ಉಡುಪಿ: ಕೋವಿಡ್ ನಿಯಮ ಉಲ್ಲಂಘಿಸಿದ ನಾಲ್ಕು ಅಂಗಡಿಗಳಿಗೆ ತಲಾ ₹5 ಸಾವಿರ ದಂಡ ವಿಧಿಸಿದ ಡಿಸಿ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸ್ವತಃ ದಿಢೀರ್ ಆಗಿ ಕಾರ್ಯಾಚರಣೆಗೆ ಇಳಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಕೋವಿಡ್ ನಿಯಮ ಉಲ್ಲಂಘಿಸಿದ ನಗರದ ನಾಲ್ಕು ಅಂಗಡಿಗಳಿಗೆ ತಲಾ ₹5 ಸಾವಿರ ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ಅಲ್ಲದೆ, ಕೋವಿಡ್ ನಿಯಮ ಉಲ್ಲಂಘಿಸುವವರಿಗೆ ಯಾವುದೇ ಕಾರಣಕ್ಕೂ ಕ್ಷಮೆ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆಕೊಟ್ಟರು. ಕೋವಿಡ್ ನಿಯಮಗಳನ್ನು ಜನರು ಸರಿಯಾಗಿ ಪಾಲಿಸಿದರೆ, ಯಾವುದೇ ಲಾಕ್ ಡೌನ್ ಮಾಡುವ ಅನಿವಾರ್ಯತೆ ಎದುರಾಗುವುದಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರ […]

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಉಡುಪಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಗ್ರಾಮ ಪಂಚಾಯತ್ ವ್ಯಾಪ್ತಿ, ನಗರಸಭೆ ವ್ಯಾಪ್ತಿ ಮತ್ತು ಪುರಸಭೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಾದ ಕಳತ್ತೂರು, ಕುದಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಹಾಗೂ ಅಂಗನವಾಡಿ ಕೇಂದ್ರಗಳಾದ ಕೊಡಿಬೆಟ್ಟು, ಪೆರ್ಣಂಕಿಲ, ರಾಣ್ಯಕೇರಿ, ಹೇರೂರು, ಕೊಳ, ಕಳತ್ತೂರು, ದುಗ್ಲಿ ಪದವು, ಬೈಲೂರು, ಕೋಟೆಪಟ್ನ ಅಂಗನವಾಡಿ ಕೇಂದ್ರಗಳ ಸಹಾಯಕಿ ಹುದ್ದೆಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 35 ವರ್ಷದೊಳಗಿನ ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಅಭ್ಯರ್ಥಿಗಳು ಕಾರ್ಯಕರ್ತೆ ಹುದ್ದೆಗೆ ಮತ್ತು ಸಹಾಯಕಿಯರ ಹುದ್ದೆಗೆ ಕನಿಷ್ಠ […]

ನೀವು ರಾತ್ರಿ ಮೊಬೈಲ್ ನೋಡ್ತಾ ನೋಡ್ತಾ ಮಲಗುವವರಾ?ಹಾಗಿದ್ರೆ ಸ್ವಲ್ಪ ಕೇಳಿ!

ರಾತ್ರಿ ಇಡೀ ಮೊಬೈಲ್ ನೋಡ್ತಾ ನೋಡ್ತಾ ಮಲಗುವವರೇ ಜಾಸ್ತಿ. ಸ್ವಲ್ಪ ಸಮಯ ಸಿಕ್ಕಿದರೂ ನಾವು ಬೇರೇನೂ ಕೆಲಸ ಮಾಡುವುದಿಲ್ಲ ಆದರೆ ಮೊಬೈಲ್ ಹಿಡಿದು ಏನೇನೋ ನೋಡ್ತಾ ಇರುತ್ತೇವೆ. ಎಷ್ಟೆಂದರೆ ಮೊಬೈಲ್ ನೋಡ್ತಾ ನೋಡ್ತಾ ನಾವು ಹಿಂದೆಲ್ಲಾ ರಾತ್ರಿ ನೋಡುತ್ತಿರುವ ಆಕಾಶ, ನಕ್ಷತ್ರ ಇವುಗಳನ್ನೆಲ್ಲಾ ಈಗ ನೋಡುವುದನ್ನೇ ಮರೆತು ಬರೀ ಮೊಬೈಲ್ ನೋಡುವುದರಲ್ಲೇ ತಲ್ಲೀನರಾಗುತ್ತಿದ್ದೇವೆ. ಆದರೆ ರಾತ್ರಿ ಮೊಬೈಲ್ ನೋಡ್ತಾ ನೋಡ್ತಾ ನಿದ್ದೆ ಜಾರುವುದು ಅಪಾಯಕಾರಿ. ನಿಮಗೂ ಮಲಗುವ  ಮುನ್ನ ಮೊಬೈಲ್ ನೋಡಿಕೊಂಡು ಮಲಗುವ ಕೆಟ್ಟ ಅಭ್ಯಾಸವಿದ್ದರೆ ಈ […]

ಮೊದಲ ಏಕದಿನ ಪಂದ್ಯ: ಇಂಗ್ಲೆಂಡ್ ಗೆ 318 ರನ್‌ ಗುರಿ ನೀಡಿದ ಭಾರತ

ಪುಣೆ: ಕನ್ನಡಿಗ ಕೆ.ಎಲ್.‌ ರಾಹುಲ್‌ ಮತ್ತು ಪದಾರ್ಪಣೆ ಪಂದ್ಯವಾಡುತ್ತಿರುವ ಕೃಣಾಲ್‌ ಪಾಂಡ್ಯ ಅವರು ಕೊನೆಯ ಹಂತದಲ್ಲಿ ತೋರಿದ ಬ್ಯಾಟಿಂಗ್ ಪ್ರದರ್ಶನದಿಂದ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 318 ರನ್‌ ಪೇರಿಸಿತು. ಆರಂಭಿಕರಾದ ಉಪನಾಯಕ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 15.1 ಓವರ್‌ಗಳಲ್ಲಿ 64 ರನ್‌ಗಳ ಜೊತೆಯಾಟವಾಡಿತು. ರೋಹಿತ್‌ (28) ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದ ನಾಯಕ ವಿರಾಟ್‌ ಕೊಹ್ಲಿ […]

ಹಿರಿಯಡಕ: ಖಾಸಗಿ ಬಸ್ ಗೆ ಬೈಕ್ ಡಿಕ್ಕಿ; ಸವಾರ ಮೃತ್ಯು

ಹಿರಿಯಡಕ: ಅಜೆಕಾರಿನಿಂದ ಉಡುಪಿಗೆ ಹೋಗುತ್ತಿದ್ದ ಎಸ್ ವಿಟಿ ಖಾಸಗಿ ಬಸ್ ಗೆ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಸಹಸವಾರೆ ಗಾಯಗೊಂಡ ಘಟನೆ ಹಿರಿಯಡಕ ಸಮೀಪದ ಪುತ್ತಿಗೆ ರಾಷ್ಟ್ರೀಯ ಹೆದ್ದಾರಿ 169ಎ ಇಳಿಜಾರು ರಸ್ತೆಯಲ್ಲಿ ಸೋಮವಾರ ಸಂಜೆ ವೇಳೆ ಸಂಭವಿಸಿದೆ. ಮೃತ ಬೈಕ್ ಸವಾರನನ್ನು ಶರಣ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಸಹಸವಾರೆಯನ್ನು ಉಷಾ ಎಂದು ಗುರುತಿಸಲಾಗಿದೆ. ಬಸ್ ಅಜೆಕಾರಿನಿಂದ ಪ್ರಯಾಣಿಕರನ್ನು ತುಂಬಿಸಿಕೊಂಡು ಉಡುಪಿ ಕಡೆಗೆ ಹೊರಟಿದ್ದು, ಈ ವೇಳೆ ಪುತ್ತಿಗೆ ಸಮೀಪ ಬರುವಾಗ ಹಿರಿಯಡಕ ಕಡೆಯಿಂದ […]