ಕಾಲ್ನಡಿಗೆಯಲ್ಲೇ 3,550 ಮೆಟ್ಟಿಲೇರಿ ಹರಕೆ ಪೂರೈಸಿದ 116 ವರ್ಷದ ಲಕ್ಷ್ಮವ್ವ: ಕರ್ನಾಟಕದ ಈ ಛಲಗಾತಿ ಅಜ್ಜಿಯ ಸಾಹಸಕ್ಕೆ ಬೆರಗಾದ ಭಕ್ತರು

ತಿರುಪತಿ: ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಕರ್ನಾಟಕ ಮೂಲದ ಶತಾಯುಷಿ ವೃದ್ಧೆ ಲಕ್ಷ್ಮವ್ವ ಅವರು ತಮ್ಮ ಅಪರೂಪದ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. ಕುಟುಂಬ ಸದಸ್ಯರೊಂದಿಗೆ ತಿರುಮಲಕ್ಕೆ ಆಗಮಿಸಿದ ಅವರು, ಅಲಿಪಿರಿ ಮಾರ್ಗದ ಸುಮಾರು 3,550 ಮೆಟ್ಟಿಲುಗಳನ್ನು ಏರಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ತಲುಪಿರುವುದು ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ. ಸ್ಥಳೀಯವಾಗಿ ಭೀಮವ್ವ ಎಂದೂ ಕರೆಯಲ್ಪಡುವ ಲಕ್ಷ್ಮವ್ವ ಅವರಿಗೆ ಕುಟುಂಬಸ್ಥರ ಮಾಹಿತಿ ಪ್ರಕಾರ 116 ವರ್ಷ ವಯಸ್ಸಾಗಿದೆ. ಅವರ ಅಧಿಕೃತ ವಯಸ್ಸಿನ ದಾಖಲೆಗಳು ಲಭ್ಯವಾಗದಿದ್ದರೂ, ಶತಾಯುಷಿಯಾಗಿರುವುದು ವಿಡಿಯೊಗಳಲ್ಲಿ […]
ಇವಿಎಂ ಮುಕ್ತ ಚುನಾವಣೆ, ಮತಪಟ್ಟಿ ಪರಿಷ್ಕರಣೆ ರದ್ದತಿ ಕೋರಿ ಸುಪ್ರೀಂ ಕೋರ್ಟ್ಗೆ ಮೊರೆ ಹೋದ ‘ಐಎನ್ಡಿಐಎ’: ಪತ್ರದಲ್ಲಿರುವುದೇನು?

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಆಡಳಿತದಲ್ಲಿ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯಿಂದ ದೇಶದ ಚುನಾವಣಾ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಪ್ರತಿಪಕ್ಷಗಳ ‘ಐಎನ್ಡಿಐಎ’ ಮೈತ್ರಿಕೂಟ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಬೇಕು ಮತ್ತು ಮುಂದಿನ ಚುನಾವಣೆಗಳನ್ನು ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ನಡೆಸಬೇಕು ಎಂದು ಕೋರಿ ಮೈತ್ರಿಕೂಟದ 24 ಪಕ್ಷಗಳ ನಾಯಕರು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪತ್ರ ಬರೆದಿದ್ದಾರೆ. ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ, […]
ಹೊಲದ ಕಸಕ್ಕೂ ಚಿನ್ನದ ಬೆಲೆ! ರೈತರೇ, ಕೃಷಿ ತ್ಯಾಜ್ಯದಿಂದ ₹50 ಸಾವಿರ ಆದಾಯವಿದೆ ಗಮನಿಸಿ

ಬೆಂಗಳೂರು: ಬೆಳೆ ಕಟಾವಿನ ಬಳಿಕ ಹೊಲದಲ್ಲಿ ಉಳಿಯುವ ಕೃಷಿ ತ್ಯಾಜ್ಯವನ್ನು ಸುಟ್ಟು ಹಾಕುವ ಬದಲು ಅದನ್ನೇ ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಳ್ಳುವ ಹೊಸ ಅವಕಾಶ ರೈತರಿಗೆ ಲಭ್ಯವಾಗಿದೆ. ಕಾರ್ಬನ್ ಕ್ರೆಡಿಟ್ ವ್ಯವಸ್ಥೆಯ ಮೂಲಕ ಕಬ್ಬು, ಜೋಳ, ಬಾಳೆ ಸೇರಿದಂತೆ ವಿವಿಧ ಬೆಳೆಗಳ ತ್ಯಾಜ್ಯದಿಂದ ವರ್ಷಕ್ಕೆ ₹30 ಸಾವಿರದಿಂದ ₹50 ಸಾವಿರಕ್ಕೂ ಹೆಚ್ಚು ಹೆಚ್ಚುವರಿ ಆದಾಯ ಗಳಿಸುವ ಸಾಧ್ಯತೆ ಇದೆ. ಈ ಹೊಸ ಪರಿಕಲ್ಪನೆಯನ್ನು ಬೆಂಗಳೂರಿನ ರಿನ್ಯೂಕ್ರೆಡ್ (RenewCred) ಸ್ಟಾರ್ಟ್ಅಪ್ ಪರಿಚಯಿಸಿದೆ. ಅಭಿಮನ್ಯು ರಾಠಿ ಮತ್ತು ಯೋಗೇಂದ್ರ ಪಾಂಚಾಲ್ ಸ್ಥಾಪಿಸಿರುವ […]
ರಾಜ್ಯಸಭೆಯ ನೂತನ ಸದಸ್ಯರಾಗಿ ಆಯ್ಕೆಯಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದ ಮಂಜುನಾಥ ಭಂಡಾರಿ

ನವದೆಹಲಿ: ನವದೆಹಲಿಯ ಉಪರಾಷ್ಟ್ರಪತಿ ಕಚೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಜ್ಯಸಭೆಯ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಐಸಿಸಿ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭಾ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಖರ್ಗೆ ಅವರ ಪತ್ನಿ ರಾಧಾಬಾಯಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಇದೇ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಸೇರಿದಂತೆ ಪಕ್ಷದ ಹಲವು […]
ಪತಿಗಿಂತ ಹೆಚ್ಚು ಸಂಬಳ ಪಡೆಯುವ ಪತ್ನಿಗಿಲ್ಲ ಜೀವನಾಂಶ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಪತಿಗಿಂತ ಹೆಚ್ಚಿನ ಆದಾಯ ಹೊಂದಿರುವ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. 2024ರಲ್ಲಿ ವಿವಾಹವಾಗಿದ್ದ ದಂಪತಿ ಕೆಲವೇ ತಿಂಗಳಲ್ಲಿ ಪ್ರತ್ಯೇಕವಾಗಿದ್ದರು. ಬಳಿಕ ಪತ್ನಿ ಜೀವನಾಂಶ ಕೋರಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆಯ ವೇಳೆ, ಪತಿಯ ಮಾಸಿಕ ಆದಾಯ 60,646 ರೂ. ಇದ್ದರೆ, ಪತ್ನಿಯ ಮಾಸಿಕ ಆದಾಯ 1 ಲಕ್ಷ ರೂ. ಎಂಬುದು ದಾಖಲೆಗಳಿಂದ […]