ನಿಮ್ಮ ಮನೆಯಲ್ಲಿರಲಿ ಈ ಒಂದು ಪವರ್ ಫುಲ್ ಗಿಡ: ಮಧುಮೇಹಕ್ಕೆ ಮಾತ್ರವಲ್ಲ, ಹಲವು ಆರೋಗ್ಯ ಸಮಸ್ಯೆಗಳಿಗೂ ಈ ಗಿಡ ರಾಮಬಾಣ!

ಇತ್ತೀಚಿನ ದಿನಗಳಲ್ಲಿ ಮಧುಮೇಹ (ಡಯಾಬಿಟಿಸ್) ವಯಸ್ಸಿನ ಭೇದವಿಲ್ಲದೆ ಹೆಚ್ಚಾಗುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಮುಖ್ಯವಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಒಂದು ಗಿಡ ನಿಮಗೆ ತುಂಬಾ ಸಹಕಾರಿ. ಈ ಗಿಡದ ಹೆಸರೇ “ಇನ್ಸುಲಿನ್ ಗಿಡ” ಅಥವಾ “ಸಕ್ಕರೆ ಗಿಡ” (Costus igneus) ಬನ್ನಿ ಇದರ ಕುರಿತು ತಿಳಿದುಕೊಳ್ಳೋಣ. ಇನ್ಸುಲಿನ್ ಗಿಡ: ಇನ್ಸುಲಿನ್ ಗಿಡ (Costus igneus) ಒಂದು ಔಷಧೀಯ ಸಸ್ಯವಾಗಿದೆ. ಇದರ ಎಲೆಗಳು ಅಗಲವಾದ ತಿಳಿ ಹಸಿರು ಬಣ್ಣದಲ್ಲಿದ್ದು, ಸಣ್ಣ ಕೆಂಪು ಅಥವಾ ಕಿತ್ತಳೆ ಬಣ್ಣದ ಹೂವುಗಳನ್ನು ಬಿಡುತ್ತದೆ. ಆಯುರ್ವೇದ […]
ಮನೆಯಲ್ಲಿ ಚಿನ್ನ ಇಟ್ಟಿದ್ದೀರಾ? ಇನ್ನು ಬಡ್ಡಿಯೂ ಸಿಗಲಿದೆ! ಕೇಂದ್ರದ ಹೊಸ ‘ಗೋಲ್ಡ್ ಮಾನಿಟೈಸೇಷನ್’ ಯೋಜನೆ ಏನು?

ಮನೆಯಲ್ಲಿರುವ ಹಳೆಯ ಚಿನ್ನವನ್ನು ಮಾರದೇ, ಲಾಕರ್ನಲ್ಲಿ ಇಡದೇ ಅದರಿಂದಲೇ ಆದಾಯ ಗಳಿಸುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಲು ಮುಂದಾಗಿದೆ. ‘ಚಿನ್ನ ನಗದೀಕರಣ ಯೋಜನೆ’ (Gold Monetisation Scheme)ಗೆ ಹೊಸ ರೂಪ ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ. ದೇಶದಲ್ಲಿ ಚಿನ್ನದ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಭಾರತೀಯರ ಮನೆಗಳಲ್ಲಿ ಅಪಾರ ಪ್ರಮಾಣದ ಚಿನ್ನ ಬಳಕೆಯಾಗದೆ ಉಳಿದಿದ್ದು, ಅದರ ಒಂದು ಭಾಗವನ್ನು ಆರ್ಥಿಕ ಚಟುವಟಿಕೆಗೆ ತರಲು ಸರ್ಕಾರ […]
ಕಾಲ್ನಡಿಗೆಯಲ್ಲೇ 3,550 ಮೆಟ್ಟಿಲೇರಿ ಹರಕೆ ಪೂರೈಸಿದ 116 ವರ್ಷದ ಲಕ್ಷ್ಮವ್ವ: ಕರ್ನಾಟಕದ ಈ ಛಲಗಾತಿ ಅಜ್ಜಿಯ ಸಾಹಸಕ್ಕೆ ಬೆರಗಾದ ಭಕ್ತರು

ತಿರುಪತಿ: ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಕರ್ನಾಟಕ ಮೂಲದ ಶತಾಯುಷಿ ವೃದ್ಧೆ ಲಕ್ಷ್ಮವ್ವ ಅವರು ತಮ್ಮ ಅಪರೂಪದ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. ಕುಟುಂಬ ಸದಸ್ಯರೊಂದಿಗೆ ತಿರುಮಲಕ್ಕೆ ಆಗಮಿಸಿದ ಅವರು, ಅಲಿಪಿರಿ ಮಾರ್ಗದ ಸುಮಾರು 3,550 ಮೆಟ್ಟಿಲುಗಳನ್ನು ಏರಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ತಲುಪಿರುವುದು ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ. ಸ್ಥಳೀಯವಾಗಿ ಭೀಮವ್ವ ಎಂದೂ ಕರೆಯಲ್ಪಡುವ ಲಕ್ಷ್ಮವ್ವ ಅವರಿಗೆ ಕುಟುಂಬಸ್ಥರ ಮಾಹಿತಿ ಪ್ರಕಾರ 116 ವರ್ಷ ವಯಸ್ಸಾಗಿದೆ. ಅವರ ಅಧಿಕೃತ ವಯಸ್ಸಿನ ದಾಖಲೆಗಳು ಲಭ್ಯವಾಗದಿದ್ದರೂ, ಶತಾಯುಷಿಯಾಗಿರುವುದು ವಿಡಿಯೊಗಳಲ್ಲಿ […]
ಇಂದು ರಾಷ್ಟ್ರೀಯ ವೈದ್ಯರ ದಿನ: ವೈದ್ಯರ ಸೇವೆಗೆ ಗೌರವ ಸಲ್ಲಿಸುವ ವಿಶೇಷ ದಿನವಿದು!

ಆರೋಗ್ಯವೇ ಮಹಾಭಾಗ್ಯ ಎಂಬ ಮಾತು ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ. ಆರೋಗ್ಯವನ್ನು ಕಾಪಾಡುವುದು, ಅನಾರೋಗ್ಯಕ್ಕೆ ಚಿಕಿತ್ಸೆ ನೀಡಿ ರೋಗಿಯನ್ನು ಗುಣಪಡಿಸುವುದು ವೈದ್ಯರ ಪ್ರಮುಖ ಕರ್ತವ್ಯವಾಗಿದೆ. ಜೀವ ಉಳಿಸಿ ಹೊಸ ಬದುಕು ನೀಡುವ ವೈದ್ಯರನ್ನು “ವೈದ್ಯೋ ನಾರಾಯಣೋ ಹರಿ” ಎಂದು ಗೌರವಿಸುವ ಸಂಪ್ರದಾಯ ಭಾರತದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ವೈದ್ಯರ ಈ ಅಮೂಲ್ಯ ಸೇವೆಯನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಮೊದಲ […]
2030 ರ ವೇಳೆಗೆ ಪ್ರತಿ 9-10 ಭಾರತೀಯರಲ್ಲಿ ಒಬ್ಬರಿಗೆ ಕ್ಯಾನ್ಸರ್, ಶಾಕಿಂಗ್ ವರದಿಯಿದು: ಕ್ಯಾನ್ಸರ್ ತಡೆಗಟ್ಟಲು ನೀವು ಕೈಗೊಳ್ಳಲೇಬೇಕಾದ ಕ್ರಮಗಳೇನು?

ನವದೆಹಲಿ: ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಜ್ಞರ ವರದಿಗಳ ಪ್ರಕಾರ, 2030ರ ವೇಳೆಗೆ ಪ್ರತಿ 9 ರಿಂದ 10 ಭಾರತೀಯರಲ್ಲಿ ಒಬ್ಬರಿಗೆ ಕ್ಯಾನ್ಸರ್ ಬರುವ ಅಪಾಯ ಎದುರಾಗುವ ಸಾಧ್ಯತೆಯಿದೆ.ಇದೊಂದು ಶಾಕಿಂಗ್ ಸುದ್ದಿ. ತಜ್ಞರ ಪ್ರಕಾರ, ವಯಸ್ಸಾದ ಜನಸಂಖ್ಯೆಯ ಹೆಚ್ಚಳ, ಬದಲಾಗುತ್ತಿರುವ ಜೀವನಶೈಲಿ, ಪರಿಸರ ಮಾಲಿನ್ಯ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಮಾನಸಿಕ ಒತ್ತಡ ಕ್ಯಾನ್ಸರ್ ಪ್ರಕರಣಗಳು ಹೆಚ್ಚಲು […]