ಆಸ್ಕರ್ 2024 : ಓಪನ್‌ಹೈಮರ್‌ ಗೆ ಏಳು ಪ್ರಶಸ್ತಿ; ನಟ ಸಿಲಿಯನ್ ಮರ್ಫಿ; ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಗೂ ಆಸ್ಕರ್ ಗರಿ

ಓಪನ್‌ಹೈಮರ್‌ನ ನಾಯಕ, ಪ್ರಸಿದ್ಧ ಹಾಲಿವುಡ್ ನಟ ಸಿಲಿಯನ್ ಮರ್ಫಿಗೆ 2024ನೇ ಸಾಲಿನ ಆಸ್ಕರ್‌ (Oscar Awards) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಓಪನ್‌ಹೈಮರ್‌ನಲ್ಲಿನ (OPPENHEIMER) ಪಾತ್ರಕ್ಕಾಗಿ ಸಿಲಿಯನ್ ಮರ್ಫಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದರೊಂದಿಗೆ ಓಪನ್‌ಹೈಮರ್‌ನ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಈ ಬಾರಿ ಒಪೆನ್‌ಹೈಮರ್‌ನ ಚಿತ್ರವು ಏಳು ಆಸ್ಕರ್‌ ಪ್ರಶಸ್ತಿಗಳನ್ನ ಪಡೆದುಕೊಂಡಿದೆ. ಓಪನ್‌ಹೈಮರ್‌ ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಕೂಡ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕ್ರಿಸ್ಟೋಫರ್‌ ನೋಲನ್‌ ಅತ್ಯುತ್ತಮ ನಿರ್ದೇಶಕ […]

ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರದ ಟ್ರೈಲರ್ ಗೆ ಅಖಂಡ ಭಾರತದಿಂದ ಅಖಂಡ ಪ್ರೀತಿ!! ಮಾರ್ಚ್ 22ರಂದು ತೆರೆಗೆ

ರಣದೀಪ್ ಹೂಡಾ ಅಭಿನಯದ ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವು ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜೀವನದ ಸ್ವಾತಂತ್ರ್ಯ ಸಂಗ್ರಾಮದ ಪಯಣವನ್ನು ಆಧರಿಸಿದೆ. ನಟನೆಯ ಜೊತೆಗೆ ಹೂಡಾ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಸದ್ಯ ಟ್ರೆಡಿಂಗ್ ನಲ್ಲಿರುವ ಟ್ರೈಲರ್ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ರಣದೀಪ್ ಹೂಡಾ, “ಟ್ರೈಲರ್ ಗೆ ದೊರೆಯುತ್ತಿದೆ ಅಖಂಡ ಭಾರತದ ಅಖಂಡ ಪ್ರೀತಿ ಮತ್ತು […]

ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಫಜೀತಿಯ “ಲೋಕಲ್ ಬಾಯ್ಸ್” ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆ

ಶಿವು-ಸೂಜಿ ಪ್ರೊಡಕ್ಷನ್ಸ್, ಸುಮಂತ್ ಆಚಾರ್ಯ ನಿರ್ದೇಶನದ “ಲೋಕಲ್ ಬಾಯ್ಸ್” ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಪ್ರತೀಕ್ ಶೆಟ್ಟಿ, ಕೃಷ್ಣ ಶೇಂದ್ರೆ, ಚಾರ್ಲಿ ಕುಮಾರ್, ಹೇಮಂತ್, ಸುಪ್ರೀತ್ ಕಾಟಿ, ವಿಶ್ವಾಸ್, ಕಡಕ್ ಬಾಬಿ, ಗುರು ತಾರಾಗಣದ ಚಿತ್ರವು ಕಾಲೇಜು ಹುಡುಗರ ಪರೀಕ್ಷಾ ಕೊಠಡಿಯಲ್ಲಿ ನಡೆಯುವ ಕಾಪಿ ಹೊಡೆಯುವ ಫಜೀತಿಯ ಚಿತ್ರಣವನ್ನು ಹೊಂದಿದೆ. ಡಿ.ಒ.ಪಿ ಮತ್ತು ಸಂಕಲನ ಕೂಲ್ ಮಗಾ ಸ್ಟುಡಿಯೋಸ್ ನದ್ದಾಗಿದ್ದರೆ ರೋಹಿತ್ ಸೋವರ್ ಸಂಗೀತ ನೀಡಿದ್ದಾರೆ.

ಕನ್ನಡ ಚಿತರಂಗಕ್ಕೆ ಕಾಲಿಟ್ಟ ತುಳುನಾಡ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್: ಚೊಚ್ಚಲ ಕನ್ನಡ ಚಿತ್ರ ‘ಪುರುಷೋತ್ತಮನ ಪ್ರಸಂಗ’ ತೆರೆಗೆ

ಬೆಂಗಳೂರು: ತುಳುನಾಡಿನ ಚಿರಪರಿಚಿತ ಮತ್ತು ಅತ್ಯಪೂರ್ವ ನಿರ್ದೇಶಕ-ನಟ ತೆಲಿಕೆದ ಬೊಳ್ಳಿ, ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರ “ಪುರುಷೋತ್ತಮನ ಪ್ರಸಂಗ” ಚಿತ್ರ ಇಂದು ತೆರೆಕಾಣುತ್ತಿದೆ. ಅದಾಗಲೇ ತುಳು ನಾಟಕ ಮತ್ತು ಚಲನಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ದೇವದಾಸ್ ಕಾಪಿಕಾಡ್ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಅಣಿಯಾಗಿದ್ದಾರೆ. ರಾಷ್ಟ್ರಕೂಟ ಪಿಕ್ಚರ್ ಬ್ಯಾನರ್‌ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಅಜಯ್‌ ಹಾಗೂ ರಿಷಿಕಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿ ಸಹಕರಿಸಿದ್ದಾರೆ. ನವೀನ್ ಡಿ ಪಡೀಲ್, ಅರವಿಂದ್ […]

ಅನುಪಮಾ ಧಾರಾವಾಹಿ ನಟ ರಿತುರಾಜ್ ಸಿಂಗ್ ಹೃದಯಾಘಾತದಿಂದ ನಿಧನ

ಮುಂಬೈ: ಅನುಪಮಾ ಧಾರವಾಹಿಯ ಜನಪ್ರಿಯ ಟಿವಿ ನಟ ರಿತುರಾಜ್ ಸಿಂಗ್ ಫೆಬ್ರವರಿ 20 ರ ಮುಂಜಾನೆ 59 ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಅವರ ಸಹೋದ್ಯೋಗಿ ಮತ್ತು ಆತ್ಮೀಯ ಸ್ನೇಹಿತ ಅಮಿತ್ ಬೆಹ್ಲ್ ದುಃಖದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ನಟ ಅಮಿತ್ ಬೆಹ್ಲ್, ರಿತುರಾಜ್ ಸಿಂಗ್ ಅವರ ಉತ್ತಮ ಸ್ನೇಹಿತರಾಗಿದ್ದು ಸುದ್ದಿಯನ್ನು ದೃಢಪಡಿಸಿದ್ದಾರೆ. ಫೆಬ್ರವರಿ 20 ರಂದು ಬೆಳಿಗ್ಗೆ12:30 ಕ್ಕೆ ರಿತುರಾಜ್ ಹೃದಯಾಘಾತ ಹೊಂದಿದ್ದಾರೆ. ರಿತುರಾಜ್ ಮೇದೋಜ್ಜೀರಕ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು […]