ಬದಲಾಗುತ್ತಿದೆ ಕಾಲ: ಮಾಧ್ಯಮದಲ್ಲಿ ಹೊಸ ಕ್ರಾಂತಿಗೆ ಇದು ಸಕಾಲ: ಕುದ್ಯಾಡಿ ಸಂದೇಶ್ ಸಾಲ್ಯಾನ್ ಬರಹ

ಪತ್ರಿಕೆಗೆ ಕಳುಹಿಸಿದ ವರದಿಯೊಂದು ಪ್ರಕಟವಾಗಿದೆಯೇ ಎಂದು ಆ ಪತ್ರಿಕೆಯ ವರದಿಗಾರರನ್ನು ಕೇಳಿದರೆ ಅವರಿಗೆ ಸಂತೋಷವೇನೂ ಆಗಲಿಕ್ಕಿಲ್ಲ. “ಬಂದಿರಬಹುದು, ನೋಡಿ” ಎನ್ನಬಹುದು ಅವರು. ಏಕೆಂದರೆ ತಮ್ಮ ಪತ್ರಿಕೆಯನ್ನು ಎಲ್ಲರೂ ಖರೀದಿಸಿ ಓದುತ್ತಾರೆ ಅಥವಾ ಓದಲಿ ಎಂಬ ನಿರೀಕ್ಷೆಯಲ್ಲಿ ಅವರಿರುತ್ತಾರೆ. ಬೇಕಾದರೆ ಕೊಂಡುಕೊಂಡು ಓದಲಿ ಎನ್ನುವುದು ಪತ್ರಿಕಾ ಕಚೇರಿಯ ಧೋರಣೆ. ಏಕೆಂದರೆ ಪತ್ರಿಕೆ ಇರುವುದು ಖರೀದಿಸಿ ಓದುವುದಕ್ಕಾಗಿಯೇ! ಉತ್ಪಾದನಾ ವೆಚ್ಚಕ್ಕಿಂತ ಹಲವು ಪಟ್ಟು ಕಡಿಮೆ ದರಕ್ಕೆ ಸಿಗುವ ಉತ್ಪನ್ನವೊಂದಿದ್ದರೆ ಅದು ಪತ್ರಿಕೆ. ಬಂದಿರಬಹುದು ನೋಡಿ ಎಂದರೆ ಖರೀದಿಸಿ ನೋಡಿ ಎಂದರ್ಥ. […]
ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಗೆ ಮತ್ತೆ ಗಡುವು ವಿಸ್ತರಣೆ ಮಾ. 31 ಕೊನೆಯ ದಿನ

ಬೆಂಗಳೂರು, ಫೆಬ್ರವರಿ 24: ಸತತವಾಗಿ ಮತ್ತೆ ಮತ್ತೆ ಹೆಚ್ಎಸ್ಆರ್ ಪಿ ನಂಬರ್ ಪ್ಲೇಟ್ ಗೆ ಗಡುವು ಮತ್ತೆ ಮತ್ತೆ ವಿಸ್ತರಣೆಯಾಗುತ್ತಲೇ ಇದೆ. ಇದೀಗ ಮತ್ತೆ ವಿಸ್ತರಣೆಯಾಗಿದ್ದು ಮಾ.31 ಕೊನೆಯ ದಿನವಾಗಿದೆ.ಈ ಕುರಿತು ರಾಜ್ಯ ಸರಕಾರ ಘೋಷಿಸಿದೆ. ಈವರೆಗೆ 6 ಬಾರಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆಯಾಗಿದೆ. ಜನವರಿ 31ರವರೆಗೆ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಲಾಗಿತ್ತು. ಇದೀಗ ಸಾರಿಗೆ ಇಲಾಖೆ ಮತ್ತೆ ಮಾರ್ಚ್ 31ರವರೆಗೆ ಗಡುವು ವಿಸ್ತರಿಸಿದೆ. ಕರ್ನಾಟಕದಲ್ಲಿ ಸುಮಾರು 2 ಕೋಟಿಯಷ್ಟು ಹಳೆಯ ವಾಹನಗಳಿವೆ. […]
ಉಡುಪಿ ಜನರೇ ಗಮನಿಸಿ: ದಿನನಿತ್ಯದ ತಾಜಾ ಉತ್ಪನ್ನಗಳನ್ನು ತರಲು ಹೊರಗೆ ಹೋಗುವ ಕಷ್ಟವಿಲ್ಲ: M Kart ಮಾಡುತ್ತೆ ತಾಜಾತನದ ಹೋಂ ಡೆಲಿವರಿ

ಮನೆಯಲ್ಲಿ ವಯಸ್ಸಾದವರಿದ್ದರೆ ದಿನಬಳಕೆಯ ವಸ್ತುಗಳನ್ನು ಪ್ರತೀ ದಿನವೂ ಅಂಗಡಿಗಳಿಂದ ಸೂಪರ್ ಮಾರ್ಕೆಟ್ ಗಳಿಂದ ತರುವುದು ದೊಡ್ಡ ಕಷ್ಟ, ತೀರಾ ಅರ್ಜೆಂಟ್ ಇರುವ ತರಕಾರಿ ಸರಿಯಾದ ಸಮಯಕ್ಕೆ ಮುಗಿಯಿತೆನ್ನಿ, ಆಗ ಕೂಡಲೇ ಅಂಗಡಿಗೆ ಹೋಗುವುದರಂತೂ ಭಾರೀ ಕಷ್ಟದ ಕೆಲಸ. ಅದೂ ವಯಸ್ಸಾದವರಿಗಂತೂ ಇನ್ನೂ ಕಷ್ಟ. ಆದರೆ ಉಡುಪಿ ಜನರು ಇನ್ನು ಮುಂದೆ ಈ ಕಷ್ಟ ಪಡಬೇಕಾಗಿಲ್ಲ, ಯಾಕಂದ್ರೆ ನಿಮಗೆ ಅಗತ್ಯ ಇರುವ ಎಲ್ಲಾ ದಿನಬಳಕೆ ಉತ್ಪನ್ನಗಳನ್ನು ಮನೆಬಾಗಿಲಿಗೆ ನೀವು ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರೀತಿಯಿಂದ ತಲುಪಿಸಲು ಉಡುಪಿಯ […]
ಮದುವೆಯ ವಯಸ್ಸಾದ್ರೆ ನಿಮಗೂ ಹೀಗೆಲ್ಲಾ ಚಡಪಡಿಕೆ ಆಗ್ಬೋದು,ಇದ್ದವರೆಲ್ಲಾ ಹೀಗೆ ಪ್ರಶ್ನೆ ಕೇಳ್ಬೋದು : 90s ಹುಡುಗನೊಬ್ಬನ ಕಹಾನಿ

“ಮದುವೆಯ ವಯಸ್ಸಾಯಿತು. ಯಾರನ್ನಾದರೂ ನೋಡಿಕೊಂಡಿದ್ದೀಯೋ ಇಲ್ಲ ನಾವೇ ನೋಡಬೇಕೋ?” ಎಂದು ಹಿತೈಷಿಗಳು ಕೇಳುವಾಗ ದಿಗಿಲು, ಗಲಿಬಿಲಿ ಒಟ್ಟಿಗೆ ಉಂಟಾಗುತ್ತದೆ. ಹೇಗೋ ಕಷ್ಟ ಪಟ್ಟು ಕಾಲೇಜು ಮುಗಿಸಿ ಕೆಲಸ ಹಿಡಿದು, ಮತ್ತೆ ಕೊರೊನಾ ಕಾಟದಿಂದ ಹೈರಾಣಾಗಿ ಈಗ ಸುಧಾರಿಸಿಕೊಳ್ಳುತ್ತಿರುವಾಗ, ಮತ್ತೊಂದು ವೈರಸ್ ಬಂದು ಉಳಿದಿರುವುದನ್ನೂ ಕಿತ್ತುಕೊಳ್ಳುತ್ತದೋ ಎಂಬ ಆತಂಕದ ಮಧ್ಯೆ ದಿನಗಳು ಓಡುತ್ತಿರಬೇಕಾದರೆ ‘ಮದುವೆ’ ಎಂಬ ಸಂಗತಿಯೊಂದು ಕುಣಿದಾಡುತ್ತಿದೆ! ಲಗ್ನ ಇರುವಾಗಲೇ ಮದುವೆಯಾಗಬೇಕು. ಇಲ್ಲದಿದ್ದರೆ ಕಷ್ಟ ಎಂದು ಹಿರಿಯರು ಹೇಳುವಾಗ ಚಿಂತೆ ಕಾಡುತ್ತದೆ. ಹೆಣ್ಣು ಹುಡುಕಿ ಸುಸ್ತಾದ ಸೀನಿಯರ್ಸ್ […]
ಕಾರ್ಕಳ ಅತ್ತೂರು ಬಸಿಲಿಕಾ ಮಹೋತ್ಸವಕ್ಕೆ ಅದ್ದೂರಿ ತೆರೆ: ಸೌಹಾರ್ದತೆ, ಪ್ರೀತಿ, ಸಾಮರಸ್ಯದ ಸಂದೇಶ ಸಾರಿದ ವೈಭವದ ಜಾತ್ರೆ

ಕಾರ್ಕಳ: ಪ್ರಸಿದ್ಧ ಅತ್ತೂರು ಬಸಿಲಿಕಾ ಮಹೋತ್ಸವ ಜನವರಿ 30 ರಂದು ಅದ್ದೂರಿ ತೆರೆಕಂಡಿತು. ಐದು ದಿನಗಳ ಕಾಲ ನಡೆದ ಸಂಭ್ರಮದ ಅತ್ತೂರು ಸಾಂತಮಾರಿ ಲಕ್ಷಾಂತರ ಭಕ್ತರ ತನುಮನವನ್ನು ತಂಪಾಗಿಸಿತು. ಮೊಂಬತ್ತಿ ಹಚ್ಚಿ ತಮ್ಮ ಹರಕೆಗಳನ್ನು ಈಡೇರಿಸುವಂತೆ ಸಂತ ಲಾರೆನ್ಸರಲ್ಲಿ ಪ್ರಾರ್ಥಿಸಿ ಪಾವನರಾದರು. ಈ ಸಲದ ಮಹೋತ್ಸವದ ಸಂದೇಶ “ಭರವಸೆ ನಿಮ್ಮನ್ನು ನಿರಾಶೆ ಮಾಡುವುದಿಲ್ಲ”ಎಂದಾಗಿತ್ತು. ಮಹೋತ್ಸವದ ಅಷ್ಟೂ ದಿನ ಬಲಿಪೂಜೆಗಳ ಮೂಲಕ, ವಿಶೇಷ ಪೂಜೆಗಳ ಮೂಲಕ, ದಿವ್ಯ ಸಂದೇಶಗಳ ಮೂಲಕ ಮಹೋತ್ಸವ ಈ ಘೋಷವಾಕ್ಯವನ್ನು ಸಾರ್ಥಕಗೊಳಿಸಿತು. ಜ. 30 […]