ಉಡುಪಿ: ಜೂನ್ ತಿಂಗಳ ವೇತನ ನೀಡಲು ಬಿಆರ್ ಎಸ್ ಆಸ್ಪತ್ರೆಯ ಆಡಳಿತ ಮಂಡಳಿ ಒಪ್ಪಿಗೆ; ಮುಷ್ಕರ ಕೈಬಿಟ್ಟ ಸಿಬ್ಬಂದಿ

ಉಡುಪಿ: ಎರಡು ದಿನದೊಳಗೆ ಸಿಬ್ಬಂದಿಗಳಿಗೆ ಜೂನ್ ತಿಂಗಳ ವೇತನ ಜಮಾ ಮಾಡುವುದಾಗಿ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ಮಂಡಳಿ ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದ ನಿರಂತರ ಪ್ರತಿಭಟನೆ ನಡೆಸುತಿದ್ದ ಸಿಬ್ಬಂದಿಗಳು ಪ್ರತಿಭಟನೆ ಯನ್ನು ಕೈಬಿಟ್ಟಿದ್ದಾರೆ. ಸಿಬ್ಬಂದಿಗಳ ಬಾಕಿ ವೇತನ ಪಾವತಿಗಾಗಿ ಸರಕಾರ ನೀಡಿದ 50 ಲಕ್ಷ ರೂ. ಹಣವನ್ನು ಮೇ ತಿಂಗಳ ಶೇ.60ರಷ್ಟು ವೇತನವನ್ನು ಮಾತ್ರ ಆಡಳಿತ ಮಂಡಳಿ ನೀಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಎಲ್ಲಾ […]

ಸ್ಯಾಕ್ಸೋಫೋನ್ ಕಲಾವಿದ ಮಹಾಬಲ ದೇವಾಡಿಗರ ಕುಟುಂಬಕ್ಕೆ ಆರ್ಥಿಕ ನೆರವು

ಕಾರ್ಕಳ: ಇತ್ತೀಚೆಗೆ ನಿಧನರಾದ ಸ್ಯಾಕ್ಸೋಫೋನ್ ಕಲಾವಿದ ಮಹಾಬಲ ದೇವಾಡಿಗರ ಕುಟುಂಬದ ಸಹಾಯಾರ್ಥಕ್ಕಾಗಿ ಸ್ಯಾಕ್ಸೋಫೋನ್ ಕಲಾವಿದೆ ಭಾರತೀ ಗೋಪಾಲ್ ಸಂಗ್ರಹಿಸಿದ ₹1 ಲಕ್ಷ ರೂಪಾಯಿ ಹಣವನ್ನು ಹಸ್ತಾಂತರಿಸಲಾಯಿತು. ಹಿರ್ಗಾನ ಲಕ್ಷ್ಮೀ ಪುರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಬಲ ದೇವಾಡಿಗರ ಮನೆಯವರಿಗೆ ₹1 ಲಕ್ಷ ರೂ. ಆರ್ಥಿಕ ನೆರವು ನೀಡಲಾಯಿತು. ಈ ಸಂದರ್ಭದಲ್ಲಿ ನಾರಾಯಣ್ ನಾಯಕ್ ಜೋಡುರಸ್ತೆ, ದೇವಸ್ಥಾನದ ಮೊಕ್ತೆಸರ ಅಶೋಕ್ ನಾಯಕ್ , ಮಾಜಿ ಮೊಕ್ತೇಸರ ನಾರಾಯಣ್ ಗವಳ್ಕರ್ , ಕಲಾವಿದೆ ಭಾರತೀಗೋಪಾಲ್ ಸೇರಿಗಾರ್ ಶಿವಪುರ ಹಾಗು […]

ಉಡುಪಿ: ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದಿಂದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಜನ್ಮದಿನಾಚರಣೆ

ಉಡುಪಿ: ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ರಾಜ್ಯ ಕಂಡ ಹಿಂದುಳಿದ ವರ್ಗದ ಧೀಮಂತ ನಾಯಕ, ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ನಾಯಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 106ನೇ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷೆ ಲೀಲಾ ಆರ್. ಅಮೀನ್ ಅವರ ನಿವಾಸದಲ್ಲಿ ಪುಷ್ಪಾಂಜಲಿ ಕಾರ್ಯಕ್ರಮದೊಂದಿಗೆ ಗೌರವ ನಮನ ಸಲ್ಲಿಸಲಾಯಿತು. ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುರೇಂದ್ರ ಪಣಿಯೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ […]

‘ಕಾರ್ನರ್ ಹೌಸ್’ ಕೇಕ್ ಶಾಪ್ ಗೆ ಎರಡನೇ ವರ್ಷದ ಸಂಭ್ರಮ: ವೈರಟಿ ಕೇಕ್ ಗಳ ಮೇಲೆ ಶೇ. 10ರಷ್ಟು ಡಿಸ್ಕೌಂಟ್

ಮಣಿಪಾಲ: ಮಣಿಪಾಲ ಅಲೆವೂರು ರೋಡ್ ನ ಬಾಳಿಗಾ ಬಿಲ್ಡಿಂಗ್ ನಲ್ಲಿರುವ ‘ಕಾರ್ನರ್ ಹೌಸ್’ ಕೇಕ್ ಶಾಪ್ ಗೆ ಎರಡನೇ ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕಾರ್ನರ್ ಹೌಸ್ ಎಲ್ಲ ಬಗೆಯ ಕೇಕ್ ಗಳ ಮೇಲೆ ಶೇ. 10ರಷ್ಟು ರಿಯಾಯಿತಿ ಆಫರ್ ಘೋಷಿಸಿದೆ. ಆಗಸ್ಟ್ 22 ರವರೆಗೆ ಮಾತ್ರ ಈ ವಿಶೇಷ ಆಫರ್ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರು ಕೂಡಲೇ ಶಾಪ್ ಗೆ ಭೇಟಿಕೊಟ್ಟು ವೈರಟಿ ಕೇಕ್ ಗಳ ಸ್ವಾದವನ್ನು ಸವಿಯಿರಿ. Novelty ಕೇಕ್, customised ಕೇಕ್, doll ಕೇಕ್, […]

ಕಾಂಗ್ರೆಸ್‌ ವಕ್ತಾರರಾಗಿ ಶುಭದ ರಾವ್‌ ನೇಮಕ

ಕಾರ್ಕಳ: ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ವಕ್ತಾರರಾಗಿ ಪುರಸಭಾ ಸದಸ್ಯ ಶುಭದ ರಾವ್‌ ಅವರು ನೇಮಕಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರ ನಿರ್ದೇಶನದ ಮೇರೆಗೆ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಕಳ ಪುರಸಭೆಗೆ ಮೂರನೇ ಬಾರಿಗೆ ಚುನಾಯಿತ ಸದಸ್ಯರಾಗಿ ಅವರು, ಈ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.