ಬಾನಿನಲಿ ಚೆಲುವಿನ ಚಿತ್ತಾರ: ಪ್ರತಾಪ್ ಶೆಟ್ಟಿ ನೀರೆ ಕ್ಲಿಕ್ಕಿಸಿದ ಚಿತ್ರಗಳು

ಬಾನಿನಲಿ ಮೂಡುವ ಚೆಲುವಿನ ಚಿತ್ತಾರಗಳನ್ನು ನೋಡುವುದೇ ಚೆಂದ. ಕಾರ್ಕಳ ತಾಲೂಕಿನ ನೀರೆಯ ಪ್ರತಾಪ್ ಶೆಟ್ಟಿ ಅವರ ಕ್ಯಾಮರಾ ಕಣ್ಣುಗಳಲ್ಲಿ ಬಾನಿನ ಚೆಲುವನ್ನು ಬಿಂಬಿಸುವ ಚಿತ್ರಗಳು ಸೆರೆಯಾಗಿದೆ. ಪ್ರತಾಪ್ ಶೆಟ್ಟಿ ಹಿರಿಯಡ್ಕದ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿ. ನಟನೆ, ಡ್ಯಾನ್ಸ್ ,ಸಂಗೀತ  ಇವರ ಪ್ರೀತಿಯ ಹವ್ಯಾಸ. ಆಲ್ಬಮ್ ಸಾಂಗ್ ನಲ್ಲಿ ನಾಯಕ ನಟನಾಗಿಯೂ ಪ್ರತಾಪ್ ನಟಿಸಿದ್ದಾರೆ. ಫೋಟೋಗ್ರಫಿಯೂ ಇವರ ನೆಚ್ಚಿನ ಹವ್ಯಾಸ.ಇನ್ನಷ್ಟು ಕ್ರಿಯಾಶೀಲವಾಗಿ  ಫೋಟೋಗ್ರಫಿಯಲ್ಲಿ ತೊಡಗುವ ಕನಸು ಇವರದ್ದು. ಅವರು ಕ್ಲಿಕ್ಕಿಸಿದ ಕೆಲವು ಚಿತ್ರಗಳು ಇಲ್ಲಿವೆ ನೋಡಿ (ನೀವು ಕ್ಲಿಕ್ಕಿಸಿದ […]

ಮಳೆ ಬಂದು ನಿಂತ ಮೇಲೆ: ರಕ್ಷಾ ಪಾಲನ್ ಕ್ಲಿಕ್ಕಿಸಿದ ಚಿತ್ರ

ಮಳೆ ಬಂದು ನಿಂತ ಮೇಲೆ ಹೂ ಗಳ ಮೇಲೆ ಮೂಡುವ ಹನಿಗಳ ಚಿತ್ತಾರವನ್ನು ಸೆರೆ ಹಿಡಿದವರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ರಕ್ಷಾ ಪಾಲನ್ (ನೀವು ಕ್ಲಿಕ್ಕಿಸಿದ ಕ್ರಿಯಾಶೀಲ ಚಿತ್ರಗಳನ್ನು ನಿಮ್ಮ ಸ್ವ-ವಿವರಗಳ ಜೊತೆ ಉಡುಪಿ xpress ಗೆ ಕಳುಹಿಸಿ. ಸೂಕ್ತವೆನ್ನಿಸಿದ್ದನ್ನು ZOOM IN ವಿಭಾಗದಲ್ಲಿ ಪ್ರಕಟಿಸುತ್ತೇವೆ  whatsapp:7483419099 Email:newsudupixpress@gmail.com)

ಉದುರಿದ್ದು ಎಲೆ, ಕನಸಲ್ಲ: ಜ್ಯೋತ್ಸ್ನಾ ಶೆಣೈ ಕ್ಲಿಕ್ಕಿಸಿದ ಚಿತ್ರ

ಎಲೆಗಳನ್ನು ಉದುರಿಸಿ ನವವಸಂತಕ್ಕಾಗಿ ಕಾಯುತ್ತಿರುವ ಈ ಮರವೊಂದರ ಕಲಾತ್ಮಕ ಚಿತ್ರವನ್ನು ಸೆರೆಹಿಡಿದವರು ಕಾರ್ಕಳದ ವಿದ್ಯಾರ್ಥಿನಿ ಜ್ಯೋತ್ಸ್ನಾ ಶೆಣೈ. ಸೃಜನಶೀಲ ಯುವ ಕಲಾಗಾರ್ತಿಯಾಗಿರುವ ಇವರಿಗೆ ಚಿತ್ರ ಬಿಡಿಸೋದು ನೆಚ್ಚಿನ ಹವ್ಯಾಸವಾಗಿದ್ದರೂ. ಫೋಟೋಗ್ರಫಿಯೂ ಸೃಜನಶೀಲತೆಗೊಂದು ದಾರಿಯಾಗಿದೆ.   (ಉಡುಪಿ xpress.com ZOOM ಇನ್  ವಿಭಾಗಕ್ಕೆ ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ಕಳಿಸಬಹುದು. ಚಿತ್ರದ ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ ಪ್ರಕಟಿಸುತ್ತೇವೆ. ಇಲ್ಲಿಗೆ ಕಳಿಸಿ-ಇ ಮೇಲ್: newsudupixpress@gmail.com, ನಮ್ಮ ವಾಟ್ಸಾಪ್: 7483419099)  

ಬಕ ಪಕ್ಷಿಯ ಧ್ಯಾನ: ಇಂಚರಾ ಪಿ ಕ್ಲಿಕ್ಕಿಸಿದ ಚಿತ್ರ

ಕೊಳದ ಬಕ ಪಕ್ಷಿಯೊಂದು ಬೇಟೆಗಾಗಿ ನೀರನ್ನು ನೋಡುತ್ತ ತನ್ಮಯವಾಗಿರುವ ಈ ಚೆಂದದ ಚಿತ್ರವನ್ನು ಸೆರೆಹಿಡಿದವರು ಪುತ್ತೂರಿನ ಇಂಚರಾ ಪಿ ಅವರು. ಇಂಚರಾ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ. ಹವ್ಯಾಸವಾಗಿ ಫೋಟೋಗ್ರಫಿಯನ್ನು ನೆಚ್ಚಿಕೊಂಡಿರುವ ಇಂಚರಾ ಅವರ ಚಿತ್ರಗಳಲ್ಲಿ ಪ್ರಕೃತಿಯ ವಿವಿಧ ನೋಟಗಳು ಕಾಡುವಂತಿರುತ್ತವೆ.