ಕನ್ನಡ ಚಿತರಂಗಕ್ಕೆ ಕಾಲಿಟ್ಟ ತುಳುನಾಡ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್: ಚೊಚ್ಚಲ ಕನ್ನಡ ಚಿತ್ರ ‘ಪುರುಷೋತ್ತಮನ ಪ್ರಸಂಗ’ ತೆರೆಗೆ

ಬೆಂಗಳೂರು: ತುಳುನಾಡಿನ ಚಿರಪರಿಚಿತ ಮತ್ತು ಅತ್ಯಪೂರ್ವ ನಿರ್ದೇಶಕ-ನಟ ತೆಲಿಕೆದ ಬೊಳ್ಳಿ, ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರ “ಪುರುಷೋತ್ತಮನ ಪ್ರಸಂಗ” ಚಿತ್ರ ಇಂದು ತೆರೆಕಾಣುತ್ತಿದೆ. ಅದಾಗಲೇ ತುಳು ನಾಟಕ ಮತ್ತು ಚಲನಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ದೇವದಾಸ್ ಕಾಪಿಕಾಡ್ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಅಣಿಯಾಗಿದ್ದಾರೆ. ರಾಷ್ಟ್ರಕೂಟ ಪಿಕ್ಚರ್ ಬ್ಯಾನರ್‌ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಅಜಯ್‌ ಹಾಗೂ ರಿಷಿಕಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿ ಸಹಕರಿಸಿದ್ದಾರೆ. ನವೀನ್ ಡಿ ಪಡೀಲ್, ಅರವಿಂದ್ […]

ಅನುಪಮಾ ಧಾರಾವಾಹಿ ನಟ ರಿತುರಾಜ್ ಸಿಂಗ್ ಹೃದಯಾಘಾತದಿಂದ ನಿಧನ

ಮುಂಬೈ: ಅನುಪಮಾ ಧಾರವಾಹಿಯ ಜನಪ್ರಿಯ ಟಿವಿ ನಟ ರಿತುರಾಜ್ ಸಿಂಗ್ ಫೆಬ್ರವರಿ 20 ರ ಮುಂಜಾನೆ 59 ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಅವರ ಸಹೋದ್ಯೋಗಿ ಮತ್ತು ಆತ್ಮೀಯ ಸ್ನೇಹಿತ ಅಮಿತ್ ಬೆಹ್ಲ್ ದುಃಖದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ನಟ ಅಮಿತ್ ಬೆಹ್ಲ್, ರಿತುರಾಜ್ ಸಿಂಗ್ ಅವರ ಉತ್ತಮ ಸ್ನೇಹಿತರಾಗಿದ್ದು ಸುದ್ದಿಯನ್ನು ದೃಢಪಡಿಸಿದ್ದಾರೆ. ಫೆಬ್ರವರಿ 20 ರಂದು ಬೆಳಿಗ್ಗೆ12:30 ಕ್ಕೆ ರಿತುರಾಜ್ ಹೃದಯಾಘಾತ ಹೊಂದಿದ್ದಾರೆ. ರಿತುರಾಜ್ ಮೇದೋಜ್ಜೀರಕ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು […]

ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಗೆ ಕಿರಿಕ್ ಪಾರ್ಟಿ ‘ರಶ್ಮಿಕಾ ಮಂದಣ್ಣ’ ಹೆಸರು ಸೇರ್ಪಡೆ..!

ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಗೆ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹೆಸರು ಸೇರ್ಪಡೆಗೊಂಡಿದೆ. ಮಂದಣ್ಣರ ವೃತ್ತಿಯ ಗ್ರಾಫು ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗುತ್ತಿದೆ. ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣ ಟಾಲಿವುಡ್​ನ ಟಾಪ್ ನಟಿ ಎನಿಸಿಕೊಂಡು ಈಗ ಬಾಲಿವುಡ್​ನಲ್ಲಿಯೂ ಹವಾ ಎಬ್ಬಿಸಿದ್ದಾರೆ. ಬಾಲಿವುಡ್​ನ ಸ್ಟಾರ್ ನಟರುಗಳೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಗೌರವವೊಂದಕ್ಕೆ ರಶ್ಮಿಕಾ ಮಂದಣ್ಣ ಭಾಜನರಾಗಿದ್ದಾರೆ. ಇದೀಗ ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಸೇರ್ಪಡೆಗೊಂಡಿದೆ. ಪ್ರತಿಷ್ಠಿತ ಫೋರ್ಬ್ಸ್ […]

ದೈವಂ ಶರಣಂ ಗಚ್ಛಾಮಿ ತಂಡದಿಂದ ಮತ್ತೊಂದು ಥ್ರಿಲ್ಲರ್ ‘ನಂಬಿಕೆ ಮಾತಾಡಿದಾಗ’: ಯೂಟ್ಯೂಬ್ ನಲ್ಲಿ ಟ್ರೈಲರ್ ರಿಲೀಸ್

ದೈವಂ ಶರಣಂ ಗಚ್ಛಾಮಿ ತಂಡದಿಂದ ಮತ್ತೊಂದು ಥ್ರಿಲ್ಲರ್ ಚಿತ್ರ ‘ನಂಬಿಕೆ ಮಾತಾಡಿದಾಗ’ ಇದರ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಚಿತ್ರವು ಹಾರರ್ ಕಥಾ ಹಂದರದಲ್ಲಿ ಮೂಡಿಬಂದಿದೆ. ಚಿತ್ರಕಥೆ ಮತ್ತು ನಿರ್ದೇಶನ ವಿಜಯ್ ಮಂಜುನಾಥ್ ಇವರದಾಗಿದ್ದು, ಭರ್ಗ ಸಿನಿಮಾಸ್ ಬ್ಯಾನರ್ ನಲ್ಲಿ ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ ಪ್ರಸ್ತುತಪಡಿಸುತ್ತಿರುವ ಚಿತ್ರವನ್ನು ಹರೀಶ್ ಶೆಟ್ಟಿ ಮತ್ತು ಜೀವನ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ವಿನಯ್ ಸಹ ನಿರ್ದೇಶನದಲ್ಲಿ ಪ್ರತೀಕ್ ಶೆಟ್ಟಿ, ದೀಪಕ್ ರೈ, ಪುಷ್ಪರಾಜ್, ಪ್ರಜ್ವಲ್ ಗೌಡ, ದೀಕ್ಷಾ, ಕಿರಣ್, ಶ್ರೀನಿವಾಸ್, ಶಕ್ತಿ […]

ಪೂನಂ ಪಾಂಡೆ ಸಾವಿನ ಸುತ್ತ ಊಹಾಪೋಹ: ಸಂಪರ್ಕಕ್ಕೆ ಸಿಗುತ್ತಿಲ್ಲ ಕುಟುಂಬ ಸದಸ್ಯರು; ಜೀವಂತವಾಗಿದ್ದಾಳೆ ಎನ್ನುವ ಪೋಸ್ಟ್ ಹಂಚಿಕೆ!!

ರೂಪದರ್ಶಿ, ನಟಿ ಮತ್ತು ರಿಯಾಲಿಟಿ ಟಿವಿ ತಾರೆ ಪೂನಂ ಪಾಂಡೆ ಗುರುವಾರ ರಾತ್ರಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಮ್ಯಾನೇಜರ್ ಶುಕ್ರವಾರ ಹೇಳಿದ್ದರು. ಆಕೆಯ ಸಾವಿನ ಸುದ್ದಿಯನ್ನು ಆಕೆಯ ತಂಡವು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿತ್ತು. ಆದರೆ, ಪೂನಂ ಜೀವಂತವಾಗಿದ್ದಾರೆ ಎನ್ನುವ ರೀತಿಯ ಪೋಸ್ಟ್ ಗಳು ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿವೆ. ಪೂನಂ ಅವರ ‘ಅನಿರೀಕ್ಷಿತ’ ಸಾವಿಗೆ ಹಲವಾರು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದರೆ, ಆಕೆಯ ಸಾವಿನ ಕಾರಣದ ಬಗ್ಗೆ ಊಹಾಪೋಹಗಳು […]