ ಉಳಿತಾಯ ಮಾಡಬಹುದು!

ತಿಂಗಳಿಗೆ 15-20 ಸಾವಿರದ ಒಳಗೆ ಸಂಬಳ ಪಡೆಯುವವರು ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣ ಉಳಿಯುವುದಿಲ್ಲ ಎಂದು ಚಿಂತೆಪಡುತ್ತಿರುತ್ತಾರೆ. ಆದರೆ ಆದಾಯ ಕಡಿಮೆ ಇದ್ದರೂ ಸರಿಯಾದ ರೀತಿಯಲ್ಲಿ ಹಣವನ್ನು ನಿರ್ವಹಿಸಿದರೆ ದಿನನಿತ್ಯದ ಖರ್ಚು, ಉಳಿತಾಯ ಮತ್ತು ಭವಿಷ್ಯದ ಅಗತ್ಯಗಳನ್ನು ಸಮತೋಲನಗೊಳಿಸಬಹುದು. ಸಂಬಳ ಬಂದ ತಕ್ಷಣವೇ ಎಲ್ಲ ಹಣವನ್ನು ಖರ್ಚು ಮಾಡುವ ಬದಲು ಮೊದಲೇ ಒಂದು ಬಜೆಟ್ ರೂಪಿಸಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಿಮ್ಮ ಸಂಬಳ ಎಷ್ಟೇ ಇರಲಿ ಅದರಲ್ಲಿ ಸಣ್ಣ ಮೊತ್ತವನ್ನು ಉಳಿತಾಯಕ್ಕೆ ನೀವು ಮೀಸಲಿಡಲೇಬೇಕು. ಸಂಬಳ ಕೈಗೆ […]