ಮುರ್ಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಮಾರ್ಗದಲ್ಲಿ ಬದಲಾವಣೆ

ಉಡುಪಿ: ನೈರುತ್ಯ ರೈಲ್ವೇ ವತಿಯಿಂದ ಕೆ.ಎಸ್.ಆರ್. ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ KSR Bengaluru Railway Station ನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಹಿನ್ನೆಲೆ, ಮುರ್ಡೇಶ್ವರ ಹಾಗೂ ಬೆಂಗಳೂರು ನಡುವೆ ಸಂಚರಿಸುವ ರೈಲು ಸಂಖ್ಯೆ 16586 ಎಕ್ಸ್‌ಪ್ರೆಸ್ ರೈಲಿನ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ಕೊಂಕಣ್ ರೈಲ್ವೇ Konkan Railway ಪ್ರಕಟಣೆ ತಿಳಿಸಿದೆ. ಮುಂದಿನ ಜುಲೈ 16 ಮತ್ತು 17ರಂದು ಸಂಚರಿಸುವ ಮುರ್ಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕೆ.ಎಸ್.ಆರ್. ಬೆಂಗಳೂರು, ಯಶವಂತಪುರ, ಹೆಬ್ಬಾಳ ಹಾಗೂ ಬಾಣಸವಾಡಿ ಮೂಲಕ ಸಂಚರಿಸಲಿದೆ. […]

ಇಂಜಿನಿಯರ್ ಗಳಿಗಿಂತ ಹೆಚ್ಚಿನ ದುಡಿಮೆ ಕೃಷಿಯಲ್ಲಿ ಸಾಧ್ಯ- ಅಶೋಕ್ ಕೆ.ಎಸ್.

ಮೂಡುಬಿದಿರೆ : ವಿದೇಶಗಳಲ್ಲಿ ದುಡಿಯುವ ಎಂಜಿನಿಯರ್ ಗಳಿಗಿಂತ ಲಾಭದಾಯಕ ಕೃಷಿ. ನಾವು ಉನ್ನತ ಶಿಕ್ಷಣ ಪಡೆದಿದ್ದರೂ ಹಲಸಿನ ಕೃಷಿಯಲ್ಲಿ ತೊಡಗಿಸಿಕೊಂಡು ಹೆಚ್ಚಿನ ಆದಾಯದೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೇವೆ ಎಂದು ದೊಡ್ಡಬಳ್ಳಾಪುರದ ಕೃಷಿಕ ಅಶೋಕ್ ಕೆ. ಎಸ್. ಅಭಿಪ್ರಾಯಪಟ್ಟರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪವ‌ರ್ ಫ್ರೆಂಡ್ಸ್ ಬೆದ್ರ, ವಂಶಿ ಇವೆಂಟ್ಸ್, ಬೆನಕ ಇವೆಂಟ್ಸ್ ಹಾಗೂ ಜೆಸಿಐ ಮೂಡುಬಿದಿರೆ ತ್ರಿಭುವನ್ ಸಂಯುಕ್ತ ಆಶ್ರಯದಲ್ಲಿ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಬೃಹತ್ […]

ಕಾರ್ಕಳ: ಬೀಡಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ಕಾರ್ಕಳ: ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ (CITU) ಮತ್ತು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಬೀಡಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮವು ಕಾರ್ಕಳದ ಸಿಐಟಿಯು ಕಚೇರಿಯಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಾಜ್ಯದಾದ್ಯಂತ ಬೀಡಿ ಕಾರ್ಮಿಕರಿಗೆ ಈ ಸ್ಮಾರ್ಟ್ ಕಾರ್ಡ್ ನೀಡುತ್ತಿದೆ. ಈ ಕಾರ್ಡ್ ಮೂಲಕ ಅಪಘಾತ ಪರಿಹಾರ ಮತ್ತು ಸಹಜ ಮರಣ ಪರಿಹಾರ ಸೌಲಭ್ಯಗಳು ದೊರೆಯುತ್ತವೆ. ಸಂಘದ ಮುಖಂಡ ಕವಿರಾಜ್ ಎಸ್. ಕಾಂಚನ್ ಅವರು ಮಾತನಾಡಿ, […]

ನಿವೃತ್ತ ಅಧಿಕಾರಿಯನ್ನು ಬೀದಿಗೆ ತಳ್ಳಿ ಬಿಟ್ಟಿತು, ಆ ಒಂದು ವಾಟ್ಸಾಪ್ ಮೆಸೆಜ್: ಮೈಸೂರಿನ ಈ ಘಟನೆ ನಾಳೆ ನಮ್ಮೂರಲ್ಲೂ ಆಗಬಹುದು ಎಚ್ಚರವಾಗಿರಿ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಎಂದರೆ ನೆಮ್ಮದಿಯ ತಾಣ ಎಂದು ಹೇಳಲಾಗುತ್ತದೆ. ಆದರೆ ಇದೀಗ ಅದೇ ನಗರದಲ್ಲಿ ಸೈಬರ್ ಖದೀಮರು ಡಿಜಿಟಲ್ ದರೋಡೆಗೆ ಇಳಿದಿರುವ ಘಟನೆಗಳು ಹೆಚ್ಚಾಗುತ್ತಿವೆ. ನಿವೃತ್ತ ಅಧಿಕಾರಿಯನ್ನು ಬೀದಿಗೆ ತಳ್ಳಿ ಬಿಟ್ಟಿತು ಸೈಬರ್ ಕಳ್ಳರ ಆ ಒಂದು ಮೆಸೆಜ್, ಹೌದು ಕಷ್ಟಪಟ್ಟು ದುಡಿದು ನಿವೃತ್ತಿ ಜೀವನವನ್ನು ಸುಖವಾಗಿ ಕಳೆಯಬೇಕೆಂದಿದ್ದ ಅಧಿಕಾರಿಯೊಬ್ಬರು ಇದೀಗ ಕೋಟಿ ರೂಪಾಯಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇವಲ ಒಂದು ವಾಟ್ಸಾಪ್ ಮೆಸೇಜ್ ಇಡೀ ಬದುಕನ್ನೇ ಉಲ್ಟಾಪಲ್ಟಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. […]

ನಿಮ್ಮ ಮಕ್ಕಳನ್ನು ಇನ್ನಷ್ಟು ಸ್ಮಾರ್ಟ್ ಮಾಡುವ MSDC ಯ ತಾಂತ್ರಿಕ ಸಮ್ಮರ್ ಕ್ಯಾಂಪ್ ಗಳು: ಆಸಕ್ತರು ಖಂಡಿತ ಮಿಸ್ ಮಾಡ್ಕೊಬೇಡಿ

ಉಡುಪಿ: ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ, ಸೃಜನಶೀಲತೆ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ಮೇ 11ರಿಂದ  ವಿವಿಧ ಸಮರ್ ಕ್ಯಾಂಪ್‌ಗಳನ್ನು ಆಯೋಜಿಸಲಾಗಿದೆ. ಈ ಶಿಬಿರ ಶಾಲಾ ವಿದ್ಯಾರ್ಥಿಗಳಿಗೆ ಹೊಸ ಕಲಿಕೆಯ ಅನುಭವ ನೀಡಲಿವೆ. ಏನೇನಿದೆ ಶಿಬಿರದಲ್ಲಿ? ಶಿಬಿರಗಳಲ್ಲಿ ‘ಮಾಸ್ಟರಿಂಗ್ ಜನರೇಟಿವ್ AI ಟೂಲ್ಸ್’, ‘STEM IoT ಕ್ಯಾಂಪ್’, ‘ನೆಕ್ಸ್ಟ್‌ಜೆನ್ ರೋಬೋಟಿಕ್ಸ್ ಕ್ಯಾಂಪ್’, ‘ರೆಸಿನ್ ಆರ್ಟ್ ಸಮರ್ ಕ್ಯಾಂಪ್’ ಹಾಗೂ ‘ಆರ್ಟ್ಸ್ & ಕ್ರಾಫ್ಟ್ ಸಮರ್ ಕ್ಯಾಂಪ್’ ಸೇರಿವೆ. ಜನರೇಟಿವ್ AI […]