ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಫೆಲೋಶಿಪ್

ಉಡುಪಿ : 2019-20ನೇ ಸಾಲಿನಲ್ಲಿ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ) ಸಮುದಾಯದ ಭಾರತ/ ಕರ್ನಾಟಕ ರಾಜ್ಯದ ಶಾಸನಬದ್ಧ ಅಂಗೀಕೃತವಾದ ವಿಶ್ವವಿದ್ಯಾಲಯಗಳಲ್ಲಿ ಪೂರ್ಣಕಾಲಿಕವಾಗಿ ಎಂ.ಫಿಲ್ ಮತ್ತು ಪಿ.ಎಚ್.ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ ಫೆಲೋಶಿಪ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.     ಎಂ.ಫಿಲ್ ಮತ್ತು ಪಿ.ಎಚ್.ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಫೆಲೋಶಿಪ್ ಅರ್ಜಿಯನ್ನು ಇಲಾಖಾ ವೆಬ್‍ಸೈಟ್ ಮೂಲಕ ಅರ್ಜಿಯನ್ನು ಡೌನ್‍ಲೋಡ್ ಮಾಡಿ, ಪ್ರಿಂಟ್ ಪಡೆದು ಮಾರ್ಗಸೂಚಿಯಂತೆ ಭರ್ತಿಮಾಡಿ ಸೂಚಿಸಿರುವ […]

ವಿವಿಧ ಬ್ಯಾಂಕ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ತರಬೇತಿ

ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ದೇಶದಾದ್ಯಂತ ಎಸ್‍ಬಿಐ ಬ್ಯಾಂಕ್‍ನ ಎಂಟು ಸಾವಿರ ಗುಮಾಸ್ತರ ಹುದ್ದೆಗಳಿಗೆ ಮತ್ತು ಮುಂಬರುವ ವಿವಿಧ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಆಯೋಜಿಸಿದೆ. ಈ ಸಂಬಂಧ ತರಬೇತಿಯನ್ನು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದಲ್ಲಿ ತರಬೇತಿ ನೀಡಲಾಗುವುದು.  ಆಸಕ್ತರು ಮೇ 28 ರೊಳಗಾಗಿ ಮೈಸೂರಿನ ಕರ್ನಾಟಕ […]

ಸೂಕ್ತ ಪರಿಶೀಲನೆ ನಂತರ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ – ಉಡುಪಿ ಎಸ್ಪಿ

ಉಡುಪಿ : ಮೇ 23 ರಂದು ಸೈಂಟ್ ಸಿಸಿಲಿ ಶಾಲೆಯಲ್ಲಿ ನಡೆಯುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದೊಳಗೆ ಆಗಮಿಸುವವರನ್ನು  ಸೂಕ್ತ ತನಿಖೆ ನಡೆಸಿ, ಅಧಿಕೃತ ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಿ, ಯಾವುದೇ ಕಾರಣಕ್ಕೂ ಮತದಾನ ಕೇಂದ್ರದೊಳಗೆ ಮೊಬೈಲ್ ನಿಷೇಧಿಸಲಾಗಿದ್ದು, ಮೊಬೈಲ್‍ಗಳನ್ನು ತರದಂತೆ ಎಚ್ಚರವಹಿಸಿ ಎಂದು ಮತ ಎಣಿಕೆ ಕೇಂದ್ರದ ಕರ್ತವ್ಯಕ್ಕೆ ನಿಯೋಜಿಸಿರುವ ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ನಿಶಾ ಜೇಮ್ಸ್ ಹೇಳಿದ್ದಾರೆ.  ಅವರು ಬುಧವಾರ, ಸೈಂಟ್ ಸಿಸಿಲಿ ಶಾಲೆಯಲ್ಲಿ, ಪೊಲೀಸ್ ಅಧಿಕಾರಿ ಮತ್ತು […]

ಮತ ಎಣಿಕೆಗೆ ಸಂಪೂರ್ಣ ಸಜ್ಜು- ಉಡುಪಿ ಜಿಲ್ಲಾಧಿಕಾರಿ

ಉಡುಪಿ, : ಸೈಂಟ್ ಸಿಸಿಲಿ ಶಾಲೆಯಲ್ಲಿ ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.      ಅವರು ಬುಧವಾರ, ಮತ ಎಣಿಕೆ ಕೇಂದ್ರದಲ್ಲಿನ ಸಿದ್ದತೆಗಳ ಕುರಿತು ಪರಿಶೀಲಿಸಿ ಮಾತನಾಡಿದರು.      ಚುನಾವಣಾ ಆಯೋಗದ ನಿರ್ದೇಶನದನ್ವಯ, ನಿಗಧಿತ ಸಮಯಕ್ಕೆ ಸರಿಯಾಗಿ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು, ಇವಿಎಂಗಳ ಎಣಿಕೆ ನಂತರ ವಿವಿ ಪ್ಯಾಟ್‍ನ ಸ್ಲಿಪ್‍ಗಳ ಎಣಿಕೆ ಮಾಡಲಾಗುವುದು, ಮತ ಎಣಿಕೆಗೆ ನಿಯೋಜಿಸಿರುವ […]

ಸಿಂಪಲ್ಲಾಗೊಂದು ಕ್ರಶ್ ಸ್ಟೋರಿ: ಇಫಾಜ್ ಬರೆದ LOVE ಲಿ ಬರಹ

ಈ ಪ್ರೀತಿ ಎಂಬುದು ಒಂತರಾ ಮಾಯೆ, ಅದು ಹೊತ್ತು-ಗೊತ್ತು, ಜಾತಿ-ಧರ್ಮ ನೋಡದೆ ಹುಟ್ಟೋ ಪ್ರೇಮಲೋಕ. ಅಂದೊಮ್ಮೆ ಅವಳ ಕಣ್ಣು, ನಗು, ಅದರ ಜೊತೆಗೆ ಗುಲಾಬಿಯೇ ನಾಚಿಕೊಳ್ಳುವಂಹ  ತುಟಿ, ಕಣ್ಣಿನ ಮೇಲಿನ ಕಪ್ಪು ನೋಡಿದಾಗೆಲ್ಲ ಮನವೆಲ್ಲ ಕೆಂಪಾಗುವ ಜೊತೆಗೆ, ಅಪ್ಸರೆ ನಾಚುವಂತೆ ಇದ್ದ ಅವಳ ನಡೆ, ಇದನ್ನೆಲ್ಲ ನೋಡಿ ನನ್ನ ಮನಸ್ಸು ಅವಳ ಹಿಂದೆ ಹೋಗುವಂತೆ ಮಾಡಿತು ಎಂದು ನೀವಂದುಕೊಂಡರೆ ಅದು ಸುಳ್ಳು. ಈಗಿನ ಕಾಲದಲ್ಲಿ ಸ್ಟೈಲ್ ಅನ್ನೋದು ರಕ್ತದಲ್ಲಿಯೇ ಹರಿಯತೊಡಗಿದೆ. ಇಂತಹ ಸ್ಟೈಲ್ ಗೆಲ್ಲ ಮರಳಾಗೋ ಹುಡುಗ […]