ಕರ್ನಾಟಕದಲ್ಲಿ ಮೇ 15ರ ವರೆಗೆ ಮದ್ಯ ಸಿಗುವುದು ಡೌಟ್.?: ಎಣ್ಣೆ ಪ್ರಿಯರಿಗೆ ನಿರಾಸೆ

ಉಡುಪಿ: ಇಂದು ನಡೆದ ಪ್ರಧಾನಿ ನರೇಂದ್ರ ಮೋದಿ ಜತೆಗಿನ ಸಿಎಂಗಳ ಸಭೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಕರ್ನಾಟಕ ರಾಜ್ಯದಲ್ಲಿ ಮೇ 15 ರ ವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದೆಂದು ಮನವಿ ಮಾಡಿದ್ದಾರೆ.
ಸಿಎಂ ಮನವಿ ಹಿನ್ನೆಲೆಯಲ್ಲಿ ಮೇ 15 ರ ವರೆಗೆ ಮದ್ಯ  ಸಿಗುವುದು ಡೌಟ್ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಪ್ರಧಾನಿ ಕೂಡ ಯಡಿಯೂರಪ್ಪನವರ ಮನವಿಗೆ ಸಹಮತ ಸೂಚಿಸಿದರೆ, ಮೇ 15 ರ ವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಇದು ಕರ್ನಾಟಕದಲ್ಲಿ ಎಣ್ಣೆ ಪ್ರಿಯರಿಗೆ ನಿರಾಸೆಯನ್ನುಂಟು ಮಾಡಿದೆ.