Trending

ಉಡುಪಿ: ಎಂಡಿಎಂಎ, ಹೈಡ್ರೋಗಾಂಜಾ ಮಾರಾಟ ಜಾಲ ಭೇದಿಸಿದ ಪೊಲೀಸರು

ಉಡುಪಿ: ಎಂಡಿಎಂಎ ಪೌಡರ್‌, ಹೈಡ್ರೋಗಾಂಜಾ ಹಾಗೂ ಎಂಡಿಎಂಎ ಟ್ಯಾಬ್ಲೆಟ್‌ಗಳನ್ನು ಹೊಂದಿದ್ದು, ಉಡುಪಿ, ಕಾಪು, ಮಣಿಪಾಲ ಮತ್ತು ಕಾರ್ಕಳ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ₹3.31 ಲಕ್ಷ ಮೌಲ್ಯದ ಮಾದಕ ವಸ್ತು

Read More »

ಮನಸ್ಸಿಗೆ ಬೇಜಾರಾಗಿದೆಯೇ ಹೀಗೆ ಮಾಡಿ? ಜೀವನ ಇರೋದೇ ಪ್ರತಿ ಕ್ಷಣವನ್ನೂ ಅನುಭವಿಸೋದಕ್ಕೆ

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲೊಂದು ಸಮಯದಲ್ಲಿ ಮನಸ್ಸಿಗೆ ಬೇಜಾರಾಗುವುದು ಸಹಜ. ಕೆಲವೊಮ್ಮೆ ಕೆಲಸದ ಒತ್ತಡ, ಕುಟುಂಬದ ಸಮಸ್ಯೆಗಳು, ಸ್ನೇಹಿತರೊಂದಿಗೆ ಉಂಟಾಗುವ ಭಿನ್ನಾಭಿಪ್ರಾಯ, ನಿರೀಕ್ಷೆಗಳು ಈಡೇರದಿರುವುದು ಅಥವಾ ಯಾವುದೇ ಸ್ಪಷ್ಟ ಕಾರಣವಿಲ್ಲದೆಯೂ ಮನಸ್ಸು ಭಾರವಾಗಬಹುದು. ಆದರೆ ಈ

Read More »

ದೇಶದಲ್ಲಿ ಶೀಘ್ರವೇ ಪ್ಲಾಸ್ಟಿಕ್ ನೋಟುಗಳ ಎಂಟ್ರಿ! ಆರ್‌ಬಿಐ ಹೊಸ ಯೋಜನೆ ಏನು? ಹಳೆ ನೋಟಿನ ಕತೆಯೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಹೆಚ್ಚು ಬಾಳಿಕೆ ಬರುವ ಪಾಲಿಮರ್ (ಪ್ಲಾಸ್ಟಿಕ್) ಕರೆನ್ಸಿ ನೋಟುಗಳನ್ನು ಪರಿಚಯಿಸುವ ಯೋಜನೆಗೆ ವೇಗ ನೀಡಿದೆ. 2016ರ ನೋಟು ಅಮಾನ್ಯೀಕರಣದ ಬಳಿಕ ಕರೆನ್ಸಿ ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ವದ

Read More »

ನಿಮ್ಮ ಮಕ್ಕಳಿಗೆ ಮುಂದೆ ನೀರು ಉಳಿಯಲೇಬೇಕಾದರೆ ನೀವಿಂದು ಇದನ್ನು ಮಾಡಲೇಬೇಕು

ನಮ್ಮ ನಾಳಿನ ಉಸಿರಾದ ನೀರನ್ನು ಉಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ    ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ತೀವ್ರವಾದ ಬರಗಾಲದ ಪರಿಸ್ಥಿತಿ ತಲೆದೋರಿದ್ದು, ಜಲಮೂಲಗಳು ಬತ್ತಿ ಹೋಗುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಜಲಸಂರಕ್ಷಣೆ ಎಂಬುದು ಕೇವಲ ಒಂದು ಘೋಷಣೆಯಾಗುಳಿಯದೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಭೂಮಿಯ ಮೇಲೆ ಅಗಾಧವಾದ ನೀರಿದ್ದರೂ, ಅದರಲ್ಲಿ ಕೇವಲ ಶೇಕಡಾ 2.5 ರಷ್ಟು ಮಾತ್ರ ಸಿಹಿನೀರು ಲಭ್ಯವಿದೆ ಎಂಬ ಕಹಿ ಸತ್ಯವನ್ನು ನಾವಿಂದು ಅರಿಯಬೇಕಾಗಿದೆ. ಈ ಲಭ್ಯವಿರುವ ಅತ್ಯಲ್ಪ ಸಿಹಿನೀರಿನ ಮೂಲಗಳನ್ನು ಸಂರಕ್ಷಿಸುವುದು ಮತ್ತು ಮರುಬಳಕೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ನೀರು ಮಾನವನ ದೇಹವನ್ನು ಮತ್ತು ಜೀವಕೋಶಗಳನ್ನು ಪೋಷಿಸಿದರೆ, ಇಂಧನವು ಮಾನವ ನಾಗರಿಕತೆ ಹಾಗೂ ಆರ್ಥಿಕತೆಯ ಚಲನಶೀಲತೆಯನ್ನು ಕಾಯ್ದುಕೊಳ್ಳುತ್ತದೆ. ಇವೆರಡೂ ಒಂದಕ್ಕೊಂದು ಪೂರಕವಾಗಿವೆ. ಪ್ರಸ್ತುತ ವರ್ಷದಲ್ಲಿ ಜಾಗತಿಕ ಹವಮಾನ ವೈಪರಿತ್ಯದ ತೀವ್ರ ಸ್ವರೂಪವಾದ ‘ಎಲ್ ನಿನೊ’ ಪ್ರಭಾವದಿಂದಾಗಿ ನಮ್ಮ ರಾಜ್ಯದಲ್ಲಿ ಅಭೂತಪೂರ್ವ ಹವಾಮಾನ ಏರುಪೇರುಗಳು ಉಂಟಾಗಿವೆ. ವಾಡಿಕೆಯಂತೆ ಬರಬೇಕಾದ ಮಳೆಯು ಕೈಕೊಟ್ಟಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳು ಭೀಕರ ಬರಗಾಲದ ಕರಾಳ ನೆರಳಿಗೆ ತುತ್ತಾಗಿವೆ. ಜಲಾಶಯಗಳಲ್ಲಿ ನೀರಿನ ಮಟ್ಟ ತಳ ತಲುಪಿದ್ದು, ಕೃಷಿ ಕ್ಷೇತ್ರ ಮತ್ತು ದೈನಂದಿನ ಜೀವನ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ನೈಸರ್ಗಿಕ ಸಂಪನ್ಮೂಲಗಳಾದ ಜಲ (ನೀರು) ಮತ್ತು ಇಂಧನ (ಶಕ್ತಿ) ಸಂರಕ್ಷಣೆ ಕೇವಲ ಆಯ್ಕೆಯಾಗಿ ಉಳಿದಿಲ್ಲ, ಬದಲಿಗೆ ಅದು ನಮ್ಮ ಬದುಕಿನ ಉಳಿವಿಗಾಗಿ ಅತ್ಯಂತ ತುರ್ತಾಗಿ ಮಾಡಬೇಕಾದ ಕರ್ತವ್ಯವಾಗಿದೆ. ಜಲ ಚಕ್ರ ಮತ್ತು ಅಂತರ್ಜಲದ ಮಹತ್ವ: ನಿಸರ್ಗವು ಜಲ ಚಕ್ರದ ಮೂಲಕ ಮಳೆ, ಭಾಷ್ಪೀಕರಣ, ಮತ್ತು ಇಂಗುವಿಕೆಯ ಪ್ರಕ್ರಿಯೆಗಳಿಂದ ಜಲಮೂಲಗಳನ್ನು ಸದಾ ಜೀವಂತವಾಗಿಟ್ಟಿರುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರಕೃತಿಯ ಅತಿ ದೊಡ್ಡ ಕೊಡುಗೆ ಎಂದರೆ ಅಂತರ್ಜಲದ ಪದರಗಳು. ಭೂಮಿಯ ಒಳಗಿರುವ ಈ ನೈಸರ್ಗಿಕ ಜಲಶೇಖರಣಾ ವ್ಯವಸ್ಥೆಯು ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನಕ್ಕೆ ಪ್ರಮುಖ ಆಧಾರವಾಗಿದೆ. ಬರಗಾಲದ ಸಮಯದಲ್ಲಿ ಮೇಲ್ಮೈ ಜಲಮೂಲಗಳು ಒಣಗಿದಾಗ ನಮಗೆ ನೆರವಾಗುವುದು ಇದೇ ಅಂತರ್ಜಲ. ಆದ್ದರಿಂದ, ಮಳೆನೀರನ್ನು ಭೂಮಿಗೆ ಇಂಗಿಸುವ ಮೂಲಕ ಅಂತರ್ಜಲವನ್ನು ಮರುಪೂರಣ ಮಾಡುವುದು ಅತಿ ಮುಖ್ಯವಾಗಿದೆ. ವರ್ಚುವಲ್ ವಾಟರ್ (ಅಗೋಚರ ಜಲ) ಮತ್ತು ನಮ್ಮ ಜವಾಬ್ದಾರಿ: ನಾವು ದಿನನಿತ್ಯ ಬಳಸುವ ಪ್ರತಿಯೊಂದು ವಸ್ತುವಿನ ಉತ್ಪಾದನೆಯ ಹಿಂದೆ ದೊಡ್ಡ ಪ್ರಮಾಣದ ನೀರು ವ್ಯಯವಾಗಿರುತ್ತದೆ, ಇದನ್ನು ‘ವರ್ಚುವಲ್ ವಾಟರ್’ ಅಥವಾ ಅಗೋಚರ ಜಲ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಕೃಷಿ ಉತ್ಪನ್ನಗಳು ಮತ್ತು ಉಡುಪುಗಳ ತಯಾರಿಕೆಗೆ ಅಪಾರ ಪ್ರಮಾಣದ ಹಸಿರು, ನೀಲಿ ಮತ್ತು ಬೂದು ಜಲದ ಹೆಜ್ಜೆಗುರುತುಗಳು ಕಾರಣವಾಗಿರುತ್ತವೆ. ಈ ಕಾರಣದಿಂದಾಗಿ, ಯಾವುದೇ ವಸ್ತುವನ್ನು ವ್ಯರ್ಥ ಮಾಡುವ ಮುನ್ನ ಅದರ ಹಿಂದೆ ಬಳಕೆಯಾದ ನೀರಿನ ಮೌಲ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಏನಿದು ಹಸಿರು, ನೀಲಿ ಮತ್ತು ಬೂದು ಜಲದ ಹೆಜ್ಜೆಗುರುತುಗಳು * ಹಸಿರು ನೀರು: ಇದು ಮಳೆಯ ಮೂಲಕ ಮಣ್ಣಿನಲ್ಲಿ ಸಂಗ್ರಹವಾಗಿ, ಗಿಡಮರಗಳು ಮತ್ತು ಬೆಳೆಗಳ ಬೆಳವಣಿಗೆಗೆ ನೇರವಾಗಿ ಬಳಕೆಯಾಗುವ ತೇವಾಂಶವಾಗಿದೆ. ಅರಣ್ಯೀಕರಣ ಮತ್ತು ಮಣ್ಣಿನ ತೇವಾಂಶ ರಕ್ಷಣೆ ಇದಕ್ಕೆ ಪೂರಕವಾಗಿದೆ. * ನೀಲಿ ನೀರು: ನದಿಗಳು, ಕೆರೆಗಳು ಹಾಗೂ ಭೂಮಿಯೊಳಗಿನ ಅಂತರ್ಜಲ ಮೂಲಗಳಿಂದ ನಾವು ಕುಡಿಯಲು, ಕೃಷಿಗೆ ಮತ್ತು ಕೈಗಾರಿಕೆಗೆ ಬಳಸುವ ಸಿಹಿನೀರು ಇದಾಗಿದೆ. ಬರಗಾಲದಲ್ಲಿ ಇದರ ಮೇಲೆಯೇ ಅತಿ ಹೆಚ್ಚು ಒತ್ತಡ ಬೀಳುತ್ತದೆ. * ಬೂದು ನೀರು: ಮಾನವನ ಬಳಕೆಯಿಂದ ಕಲುಷಿತಗೊಂಡ ನೀರನ್ನು ಮರುಬಳಕೆಗೆ ಯೋಗ್ಯವಾಗಿಸಲು ಬೇಕಾಗುವ ಸಿಹಿನೀರಿನ ಪ್ರಮಾಣವನ್ನು ಇದು ಸೂಚಿಸುತ್ತದೆ. ತ್ಯಾಜ್ಯನೀರಿನ ವೈಜ್ಞಾನಿಕ ನಿರ್ವಹಣೆ ಇದರ ತೀವ್ರತೆಯನ್ನು ಕಡಿಮೆ ಮಾಡುತ್ತದೆ. * ಸಮಗ್ರ ಜಲಸಂಪನ್ಮೂಲ ಅಭಿವೃದ್ಧಿ: ಬರಗಾಲದ ದೀರ್ಘಕಾಲೀನ ನಿಯಂತ್ರಣಕ್ಕಾಗಿ ಕೇವಲ ನೀರನ್ನು ಉಳಿಸುದಷ್ಟೇ ಅಲ್ಲದೆ, ಇಡೀ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಮಳೆನೀರು ಕೊಯ್ಲು, ಮೇಲ್ಮೈ ಜಲಮೂಲಗಳಾದ ಕೆರೆ-ನದಿಗಳ ಹೂಳೆತ್ತುವುದು ಮತ್ತು ಅಂತರ್ಜಲದ ಮರುಪೂರಣವನ್ನು ಸಮಾನವಾಗಿ ಕೈಗೊಳ್ಳಬೇಕು. ಇವೆಲ್ಲವು ಜಲ ಸಂರಕ್ಷಣೆಯ ವಿಧಗಳಾಗಿವೆ. ಸಂಸ್ಕರಣೆ ಮತ್ತು ಪೂರೈಕೆ: ಬಳಸಿದ ನೀರನ್ನು ಗಡಸು ನೀರು ಸಂಸ್ಕರಣಾ ಘಟಕಗಳ ಮೂಲಕ ಶುದ್ಧೀಕರಿಸಿ ಮರುಪರಿಚಲನೆಗೆ ತರಬೇಕು. ಸಮುದಾಯದ ಪಾಲ್ಗೊಳ್ಳುವಿಕೆ: ಸರ್ಕಾರದ ನೀತಿಗಳು ಮತ್ತು ನಿಯಮಗಳಷ್ಟೇ ಅಲ್ಲದೆ ಸಾರ್ವಜನಿಕರು, ರೈತರು ಮತ್ತು ಕೈಗಾರಿಕೋದ್ಯಮಿಗಳು ಒಟ್ಟಾಗಿ ಜಲಸಂರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು. ದೈನಂದಿನ ಜೀವನದಲ್ಲಿ ಅಳವಡಿಸಬಹುದಾದ ಸೂಕ್ಷ್ಮ ಬದಲಾವಣೆಗಳು: ಗೃಹ ಬಳಕೆಯಲ್ಲಿ ಜಾಗೃತಿ : ಬಟ್ಟೆ ತೊಳೆಯುವ ಯಂತ್ರ ಹಾಗೂ ಪಾತ್ರೆ ತೊಳೆಯುವ ಯಂತ್ರಗಳನ್ನು ಅವುಗಳ ಸಂಪೂರ್ಣ ಸಾಮಥ್ರ‍್ಯಕ್ಕೆ ತಕ್ಕಂತೆ ಬಟ್ಟೆ/ಪಾತ್ರೆಗಳು ಸೇರಿದಾಗ ಮಾತ್ರ ಚಾಲನೆ ಮಾಡಬೇಕು. ಇದರಿಂದ ನೂರಾರು ಲೀಟರ್ ನೀರು ಉಳಿತಾಯವಾಗುತ್ತದೆ. ಅಲ್ಲದೇ ಒಮ್ಮೆ ಬಳಸಿದ ನೀರನ್ನು ತರಕಾರಿ ತೊಳೆಯಲು, ಗಿಡಗಳಿಗೆ ಉಣಿಸಲು ಅಥವಾ ಶೌಚಾಲಯಗಳಲ್ಲಿ ಮರುಬಳಕೆ ಮಾಡಬೇಕು. ಕೈಗಾರಿಕೆ ಮತ್ತು ಕೃಷಿ ವಲಯದಲ್ಲಿ ಸಂಸ್ಕರಿಸಿದ ತ್ಯಾಜ್ಯನೀರನ್ನು ಬಳಸುವುದರಿಂದ ತಾಜಾ ಸಿಹಿನೀರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಸ್ನಾನದ ಪದ್ಧತಿ : ಶವರ್‌ಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಿ, ಮಿತವಾಗಿ ನೀರನ್ನು ಬಳಸುವುದರಿಂದ ದೈನಂದಿನ ಜಲ ವ್ಯಯವನ್ನು ತಡೆಯಬಹುದು. ಮಳೆನೀರು ಕೊಯ್ಲು ಮತ್ತು ಇಂಗುಗುಂಡಿಗಳು : ಮನೆಯ ಛಾವಣಿಯ ಮೇಲೆ ಬೀಳುವ ಪ್ರತಿಯೊಂದು ಮಳೆಹನಿಯನ್ನು ಸಂಗ್ರಹಿಸಬೇಕು ಅಥವಾ ಇಂಗುಗುಂಡಿಗಳ ಮೂಲಕ ಅಂತರ್ಜಲಕ್ಕೆ ಸೇರಿಸಬೇಕು. ಆಧುನಿಕ ನೀರಾವರಿ ಪದ್ಧತಿ : ಕೃಷಿಯಲ್ಲಿ ಸಾಂಪ್ರದಾಯಿಕವಾಗಿ ನೀರು ಹರಿಸುವ ಬದಲಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಗರಿಷ್ಠ ನೀರನ್ನು ಉಳಿಸಬಹುದು. ದೈನಂದಿನ ಜೀವನದಲ್ಲಿ ಜಾಗೃತಿ : ನಲ್ಲಿಗಳಲ್ಲಿ ಸೋರುವಿಕೆಯನ್ನು ತಕ್ಷಣವೇ ಸರಿಪಡಿಸಬೇಕು, ಹಲ್ಲುಜ್ಜುವಾಗ ಅಥವಾ ಮುಖ ತೊಳೆಯುವಾಗ ನಲ್ಲಿಯನ್ನು ಅನಗತ್ಯವಾಗಿ ತೆರೆದಿಡಬಾರದು. ಗಿಡಗಳಿಗೆ ಮುಂಜಾನೆ ಅಥವಾ ಸಂಜೆ ವೇಳೆ ನೀರು ಹರಿಸುವುದರಿಂದ ಭಾಷ್ಪೀಕರಣದಿಂದ ವ್ಯರ್ಥವಾಗುವ ನೀರನ್ನು ತಡೆಯಬಹುದು. ತಂತ್ರಜ್ಞಾನದ ಬಳಕೆ : ಆಧುನಿಕ ಡಿಜಿಟಲ್ ವಾಟರ್ ಮೀಟರ್‌ಗಳು ಮತ್ತು ಕಡಿಮೆ ನೀರು ಬಳಸುವ ನಲ್ಲಿಗಳ  ಅಳವಡಿಕೆಯಿಂದ ನೀರಿನ ಬಳಕೆಯನ್ನು ಗಣನೀಯವಾಗಿ ನಿಯಂತ್ರಿಸಬಹುದು.  ಇಂಧನ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಜವಬ್ದಾರಿ: ಇಂದು ನಾವು ಎದುರಿಸುತ್ತಿರುವ ಭೀಕರ ಬರಗಾಲವು ಕೇವಲ ನೀರಿನ ಅಭಾವವನ್ನು ಮಾತ್ರವಲ್ಲದೆ, ಇಂಧನ ಮತ್ತು ವಿದ್ಯುತ್ ಬಿಕ್ಕಟ್ಟನ್ನೂ ಸೃಷ್ಟಿಸಿದೆ. ಜಲವಿದ್ಯುತ್ ಉತ್ಪಾದನೆ ಕುಂಠಿತಗೊಂಡಿರುವುದರಿಂದ, ಇಂಧನವನ್ನು ಅತ್ಯಂತ ಜವಾಬ್ದಾರಿಯಿಂದ ಬಳಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇಂಧನ ಸಂರಕ್ಷಣೆ ಎಂದರೆ ಕೇವಲ ಹಣ ಉಳಿಸುವುದಲ್ಲ, ಅದು ದೇಶದ ಸಂಪನ್ಮೂಲವನ್ನು ಕಾಯ್ದಿರಿಸುವುದು ಮತ್ತು ಪರಿಸರವನ್ನು ರಕ್ಷಿಸುವುದಾಗಿದೆ. ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಎಷ್ಟು ವೇಗವಾಗಿ ಬಳಸುತ್ತಿದ್ದೇವೆ ಎಂಬುದಕ್ಕೆ ‘ಅರ್ಥ್ ಓವರ್‌ಶೂಟ್ ಡೇ’ ಒಂದು ಪ್ರಮುಖ ಜಾಗತಿಕ ಸೂಚಕವಾಗಿದೆ. ಇಡೀ ವರ್ಷದಲ್ಲಿ ಭೂಮಿಯು ಮರು ಉತ್ಪತ್ತಿ ಮಾಡಬಹುದಾದ ಒಟ್ಟು ಸಂಪನ್ಮೂಲಗಳನ್ನು ಮಾನವ ಕುಲವು ಆ ವರ್ಷದ ಯಾವ ದಿನಾಂಕದ ವೇಳೆಗೆ ಸಂಪೂರ್ಣವಾಗಿ ಬಳಸಿ ಮುಗಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಿ : ವೈಯಕ್ತಿಕ ವಾಹನಗಳ ಬದಲಿಗೆ ಸಾರ್ವಜನಿಕ ಸಾರಿಗೆಗಳಾದ ಬಸ್ ಅಥವಾ ಮೆಟ್ರೋ ಬಳಕೆಗೆ ಆದ್ಯತೆ ನೀಡಬೇಕು. ಒಂದೇ ಕಡೆ ಕೆಲಸಕ್ಕೆ ಹೋಗುವವರು ಒಟ್ಟಿಗೆ ಒಂದೇ ವಾಹನದಲ್ಲಿ ಪ್ರಯಾಣಿಸುವುದರಿಂದ ಇಂಧನ ಮತ್ತು ಹಣ ಎರಡೂ ಉಳಿಯುತ್ತದೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ 30 ಸೆಕೆಂಡ್‌ಗಿಂತ ಹೆಚ್ಚು ಕಾಯಬೇಕಾಗಿ ಬಂದಾಗ ವಾಹನದ ಎಂಜಿನ್ ಆಫ್ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಅಡುಗೆ ಮನೆಯಲ್ಲಿ ಇಂಧನ ಬಳಕೆಯ ಬಗ್ಗೆ ನಿಗಾವಹಿಸಿ :ನಮ್ಮ ದೈನಂದಿನ ಜೀವನದಲ್ಲಿ ಅಡುಗೆ ಅನಿಲ  ಪ್ರಮುಖ ಇಂಧನವಾಗಿದೆ. ಇದನ್ನು ವ್ಯವಸ್ಥಿತವಾಗಿ ಬಳಸುವ ಮೂಲಕ ಉಳಿತಾಯ ಮಾಡಬಹುದು. ಪ್ರೆಶರ್ ಕುಕ್ಕರ್ ಬಳಸುವುದರಿಂದ ಅಡುಗೆಯನ್ನು ಬೇಗನೆ ಬೇಯಿಸುವುದಲ್ಲದೆ, ಶೇಕಡಾ 30 ರಷ್ಟು ಗ್ಯಾಸ್ ಉಳಿತಾಯ ಮಾಡಬಹುದಾಗಿದೆ. ಅಡುಗೆಗೆ ಮುನ್ನ ತರಕಾರಿ ಹೆಚ್ಚುವುದು, ಮಸಾಲೆ ಅರೆಯುವುದು ಮುಂತಾದ ಕೆಲಸಗಳನ್ನು ಮೊದಲೇ ಮುಗಿಸಿ, ನಂತರ ಒಲೆ ಹಚ್ಚಿ. ಅಡುಗೆ ಮಾಡುವಾಗ ಪಾತ್ರೆಗಳನ್ನು ಮುಚ್ಚಿಡುವುದರಿಂದ ಶಾಖ ವ್ಯರ್ಥವಾಗುವುದಿಲ್ಲ. ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ : ಬರಗಾಲದ ಸಮಯದಲ್ಲಿ ಸೂರ್ಯನ ತಾಪ ಹೆಚ್ಚಿರುತ್ತದೆ. ಈ ಸೌರಶಕ್ತಿಯನ್ನು ನಮಗೆ ಪೂರಕವಾಗಿ ಬಳಸಿಕೊಳ್ಳಬಹುದು. ಮನೆಗಳ ಮೇಲೆ ಸೋಲಾರ್ ವಾಟರ್ ಹೀಟರ್ ಮತ್ತು ಸೋಲಾರ್ ರೂಫ್‌ಟಾಪ್ ಅಳವಡಿಸುವುದರಿಂದ ವಿದ್ಯುತ್ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗುತ್ತದೆ.

Read More »

ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ತಲವಾರು ಹಿಡಿದು ಭಯದ ವಾತಾವರಣ ಸೃಷ್ಟಿಸಿದ ಯುವಕ.!

ಮೂಡುಬಿದಿರೆ: ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಮಾರಕಾಯುಧ ಹಿಡಿದು ಯುವಕನೊಬ್ಬ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಶನಿವಾರ ನಡೆದಿದೆ. ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿಗೆ ತೆರಳಿದ ಆರೋಪಿ, ಅಲ್ಲಿದ್ದ ಯುವಕರಿಗೆ ಮಾರಕಾಯುಧ ಬೀಸಿ ಮೊಬೈಲ್

Read More »

ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ಮಾದರಿಯಲ್ಲಿ ವಿವಿಧ ಕೋರ್ಸು ಸೇರ್ಪಡೆಗೆ ಅವಕಾಶ

ಉಡುಪಿ: ಕರ್ನಾಟಕ ರಾಜ್ಯದ ಅರ್ಹ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ಜನಾಂಗದ ವಿದ್ಯಾರ್ಥಿಗಳಿಂದ ಪ್ರಸಕ್ತ ಸಾಲಿಗೆ ಸಂಬoಧಿಸಿದoತೆ ಕರ್ನಾಟಕ ರಾಜ್ಯದ ಪದವಿ ಶಿಕ್ಷಣದಿಂದ ವಂಚಿತರಾಗಿರುವ ಅರ್ಹ ಅಲ್ಪಸಂಖ್ಯಾತರ ಸಮುದಾಯದ

Read More »