ಕಲಾ ಆವಿಷ್ಕಾರದ ಮಧುರ ನಿನಾದ, ಬ್ರಹ್ಮಾವರ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ :ಕಲಾ ಸೇವೆಗೆ ಮೀಸಲಾದ ಟ್ರಸ್ಟ್ ನ ಕುರಿತು ಒಂದಷ್ಟು..

ತೆಂಕು, ಬಡಗು ಯಕ್ಷಗಾನ ಕಲಾ ಪ್ರಕಾರದ ಕುರಿತು ಸಂಶೋಧನಾತ್ಮಕ ಅಧ್ಯಯನ, ಪರಾಮರ್ಶೆ, ವಿಚಾರಗೋಷ್ಟಿ, ಯಕ್ಷಗಾನ ಸಾಹಿತ್ಯ ಕಮ್ಮಟ, ಪ್ರಯೋಗಾತ್ಮಕ ಪ್ರದರ್ಶನ, ಮೊದಲಾದ ಕಾರ್ಯಕ್ರಮಗಳ ಮೂಲಕ ಯಕ್ಷಗಾನವನ್ನು ಇನ್ನಷ್ಟು ಶೋಧಿಸುವ ಹುಮ್ಮಸ್ಸು ಹಾಗೂ ಅದರಿಂದ ಸಿಗುವ ಫಲಿತಾಂಶಗಳನ್ನು ಜಗತ್ತಿಗೆ ಒದಗಿಸುವ ಮಹೋನ್ನತ ಉದ್ದೇಶಗಳೊಂದಿಗೆ ಸದ್ದಿಲ್ಲದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಂಡಾರು ಎಂಬ ಪುಟ್ಟ ಗ್ರಾಮದಲ್ಲಿ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ಎಂಬ ಸಂಸ್ಥೆಯ ನಿನಾದ ಹೆಚ್ಚೇನು ಸದ್ದು ಮಾಡದೆ ಮೊಳಗಿದೆ. ಇಂತಹ ದೂರದೃಷ್ಟಿತ್ವ ಚಿಂತನೆಯನ್ನು ಹೊಂದಿರುವ ಟ್ರಸ್ಟ್ ನ […]

ರಿಕ್ಷಾ ಚಾಲಕನ ಅಚ್ಚರಿಯ ಬಣ್ಣದ ಬದುಕು: ಬೆಳ್ಳಿತೆರೆ, ಕಿರುತೆರೆ ಎರಡರಲ್ಲೂ ಸೈ , ಬಹುಭಾಷಾ ನಟನೆಗೂ ಜೈ

ಕ   ಳೆದ 25 ವರ್ಷಗಳಿಂದ ರಿಕ್ಷಾ ಓಡಿಸಿ ಶ್ರಮದ ದುಡಿಮೆ ಮೈಗೂಡಿಸಿಕೊಂಡಿದ್ದರೂ ಕಲೆಯ ಬದುಕಿನಿಂದ ಆಕರ್ಷಿತರಾಗಿ ಬೆಳ್ಳಿ ತೆರೆ, ಕಿರುತೆರೆಯಲ್ಲಿ ಪೋಷಕ ನಟನಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿ ಜನಮನ ಸೂರೆಗೊಂಡ ಕರಾವಳಿಯ ಅಪರೂಪದ ಕಲಾವಿದ ಸತೀಶ್ ಕಲ್ಯಾಣಪುರ. ಬಡತನದ ಬದುಕಿನ ಜಂಜಾಟದ ನಡುವೆ ಹವ್ಯಾಸಿ ನೆಲೆಯಲ್ಲಿ ಬಣ್ಣದ ಬದುಕಿಗೆ ಹೊರಳಿದ ಇವರು ಕನ್ನಡ, ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಪೋಷಕ, ಹಾಸ್ಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಪ್ರತಿಭಾನ್ವಿತ, ಪರಿಪೂರ್ಣ ಕಲಾವಿದ. ತನ್ನದೆ ಚಿತ್ರ ಕಲಾ […]

ಆಪತ್ಕಾಲದ “ದೇವ ಮಂದಿರ” ಮೈಮುನಾ ಫೌಂಡೇಶನ್: ನೆಲೆಯಿಲ್ಲದವರಿಗೆ ಸ್ಪೂರ್ತಿ ಸೆಲೆಯಾದ ಆಪದ್ಭಾಂಧವ ಆಸೀಫ್ ಕತೆ ಇದು

ಭ ಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೇ, ಯಾರು ಅವರುಗಳ ಸೇವೆ ಮಾಡುತ್ತಾರೋ, ಅವರು ದೇವರಿಗೆ ಹತ್ತಿರವಾದವರು” ಎನ್ನುತ್ತದೆ ವೇದವಾಣಿ. ಇದು ನೂರಕ್ಕೆ ನೂರರಷ್ಟು ಸತ್ಯ. ಇದನ್ನೇ ಸ್ವಾಮಿ ವಿವೇಕಾನಂದರು “ಎಲ್ಲರೂ ಭಗವಂತನ ರೂಪಗಳೇ” ಎನ್ನುತ್ತಾರೆ. ಆ ರೂಪಗಳು ನಮ್ಮ ಕಣ್ಣಮುಂದೆ ಬೇರೆ ಬೇರೆಯಾಗಿ ಕಂಡು ಬರುತ್ತವೆ. ದೀನರಂತೆ, ಹುಚ್ಚರಂತೆ, ರೋಗಿಯಂತೆ, ಆಶಕ್ತರಂತೆ, ದುರ್ಬಲರಂತೆ, ನಿರ್ಬಲರಂತೆ, ದುಃಖಿಗಳಂತೆ, ದಿವ್ಯಾಂಗಿಗಳಂತೆ ಭಿಕ್ಷುಕರಂತೆ, ಹೀಗೆ ಲೋಕದ ಸಂತೆಯೊಳಗೆ ಅನೇಕರು ನಾನ ತರದವರಿದ್ದಾರೆ. ಈ ರೀತಿ ನರಳುತ್ತಿರುವವರು ಸಾವಿರಾರು ಜನ ಕಣ್ಣಮುಂದೆ ಇದ್ದಾರೆ. […]

ನೃತ್ಯ-ಯೋಗ ಲೋಕದ ಪುಟಾಣಿ ಕಿನ್ನರಿ ಇವಳು: ಕುಂದಾಪುರದ ಮಹಿಮ ಅನ್ನೋ ಹುಡುಗಿಯ ಸಾಧನೆಯ ಕತೆ ಇದು!

» ನೀತು ಬೆದ್ರ ಕತ್ತಲೆ ಗರ್ಭದಿ 9 ತಿಂಗಳು ಕಳೆದು, ಜನಿಸಿದ ಮಗುವು ತಂದೆತಾಯಿಯ ಲಾಲನೆ ಪೋಷಣೆಯಲ್ಲಿ ಬೆಳೆಯುತ್ತ,ಪರಿಸರದ ವಾತಾವರಣಕ್ಕೆ ಹೊಂದಿಕೊಂಡು ಅದರಂತೆ ಬಾಳುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯ ಪ್ರೀತಿಯೊಂದಿಗೆ ಹುಟ್ಟಿನಿಂದ ಬಂದ ಕಲೆಯನ್ನು ಕರಗತ ಮಾಡಿದ ದಿಟ್ಟೆ, ನಾಟ್ಯ ಹಾಗೂ ಯೋಗದಲ್ಲಿ ರಾಷ್ಟ್ರವ ಮೆಚ್ಚಿಸಿದ ಚಿನಕುರುಳಿ ಮಹಿಮಾ ಕುಂದಾಪುರ. ಲತಾ ಹಾಗೂ ರಾಮ ಮೊಗೆರ್ ದಂಪತಿಗಳ ಪುಟ್ಟ ಕಂದಮ್ಮ ಹನ್ನೆರಡರ ನಾಟ್ಯ ರತ್ನ ಈ ಮಹಿಮಾ. ಎಲ್ ಕೆ ಜಿ, ಯು ಕೆ ಜಿ ಹಾಗೂ […]

ಕಠಿಣ ಪರಿಶ್ರಮದಿಂದ ಸಾಧನೆಗೈದ ಹಿರಿಯಡ್ಕದ ಡಾ. ದೀಪಾಲಿ ಆಳ್ವ

ಒಂದು ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕಾದರೆ ಆದರ ಹಿಂದೆ ಕಠಿಣ ಪರಿಶ್ರಮ ಅಗತ್ಯ.ಹಾಗೆ ಕಠಿಣ ಪರಿಶ್ರಮಗೈದು ಈ ಹುಡುಗಿ ಮಾಡಿದ ಸಾಧನೆ ನಿಜಕ್ಕೂ ಹೆಮ್ಮೆ ಹುಟ್ಟಿಸುವಂತಿದೆ. ಈಕೆಯ ಹೆಸರು ದೀಪಾಲಿ ಆಳ್ವ, ಡಾ. ದೀಪಾಲಿ ಆಳ್ವಾ ಮೂಲತಃ ಹಿರಿಯಡ್ಕದ ಕೊಂಡಾಡಿಗುತ್ತು ದಿ.ದೀಪಕ್ ಆಳ್ವಾ ಹಾಗು ಪಂಚಾಕ್ಷಣಿ ಆಳ್ವ ರ ಪುತ್ರಿ. ಈಕೆ ಕಾರವಾರದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಲೈಫ್ ಸೈನ್ಸ್ ವಿದ್ಯಾಲಯದಲ್ಲಿ ಕಲಿಯುತ್ತಿದ್ದು ಮೊದಲ ವಿಭಾಗದಲ್ಲಿ ತೇರ್ಗಡೆಯಾಗಿ ಕರಾವಳಿಗೆ ಹೆಮ್ಮೆ ತಂದಿದ್ದಾರೆ. ಆಕೆ ತನ್ನ ಹದಿನೈದನೇ ವಯಸ್ಸಿನಲ್ಲಿ ಮನೆಯ […]