ಸ್ಯಾಕ್ಸೋಫೋನ್ ಕಲಾವಿದ ಮಹಾಬಲ ದೇವಾಡಿಗರ ಕುಟುಂಬಕ್ಕೆ ಆರ್ಥಿಕ ನೆರವು

ಕಾರ್ಕಳ: ಇತ್ತೀಚೆಗೆ ನಿಧನರಾದ ಸ್ಯಾಕ್ಸೋಫೋನ್ ಕಲಾವಿದ ಮಹಾಬಲ ದೇವಾಡಿಗರ ಕುಟುಂಬದ ಸಹಾಯಾರ್ಥಕ್ಕಾಗಿ ಸ್ಯಾಕ್ಸೋಫೋನ್ ಕಲಾವಿದೆ ಭಾರತೀ ಗೋಪಾಲ್ ಸಂಗ್ರಹಿಸಿದ ₹1 ಲಕ್ಷ ರೂಪಾಯಿ ಹಣವನ್ನು ಹಸ್ತಾಂತರಿಸಲಾಯಿತು.

ಹಿರ್ಗಾನ ಲಕ್ಷ್ಮೀ ಪುರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಬಲ ದೇವಾಡಿಗರ ಮನೆಯವರಿಗೆ ₹1 ಲಕ್ಷ ರೂ. ಆರ್ಥಿಕ ನೆರವು ನೀಡಲಾಯಿತು.

ಈ ಸಂದರ್ಭದಲ್ಲಿ ನಾರಾಯಣ್ ನಾಯಕ್ ಜೋಡುರಸ್ತೆ, ದೇವಸ್ಥಾನದ ಮೊಕ್ತೆಸರ ಅಶೋಕ್ ನಾಯಕ್ , ಮಾಜಿ ಮೊಕ್ತೇಸರ ನಾರಾಯಣ್ ಗವಳ್ಕರ್ , ಕಲಾವಿದೆ ಭಾರತೀಗೋಪಾಲ್ ಸೇರಿಗಾರ್ ಶಿವಪುರ ಹಾಗು ಮಹಾಬಲ ದೇವಾಡಿಗ ಕುಟುಂಬದ ಸದಸ್ಯರು ಭಾಗವಹಿಸಿದ್ದರು.