ವಾರದೊಳಗೆ ಹೆದ್ದಾರಿ ಅಡಚಣೆ ನಿವಾರಣೆ: ಉಡುಪಿ ಜಿಲ್ಲಾಧಿಕಾರಿ ಸೂಚನೆ

ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕಂಡುಬರಬಹುದಾದ ಎಲ್ಲಾ ಸಮಸ್ಯೆಗಳ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಇರುವ ಅಡಚಣೆ ನಿವಾರಣೆಗೆ ಒಂದು ವಾರದೊಳಗೆ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ನಿರ್ದೇಶಿಸಿದ್ದಾರೆ.     ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮುಂಬರುವ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಸಿದ್ಧತೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.           ಜಿಲ್ಲೆಯ ಹಲವೆಡೆ ಹೆದ್ದಾರಿ ಹಾಗೂ ಚರಂಡಿ ಕಾಮಗಾರಿ ಸಮರ್ಪಕ ರೀತಿಯಲ್ಲಿ ಪೂರ್ಣಗೊಳ್ಳದೇ […]

ಸುವರ್ಣ ತ್ರಿಭುಜ ಬೋಟ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ- ಪ್ರಮೋದ್ ಮಧ್ವರಾಜ್ ಒತ್ತಾಯ

ಉಡುಪಿ: ಸುವರ್ಣ ತ್ರಿಭುಜ ದೋಣಿ ನಾಪತ್ತೆ ಪ್ರಕರಣದಲ್ಲಿ ಮೀನುಗಾರರ ಸಾವಿಗೆ ಕಾರಣವಾದ ಮತ್ತು ದೋಣಿಯನ್ನು ದುರಂತಕ್ಕೀಡು ಮಾಡಿದ ನೌಕಾದಳದ ಬೃಹತ್ ಯುದ್ದನೌಕೆ ಐಎನ್ ಎಸ್ ಕೋಚಿಯ ತಳಭಾಗದಲ್ಲಿ ಹಾನಿ ಆಗಿದೆಂದು ಹೇಳಲಾಗುತ್ತಿರುವ ಚಿತ್ರವೊಂದನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ಬಿಡುಗಡೆಗೊಳಿಸಿದ್ದಾರೆ. ದೇಶದ ರಕ್ಷಣೆಗೆ ಮತ್ತು ಸಮುದ್ರದಲ್ಲಿ ಮೀನುಗಾರರ ರಕ್ಷಣೆಯ ಜವಾಬ್ದಾರಿ ಹೊತ್ತ ನೌಕೆಯ ಅಧಿಕಾರಿಗಳ ಬೇಜವ್ದಾರಿ ವರ್ತನೆಯಿಂದ ಈ ಘಟನೆ ಸಂಭವಿಸಿದ್ದು, ಇದು ಮೀನುಗಾರರ ಕೊಲೆ ಎಂದು ಹೇಳಬೇಕಾಗುತ್ತದೆ. ಪ್ರಧಾನಮಂತ್ರಿಗಳು ಪ್ರಕರಣದ ಗಂಭೀರತೆಯನ್ನು ಅರಿತು ಕೂಡಲೇ ಈ […]

ನೌಕಾಪಡೆಯ ಹಡಗು ಢಿಕ್ಕಿ ಹೊಡೆದದ್ದರಿಂದ ಬೋಟ್ ಗೆ ಹಾನಿ: ಬಿ.ಜೆ.ಪಿ.ಮೀನುಗಾರರ ಜೊತೆ ಚೆಲ್ಲಾಟ ಆಡ್ತಿದೆ ಎಂದ ಮದ್ವರಾಜ್

ಉಡುಪಿ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಗೆ ಡಿಕ್ಕಿ ಹೊಡೆದ ನೌಕಾಪಡೆಯ ಹಡಗು ಏಳು ಮಂದಿ ಮೀನುಗಾರರನ್ನು ಬಲಿ ಪಡೆದಿದೆ. ಇದರ ಜತೆಗೆ ಬಿಜೆಪಿಯವರು ಮೀನುಗಾರರ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ. ಅವರು ಇಂದು ಕಾಪುವಿನ ಮುಳೂರು ಸಾಯಿರಾಧ ರೆಸಾರ್ಟ್ ನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಆ ಬಳಿಕ ಸುದ್ದಿಗಾರರದಿಗೆ ಮಾತನಾಡಿದ ಅವರು ಬಿಜೆಪಿ […]

ಎಲ್ಲಿಗೋ ಹೊರಟವರು: ಲಾವಣ್ಯ ಕ್ಲಿಕ್ಕಿಸಿದ ಚಿತ್ರ

 ಲಾವಣ್ಯ ಎನ್.ಕೆ ಚಿಕ್ಕಮಗಳೂರಿನ ಬಾಳಹೊನ್ನೂರಿನವರು. ಪ್ರಸ್ತುತ ಬೆಂಗಳೂರು ನಿವಾಸಿ. ಉಜಿರೆಯಲ್ಲಿ ಪದವಿ ಪೂರೈಸಿರುವ ಇವರಿಗೆ ಸ್ಟ್ರೀಟ್ ಫೋಟೋಗ್ರಫಿ, ಪರಿಸರ ಛಾಯಾಗ್ರಹಣ ಅಂದರೆ ವಿಪರೀತ ಪ್ರೀತಿ. ದಾರಿಯಲ್ಲಿ ಕಂಡ ಬೆರಗು ತುಂಬಿದ ಪುಟ್ಟ ಪುಟ್ಟ ಮಕ್ಕಳು, ಯಾವುದೋ ಬೀದಿಯಲ್ಲಿ ಸುಮ್ಮನೆ ಸೈಕಲೇರಿ ಪಯಣ ಹೊರಟ ಪೋರರು, ಎಲ್ಲೋ ಅರಳಿ ಹನಿ ತುಂಬಿಕೊಂಡ ಬಣ್ಣದ ಹೂವು, ಇವೆಲ್ಲಾ ಇವರ ಕಣ್ಣ ಕ್ಯಾಮರಾದಲ್ಲಿ ಕ್ಲಿಕ್ ಆದ ಚಿತ್ರಗಳು. ಸೈಕಲ್ ನಲ್ಲಿ ಡಬಲ್ ರೈಡ್ ಮಾಡಿ ಎಲ್ಲಿಗೋ ಹೊರಟ ಹುಡುಗರ ಚಿತ್ರವೊಂದು ಇಲ್ಲಿದೆ. […]

ಸ್ವರ್ಣಗೋಪುರ ಉದ್ಘಾಟನೆ: ಕೃಷ್ಣಮಠದಿಂದ ಜೆಡಿಎಸ್ ವರಿಷ್ಠ ದೇವೇಗೌಡ, ಸಿಎಂ ಕುಮಾರಸ್ವಾಮಿಗೆ ಆಹ್ವಾನ

ಉಡುಪಿ: ಕೃಷ್ಣಮಠದ ಸ್ವರ್ಣಗೋಪುರ ಉದ್ಘಾಟನೆ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರಿಗೆ ಪರ್ಯಾಯ ಪಲಿಮಾರು ಮಠದ ವತಿಯಿಂದ ಆಹ್ವಾನ ನೀಡಲಾಗಿದೆ.  ನಗರದ ಹೊರವಲಯದ ಸಾಯಿರಾಧ ರೆಸಾರ್ಟಿನಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದು, ಅವರು ಕಳೆದ ನಾಲ್ಕು ದಿನಗಳಿಂದ ವಿವಿಧ ಬಗೆಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ.  ಸ್ವರ್ಣಗೋಪುರ ಉದ್ಘಾಟನೆಯ ಪ್ರಯುಕ್ತ ಜೂನ್ ಮೊದಲ ವಾರದಿಂದ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ  ಜೆಡಿಎಸ್ ವರಿಷ್ಠರನ್ನು ಮತ್ತು ಮುಖ್ಯಮಂತ್ರಿಗಳನ್ನು ಪರ್ಯಾಯ […]