ಇದು ವಿಶ್ವಕಪ್​ ಫೈನಲ್​ ಎಫೆಕ್ಟ್​ : 2 ಸಾವಿರದ ಹೋಟೆಲ್​ ರೂಮ್​ ಬಾಡಿಗೆ ಈಗ 50 ಸಾವಿರ

ಅಹಮದಾಬಾದ್​: ಎರಡು ಮದಗಜಗಳ ಆಟ ನೋಡಲು ಕ್ರಿಕೆಟ್​ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂಗೆ ದೇಶ, ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ಎಷ್ಟೇ ಖರ್ಚಾದರೂ ಸರಿ ಪಂದ್ಯ ವೀಕ್ಷಿಸಬೇಕು ಎಂಬ ಅಭಿಮಾನಿಗಳ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವ ಅಹಮದಾಬಾದ್‌ನಲ್ಲಿ ಹೋಟೆಲ್‌ಗಳು ರೂಮ್​​ಗಳ ದರವನ್ನು ವಿಪರೀತ ಹೆಚ್ಚಿಸಿವೆ. 2 ಸಾವಿರ ರೂಪಾಯಿ ಇರುವ ಕೊಠಡಿಗಳ ಬಾಡಿಗೆಯನ್ನು ಏಕಾಏಕಿ 50 ಸಾವಿರಕ್ಕೆ ಹೆಚ್ಚಿಸಿವೆ.ಭಾರತದಲ್ಲಿ ಕ್ರಿಕೆಟ್​ ಬರೀ ಜ್ವರವಲ್ಲ, ಅದು ಎಂದಿಗೂ ಗುಣಮುಖವಾಗದ ಕಾಯಿಲೆ ಇದ್ದ ಹಾಗೆ. ಅದೆಷ್ಟೇ […]

ದಿಗ್ಗಜ ಗುಂಡಪ್ಪ ವಿಶ್ವನಾಥ್: ವಿರಾಟ್ ಶ್ರೇಷ್ಠ ಕ್ರಿಕೆಟರ್, ರೋಹಿತ್ ವಿಶ್ವಕಪ್ ಬೆಸ್ಟ್ ಪ್ಲೇಯರ್

ಹೈದರಾಬಾದ್ (ತೆಲಂಗಾಣ): ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಆಟ ಮತ್ತು ನಾಯಕತ್ವವನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದಾರೆ. ಪ್ರಸಕ್ತ ಕಾಲಘಟ್ಟದಲ್ಲಿ ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ ಎಂದು ಭಾರತದ ಲೆಜೆಂಡ್ ಆಟಗಾರ ಗುಂಡಪ್ಪ ವಿಶ್ವನಾಥ್ ಹೇಳಿದ್ದಾರೆ.ಭಾರತದ ವೇಗದ ಬೌಲಿಂಗ್ ಉತ್ತಮವಾಗಿದ್ದು, ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ ಎಂದು ಭಾರತ ತಂಡದ ಮಾಜಿ ದಿಗ್ಗಜ ಆಟಗಾರ ಹಾಗೂ ಸ್ಟಾರ್ ಸ್ಪೋರ್ಟ್ಸ್ ಕನ್ನಡದ ಕ್ರಿಕೆಟ್​ ವಿಶ್ಲೇಷಕ ಗುಂಡಪ್ಪ ವಿಶ್ವನಾಥ್ ಹೇಳಿದ್ದಾರೆ. 2023ರ ವಿಶ್ವಕಪ್​ನಲ್ಲಿ ಭಾರತ ತಂಡ ಆಟದ ಬಗ್ಗೆ ಮಾತನಾಡಿದ ವಿಶ್ವನಾಥ್, “ನಾ […]

ಸಚಿನ್​ ದಾಖಲೆ ಮುರಿದು ಏಕದಿನ ಶತಕಗಳ ಅರ್ಧಶತಕ ದಾಖಲಿಸಿದ ವಿರಾಟ್​

ಮುಂಬೈ (ಮಹಾರಾಷ್ಟ್ರ): ನ್ಯೂಜಿಲೆಂಡ್​​ ವಿರುದ್ಧದ ಸೆಮೀಸ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ದಿಗ್ಗಜ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್​ ಅವರ ಎರಡು ದಾಖಲೆಗಳನ್ನು ಮುರಿದಿದ್ದಾರೆ.ಇದೇ ವಿಶ್ವಕಪ್​ನಲ್ಲಿ ಏಕದಿನ ಕ್ರಿಕೆಟ್​ನ 49ನೇ ಶತಕ ಗಳಿಸಿ ಸಚಿನ್​ ದಾಖಲೆ ಸರಿಗಟ್ಟಿದ್ದ ವಿರಾಟ್​, ಇಂದು 50ನೇ ಶತಕ ಮಾಡಿ ರೆಕಾರ್ಡ್​ ಬ್ರೇಕ್​ ಮಾಡಿದ್ದಾರೆ. ಏಕದಿನ ಕ್ರಿಕೆಟ್​ನ 50ನೇ ಶತಕ ಗಳಿಸಿದ ವಿರಾಟ್​ ಕೊಹ್ಲಿ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದಿದ್ದಾರೆ. ವಿಶ್ವಕಪ್​ನ ಟಾಪ್​ ಸ್ಕೋರರ್​: ನಡೆಯುತ್ತಿರುವ ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ವಿರಾಟ್​ […]

ನಕಲಿ ಟಿಕೆಟ್​ ಬಗ್ಗೆ ಇರಲಿ ಎಚ್ಚರ : ಭಾರತ vs ನ್ಯೂಜಿಲೆಂಡ್​ ಸೆಮೀಸ್​ ಫೈಟ್​

ಮುಂಬೈ (ಮಹಾರಾಷ್ಟ್ರ): ಈಗಾಗಲೇ ವಿಶ್ವಕಪ್​ನ ಮುಂದಿನ ಮೂರು ಪಂದ್ಯಗಳ ಟಿಕೆಟ್​ಗಳು ಮಾರಾಟವಾಗಿದೆ.ಕೋಲ್ಕತ್ತಾದಲ್ಲಿ ವಿಶ್ವಕಪ್​ ಪಂದ್ಯಗಳ ಟಿಕೆಟ್ ಅಕ್ರಮ ಮಾರಾಟ ಪ್ರಕರಣದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಭಾರತ ಮತ್ತು ನ್ಯೂಜಿಲೆಂಡ್​ ನಡುವಣ ಹೈವೋಲ್ಟೇಜ್​ ಸೆಮೀಸ್​ ಪಂದ್ಯದ ಟಿಕೆಟ್ ಖರೀದಿಸುವಾಗ ಹೆಚ್ಚು ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ.ಸೆಮೀಸ್​ ಪಂದ್ಯಕ್ಕೆ ಕುತೂಹಲ ಹೆಚ್ಚಾಗಿದ್ದು, ಇದೇ ವೇಳೆ, ಕಾಳ ದಂಧೆಯಲ್ಲಿ ಟಿಕೆಟ್​ ಮಾರಾಟವೂ ಆರಂಭವಾಗಿದೆ. ಈ ಬಗ್ಗೆ ಕ್ರಿಕೆಟ್​ ಅಭಿಮಾನಿಗಳು ಜಾಗರೂಕರಾಗಿ ಎಂದು ಮುಂಬೈನ ಡಿಸಿಪಿ ಮನವಿ ಮಾಡಿದ್ದಾರೆ. ಸಾಮಾನ್ಯ ಪಂದ್ಯಗಳನ್ನು ನೋಡಲು […]

ವಿಶ್ವಕಪ್ ಕ್ರಿಕೆಟ್ ೨೦೨೩ : ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ೨೪೩ ರನ್ ಗಳ ಅಂತರದಿಂದ ಭರ್ಜರಿ ಗೆಲುವು

ಕೋಲ್ಕತ್ತಾ : ಕೋಲ್ಕತ್ತಾ ದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕಪ್ ೨೦೨೩ ರ್ ೩೭ ಪಂದ್ಯದಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಹಣಾಹಣಿಯಲ್ಲಿದ್ದವು. ಭಾರತ ಟಾಸ್ ಗೆಲ್ಲುವುದರ ಮೂಲಕ ಬ್ಯಾಟಿಂಗ್ ಅನ್ನು ಆಯ್ಕೆ ಮಾಡಿ ೩೨೬ ರನ್ಗಳ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾಗೆ ೩೨೭ ರನ್ ಗಳ ಗೆಲುವಿನ ಗುರಿಯನ್ನು ನೀಡಿತು. ಬ್ಯಾಟಿಂಗ್ ಆಯ್ದ ಭಾರತ ಮೊದಲಿಗೆ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮ ಕ್ರಮವಾಗಿ ೨೩(೨೪), ೪೦(೨೪) ರನ್ ಗಳನ್ನು ಮಾಡಿ ನಂತರ […]