ಗರ್ಭಕಂಠದ ಕ್ಯಾನ್ಸರ್‌ ನಿಂದ ಪೂನಂ ಪಾಂಡೆ ನಿಧನ

ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಪೂನಂ ಪಾಂಡೆ ನಿಧನರಾಗಿದ್ದಾರೆ. ಅವರ ತಂಡ ಸುದ್ದಿಯನ್ನು ಖಚಿತಪಡಿಸಿದೆ. “ಅವರು ಕಳೆದ ರಾತ್ರಿ ನಿಧನರಾದರು,” ಎಂದು ಅವರ ತಂಡವು ಹೇಳಿದೆ. ಆಕೆಯ ಸಾವಿನ ಸುದ್ದಿಯನ್ನು ಮೊದಲು ಆಕೆಯ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಬಹಿರಂಗಪಡಿಸಲಾಯಿತು. “ಈ ಬೆಳಿಗ್ಗೆ ನಮಗೆ ಕಠಿಣವಾಗಿದೆ. ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದೇವೆ ಎಂದು ತಿಳಿಸಲು ತುಂಬಾ ದುಃಖವಾಗುತ್ತಿದೆ. ಅವಳೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವಂತ ರೂಪವು ಶುದ್ಧ ಪ್ರೀತಿ ಮತ್ತು ದಯೆಯಿಂದ […]

ಒಂದು ಮಿಲಿಯನ್ ವೀಕ್ಷಣೆ ಪಡೆದ “ಶೆಟ್ರು ಸಂಸಾರ”!! ನೀವೂ ನೋಡಿ ಆನಂದಿಸಿ…

ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ & ಭಾಗ್ಯರತ್ನ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಹೇಮಂತ್ ಯುಬಿಸಿ ಬರೆದು ನಿರ್ದೇಶಿಸಿರುವ “ಶೆಟ್ರು ಸಂಸಾರ” ಕಿರು ಚಿತ್ರ ಯೂಟ್ಯೂಬ್ ನಲ್ಲಿ ಭರ್ಜರಿ ಒಂದು ಮಿಲಿಯನ್ ವೀಕ್ಷಣೆ ಪಡೆದು ಜನರನ್ನು ರಂಜಿಸುತ್ತಿದೆ. ಪ್ರತೀಕ್ ಶೆಟ್ಟಿ, ಪಾಯಲ್ ಚೆಂಗಪ್ಪ, ಸಿದ್ದು ಮಂಡ್ಯ, ಕೃಷ್ಣ ಶೇಂದ್ರೆ ರೋಹಿಣಿ ಸವಿತಾ ಇವರನ್ನು ಒಳಗೊಂಡ ತಾರಾಗಣ ಮನೋಜ್ಞ ಅಭಿನಯ ನೀಡಿದೆ. ಛಾಯಾಗ್ರಹಣ: ಸುಮಂತ್ ಆಚಾರ್ಯ, ಸಹಾಯಕ ಡಿಒಪಿ: ಸೂಪರ್ ಸಂತು, ಸಂಗೀತ ಗಾಯನ: ರೋಹಿತ್ ಸೊವರ್, ಸಂಕಲನ, ಡಿಐ ಮತ್ತು […]

ವಿಜಯ್ ರಾಘವೇಂದ್ರ ನಟನೆಯ ಕೇಸ್ ಆಫ್ ಕೊಂಡಾಣ ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್; ಜನವರಿ 26 ರಂದು ತೆರೆಗೆ

ವಿಜಯ್ ರಾಘವೇಂದ್ರ ನಾಯಕ ನಟನಾಗಿರುವ ನಿರ್ಮಾಪಕ- ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಇವರ ಎರಡನೇ ಸಿನಿಮಾ ‘ಕೇಸ್ ಆಫ್ ಕೊಂಡಾಣ’ ಜನವರಿ 26 ರಂದು ರಾಜ್ಯದಾದ್ಯಂತ ತೆರೆಕಾಣಲಿದ್ದು, ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯೂಟ್ಯೂಬ್ ನಲ್ಲಿ ಅದಾಗಲೇ 4ಲಕ್ಷ+ ವೀಕ್ಷಣೆಗಳನ್ನು ಕಂಡಿದೆ. ಈ ಚಿತ್ರವು ಬೆಂಗಳೂರಿನಲ್ಲಿ ನಡೆಯುವ ಮೂರು ಕಥೆಗಳೊಂದಿಗೆ ಪ್ರಾರಂಭವಾಗುತ್ತದೆ. ಅವುಗಳ ನಡುವಿನ ಸಂಪರ್ಕಗಳನ್ನು ಅನ್ವೇಷಿಸುತ್ತದೆ. ಚಿತ್ರದ ಎಂಭತ್ತರಷ್ಟು ಭಾಗವನ್ನು ಬೆಂಗಳೂರಿನ ಕೊಂಡಾಣ ಎಂಬ ಕಾಲ್ಪನಿಕ ಸ್ಥಳದಲ್ಲಿ ಚಿತ್ರೀಕರಿಸಲಾಗಿದ್ದು, ಒಂದು ರಾತ್ರಿಯಲ್ಲಿ ಇದು ನಡೆಯುತ್ತದೆ. […]

ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ‘ಹನುಮಾನ್’: ಪ್ರತಿ ಟಿಕೆಟ್‌ನಿಂದ 5 ರೂ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿಕೆ

ಹೈದರಾಬಾದ್: ತೆಲುಗು ನಟ ತೇಜ ಸಜ್ಜ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ಅವರ ‘ಹನುಮಾನ್’ ಜನವರಿ 12 ರಂದು ಸಂಕ್ರಾಂತಿ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಹೈದರಾಬಾದ್ ನಲ್ಲಿ ನಡೆದ ಚಿತ್ರದ ಬಿಡುಗಡೆ ಪೂರ್ವ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಭಾಗವಹಿಸಿ ‘ಹನುಮಾನ್’ ನಿರ್ಮಾಪಕರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿ ಟಿಕೆಟ್‌ನಿಂದ ರೂ 5 ದೇಣಿಗೆ ನೀಡಲು ವಾಗ್ದಾನ ಮಾಡಿದ್ದಾರೆ ಮತ್ತು ತಂಡದ ವತಿಯಿಂದ ಈ ಸುದ್ದಿಯನ್ನು ತಿಳಿಸುವಂತೆ ಆಗ್ರಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು. ಇಂದು ಚಿತ್ರದ […]

ಬಾಕ್ಸ್ ಆಫೀಸ್ ಸೂರೆಹೊಡಿಯುತ್ತಿರುವ ಪ್ರಭಾಸ್ ‘ಸಲಾರ್’: ಬಾಹುಬಲಿ ಅಬ್ಬರದೆದುರು ಮಂಕಾದ ಶಾರೂಖ್ ಖಾನ್ ‘ಡಂಕಿ’

ಹೊಂಬಾಳೆ ಫಿಲ್ಂಸ್ ನಿರ್ಮಾಣ, ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರದ ಹುಚ್ಚು ಗಗನಕ್ಕೇರುತ್ತಿದೆ. ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ಅಷ್ಟೇ ಅಲ್ಲ, ಮೊದಲ ದಿನದಿಂದಲೂ ಈ ಚಿತ್ರ ಹೊಸ ದಾಖಲೆಗಳನ್ನು ಮಾಡುತ್ತಿದೆ. ವಾರಾಂತ್ಯದಲ್ಲೂ ಪ್ರಭಾಸ್ ನ ಸಲಾರ್ ಸಂಚಲನ ಮೂಡಿಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ‘ಸಲಾರ್’ ಸಿನಿಮಾದ ಗಳಿಕೆಯ ವೇಗ ಬುಲೆಟ್ ಗಿಂತಲೂ ಹೆಚ್ಚಾಗಿದೆ. 90 […]