ರಂಜಿತ್ ಕಾರ್ಕಳ ನಿರ್ದೇಶನದ ಚಕ್ಷುಷ ಸಿನೆಮಾದ ಹಾಡು ಬಿಡುಗಡೆ

ಉಡುಪಿ: ರಂಜಿತ್ ಕಾರ್ಕಳ ನಿರ್ದೇಶನದ ಚಕ್ಷುಷ ಸಿನೆಮಾದ ಹಾಡು ಇತ್ತೀಚೆಗೆ ಬಿಡುಗಡೆ ಗೊಂಡಿದೆ. ಅರ್.ಕೆ. ಪ್ರೊಡಕ್ಷನ್ಸ್  ಬ್ಯಾನರ್ ನಡಿಯಲ್ಲಿ ಚಿತ್ರ ಮೂಡಿ ಬಂದಿದ್ದು, ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಅನಿರುಧ್ ಶಾಸ್ತ್ರಿ ಹಾಡಿರುವ ಹಾಡು ” ಬರೆದು ಹಾಡಿದಂತಿದೆ ” ಹಾಡು ಯುವ ಮನಸ್ಸುಗಳ ತುಮುಲ ಭಾವವನ್ನು ಚಿಗುರಿಸಿದಂತಿದೆ. ನಿರ್ಮಾಪಕ ಸುಪ್ರೀತ್ ಬಿ.ಕೆ, ಲಿರಿಕ್ಸ್  ಪುನೀತ್ ರಾಜ್, ಮ್ಯುಸಿಕ್ ಆದಿಲ್ ನಡಾಪ್ ನೀಡಿದ್ದು ಮನು ಬಿಕೆ ಸಹಕಾರ ನೀಡಿದ್ದಾರೆ. ಚಿತ್ರದಲ್ಲಿ ಅಮಿತ್ ಗಂಗೂರ್, ರಚನ ಜೆ.ಶೆಟ್ಟಿ ಶರ್ಮಿಳಾ […]

ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ನವದೆಹಲಿ: ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಿರ್ದೇಶಕ ರೆಮೋ ಡಿಸೋಜಾ (46) ಅವರಿಗೆ ಇಂದು ಮಧ್ಯಾಹ್ನ ಹೃದಯಾಘಾತವಾಗಿದ್ದು, ಅವರು ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ರೆಮೋ ಡಿಸೋಜಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಆಂಜಿಯೋಗ್ರಫಿ ಮಾಡಿದ್ದಾರೆ. ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ರಿಮೋ ಬಾಲಿವುಡ್ ನ ಕಿಕ್, ಝೀರೋ, ಬಾಜಿರಾವ್ ಮಸ್ತಾನಿ, ಭಜರಂಗಿ ಭಾಯಿಜಾನ್, ಯೇ ಜವಾನಿ ಹೈ ದಿವಾನಿ […]

ತವರೂರಿನಲ್ಲೇ ಸುಸಜ್ಜಿತ ಸ್ಟುಡಿಯೋ ನಿರ್ಮಿಸಿದ ರವಿ ಬಸ್ರೂರು.!

ಉಡುಪಿ: ವಿಭಿನ್ನ ಶೈಲಿಯ‌ ಸಂಗೀತ ಸಂಯೋಜನೆಯ ಮೂಲಕ ಕನ್ನಡಿಗರ ಮನ ಗೆದ್ದಿರುವ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು, ತಮ್ಮ ಹುಟ್ಟೂರಿಗೆ ವಿಶೇಷ ಕೊಡುಗೆಯನ್ನು ಕೊಟ್ಟಿದ್ದಾರೆ. ಆ ಮೂಲಕ ತಮ್ಮ ಹಳ್ಳಿಯನ್ನು ನಗರಕ್ಕೆ ಪರಿಚಯಿಸುವ ಮಾದರಿ ಕಾರ್ಯ ಮಾಡುತ್ತಿದ್ದಾರೆ. ಹೌದು, ರವಿ ಅವರು ತಮ್ಮ ಮೆಚ್ಚಿನ ಊರು ಬಸ್ರೂರಿನಲ್ಲಿ ಸುಸಜ್ಜಿತವಾಗಿ ಮ್ಯೂಸಿಕ್‌ ಸ್ಟುಡಿಯೋ ಒಂದನ್ನು ಕಟ್ಟಿದ್ದಾರೆ. ಅಲ್ಲಿಂದಲೇ ಕನ್ನಡ, ತೆಲುಗು, ತಮಿಳು ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ. ರವಿ ಬಸ್ರೂರು ನಗರಕ್ಕೆ ತೆರಳಿ ಖ್ಯಾತಿ, ಹಣ ಸಂಪಾದಿಸಿದರೂ […]

ಸದ್ದಿಲ್ಲದೆ ಸಮಾಜದ ಕಣ್ತೆರೆಸುತ್ತಿದೆ ‘ಪೊಕಾವಿ’ ತುಳು ಕಿರುಚಿತ್ರ.!

ಉಡುಪಿ: ಕಿರುಚಿತ್ರ ಎನ್ನುವುದು ಯಾವುದೇ ಸಾಮಾಜಿಕ ಸಂದೇಶವನ್ನು ಜನರಿಗೆ ಮನಮುಟ್ಟುವಂತೆ ತಿಳಿಸುವ ಪ್ರಬಲ ಮಾಧ್ಯಮವಾಗಿದೆ. ಇಲ್ಲೊಂದು ತಂಡ ಇದೇ ಮಾಧ್ಯಮ ಮೂಲಕ ಸಮಾಜಕ್ಕೆ ಅದ್ಭುತ ಸಂದೇಶ ನೀಡಿದೆ. ಎಸ್, ಧೀರಜ್ ಆಚಾರ್ಯ ಎರ್ಲಪಾಡಿ ಅವರು ನಟಿಸಿ, ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಪೊಕಾವಿ’ ತುಳು ಕಿರುಚಿತ್ರ ಸಮಾಜದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ. ಅಂಗವಿಕಲ ಯುವಕ, ಯುವತಿಯರಿಗೆ ಬದುಕು ನೀಡಿ (ಅಂಗವಿಕಲ ಅಣ್ ಪೊಣ್ಣುಲೆಗ್ ಲೈಫ್ ಕೊರ್ಲೆ) ಎಂಬ ಉದ್ದೇಶದಿಂದ ಈ ಕಿರುಚಿತ್ರವನ್ನು ನಿರ್ಮಿಸಲಾಗಿದೆ. ಸೌಂದರ್ಯ, ಹಣ, […]

ಕನ್ನಡಿಗರೆಲ್ಲಾ ನೋಡಲೇಬೇಕಾದ ಕಾಡೋ ಕಿರುಚಿತ್ರ “ಕನ್ನಡ ಮೀಡಿಯಂ”

ಕನ್ನಡದ ಕಾಳಜಿ, ಪ್ರೀತಿಯ ಕುರಿತು ಕನ್ನಡದಲ್ಲಿ ಕೆಲವೊಂದು ಸಿನಿಮಾಗಳು ಕಿರುಚಿತ್ರಗಳು ಬಂದಿದೆ.ಅವುಗಳಲ್ಲಿ ಕೆಲವೊಂದು ಕಿರುಚಿತ್ರಗಳು ವಿಭಿನ್ನ ನಿರೂಪಣೆ ಮತ್ತು ಹೊಸ ಪ್ರಯತ್ನಗಳಿಂದ ಕಾಡುತ್ತದೆ. ಅಂತಹ ವಿಭಿನ್ನ ಮತ್ತು ಕಾಡುವ ಕಿರುಚಿತ್ರವೊಂದು ರಿಲೀಸ್ ಆಗಿದೆ. ಸಿನಿಮಾದ ಹೆಸರು “ಕನ್ನಡ medium” ಕನ್ನಡ ಭಾಷೆಯ ರಕ್ಷಣೆ ಹಾಗೂ ಸರಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಕಿರು ಚಿತ್ರವನ್ನು ಬೆಳಕು ಚೆಲ್ಲುತ್ತದೆ. ಸುಂದರವಾದ ಈ ಚಿತ್ರವನ್ನು ದಶಮಾನೋತ್ಸವ ಆಚರಿಸಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಟ್ಟ ಶಿರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಿಕರಿಸಿದ್ದು, ಅಡ್ಡಹೊಳೆ ಪ್ರಾಥಮಿಕ […]