ಬಿಟ್ಟೆನೆಂದರೂ ಬಿಡದು ಮೊಟ್ಟೆ ಹಣ್ಣಿನ ಮಾಯೆ!: ಆರೋಗ್ಯಕ್ಕೂ ಪೂರಕ ಈ ರುಚಿಕರ ಹಣ್ಣು

ಕೆಲವೊಂದು ಹಣ್ಣುಗಳು ಅಷ್ಟೊಂದು ರುಚಿ ಇಲ್ಲದಿದ್ದರೂ ಮಾರುಕಟ್ಟೆಯ ಬೇಡಿಕೆಯಿಂದಾಗಿಯೋ, ಹಣ್ಣುಗಳ ಅಧಿಕ ಇಳುವರಿಯಿಂದಾಗಿಯೋ ಎಲ್ಲರ ಬಾಯಲ್ಲೂ ಸೆಟ್ಟೇರಿಬಿಡುತ್ತದೆ. ಆದರೆ ಕೆಲವೊಂದು ಹಣ್ಣುಗಳು ಅತ್ಯಂತ ರುಚಿಕರವಾಗಿದ್ದರೂ, ಅದು ಮಾರುಕಟ್ಟೆಯಲ್ಲಿ ಅಷ್ಟೊಂದು ಮುನ್ನೆಲೆಗೂ ಬಾರದೇ, ಇತ್ತ ಬೆಳೆಯುವವರ ಕೈಯನ್ನೂ ಹಿಡಿಯದೇ ಹಣ್ಣಾಗಿ ಕೋತಿಗಳ ಪಾಲಾಗಿ ಬಿಡುತ್ತದೆ. ಇಲ್ಲೊಂದು ಹಣ್ಣಿದೆ. ಇದರ ಹೆಸರು ಮೊಟ್ಟೆ ಹಣ್ಣು. ಅತ್ಯಂತ ಚೇತೋಹಾರಿಯಾದ ರುಚಿಯುಳ್ಳ ಈ ಹಣ್ಣಿನ ಪರಿಸ್ಥಿತಿಯೂ ಅಲ್ಪ ಸ್ವಲ್ಪ ಹೀಗೆಯೇ. ಇಂಗ್ಲೀಷಿನಲ್ಲಿ ಸಾಮಾನ್ಯವಾಗಿ ಎಗ್ ಫ್ರುಟ್ ಎಂದು ಕರೆಯಲ್ಪಡುವ ಈ ಹಣ್ಣಿನ ಮೂಲ […]
ದೊಡ್ಡ ಪತ್ರೆಯ ದೊಡ್ಡಸ್ತಿಕೆ ನಿಮಗೆ ಗೊತ್ತಾ ?: ಶೀತ, ಕೆಮ್ಮಿಗೆ ರಾಮಬಾಣ, ಇದರ ಪೋಡಿ ಸೂಪರ್

ನಮ್ಮ ಮನೆ ಅಂಗಳದಲ್ಲೇ ಬೆಳೆಯಬಹುದಾದ ಜೌಷದೀಯ ಸಸ್ಯಗಳ ಪೈಕಿ ದೊಡ್ಡಪತ್ರೆಗೆ ತನ್ನದೇ ಆದ ದೊಡ್ಡಸ್ತಿಕೆ ಇದೆ. ಮನೆಯ ಅಂಗಳದಲ್ಲಿ ದೊಡ್ಡಪತ್ರೆಯ ಗಿಡವೊಂದಿದ್ದರೆ ಸಣ್ಣ ಪುಟ್ಟ ಕಾಯಿಲೆಗೆಲ್ಲಾ ದೊಡ್ಡಪತ್ರೆ ದೊಡ್ಡ ಪಾತ್ರವಹಿಸುತ್ತದೆ. ದೊಡ್ಡ ಪತ್ರೆಯ ಸಸ್ಯಶಾಸ್ತ್ರೀಯ ಹೆಸರು ಕಾಲಿಯಸ್ ಅರೋಮ್ಯಾಟಿಕಸ್. ಈ ಸಸ್ಯದ ಮೂಲ ಭಾರತ, ಆಗ್ನೇಯ ಏಷ್ಯಾ, ದಪ್ಪ ಮುಸುಡಿಯ ಈ ದೊಡ್ಡ ಪತ್ರೆಯ ಗಿಡ, ಮನೆಯ ನೀರು ಹೋಗುವಲ್ಲಿಯೋ?ಅಂಗಳದ ನೀರಿನ ತೇವಾಂಶ ದಟ್ಟವಾಗಿ ವ್ಯಾಪಿಸುವ ಜಾಗ ಹುಡುಕಿ ಹುಲುಸಾಗಿ ಬೆಳೆಯುತ್ತದೆ. ಔಷಧೀಯ ಆಗರ: ದಪ್ಪ ಕಾಂಡಗಳಿಂದ […]
ವಿದೇಶ ಬಿಟ್ಟು ಊರಿಗೆ ಬಂದ ಯುವಕ, ಈಗ ಗೋಪಾಲಕ: ದೇಶಿ ಹೈನುಗಾರಿಕೆಯ ಕೈ ಹಿಡಿದ ಈ ಯುವಕನ ಕತೆ ಕೇಳಿ

ದೇಶಿ ದನಗಳ ಹಾಲಿನ ಮಹತ್ವ ಕಂಡುಕೊಂಡು, ದೇಶಿ ಗೋವುಗಳ ಹಾಲನ್ನು ಹುಡುಕಿ ಹೋಗುವವರು ಬಹಳಷ್ಟು ಜನ ಇದ್ದಾರೆ, ಆದರೆ ಜನರ ಬೇಡಿಕೆಗನುಗುಣವಾಗಿಯೇ ಅಪರೂಪದ ದೇಶಿ ದನಗಳನ್ನು ಸಾಕಿ, ಹೈನುಗಾರಿಕೆಯನ್ನು ನೆಚ್ಚಿಕೊಳ್ಳುವವರು ಬಹಳ ಅಪರೂಪ. ಆ ಅಪರೂಪದ ವ್ಯಕ್ತಿಗಳ ಪೈಕಿ ನಮ್ಮ ಜಿಲ್ಲೆಯಲ್ಲಿ ಕೇಳಿ ಬರುತ್ತಿರುವ ಯುವಕ ಹೈನ್ಯೋದ್ಯಮಿಯ ಹೆಸರು ನಿಶಾನ್ ಡಿ’ಸೋಜ. ವಿದೇಶದಲ್ಲಿ ಒಂದಷ್ಟು ಉದ್ಯೋಗ ಮಾಡಿ, ಇದೀಗ ಸ್ವಂತ ಊರಿನಲ್ಲೇ ಹೈನುಗಾರಿಕೆಯನ್ನು ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ನಿಶಾನ್ ಅನ್ನೋ ಬ್ರಹ್ಮಾವರದ ಯುವಕ, ಪಡುನೀಲಾವರದ ಬಾಯರ್ ಬೆಟ್ಟಿನಲ್ಲಿ ದೇಶೀಯ ಗೋವು […]
ಕಾಡನ್ನು ಉಳಿಸಿ ಬೆಳೆಸಿ ,ವನ್ಯಜೀವಿಗಳನ್ನು ಸಂರಕ್ಷಿಸಿ : ಇದು ಉಡುಪಿxpress ಕಾಳಜಿ

ಕಾರಿಗೆ ಸಿಕ್ಕ ಪ್ರಾಮುಖ್ಯತೆ ಕಾಡಿಗೆ ಸಿಗುತ್ತಿಲ್ಲ ನೂರಾರು ಎಕರೆ ಅರಣ್ಯ ಪ್ರದೇಶ ಬಂಡೀಪುರದಲ್ಲಿ ಕಾಳ್ಗಿಚ್ಚಿಗೆ ಬೂದಿಯಾಗಿದೆ. ಹಲವು ಜೀವ ಸಂಕುಲಗಳು ಅಪಾಯಕ್ಕೆ ಸಿಲುಕಿವೆ. ಆದರೆ ನಮಗೆ ಕಾರುಗಳು ಕಾಣುತ್ತಿವೆ ಹೊರತು, ಹಲವು ಜೀವ ಸಂಕುಲಗಳನ್ನು ಪೋಷಿಸುತ್ತಾ ನಮ್ಮನ್ನು ಪೊರೆಯುತ್ತಿರುವ ಕಾಡುಗಳು ಕಾಣುತ್ತಿಲ್ಲ. ಕಾಡನ್ನು ಉಳಿಸಿ ಬೆಳೆಸಿ ,ವನ್ಯಜೀವಿಗಳನ್ನು ಸಂರಕ್ಷಿಸಿ ಯಾರದ್ದೋ ನಿರ್ಲಕ್ಷವೊ,ಕಿಡಿಗೇಡಿಗಳ ಕೃತ್ಯವೋ ಒಟ್ಟಿನಲ್ಲಿ ಮುಗ್ಧ ಪ್ರಾಣಿಗಳು ಪಕ್ಷಿಗಳು ಮರಗಿಡಗಳು ಬೆಂಕಿಗಾಹುತಿ ಆಗಿವೆ. ಇದೇ ಪರಿಸ್ಥಿತಿ ಮನುಷ್ಯರಿಗೆ ಆಗುತ್ತಿದ್ದರೆ ಎಲ್ಲರೂ ನ್ಯಾಯ ಬೇಕು ಅಂತ ರಸ್ತೆಗಿಳಿಯುತಿದ್ದರು. ಆದರೆ ಮೂಕ […]
ಪದವೀಧರ ಯುವಕನ ಹೈನ್ಯೋದ್ಯಮ, ಬದುಕೀಗ ಘಮ ಘಮ: ಉಡುಪಿಯ ಯುವ ಕೃಷಿಕನ ಸಕ್ಸಸ್ ಸ್ಟೋರಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಮುಗಿದ ಬಳಿಕ ಯುವಕರು ಉದ್ಯೋಗ ಅರಸಿ ಮಹಾನಗರಿಯತ್ತ ಮುಖ ಮಾಡೋದು ಸಾಮಾನ್ಯ ,ಆದರೆ ಇಲ್ಲೊಬ್ಬ ಯುವಕ, ಹೈನುಗಾರಿಕೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸಿನಿಂದ ಹಸುಗಳ ಆರೈಕೆಯಲ್ಲಿಯೇ ತೊಡಗಿಕೊಂಡು ಬದುಕಿಗೊಂದು ದಾರಿ ಕಂಡುಕೊಂಡಿದ್ದಾರೆ. ಈ ಯುವಕನ ಕತೆ ಕೇಳಿ: ಹೈನುಗಾರಿಕೆಯೇ ನನ್ನ ಬದುಕಿಗೆ ದಾರಿಯಾಗಬಲ್ಲದು ಎನ್ನುವ ಸತ್ಯ ಅರಿವಾಗುತ್ತಿದ್ದಂತೆಯೇ ಈ ಯುವಕ ಹೈನುಗಾರಿಕೆ ಶುರುಮಾಡಿಯೇ ಬಿಡುತ್ತಾರೆ. ಹೈನುಗಾರಿಕೆ ಕನಸನ್ನು ನನಸು ಮಾಡಿದ ಯುವಕನೇ ಉಡುಪಿ ಜಿಲ್ಲೆಯ ಬಾರಾಳಿ ಗ್ರಾಮದ ಪ್ರತೀಶ್ ಶೆಟ್ಟಿ . ಕೆಲಸದಲ್ಲಿ […]