ಫೆ.7: ಓಬವ್ವ ಆತ್ಮರಕ್ಷಣೆ ಕಲೆ ಉದ್ಘಾಟನೆ

ಉಡುಪಿ, ಫೆ.4:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಓಬವ್ವ ಆತ್ಮರಕ್ಷಣೆ ಕಲೆ – ಕರಾಟೆ ಉದ್ಘಾಟನಾ ಕಾರ್ಯಕ್ರಮವು ಫೆಬ್ರವರಿ 7 ರಂದು ಬೆಳಗ್ಗೆ 10.30 ಕ್ಕೆ ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.   ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಡುಪಿ ಶಾಸಕ […]

ಕಟಪಾಡಿ: ಕೋಟೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಹೃದಯಾಘಾತದಿಂದ ವಿಧಿವಶ

ಕಟಪಾಡಿ: ಕೋಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ, ಗುಮಾಸ್ತೆ (ಕ್ಲಾರ್ಕ್) ಶಶಿಕಲಾ (52) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು. ಅವರು ಕಳೆದ ಸುಮಾರು 15 ವರ್ಷಗಳಿಂದ ಕೋಟೆ ಪಂಚಾಯತ್‍ನಲ್ಲಿ ಗುಮಾಸ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ 6 ಗಂಟೆಯ ಸುಮಾರಿಗೆ ಕಚೇರಿಯಿಂದ ಕರ್ತವ್ಯ ನಿಭಾಯಿಸಿಕೊಂಡು ಮನೆಗೆ ತೆರಳಿದ್ದರು. ಮುಂಜಾನೆ 3 ಗಂಟೆಯ ವೇಳೆ ಹೃದಯಾಘಾತವುಂಟಾಗಿದ್ದು, ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಶಿಕಲಾ ಮೃತಪಟ್ಟಿದ್ದಾರೆ. ಶಶಿಕಲಾ ಅವರು 2000ನೇ ಅವಧಿಯಲ್ಲಿ ಕೋಟೆ ಪಂಚಾಯತ್ ಅಧ್ಯಕ್ಷರಾಗಿ […]

ಮುಳ್ಳಿಕಟ್ಟೆ: ಫೆ.6 ಕ್ಕೆ ಹೊಸಾಡು ಸೇವಾ ಸಹಕಾರ ಸಂಘ ಉದ್ಘಾಟನೆ

ಕುಂದಾಪುರ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ “ಹೊಸಾಡು ಸೇವಾ ಸಹಕಾರ ಸಂಘ (ನಿ.)” ವು ಮುಳ್ಳಿಕಟ್ಟೆಯ ಬಾಲಾಜಿ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಇದೇ ಫೆ.6ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ನೂತನ ಸಂಘವನ್ನು ಉದ್ಘಾಟಿಸುವರು. ಹೊಸಾಡು ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕಾಡೇರಿಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್.ವಿಶ್ವೇಶ್ವರ ಅಡಿಗ, ಅಡಿಗರ ಮನೆ ಹೊಸಾಡು, ಮಂಜಯ್ಯ ಶೆಟ್ಟಿ ಜಾಜಿಮಕ್ಕಿ ಹೊಸಾಡು, […]

ಕುಂದಾಪುರ:ವಿದ್ಯಾರ್ಥಿನಿಯರನ್ನು ತಡೆದ ಪ್ರಾಂಶುಪಾಲರ ನಡೆ ಖಂಡನಾರ್ಹ:ಎಸ್ ಐ ಓ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 3/02/2022 ರ ಗುರುವಾರದಂದು ಎಂದಿನಂತೆ ಶಿರವಸ್ತ್ರ ಧರಿಸಿ ಬಂದ ವಿದ್ಯಾರ್ಥಿನೀಯರನ್ನು ಕಾಲೇಜಿನ ಕ್ಯಾಂಪಸಿನ ಗೇಟಿನ ಬಳಿಯೇ ತಡೆದು ಅಮಾನವೀಯವಾಗಿ ವರ್ತಿಸಿದ ಪ್ರಾಂಶುಪಾಲರ ವರ್ತನೆ ನಿಜಕ್ಕೂ ಖೇದಕರ. ಈ ಘಟನೆ ಖಂಡನಾರ್ಹ  ಎಂದು ಎಸ್.ಐ.ಓ ಪ್ರಕಟನೆಯಲ್ಲಿ ತಿಳಿಸಿದೆ ಬಹಳಷ್ಟು ವರ್ಷದಿಂದ ವಿದ್ಯಾರ್ಥಿನೀಯರು ಶಿರವಸ್ತ್ರದೊಂದಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ಕುಂದಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತ ಬಂದಿದ್ದಾರೆ. ಈ ಮುಂಚೆ ಕೂಡ ವಿದ್ಯಾರ್ಥಿನೀಯರು ಸದ್ರಿ ಕಾಲೇಜಿನಲ್ಲಿ ಶಿರವಸ್ತ್ರದೊಂದಿಗೆ ಶಿಕ್ಷಣ ಪಡೆದು ಹೋಗಿದ್ದಾರೆ. […]

ಮೂರ್ಖ ರಾಜಕಾರಣ ಬಿಟ್ಟು ಬಿಡಿ ಸಿದ್ದರಾಮಯ್ಯನವರೇ, ಇಲ್ಲದಿದ್ದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ: ವಾಸುದೇವ ಭಟ್ ಆಕ್ರೋಶ

ಹಿಜಾಬ್ ವಿಚಾರದಲ್ಲಿ ಮೂರ್ಖ ರಾಜಕಾರಣ ಮಾಡುವುದನ್ನು ಬಿಟ್ಟುಬಿಡಿ ಸಿದ್ದರಾಮಯ್ಯನವರೇ, ಇಲ್ಲದಿದ್ದರೆ ನಿಮ್ಮ ಧಿಮಾಕಿಗೆ ಸದ್ಯದಲ್ಲೇ ಕೇಸರಿ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ನೀವು ದಶಕಗಳ ಕಾಲ ನಡೆಸಿದ ಡೋಂಗಿ ಜಾತ್ಯಾತೀತ ರಾಜಕಾರಣದ ಫಲಶ್ರುತಿಯಾಗಿ ಇವತ್ತು ಜಿಹಾದಿಗಳು ಪ್ರಪಂಚದ ಏಕೈಕ ಹಿಂದೂ ರಾಷ್ಟ್ರವಾಗಿರುವ ಭಾರತದ ಸಂವಿಧಾನ , ಕಾನೂನಿನ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ನಿಮ್ಮೆಲ್ಲರ ನೀಚ ರಾಜಕಾರಣವನ್ನು ದೇಶದ ವರ್ತಮಾನ ಮತ್ತು […]