ಕಂಬಳದ ಬೆತ್ತ ಉದ್ಯಮದತ್ತ ಚಿತ್ತ ಹರಿಸಿ ಬದುಕು ಕಟ್ಟಿಕೊಂಡ ದಂಪತಿಯ ಕತೆಯಿದು!

ಕಂಬಳ ಕರಾವಳಿ ಕರ್ನಾಟಕದ  ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಕಂಬಳ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ, ಕಂಬಳ ಕೋಣಗಳನ್ನು ಓಡಿಸಲು ಬೆತ್ತವನ್ನು ಮಾಡುತ್ತಾರೆ. ಆ ಕಂಬಳದ ಬೆತ್ತಕ್ಕೆ ವಿಶಿಷ್ಠ ಸ್ಥಾನಮಾನವಿದೆ. ಕಂಬಳದ ಬೆತ್ತ ಮಾಡುತ್ತ ಬದುಕು ಕಟ್ಟಿಕೊಂಡಿರುವ ಕಾರ್ಕಳ ತಾಲೂಕಿನ ಕುಟುಂಬವೊಂದಿದೆ. ಕಂಬಳದ ಬೆತ್ತಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವ ಕುಟುಂಬ ಯಶೋಗಾಥೆ ಕೇಳೋಣ ಬನ್ನಿ. ಈ […]

ಕಲೆಯ ಬಲದಿಂದ ಹೊಂಬೆಳಕ ಚೆಲ್ಲುತ್ತಿರುವ ವೈವಿಧ್ಯಮಯ ಕಲಾವಿದೆ ಶೃುತಿ ದಾಸ್

ಊರಿನ ಹೆಸರಿನಿಂದಾಗಿ ಅಲ್ಲಿರುವವರಿಗೆ ಮಹತ್ವತೆ ಇರುವುದುಂಟು. ಅಯೋಧ್ಯೆ, ಮಥುರಾ, ಮಿಥಿಲಾ, ಕಾಶಿ, ಉಜೈನಿ, ರಾಮೇಶ್ವರ, ಪಾಣಿಪತ್ ಮುಂತಾದ ಪ್ರದೇಶಗಳ ಜನರು ಊರುಗಳ ಪ್ರಸಿದ್ಧತೆಯಿಂದ ಗುರುತಿಸ್ಪಡುತ್ತಾರೆ. ಅವರುಗಳು ನಾವು ಇಂಥ ಊರಲ್ಲಿರುವುದು ಎಂದಾಗ ಕೇಳುಗರಿಗೆ ಏನೋ ಒಂದು ಪುಳಕ. ಕೇಳಿದವರ ಮನಸ್ಸು ವಾಯು ವೇಗದಲ್ಲಿ ಸಂಚರಿಸಿ ಆ ಊರುಗಳಿಗೆ ಸಂಬಂಧಿಸಿದ ಪೌರಾಣಿಕ, ಐತಿಹಾಸಿಕ ಮಹತ್ವವನ್ನು ಕಲ್ಪಿಸಿ ರೋಮಾಂಚನಗೊಳ್ಳುತ್ತದೆ.ಇದಕ್ಕೆ ತದ್ವಿರುದ್ಧವಾಗಿ ವಿಶಿಷ್ಟವಾದ ವ್ಯಕ್ತಿಗಳಿಂದಾಗಿ ಊರಿಗೆ ಮಹತ್ವ ಬಂದಿರುವುದನ್ನು ನಾವು ವರ್ತಮಾನ ಹಾಗೂ ಇತಿಹಾಸದಲ್ಲೂ ಕಾಣುತ್ತೇವೆ. ಕೆಲವು ಊರಿನ ಹೆಸರು ಕೇಳಿದಾಕ್ಷಣ […]

ಯಕ್ಷರಂಗದಲ್ಲಿ ಹುಮ್ಮಸ್ಸಿನಿಂದ ಗೆಜ್ಜೆ ಕಟ್ಟಿ ಕುಣಿಯುತ್ತಿರುವ ಮೂಡಬಿದ್ರೆಯ ಯುವ ಪ್ರತಿಭೆ “ಆದರ್ಶ್”

ಉಡುಪಿXPRESS:ಯಕ್ಷ ಸಿರಿ ಯಕ್ಷಗಾನ ಕ್ಷೇತ್ರ ಹಲವಾರು ಹೊಸ ಯುವ ಪ್ರತಿಭೆಗಳನ್ನು ಆಕರ್ಷಿಸುತ್ತಿದೆ. ಕರಾವಳಿಯ ಜನಪ್ರಿಯ ತೆಂಕು ತಿಟ್ಟಿನಲ್ಲಿ ನವ ಪ್ರತಿಭೆಗಳು ಭರವಸೆ ಮೂಡಿಸುತ್ತಿದ್ದಾರೆ. ಅಂತಹ ಭರವಸೆಯ ಪ್ರತಿಭೆಗಳಲ್ಲಿ ಮೂಡಬಿದ್ರೆಯ ಆದರ್ಶ ವಿ. ಆಚಾರ್ಯ ಕೂಡ ಯಕ್ಷರಂಗದಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಯುವ ಪ್ರತಿಭೆ.    ಮಂಗಳೂರಿನಲ್ಲಿ ಪ್ರಸ್ತುತ ಇಂಟಿರಿಯರ್ ಪದವಿ ಓದುತ್ತಿರುವ ಆದರ್ಶ್ ಗೆ ಬಾಲ್ಯದಿಂದಲೂ ಯಕ್ಷಗಾನ ಕುರಿತು ಅಪಾರ ಆಸಕ್ತಿ ಇತ್ತು. ಮನೆಯಲ್ಲಿಯೂ ಯಕ್ಷಗಾನದ ಕುರಿತ ಚರ್ಚೆ ಮತ್ತು ವಾತಾವರಣವಿರುವುದರಿಂದ ಇವರಲ್ಲಿಯೂ ಕ್ಷೇತ್ರದ ಕುರಿತ ಆಸಕ್ತಿ […]

ಆನ್ ಲೈನ್ ದುನಿಯಾದ ಟ್ರೆಂಡ್ ಬಿಚ್ಚಿಡುತ್ತೆ ಈ “ಶಾಪಿಂಗ್” ಕಿರುಚಿತ್ರ

 ಆನ್‌ಲೈನ್ ವಹಿವಾಟು ಹೊಸ ಪೀಳಿಗೆಯ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವುದು ಎಲೆಕ್ತ್ರಾನಿಕ್‌ ಉಪಕರಣಗಳೇ ಆಗಿವೆ ಎಂಬ ಪರಿಸ್ಥಿತಿ ಇತ್ತು.. ಆದರೆ ಕಳೆದ ಕೆಲವು ವರ್ಷಗಳಲ್ಲಿ ಖರೀದಿದಾರರ ಮತ್ತು ಮಾರಾಟವಾಗುತ್ತಿರುವ ಸಾಮಗ್ರಿಗಳಲ್ಲಿ ದೊಡ್ಡ ಬದಲಾವಣೆಯೂ ಆಗುತ್ತಿದೆ. ಅಂತರ್ಜಾಲದ ಜೊತೆಗೇ ಟೆಲಿವಿಷನ್ ಮೂಲಕವೂ ಪ್ರಚಾರ ಜೋರಾಗತೊಡಗಿದಂತೆ ಎಲ್ಲ ವಯಸ್ಸಿನವರೂ, ಅದರಲ್ಲೂ ವಿಶೇಷವಾಗಿ ಗೃಹಿಣಿಯರು ಈ ಮಾರುಕಟ್ಟೆಯಲ್ಲಿ ಖರೀದಿ ವಹಿವಾಟು ನಡೆಸುವ ಪ್ರಮಾಣ ಹೆಚ್ಚುತ್ತಲೇ ಇದೆ. ಹಾಗೆಯೇ ಗೃಹ ಬಳಕೆ ಸಾಮಗ್ರಿಗಳು, ಬಟ್ಟೆ, ಪೀಠೋಪಕರಣಗಳು ಮತ್ತು ಆಭರಣಗಳನ್ನು ಕೂಡ […]

ಕ್ರೀಡಾಲೋಕದ ನಕ್ಷತ್ರ, ಯುವ ಕ್ರೀಡಾಳುಗಳ ಅಪ್ರತಿಮ ಗುರು: ಉಡುಪಿಯ ಶಾಲಿನಿ ಶೆಟ್ಟಿ ಯಶೋಗಾಥೆ ಇದು!

ನಮ್ಮ ದೇಶದಲ್ಲಿ ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳಿಗೆ ಇರುವ ತರತಮ ವ್ಯವಸ್ಥೆಯಿಂದಾಗಿ ಸಾವಿರಾರು ಕ್ರೀಡಾಳುಗಳ ಪ್ರತಿಭೆಗಳು ಬೆಳಕಿಗೆ ಬಾರದೇ ಕರುಟಿ, ಮುರುಟಿ, ಮುದುರಿ ಹೋಗುತ್ತಿರುವುದಂತು ಸತ್ಯ. ಆದರೂ ಕೆಲವೊಮ್ಮೆ ಕೆಲವು ಕ್ರೀಡಾಪಟುಗಳು ತಮ್ಮ ಅದ್ವಿತೀಯ ಸಾಧನೆ, ಪ್ರತಿಭೆ, ಪ್ರಬಲವಾದ ಇಚ್ಛಾಶಕ್ತಿಯಿಂದ ಕ್ರೀಡಾಂಬರದಲ್ಲಿ ನಕ್ಷತ್ರಗಳಂತೆ ಮಿಂಚಿ ಪ್ರಜ್ವಲಿಸುತ್ತಾರೆ. ಇನ್ನೂ ಕೆಲವರು ವನಸುಮಗಳಂತೆ ಜಗದ ಪೊಗಳಿಕೆಗೆ ಬಾಯಿ ಬಿಡದೆ ಎಲೆಯ ಮರೆಯ ಪಿಂತಿರ್ದು ತಾನಾಯಿತು ತನ್ನ ಸಾಧನೆಯಾಯ್ತು ಎಂದು ಸದ್ದಿಲ್ಲದೆ ತಮ್ಮಷ್ಟಕ್ಕೆ ತಾವೇ ಸಾಧಿಸಿಕೊಂಡು ಮುಂದುವರಿಯುತ್ತಾರೆ. ಹೀಗೆ ಪ್ರಚಾರಕ್ಕೆ ಹಾತೊರೆಯದೆ […]