ಜೆಲ್ ಆವಿಷ್ಕಾರ : ಮಧುಮೇಹಿಗಳ ಗಾಯ 3 ಪಟ್ಟು ಬೇಗ ಗುಣಪಡಿಸುವ ಚಿಕಿತ್ಸೆ

ನವದೆಹಲಿ: ಮಧುಮೇಹಿಗಳ ಗಾಯವನ್ನು ಬೇಗನೆ ಗುಣಪಡಿಸುವ ಜೆಲ್ ಒಂದನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಅಂಗಛೇದನಗಳ ಪ್ರಮಾಣವನ್ನು ಈ ಜೆಲ್ ಕಡಿಮೆಗೊಳಿಸುವ ಭರವಸೆ ವ್ಯಕ್ತಪಡಿಸಲಾಗಿದೆ.ಈ ಜೆಲ್ ಗಾಯವನ್ನು ಬೇಗನೆ ಗುಣಪಡಿಸುವುದು ಮಾತ್ರವಲ್ಲದೆ ಗಾಯ ಮತ್ತೆ ಮರುಕಳಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.ಮಧುಮೇಹಿಗಳ ಗಾಯವನ್ನು ಬೇಗನೆ ಗುಣಪಡಿಸುವ ಚಿಕಿತ್ಸಾ ವಿಧಾನವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ವೈಜ್ಞಾನಿಕ ಜರ್ನಲ್ ಅಡ್ವಾನ್ಸಡ್ ಮೆಟೀರಿಯಲ್ಸ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮ್ಯಾಗ್ನೆಟಿಕ್ ಪ್ರಚೋದನೆಯೊಂದಿಗೆ ಸಂಯೋಜಿಸಲಾದ ಚಿಕಿತ್ಸೆಯು ಪ್ರಸ್ತುತ ಸಾಂಪ್ರದಾಯಿಕ ವಿಧಾನಗಳಿಗಿಂತ ಮೂರು ಪಟ್ಟು ವೇಗವಾಗಿ ಮಧುಮೇಹ ಗಾಯಗಳನ್ನು ಗುಣಪಡಿಸುತ್ತದೆ […]
ಇಸ್ರೋದಿಂದ ಮತ್ತೊಂದು ಮೈಲಿಗಲ್ಲು: ಗಗನಯಾನ ಪರೀಕ್ಷಾ ಹಾರಾಟ ಯಶಸ್ವಿ; ಬಂಗಾಳ ಕೊಲ್ಲಿಯಲ್ಲಿ ಲ್ಯಾಂಡಿಂಗ್

ಶ್ರೀಹರಿಕೋಟಾ: ಇಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಒಂದು ಮಾನವ ಸಹಿತ ಅಂತರಿಕ್ಷ ಪರೀಕ್ಷಾ ಹಾರಾಟದ ಸರಣಿಯಲ್ಲಿ ಮೊದಲನೆಯದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅದು ಭಾರತವನ್ನು ಸ್ವತಃ ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಬಹುದಾದ ದೇಶಗಳ ಸಣ್ಣ ವಿಶೇಷ ಪಟ್ಟಿಯಲ್ಲಿ ಸೇರಿಸುತ್ತದೆ. LAUNCH! ISRO's Gaganyaan test capsule launches on a single L40 booster, derived from the strap-on boosters used on the GSLV Mk. 2 rocket, to […]
7.30ಕ್ಕೆ ನೇರಪ್ರಸಾರ : ನಾಳೆ ಗಗನಯಾನದ ಮೊದಲ ಪರೀಕ್ಷಾರ್ಥ ಪ್ರಯೋಗ

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ (Gaganyaan) ಗಗನಯಾನ ಮಿಷನ್ ಅಕ್ಟೋಬರ್ 21 ರಿಂದ ಪ್ರಾರಂಭವಾಗುತ್ತಿದೆ.ಗಗನಯಾನದ ಮೊದಲ ಹಂತದ ಪ್ರಯೋಗಕ್ಕೆ ಇಸ್ರೋ ಮುಂದಾಗಿದೆ. ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದ ಉಡಾವಣಾ ಕೇಂದ್ರದಿಂದ ಶನಿವಾರ ಬೆಳಗ್ಗೆ 8 ಗಂಟೆಗೆ ರಾಕೆಟ್ ಉಡಾವಣೆಯಾಗಲಿದೆ. ಇದರ ನೇರಪ್ರಸಾರ ನಾಳೆ ಬೆಳಗ್ಗೆ 7.30ರಿಂದ ಪ್ರಾರಂಭವಾಗಲಿದೆ. ನಾಲ್ಕು ಪರೀಕ್ಷೆಗಳು: ಗಗನಯಾನ ಮಿಷನ್ನ ಮೊದಲ ಪರೀಕ್ಷಾ ಹಾರಾಟವು ಅಕ್ಟೋಬರ್ 21 ರಂದು ನಡೆಯಲಿದೆ. ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 ಎಂದು ಹೆಸರಿಸಲಾಗಿದೆ. ಇದಾದ ಬಳಿಕ ಎರಡನೇ ಪರೀಕ್ಷಾರ್ಥ ಹಾರಾಟ ಡಿ-2, […]
ಅಯೋಧ್ಯೆ ಭೂಮಿಪೂಜೆ : : 25 ಸಾವಿರ ಭಕ್ತರಿಗೆ ವಸತಿ, ಊಟೋಪಚಾರದ ವ್ಯವಸ್ಥೆ ಟೆಂಟ್ ಸಿಟಿ ನಿರ್ಮಾಣ

ಅಯೋಧ್ಯೆ (ಉತ್ತರ ಪ್ರದೇಶ): ಭಗವಾನ್ ಶ್ರೀರಾಮನ ನಗರ ಅಯೋಧ್ಯೆಯಲ್ಲಿ ಭವ್ಯ ಮಂದಿರ ಬಹುತೇಕ ಸಿದ್ಧವಾಗಿದೆ. 2024ರ ಜನವರಿಯಲ್ಲಿ ನಡೆಸಲು ಉದ್ದೇಶಿಸಿರುವ ಶ್ರೀರಾಮ ದೇವಾಲಯದ ಪ್ರಾಣ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಕ್ಕೆ ಸಕಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ.ಅಯೋಧ್ಯೆಯ ಮಹಾ ಮಂದಿರದ ಪ್ರಾಣಪ್ರತಿಷ್ಠಾ ಮಹೋತ್ಸವಕ್ಕೂ ಮುನ್ನ ಭಕ್ತರಿಗೆ ತಂಗಲು ಬೃಹತ್ ಟೆಂಟ್ ಸಿಟಿ ನಿರ್ಮಿಸಲಾಗುತ್ತಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಭಕ್ತರ ವಾಸ್ತವ್ಯ ಮತ್ತು ಸಂಚಾರಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತವಾಗಿದೆ. ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ವಕ್ತಾರ ಶರದ್ […]
ನಿರೀಕ್ಷೆ ಮೀರಿದ ಸಾಧನೆ : ಅರ್ಧ ಶತಕೋಟಿ ಕಂಪ್ಯೂಟರ್ಗಳಲ್ಲಿ ಓಡುತ್ತಿದೆ ವಿಂಡೋಸ್ 11 ಓಎಸ್

ನವದೆಹಲಿ: ಮೈಕ್ರೋಸಾಫ್ಟ್ನ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಪ್ರಸ್ತುತ 400 ದಶಲಕ್ಷಕ್ಕೂ ಹೆಚ್ಚು ಇನ್ಸ್ಟಾಲ್ ಆಗಿದ್ದು, 2024 ರ ಆರಂಭದಲ್ಲಿ ಈ ಸಂಖ್ಯೆ 500 ಮಿಲಿಯನ್ ತಲುಪುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ವಿಂಡೋಸ್ 11 ಈಗ ಸುಮಾರು ಅರ್ಧ ಶತಕೋಟಿ ಸಾಧನಗಳಲ್ಲಿ ಸಕ್ರಿಯವಾಗಿದೆ, ಇದು ಕಂಪನಿಯ ನಿರೀಕ್ಷೆಗಳಿಗಿಂತ ಹೆಚ್ಚಾಗಿದೆ ಎಂದು ಮೈಕ್ರೋಸಾಫ್ಟ್ ಆಂತರಿಕ ಡೇಟಾ ಉಲ್ಲೇಖಿಸಿ ವಿಂಡೋಸ್ ಸೆಂಟ್ರಲ್ ವರದಿ ಮಾಡಿದೆ.ವಿಂಡೋಸ್ 11 ಆಪರೇಟಿಂಗ್ ಸಿಸ್ಟಂ ವಿಶ್ವದ 400 ದಶಲಕ್ಷಕ್ಕೂ ಹೆಚ್ಚು ಕಂಪ್ಯೂಟರ್ಗಳಲ್ಲಿ ಇನ್ಸ್ಟಾಲ್ ಆಗಿದೆ. […]