2022-23 ನೇ ಸಾಲಿನ ಕಂಬಳ ವೇಳಾಪಟ್ಟಿ

ಉಡುಪಿ/ ಮಂಗಳೂರು: 2022-23ರ ನವೆಂಬರ್ 5 ರಿಂದ ಏಪ್ರಿಲ್ 8 ರ ವರೆಗೆ ಒಟ್ಟು 23 ಕಂಬಳಗಳ ವೇಳಾಪಟ್ಟಿಯನ್ನು ಜಿಲ್ಲಾ ಕಂಬಳ ಸಮಿತಿ ಪ್ರಕಟಿಸಿದೆ. ನವೆಂಬರ್.5 -ಶಿರ್ವ ನ.12- ಪಿಲಿಕುಳ ನ.19-ಪಜೀರ್ ನ-26-ಕಕ್ಯಪದವು ಡಿಸೆಂಬರ್.3-ವೇಣೂರು ಡಿ.10-ಬಾರಾಡಿ ಬೀಡು ಡಿ.17-ಹೊಕ್ಕಾಡಿಗೋಳಿ ಡಿ.24- ಮೂಡಬಿದ್ರೆ ಡಿ.31-ಮೂಲ್ಕಿ ಜನವರಿ.14-ಅಡ್ವೆ ನಂದಿಕೂರು ಜ.21-ಮಂಗಳೂರು, ಬಂಗ್ರಕೂಳೂರು ಜ.28-ಐಕಳ ಬಾವ ಫೆಬ್ರವರಿ.4-ಪುತ್ತೂರು ಫೆ.11- ಕಟಪಾಡಿ ಬೀಡು ಫೆ.18- ವಾಮಂಜೂರು ತಿರುವೈಲ್ ಫೆ. 25- ಜಪ್ಪು ಮಾರ್ಚ್. 4 -ಬಂಟ್ವಾಳ ನಾವೂರು ಮಾ.11-ಉಪ್ಪಿನಂಗಡಿ ಮಾ.18 ಬಂಗಾಡಿ ಮಾ.25-ಪೈವಳಿಕೆ […]

ನಾಟಾ ಪರೀಕ್ಷೆಯಲ್ಲಿ ಎಕ್ಸ್ ಪರ್ಟ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆಗೊಳಿಸಿದ ರಾಜ್ಯ ಮಟ್ಟದ ಆರ್ಕಿಟೆಕ್ಚರ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬಿ. ಆದಿತ್ಯ ಹೊಳ್ಳ ಅವರು 4ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಆರ್ಯ ಜಾದವ್ (48), ನಿತ್ಯಾಶ್ರೀ ಎಚ್.ಎಲ್. (101), ಮೇಘನಾ ಹನುಮಂತ್ ನಾಯ್ಕ್ (156), ಸಂಜನಾ ರಾಜೇಂದ್ರಕುಮಾರ್ ಅಂಗಡಿ (218), ಪ್ರಾರ್ಥನ್ ಎಂ.ಬೇವೂರು (263), ಚಿರಂತ್ ಎಸ್. (300), ಗಗನ್ ದೀಪ್ ಡಿ.ಎಂ. (391), ಅಕ್ಷತಾ ಎಚ್. ಮಸದಾರ್ (396), ಸಿಂಚನಾ ಕೆ. (458), ಅತೀಶ್ […]

ಮಂಗಳೂರು: ಪ್ರಪ್ರಥಮ ಬಾರಿಗೆ ಮಂಗಳಮುಖಿಯರಿಂದ ದಸರಾ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ

ಮಂಗಳೂರು: ಇದೇ ಮೊದಲ ಬಾರಿಗೆ ಮೂವರು ಮಂಗಳಮುಖಿಯರಿಗೆ ದಸರಾ ಉತ್ಸವದಲ್ಲಿ ನೃತ್ಯಪ್ರದರ್ಶನ ನೀಡುವ ಅವಕಾಶ ದೊರೆತಿದೆ. ಬೋಳಾರದ ಹಳೇಕೋಟೆ ಶ್ರೀ ಮಾರಿಯಮ್ಮ ಗುಡಿಯಲ್ಲಿ ಸೋಮವಾರದಂದು ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ದೇವಾ ಶ್ರೀ ಗಣೇಶಾ’ ಎಂಬ ಹಾಡಿಗೆ ನೃತ್ಯ ಮಾಡುವ ಅವಕಾಶ ನೀಡಲಾಗಿದೆ. ಪ್ರಿಯಾ ಶ್ಯಾಮ್, ಸಂಧ್ಯಾ ಮತ್ತು ರೇಖಾ ಎನ್ನುವ ಮೂವರು ಮಂಗಳಮುಖಿಯರು ಬಾಲಿವುಡ್ ಶೈಲಿಯ ನೃತ್ಯವನ್ನು ಸುಸಾನ್ ಮಿಸ್ಕಿತ್ ಅವರ ಬಳಿ ಕಲಿಯುತ್ತಿದ್ದಾರೆ. ಇಷ್ಟು ದೊಡ್ಡ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಅವಕಾಶ ದೊರೆತಿರುವುದಕ್ಕಾಗಿ […]

ಅವಿಭಜಿತ ದ.ಕನ್ನಡದಲ್ಲಿ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ಲೋಕಾಯುಕ್ತ ಠಾಣೆಗೆ ದೂರು ನೀಡಿ: ಲೋಕಾಯುಕ್ತ ಎಸ್.ಪಿ ಲಕ್ಷ್ಮೀ ಗಣೇಶ್

ಮಂಗಳೂರು: ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಜನತೆಗೆ ಭ್ರಷ್ಟಾಚಾರದ ವಿರುದ್ದ ಯಾವುದೇ ರೀತಿಯ ದೂರು ಅಥವಾ ಅಕ್ರಮ ಆಸ್ತಿಗಳ ಬಗ್ಗೆ ದೂರು ದಾಖಲಿಸಲಿದ್ದಲ್ಲಿ, ಮಂಗಳೂರಿನ ಊರ್ವಾ ಸ್ಟೋರಿನಲ್ಲಿರುವ ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಂಗಳೂರು-ಉಡುಪಿ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಗಣೇಶ್ ಹೇಳಿದ್ದಾರೆ. ಸೋಮವಾರದಂದು ಊರ್ವಾಸ್ಟೋರ್ ನ ಲೋಕಾಯುಕ್ತ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಲೋಕಾಯುಕ್ತದ ವಾಪ್ತಿಯು ಅವಿಭಜಿತ ದ.ಕ ಜಿಲ್ಲೆಯ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳೆರಡಲ್ಲೂ ಇದ್ದು, ಈ ಹಿಂದೆ ಕರ್ನಾಟಕ […]

ಹಾಸ್ಟೆಲ್ ನಿಂದ ತಪ್ಪಿಸಿಕೊಂಡ ಮೂವರು ವಿದ್ಯಾರ್ಥಿನಿಯರು: ಹುಡುಗಿಯರಿಗಾಗಿ ಶೋಧಿಸುತ್ತಿರುವ ಪೊಲೀಸರು

ಮಂಗಳೂರು: ಬುಧವಾರದಂದು ಇಲ್ಲಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ಮೂರು ಪದವಿ ಪೂರ್ವ ವಿದ್ಯಾರ್ಥಿನಿಯರು ತಪ್ಪಿಸಿಕೊಂಡಿದ್ದು, ವಿದ್ಯಾರ್ಥಿನಿಯರನ್ನು ಶೋಧಿಸಲು ಪೊಲೀಸರು ಇತರ ಜಿಲ್ಲೆಗಳ ಠಾಣೆಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ ಎನ್ನಲಾಗಿದೆ. ಮೂವರು ವಿದ್ಯಾರ್ಥಿನಿಯರಲ್ಲಿ ಇಬ್ಬರು ಬೆಂಗಳೂರಿನವರಾಗಿದ್ದು, ಒಬ್ಬಾಕೆ ಚಿತ್ರದುರ್ಗದವಳಾಗಿದ್ದಳು. ತನಿಖೆ ನಡೆಸುತ್ತಿರುವ ಪೊಲೀಸರು, ಮೂವರು ವಿದ್ಯಾರ್ಥಿನಿಯರಿಂದ ಯೋಜಿಸಲಾದ ಪೂರ್ವ ಯೋಜಿತ ಕೃತ್ಯ ಇದಾಗಿದೆ ಎನ್ನುವ ಅನುಮಾನ ವ್ಯಕ್ತ ಪಡಿಸಿದ್ದಾರೆ. ವಿದ್ಯಾರ್ಥಿನಿಯರು ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಕಿಟಕಿಯ ಸರಳುಗಳನ್ನು […]