ಮೂರ್ಖ ರಾಜಕಾರಣ ಬಿಟ್ಟು ಬಿಡಿ ಸಿದ್ದರಾಮಯ್ಯನವರೇ, ಇಲ್ಲದಿದ್ದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ: ವಾಸುದೇವ ಭಟ್ ಆಕ್ರೋಶ

ಹಿಜಾಬ್ ವಿಚಾರದಲ್ಲಿ ಮೂರ್ಖ ರಾಜಕಾರಣ ಮಾಡುವುದನ್ನು ಬಿಟ್ಟುಬಿಡಿ ಸಿದ್ದರಾಮಯ್ಯನವರೇ, ಇಲ್ಲದಿದ್ದರೆ ನಿಮ್ಮ ಧಿಮಾಕಿಗೆ ಸದ್ಯದಲ್ಲೇ ಕೇಸರಿ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ನೀವು ದಶಕಗಳ ಕಾಲ ನಡೆಸಿದ ಡೋಂಗಿ ಜಾತ್ಯಾತೀತ ರಾಜಕಾರಣದ ಫಲಶ್ರುತಿಯಾಗಿ ಇವತ್ತು ಜಿಹಾದಿಗಳು ಪ್ರಪಂಚದ ಏಕೈಕ ಹಿಂದೂ ರಾಷ್ಟ್ರವಾಗಿರುವ ಭಾರತದ ಸಂವಿಧಾನ , ಕಾನೂನಿನ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ನಿಮ್ಮೆಲ್ಲರ ನೀಚ ರಾಜಕಾರಣವನ್ನು ದೇಶದ ವರ್ತಮಾನ ಮತ್ತು ಭವಿಷ್ಯದ ಪೀಳಿಗೆ ಎಂದೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಹಿಜಾಬ್ ವಿವಾದದ ಕುರಿತು ನಿಮ್ಮ ಪಕ್ಷದ ಸ್ಪಷ್ಟ ನಿಲುವು ಮೊದಲು ತಿಳಿಸಿ. ಆಮೇಲೆ ನಾಲಿಗೆ ಹರಿಬಿಡಿ. ಮಕ್ಕಳ ಮನಸ್ಸಿನಲ್ಲಿ ವಿಕೃತ ಭಾವನೆಗಳನ್ನು ಸೃಷ್ಟಿಸಿ ಏನು ಸಾಧಿಸಲು ಹೊರಟ್ಟಿದ್ದೀರಿ. ನಿಮ್ಮ ಈ ನೀಚಾ ರಾಜಕಾರಣಕ್ಕೆ ಮುಂದಿನ ದಿನಗಳಲ್ಲಿ ಬಹುಸಂಖ್ಯಾತರಾಗಿರುವ ಹಿಂದೂಗಳು ಸರಿಯಾದ ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದರು.