ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವಕಾಶದ ಬಾಗಿಲು ತೆರೆದಿದೆ ಕುಂದಾಪುರದ ಶಿಕ್ಷ ಪ್ರಭಾ ಅಕಾಡೆಮಿ

ಕುಂದಾಪುರ: ಇಲ್ಲಿನ ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ ಕ್ಲಿನಿಕ್ ಬಿಲ್ಡಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ( ಸ್ಪೇಸ್) ಸಂಸ್ಥೆಯ ವೃತ್ತಿಪರ ಕೋರ್ಸುಗಳನ್ನು ಮಾಡಲು ಇಚ್ಚಿಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಡಲಾಗುತ್ತದೆ. 2019-20ನೇ ಸಾಲಿನ ಸಿಎ/ಸಿಎಸ್/ಸಿಎಂಎ ಮತ್ತು ಬ್ಯಾಂಕಿಂಗ್ ತರಗತಿ ಸಂಸ್ಥೆಯು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಶನ್ ಹಾಗೂ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದೆ. ಸಂಸ್ಥೆಯ ತರಬೇತಿದಾರರಿಂದ ತರಬೇತಿ […]

ನಾಗಮಂಗಲದ ಕೊರೊನಾ ಸೋಂಕಿತನಿಂದ ಉಡುಪಿಯ ಜನತೆಯೂ ಬೆಚ್ಚಿಬೀಳುವಂತಾಗಿದೆ.!

ಉಡುಪಿ: ನಾಗಮಂಗಲ ತಾಲ್ಲೂಕಿನಲ್ಲಿ ಇಂದು ಓರ್ವ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಆತನ ಟ್ರವಲ್ ಹಿಸ್ಟರಿಯಿಂದ ಉಡುಪಿಯ ಜನತೆಯೂ ಬೆಚ್ಚಿಬೀಳುವಂತಾಗಿದೆ. ಈತ ಲಾಕ್ ಡೌನ್ ಮಧ್ಯೆಯೇ ಮುಂಬೈನಿಂದ ಮಂಡ್ಯಕ್ಕೆ ಅಕ್ರಮವಾಗಿ ಬಂದಿದ್ದು, ಇದೀಗ ಆತನಲ್ಲಿ ಸೋಂಕು ಕಾಣಿಸಿಕೊಂಡಿದೆ. ಈತನು ಮುಂಬೈಯಲ್ಲಿ ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಏಪ್ರಿಲ್ 22ರಂದು ನಾಗಮಂಗಲಕ್ಕೆ ಬಂದಿದ್ದಾನೆ. ಏಪ್ರಿಲ್ 24ರಂದು ಪರೀಕ್ಷೆ ಮಾಡಲಾಗಿದ್ದು, ಇಂದು ಆತನಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಸೋಂಕಿತ ಮುಂಬೈಯಿಂದ ಖರ್ಜೂರ ಸಾಗಿಸುವ ಕ್ಯಾಂಟರ್ ನಲ್ಲಿ ಪ್ರಯಾಣ […]

ಉಡುಪಿಗೆ ಬಂತು ಭಯಾನಕ ಕೊರೋನಾ ವೇಷ: ಇದು ಕೊರೋನಾ ಜಾಗೃತಿ ಸಂದೇಶ

ಉಡುಪಿ:  ನಗರದ ಮಾರುಥಿ ವಿಥೀಕಾ ರಸ್ತೆಯಲ್ಲಿ ಸೋಮವಾರ ಭಯಾನಕ ರೂಪದ ವೇಷಧಾರಿಯೊರ್ವರು ಕಂಡು ಬಂದು ಅಚ್ಚರಿ ಮೂಡಿಸಿದರು. ಕೊರೊನಾ  ನಿಷೇಧಾಜ್ಞೆ ಕರ್ಫ್ಯೂ ಸಡಿಲಿಕೆಯ ಸಮಯದಲ್ಲಿ ಕಂಡು ಬಂದ ಭಯಾನಕ ವೇಷ ಇದು. ದಿನಸಿ ಸಮಾಗ್ರಿ ಇನ್ನಿತರ ಸಾಮಾಗ್ರಿಗಳ ಖರಿಧಿಸಲು ಬಂದಿರುವ ಗ್ರಾಹಕರು ಒಮ್ಮೆಗೆ ವೇಷವನ್ನು ಕಂಡು ಭೀತಿಗೆ ಒಳಗಾದರು. ಇಂತಹ ವೇಷಗಳು ಉಡುಪಿಯಲ್ಲಿ ಅಷ್ಟಮಿಯ ಸಂದರ್ಭಗಳಲ್ಲಿ ಕಂಡುಬರುವುದು ಸಾಮಾನ್ಯ. ಅಷ್ಟಮಿ ಅಲ್ಲದ ಸಂದರ್ಭದಲ್ಲಿ ಕಂಡು ಬಂದ ವೇಷಾಧಾರಿ ಯಾರು..? ಯಾಕೆ ಈ ವೇಷದ ಪ್ರದರ್ಶನ..? ಎಂದು ಜನರು […]

ಕರ್ನಾಟಕದಲ್ಲಿ ಮೇ 15ರ ವರೆಗೆ ಮದ್ಯ ಸಿಗುವುದು ಡೌಟ್.?: ಎಣ್ಣೆ ಪ್ರಿಯರಿಗೆ ನಿರಾಸೆ

ಉಡುಪಿ: ಇಂದು ನಡೆದ ಪ್ರಧಾನಿ ನರೇಂದ್ರ ಮೋದಿ ಜತೆಗಿನ ಸಿಎಂಗಳ ಸಭೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಕರ್ನಾಟಕ ರಾಜ್ಯದಲ್ಲಿ ಮೇ 15 ರ ವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದೆಂದು ಮನವಿ ಮಾಡಿದ್ದಾರೆ. ಸಿಎಂ ಮನವಿ ಹಿನ್ನೆಲೆಯಲ್ಲಿ ಮೇ 15 ರ ವರೆಗೆ ಮದ್ಯ  ಸಿಗುವುದು ಡೌಟ್ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪ್ರಧಾನಿ ಕೂಡ ಯಡಿಯೂರಪ್ಪನವರ ಮನವಿಗೆ ಸಹಮತ ಸೂಚಿಸಿದರೆ, ಮೇ 15 ರ ವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಇದು ಕರ್ನಾಟಕದಲ್ಲಿ ಎಣ್ಣೆ […]

ಮಂಗಳೂರು ನಗರಕ್ಕೂ ವಕ್ಕರಿಸಿತು ಕೊರೋನಾ ಹೆಮ್ಮಾರಿ: ಇಬ್ಬರಿಗೆ ಕೊರೋನಾ ಸೋಂಕು ದೃಡ

ಮಂಗಳೂರು: ಇದೀಗ ಮಂಗಳೂರು ನಗರಕ್ಕೂ ಕೊರೋನಾ ಮಹಾಮಾರಿ ವಕ್ಕರಿಸಿದದ್ದು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿದ್ದ ಇಬ್ಬರಿಗೆ ಕೊರೋನಾ ಪಾಸಿಟಿವ್ ದಾಖಲಾಗಿದೆ. 80 ವರ್ಷದ ತಾಯಿ‌ ಮತ್ತು 45 ವರ್ಷದ ಮಗನಲ್ಲಿ  ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಪಡೀಲ್ ಬಳಿಯ ಆಸ್ಪತ್ರೆ ಆಸ್ಪತ್ರೆಯಲ್ಲಿ ರೋಗಿಯಾಗಿದ್ದ ತಾಯಿ ಮತ್ತು ಆಕೆಯ ಆರೈಕೆಗೆ ಇದ್ದ ಮಗನಿಗೆ ಪಾಸಿಟಿವ್ ದೃಢಪಟ್ಟಿದೆ. ಇವರು  ಮಂಗಳೂರಿನ ಕುಲಶೇಖರ ಎಂಬಲ್ಲಿನ ನಿವಾಸಿಗಳು ಎನ್ನಲಾಗಿದೆ.ಈ ರೋಗಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೃತಪಟ್ಟ ವೃದ್ದೆಯ ಪಕ್ಕದ ಬೆಡ್ […]