ಕೂಡಲೇ ಬೇಕಾಗಿದ್ದಾರೆ

ಗೋವಾದ ಪ್ರಸಿದ್ಧ ಹೋಟೆಲಿಗೆ ತಂದೂರಿ ಚೆಫ್, ಕ್ಯಾಪ್ಟನ್,ವೈಟರ್, ಹಾಗೂ ಕ್ಲೀನಿಂಗ್ ಗೆ ಜನ ಬೇಕಾಗಿದ್ದಾರೆ. ಉತ್ತಮ ವೇತನ ಮತ್ತು ವಸತಿ ಸೌಲಭ್ಯವಿದೆ. ಸಂಪರ್ಕಿಸಿ: 9481658030

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆ.

ಢಾಕಾ: ದೀಪು ಚಂದ್ರದಾಸ್‌ ಅವರ ಬರ್ಬರ ಹತ್ಯೆಯಾದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಜನರು ಥಳಿಸಿ ಕೊಂದಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಅಮೃತ್‌ ಮೊಂಡಲ್‌ ಅಲಿಯಾಸ್‌ ಸಾಮ್ರಾಟ್‌ (29) ಎಂದು ಗುರುತಿಸಲಾಗಿದ್ದು, ಬುಧವಾರ ರಾತ್ರಿ 11 ಗಂಟೆ ಸಮಯದಲ್ಲಿ ರಾಜ್ಬಾರಿಯ ಪಾಂಗ್ಶಾ ಎಂಬಲ್ಲಿ ಈತನ ಹತ್ಯೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಮೃತ ವ್ಯಕ್ತಿ ಅಮೃತ್‌, ಕಾಳಿಮೊಹರ್‌ ಬಳಿಯ ಹೊಸೇನ್‌ದಂಗಾ ಗ್ರಾಮದವನಾಗಿದ್ದು, ‘ಸಾಮ್ರಾಟ್‌ ವಾಹಿನಿ’ ಎಂಬ ಸುಲಿಗೆಕೋರರ ತಂಡಕ್ಕೆ ನಾಯಕನಾಗಿದ್ದ ಎಂದು ಸ್ಥಳೀಯರು […]

ಮುಂಬೈನಲ್ಲಿ ಪೊಲೀಸ್ ಅಧಿಕಾರಿಗಳೆಂದು ನಟಿಸಿ ಬೃಹತ್ ಸೈಬರ್ ವಂಚನೆ: ಬರೋಬ್ಬರಿ 9 ಕೋಟಿ ರೂ. ಕಳೆದುಕೊಂಡ 85ರ ವೃದ್ಧ!

ಮುಂಬೈ: ದೇಶದಲ್ಲಿ ಸೈಬರ್‌ ವಂಚಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ವಂಚಕರಿಗೆ ನಿವೃತ್ತ ಉದ್ಯೋಗಿಗಳು, ಟೆಕ್ಕಿಗಳು, ವಿದ್ಯಾವಂತರೇ ಹೆಚ್ಚು ಟಾರ್ಗೆಟ್‌. ಇದೀಗ ಮುಂಬೈನ ಗಿರ್ಗಾಂವ್ ಪ್ರದೇಶದಲ್ಲಿ ವಾಸಿಸುತ್ತಿದ್ದ 85 ವರ್ಷದ ವೃದ್ಧರೊಬ್ಬರಿಗೆ ‘ಡಿಜಿಟಲ್ ಬಂಧನ’ ಆಗಿದ್ದು, ಸೈಬರ್ ವಂಚನೆಯ ಮೂಲಕ ಬರೋಬ್ಬರಿ 9 ಕೋಟಿ ರೂ.ಗಳಷ್ಟು ಹಣ ವಂಚಿಸಿರುವ ಭಾರೀ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಅಧಿಕಾರಿಗಳೆಂದು ನಟನೆ ಮಾಡಿದ ವಂಚಕರು, ಹಣ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಆರೋಪ ಹೊರಿಸಿ, ಬೆದರಿಸಿ ವೃದ್ಧನನ್ನು ವಿವಿಧ ಬ್ಯಾಂಕ್ […]

ಕಾಂಬೋಡಿಯಾ- ಥಾಯ್ಲೆಂಡ್ ಗಡಿ ಸಂಘರ್ಷ: ಹಿಂದೂ ಧರ್ಮದ ವಿಷ್ಣು ಪ್ರತಿಮೆ ಧ್ವಂಸ; ಭಾರತ ತೀವ್ರ ಖಂಡನೆ!

ನವದೆಹಲಿ: ಕಾಂಬೋಡಿಯಾ ಗಡಿಯಲ್ಲಿ ಹಿಂದೂ ಧರ್ಮದ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿರುವುದಕ್ಕೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಕಾಂಬೋಡಿಯಾ ಗಡಿಯಲ್ಲಿ ನಿರ್ಮಾಣ ಮಾಡಲಾಗಿದ್ದ 30 ಅಡಿ ಎತ್ತರದ ವಿಷ್ಣ ಪ್ರತಿಮೆಯನ್ನು ಧ್ವಂಸ ಮಾಡಿದ ಬಗ್ಗೆ ವರದಿಗಳನ್ನು ನಾವು ನೋಡಿದ್ದೇವೆ. ಈ ಘಟನೆ ಜಗತ್ತಿನಾದ್ಯಂತ ಇರುವ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದು ಇಂತಹ ಘಟನೆ ನಡೆಯಬಾರದಿತ್ತು ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಶಾಂತಿ ಕಾಪಾಡಲು ಹಾಗೂ ಪ್ರಾಣಹಾನಿ ಮತ್ತು ಆಸ್ತಿ–ಪಾಸ್ತಿ ನಷ್ಟವನ್ನು ತಡೆಯಲು, ಎರಡೂ ರಾಷ್ಟ್ರಗಳು […]

ಹೊಸ ವರ್ಷಾಚರಣೆ ಪಾರ್ಟಿಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತಿಲ್ಲ; ಚೆನ್ನೈ ಹೈಕೋರ್ಟ್ ಮಹತ್ವದ ಸೂಚನೆ!

ಹೊಸ ವರ್ಷ ಆಚರಣೆಯ ಪಾರ್ಟಿಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತಿಲ್ಲ ಎಂದು ಚೆನ್ನೈ ಹೈಕೋರ್ಟ್​ ಮಹತ್ವದ ಸೂಚನೆ ನೀಡಿದೆ. ಹೊಸ ವರ್ಷಾಚರಣೆ ಸಂದರ್ಭಗಳಲ್ಲಿ ಸ್ಟಾರ್ ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳು ಸೇರಿದಂತೆ ಮಕ್ಕಳನ್ನು ಮದ್ಯ ಸೇವಿಸುವ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ ಎಂಬ ದೂರು ಬಂದರೆ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸಾಮಾನ್ಯವಾಗಿ ಹೊಸ ವರ್ಷಾಚರಣೆಯ ಸಮಯದಲ್ಲಿ, ಚೆನ್ನೈ ಮರೀನಾ ಬೀಚ್‌ನಲ್ಲಿರುವ ಸ್ಟಾರ್ ಹೋಟೆಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಇವುಗಳಿಗೆ ಹೆಚ್ಚಿನ […]