ಬಸ್ಸಲ್ಲಿ ಸಿಕ್ಕ ಆ ಅಪರಿಚಿತ ಅಜ್ಜಿ ಬದುಕಿಗೆ ಸ್ಪೂರ್ತಿಯಾದರು: ಪ್ರತೀಕ್ಷಾ ಬರೆದ ಬರಹ

ಪ್ರತೀಕ್ಷಾ, ಬಿಎ ಪತ್ರಿಕೋದ್ಯಮ ವಿಭಾಗ ಎಂಪಿಎಂ ಕಾಲೇಜು ಕಾರ್ಕಳ ಅಜ್ಜಿ ಅಂದರೆ ಎಲ್ಲರಿಗೂ ತುಂಬಾ ಇಷ್ಟ. ಅಜ್ಜಿ ಜೊತೆಗಿರುವುದು, ಕಥೆ ಕೇಳುವುದು, ಆಟ ಆಡುವಾಡೋದು ಎಂದರೆ ಸಾಮಾನ್ಯವಾಗಿ ಎಲ್ಲಾ  ಮೊಮ್ಮಕ್ಕಳಿಗೂ ತುಂಬಾನೇ ಇಷ್ಟ. ಅಜ್ಜಿ ನೀಡುವ ಪ್ರೀತಿ ನಮಗೆ ಗೊತ್ತು. ಆದರೆ ನಂಗೊಮ್ಮೆ ಸಿಕ್ಕಿದ ಅಪರಿಚಿತ ಅಜ್ಜಿಯು ನೆನೆಪು ಈಗಲೂ ಆಗಾಗ ನನಗೆ ಕಾಡುತ್ತಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಆಕಸ್ಮಿಕವಾಗಿ ವ್ಯಕ್ತಿಗಳು ಎದುರಾಗುತ್ತಾರೆ, ಹಾಗೆ ಎದುರಾದಾಗ ನಗುಮೊಗದಿಂದಲೇ ಆ ವ್ಯಕ್ತಿಗಳು ಕಾಡಿ ನಮ್ಮ ಜೊತೆಗೆ ಮಾತಾಡಿ ಹೇಗೋ ಪರಿಚಯವಾಗಿಬಿಡುತ್ತಾರೆ. […]

ದಟ್ಟ ಕಾಡಿನಲ್ಲಿ “ಗೊರಂಕ್’ ಎಂಬ ಶಬ್ಧ ಕೇಳಿದಾಗ: ಸಂದೇಶ್ ಸಾಲ್ಯಾನ್ ಬರೆದ ಹಂಟಿಂಗ್ ಪ್ರಸಂಗ

ಶಿಕಾರಿಗೆ ಹೊರಟವರನ್ನು ನೋಡುವಾಗ ನನಗೆ ಅದೆಂಥದೋ ಖುಷಿ-ಕುತೂಹಲ. ಕೇಪಿನ ಕೋವಿಯ ನಳಿಕೆಗೆ ತೆಂಗಿನ ಒಣಸಿಪ್ಪೆಯ ನಾರಿನ ಜತೆಗೆ ಗುಂಡುಗಳನ್ನು ತುಂಬಿ ಕಬ್ಬಿಣದ ಸರಳಿನಿಂದ ಒಳಗೆ ತಳ್ಳುವ ಪ್ರಕ್ರಿಯೆಯಲ್ಲಿ ಬೇಟೆಗಾರನಲ್ಲಿ ಕಂಡುಬರುವ ತನ್ಮಯತೆ ಬಹಳ ಸುಂದರವಾಗಿರುತ್ತದೆ. ಭರ್ಜರಿ ಊಟದ ಬಳಿಕ ತಾಂಬೂಲ ಹಾಕಿಕೊಳ್ಳುವವರ ಹಾಗೆ. ಸಾಮಾನ್ಯವಾಗಿ ಬೇಟೆಗಾರರು ಬೇರೆಯವರ ಕೈಗೆ ತಮ್ಮ ಕೋವಿಯನ್ನು ಕೊಡುವುದಿಲ್ಲ. ಆದರೂ ನನ್ನ ಕುತೂಹಲ ನೋಡಿ ನನ್ನ ಪರಿಚಯಸ್ಥರೊಬ್ಬರು ನನ್ನ ಕೈಗೆ ಖಾಲಿ ಕೋವಿ ಕೊಟ್ಟಿದ್ದರು. ಬಹಳ ಖುಷಿಯಿಂದ ಎತ್ತಿಕೊಂಡು, ಸುಮ್ಮನೆ ಒಂದೆಡೆ ಗುರಿ […]

ಕ್ಯಾನ್ಸರ್ ಗೆದ್ದ ಹುಡುಗಿಯ ಈ ಕತೆ ನಿಮಗೂ ಸ್ಪೂರ್ತಿಯಾಗಬಹುದು!:ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಬರಹ

ಸಾಮಾಜಿಕ ಜಾಲತಾಣದಲ್ಲಿ ಸುಮ್ಮನೆ ಕಾಲಹರಣಕ್ಕೆ ಕಣ್ಣಾಡಿಸುತ್ತಿದ್ದಾಗ ಅರುಣಿಮಾ ಅಂತ ಕ್ಯಾನ್ಸರಿಗೆ ಸವಾಲೆಸೆದ ಹುಡುಗಿಯ ಜೀವನ ಪ್ರೀತಿಯ ಬಗ್ಗೆ ಓದಿದೆ ಆಗ ಅಕಸ್ಮಾತಾಗಿ ನನ್ನ ಕಣ್ಣು ಅಲ್ಲೇ ಹತ್ತಿರದಲ್ಲೇ ಬರೆದಿದ್ದ ಮತ್ತೊಂದು ಲೇಖನದ ಮೇಲೆ ಬಿಟ್ಟು ಅದುವೇ “ಕ್ಯಾನ್ಸರ್ ಎಂಬ ಯಮನಿಗೆ ಸಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿ” ಅಂತ ತೃಪ್ತಿ ಹೆಗ್ಡೆ ಅನ್ನೋರು ಬರೆದ ಲೇಖನ ಅದನ್ನು ಓದುತ್ತ ಸಾಗಿದ ಹಾಗೆ “ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ” ಅನ್ನೋ ಪುಸ್ತಕದ ಬಗ್ಗೆ ತಿಳಿಯಿತು ಕುತೂಹಲ ಬೆಳೆಯಿತು. […]

ಊದುಬತ್ತಿ-ಮತಾಪು: ಉಪಯೋಗ ಮತ್ತು ಉಪದ್ರವಗಳೇನು ಗೊತ್ತಾ?ಒಮ್ಮೆ ಓದಿ ಉದಯ ಶೆಟ್ಟಿ ಬರೆದ ಬರಹ

ಭಾರತೀಯರಾದ ನಾವು ನಮ್ಮ ನಂಬಿಕೆಗಳ ಆಚರಣೆಗಾಗಿ ಕೆಲವೊಂದು ವಸ್ತುಗಳನ್ನು ಅವ್ಯಾಹತವಾಗಿ ಉಪಯೋಗಿಸಿಕೊಂಡು ಬರುತ್ತಿದ್ದೇವೆ. ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದರು ಎಂಬ ಒಂದೇ ಕಾರಣಕ್ಕಾಗಿ ಆ ವಸ್ತುಗಳನ್ನು ಅವರಿಗಿಂತ ಹೆಚ್ಚಾಗಿ ಉಪಯೋಗಿಸುತ್ತೇವೆ. ಆ ವಸ್ತುಗಳನ್ನು ಬಳಸುವುದರಿಂದ ಆಗುವ ಉಪಯೋಗಕ್ಕಿಂತ ಉಪದ್ರವಗಳೇ ಅಧಿಕ. ಸನಾತನಿಗಳಾದ ನಮ್ಮ ಪೂಜೆ, ಪುನಸ್ಕಾರ, ಹಬ್ಬ ಹರಿದಿನಗಳಲ್ಲಿ ಉಪಯೋಗಿಸಲ್ಪಡುವ ಊದುಕಡ್ಡಿ (ಅಗರಬತ್ತಿ)ಗಳ ಉಪಯೋಗ ಮತ್ತು ಅವುಗಳಿಂದಾಗುವ ಉಪದ್ರವಗಳ ಬಗ್ಗೆ ತಾರ್ಕಿಕವಾಗಿ ನಮ್ಮನ್ನು ನಾವು ವಿಶ್ಲೇಷಣೆಗೆ ಒಳಪಡಿಸಿಕೊಳ್ಳಬೇಕಾದ ಕಾಲವಿದು. ಊದುಬತ್ತಿ : ಊದುಬತ್ತಿಯು ತನ್ನನ್ನು ತಾನು ಉರಿಸಿಕೊಂಡು ಸುತ್ತಲ […]

ಒಮ್ಮೆ ನಿಮ್ಮ ನೆನಪಿನ ಜೋಳಿಗೆ ಬಿಚ್ಚಿ,ಪಾಠ ಕಲಿಸಿದ ಗುರುವನ್ನು ಮನಸಾರೆ ನಮಿಸಿ:

ಅಮ್ಮನ ಅಪ್ಪುಗೆಯಿಂದ, ಅಪ್ಪನ ಅಕ್ಕರೆಯಿಂದ ಮಗು ಮುಂದಡಿ ಇಡುವುದು ತನ್ನ ಸುಂದರ ಭವಿಷ್ಯವನ್ನ ರೂಪಿಸುವ ವಿದ್ಯಾಮಂದಿರದತ್ತ. ತಂದೆ -ತಾಯಿ, ಬಂಧು-ಬಳಗದ ಕಾಳಜಿಯಲ್ಲಿ ಬೆಳದ ಮಗು, ಅಕ್ಷರಾಭ್ಯಾಸದ ಗುರಿಯಿಟ್ಟು ವಿದ್ಯಾಮಂದಿರಕ್ಕೆ ಕಾಲಿಟ್ಟಾಗ ಅದೇ ಅಕ್ಕರೆ ಆಪ್ತತೆಯಲ್ಲಿ, ಕಾಳಜಿಯಲ್ಲಿ ಕೈ ಹಿಡಿದು ಒಳ ಕರೆದು ಅದೇ ಸಲುಗೆ ಪ್ರೀತಿಯಲ್ಲಿ ಅಕ್ಕರೆ ಜೊತೆಗೆ ಅಕ್ಷರವ ಕಲಿಸಿ, ಅತ್ತಾಗ ಕಣ್ಣೋರೆಸಿ, ಮಾತು ತಪ್ಪಿದಾಗ ಗದರಿಸಿ, ನಮ್ಮೆಲ್ಲ ಬೇಕು ಬೇಡಗಳ ಜೊತೆಗೆ ಒಂದಿಷ್ಟು ಸಂಸ್ಕಾರ,ಶಿಸ್ತು, ಸಾಮಾಜಿಕ ಕಳಕಳಿ, ನೈತಿಕ ಮೌಲ್ಯವನ್ನ ನಮ್ಮೊಳಗೇ ಹುಟ್ಟುಹಾಕುವವರು ನಮ್ಮ […]