ಕಂಬಳ ಕರೆಗೆ ಇಳಿದಳು ಈ ಮುದ್ದು ಹುಡುಗಿ: ಕಂಬಳ ಪ್ರೇಮಿಗಳಲ್ಲಿ ಬೆರಗು ಮೂಡಿಸಿದ ಈ ಹುಡುಗಿ ಯಾರು?

ಈ ಹುಡುಗಿಯ ಕಥೆ ನಿಜಕ್ಕೂ ಹೆಮ್ಮೆ ತರುತ್ತದೆ. ಈ ಹುಡುಗಿಯ ಸಾಧನೆ ಕೇಳಿದರೆ ಕಂಬಳದ ಅಭಿಮಾನಿಗಳು ನಿಜಕ್ಕೂ ಖುಷಿಪಡುತ್ತಾರೆ. ಹೌದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಂಬಳ ಅಂದರೆ ಅದೊಂದು ಸಂಸ್ಕೃತಿ, ಅದೊಂದು ತುಳುವರ ಉಸಿರಿದ್ದಂತೆ. ಕಂಬಳ ಪುರುಷ ಪ್ರಧಾನವಾಗಿದ್ದು  ಪುರುಷರೇ ಈ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಆದರೆ ಇತ್ತೀಚೆಗೆ  ಕಾರ್ಕಳ ಮಿಯ್ಯಾರುವಿನಲ್ಲಿ  ಹುಡುಗಿಯೊಬ್ಬಳು ಕಂಬಳ ಕೋಣದ ಯಜಮಾನಿಕೆಯ ನೇತೃತ್ವ ವಹಿಸಿ ಕಂಬಳ ಕರೆಗೆ ಇಳಿದಿದ್ದಾಳೆ. ಅದಕ್ಕೆ ಸಾಕ್ಷಿಯಾಗಿದೆ ಮೊನ್ನೆಯ ಮಿಯ್ಯಾರು ಕಂಬಳ. ಈ ಮೂಲಕ ಕಂಬಳದ […]

ಕಬ್ಬು ಬೆಳೆದು ಬದುಕು ಸಿಹಿಯಾಗಿಸಿದ ಕರಾವಳಿಯ ಈ ಕೃಷಿಕ: ಇವರ ಸಕ್ಸಸ್ ಸ್ಟೋರಿ ಒಮ್ಮೆ ಕೇಳಿ

ಇದು ಕಬ್ಬು ಬೆಳೆದು ಬದುಕು ಸಿಹಿಮಾಡಿಕೊಂಡ ಯುವ ಕೃಷಿಕನೊಬ್ಬನ ಕತೆ.ಈ ಕತೆ ಕೇಳಿದರೆ ನೀವು ಹೆಮ್ಮೆ ಮತ್ತು ಖುಷಿ ಪಡುತ್ತೀರಿ ಹೌದು ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉತ್ಸಾಹಿ ಕೃಷಿಕ. ಹೆಸರು ಗುಂಡು ನಾಯ್ಕ್. ಕಾರ್ಕಳ ತಾಲೂಕಿನ ಮುಟ್ಲುಪಾಡಿಯ ದರ್ಖಾಸು ಮನೆ ನಿವಾಸಿ. ಇದೀಗ ತಮ್ಮ ಮನೆಯವರೆಲ್ಲರನ್ನೂ ಕಬ್ಬು ಕೃಷಿಗೆ ತೊಡಗಿಸಿಕೊಳ್ಳುವ ಸೈ ಎನಿಸಿಕೊಂಡು ಕಬ್ಬು ಕೃಷಿಯಲ್ಲಿ ಯಶಸಸ್ಸು ಸಾಧಿಸಿದ್ದಾರೆ ಗುಂಡು ನಾಯ್ಕರು. ಆ ಮೂಲಕ ಕಾರ್ಕಳ ತಾಲೂಕಿನಲ್ಲಿ ಮಾದರಿ ರೈತನಾಗಿ ಗುರುತಿಸಿಕೊಂಡಿದ್ದಾರೆ. ಇವರದ್ದು ಶ್ರಮಿಕ […]

ಶೃಂಗೇರಿ ಹುಡುಗಿ ಶಾಶ್ವತಿ ಹೆಚ್ ಎಸ್ ಬಿಡಿಸಿದ ರಂಗು ರಂಗಿನ ಚಿತ್ರಗಳು

ಶಾಶ್ವತಿ ಹೆಚ್.ಎಸ್, ಮಲೆನಾಡಿನ ಚೆಂದದ ಊರಾದ ಶೃಂಗೇರಿಯ ಹುಡುಗಿ. ಇವರಿಗೆ ಚಿತ್ರ ಬಿಡಿಸುವುದೆಂದರೆ ನೆಚ್ಚಿನ ಹವ್ಯಾಸ. ಇವರು ಬಿಡಿಸಿದ ಚಿತ್ರಗಳಲ್ಲಿ ನಿಸರ್ಗದ ಸಹಜ, ಸರಳ ಮಾಧುರ್ಯವಿದೆ. ಆಡಂಬರವಿಲ್ಲದೆ ಅತ್ಯಂತ ಸಹಜತೆಯಿಂದ ಕಂಗೊಳಿಸುವ ಶಾಶ್ವತಿ ಬಿಡಿಸಿದ ಚಿತ್ರಗಳು ಶಾಶ್ವತವಾಗಿ ಕಲಾರಸಿಕರ ಗಮನ ಸೆಳೆಯುವಂತಿದೆ. ಸದ್ಯ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಶಾಶ್ವತಿ ಅವರಿಗೆ ಚಿತ್ರಕಲೆಯ ಜೊತೆಗೆ ಸಂಗೀತ,ಗಾರ್ಡನಿಂಗ್ ಮತ್ತು ಫೋಟೋಗ್ರಫಿ ಖುಷಿ ಕೊಡುವ ಹವ್ಯಾಸಗಳು.ಇವರ ಕೈಯಲ್ಲರಳಿದ ಕೆಲವು ಚಿತ್ರಗಳ ಸ್ಯಾಂಪಲ್ಲು ಇಲ್ಲಿದೆ ನೋಡಿ.

ಗೆಜ್ಜೆ ಕಟ್ಟಿ ಭರವಸೆಯ ಹೆಜ್ಜೆ ಹಾಕುತ್ತಿರುವ ದಿವ್ಯಾ ಹೊಳ್ಳ: ಕಣ್ಣೋಟದಲ್ಲಿ ಸೆಳೆಯೋ ಕಲಾವಿದೆ

»ಮಂಜುನಾಥ್ ಶೆಣೈ ಆಧುನಿಕ ಮಾಧ್ಯಮಗಳ ಅಭಿವೃದ್ಧಿ ಹಾಗೂ ಅದರ ಬಳಕೆ ಹೆಚ್ಚಾಗಿರುವ ಕಾಲವಿದು. ಯುವ ಜನತೆ ಸಾಹಿತ್ಯ, ಕಲಾಭಿರುಚಿಯಿಂದ ಕೊಂಚ ಕೊಂಚವೇ ದೂರವಾಗುತ್ತಿದ್ದಾರೆ ಎನ್ನುವಾಗಲೇ ಒಂದಷ್ಟು ಯುವಕ ಯುವತಿಯರು ಕಲಾರಂಗದಲ್ಲಿ ಮುಖ ಮಾಡಿ ಭರವಸೆ ಮೂಡಿಸುತ್ತಾರೆ. ಹೌದು. ಕರಾವಳಿಯ “ಗಂಡುಕಲೆ” ಎಂದೇ ಪ್ರಸಿದ್ದಿ ಪಡೆದ ಯಕ್ಷಗಾನವನ್ನು ಉಳಿಸುವಲ್ಲಿ ಒಂದೇ ಕುಟುಂಬದ ನಾಲ್ವರು ದಿಟ್ಟ ಹೆಜ್ಜೆಯೊಂದಿಗೆ ಕಾಲಿಗೆ ಗೆಜ್ಜೆ ,ಮುಖಕ್ಕೆ ಬಣ್ಣ ಹಚ್ಚಿ ಇದೀಗ ಹೊಸ ಭರವಸೆ ಮೂಡಿಸುತ್ತಿದ್ದಾರೆ.   ಕರಾವಳಿಯಲ್ಲಿ ಇಂದು ಕಲೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ, ಕಲಾವಿದರು […]

ಬಣ್ಣದ ಬೆರಗಿನ ಯುವ ಕಲಾಕಾರ: ಇದು ಸುಳ್ಯದ ಕೌಶಿಕ್ ಅವರ ಚಮತ್ಕಾರ!

ಇವರ ಕೈಯಲ್ಲಿ ಮೂಡಿದ ಚಿತ್ರಗಳನ್ನು ನೋಡುತ್ತಿದ್ದರೆ ಆ ಚಿತ್ರದಲ್ಲಿರುವ ವ್ಯಕ್ತಿಗಳೇ ಕಣ್ಣೆದುರು ನಿಜಕ್ಕೂ ಬಂದಂತನ್ನಿಸುತ್ತದೆ.ಇಷ್ಟು ಚೆಂದ ಚಿತ್ರವನ್ನು ಕೈಯಲ್ಲಿ ಬಿಡಿಸಿದ್ದಾ ಎನ್ನುವ ಅಚ್ಚರಿ ಕೂಡ ನಮ್ಮಲ್ಲಿ ಹುಟ್ಟುತ್ತದೆ. ಇಂತಹ ಅಪೂರ್ವ ಚಿತ್ರ ಬರೆಯುವ ಈ ಕಲಾಕಾರನ ಹೆಸರು ಕೌಶಿಕ್ ಕೆ. ಎಂ. ಸುಳ್ಯ ತಾಲೂಕಿನ ಪಂಜ ನಿವಾಸಿವಾಗಿರುವ ಕೌಶಿಕ್ ಅವರು ಬಿಡಿಸುವ ಚಿತ್ರಗಳು ತಮ್ಮ ಅಪೂರ್ವ ಕಲಾವಂತಿಕೆಯಿಂದ,ಕಲಾತ್ಮಕ ನೋಟದಿಂದ ಗಮನಸೆಳೆಯುತ್ತದೆ. ಅಂದ ಹಾಗೆ ಕೌಶಿಕ್, ಚಿತ್ರಕಲೆಯನ್ನು ಅಭ್ಯಾಸ ಮಾಡಲು ತರಗತಿಗಳಿಗೆ ಹೋದವರಲ್ಲ, ಬಣ್ಣಗಳೊಡನೆ ಆಟವಾಡುತ್ತ ಚಿತ್ರಕಲೆಯನ್ನು ಅಭ್ಯಾಸ […]