ಸದ್ದಿಲ್ಲದೆ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ ಶಿವಾಜಿ ಸುರತ್ಕಲ್ 2: ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ

ಶಿವಾಜಿ ಸುರತ್ಕಲ್ 2: ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ, ರಮೇಶ್ ಅರವಿಂದ್ ನಟನೆಯ ಆಕಾಶ್ ಶ್ರೀವತ್ಸ ನಿರ್ದೇಶಿಸಿ ಸಂಕಲಿಸಿರುವ ಚಿತ್ರ ಸದ್ದಿಲ್ಲದೆ ಬಿಡುಗಡೆಯಾಗಿದ್ದರೂ ಸದ್ದು ಮಾಡುತ್ತಿದೆ. ಶಿವಾಜಿ ಸುರತ್ಕಲ್ ಭಾಗ 1-ರಣಗಿರಿ ರಹಸ್ಯ ಕೂಡಾ ಚಿತ್ರರಸಿಕರಿಗೆ ಮೋಡಿ ಮಾಡಿತ್ತು. ಅಬ್ಬರದ ಪ್ರಚಾರ, ಗಿಮಿಕ್ ಗಳಿಲ್ಲದೆ ಕೇವಲ ಕಥಾ ಹಂದರದಿಂದಲೇ ಶಿವಾಜಿ ಜನರ ಮನಗೆಲ್ಲುತ್ತಿದ್ದಾನೆ. ಇಬ್ಬರು ಹುಡುಗಿಯರು ಕ್ರೂರವಾಗಿ ಸಾವನ್ನಪ್ಪಿದ್ದು ಶಿವಾಜಿ ಜೊತೆಯಲ್ಲಿ ಆತನ ನಂಬಿಕಸ್ಥ ಸಹಾಯಕ ಗೋವಿಂದು ಈ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡಿರುವ ಕಥಾ ಹಂದರವಿದೆ. […]
ಅಮೆಜಾನ್ ಪ್ರೈಮ್ ಒಟಿಟಿ ಯಲ್ಲಿ ಕಬ್ಜ ಚಿತ್ರ ಪ್ರಸಾರ

ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ ಕನ್ನಡ ಚಲನಚಿತ್ರ ‘ಕಬ್ಜ’ ಏಪ್ರಿಲ್ 14ರಿಂದ ಅಮೆಜಾನ್ ಪ್ರೈಮ್ ನಲ್ಲಿ ತೆರೆಕಾಣಲಿದ್ದು, ಚಿತ್ರರಸಿಕರು ಯಾವಾಗ ಬೇಕಾದರೂ ವೀಕ್ಷಿಸಬಹುದು. ಚಿತ್ರವು ಬೆಳ್ಳಿತೆರೆಯಲ್ಲಿ ಬಿಡುಗಡೆ ಹೊಂದಿ 25 ದಿನಗಳನ್ನು ಪೂರ್ಣಗೊಳಿಸಿದ್ದು, ಚಿತ್ರ ತಂಡವು ಸಂತೋಷ ವ್ಯಕ್ತಪಡಿಸಿದೆ. ಕಬ್ಜ ಚಿತ್ರದ ಮುಂದುವರೆದ ಭಾಗವೂ ಕೂಡಾ ಚಿತ್ರೀಕರಣವನ್ನು ಪ್ರಾರಂಭಿಸಿದ್ದು ಚಂದ್ರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದ ಬಗ್ಗೆ ಎಲ್ಲರಿಗೂ […]
ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ: ಭದ್ರತೆ ಹೆಚ್ಚಳ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಮಾಡಿರುವುದು ಬೆಳಕಿಗೆ ಬಂದಿರುವ ಬೆನ್ನಲ್ಲೇ ಅವರಿಗೆ ನೀಡಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆ ಕರೆ ಮಾಡಿದವನು ತನ್ನನ್ನು ರಾಜಸ್ಥಾನದ ಜೋಧಪುರದ ರೋಕಿ ಭಾಯ್ ಎಂದು ಪರಿಚಯಿಸಿಕೊಂಡಿದ್ದು, ಏಪ್ರಿಲ್ 30 ರಂದು ನಟನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂಗೆ ಬಂದ ಕರೆಯಲ್ಲಿ, ರಾಜಸ್ಥಾನದ ಜೋಧಪುರದ ರೋಕಿ ಭಾಯ್ ಎಂದು ಗುರುತಿಸಿಕೊಂಡ ವ್ಯಕ್ತಿ ಏಪ್ರಿಲ್ 30 ರಂದು ನಟ ಸಲ್ಮಾನ್ ಖಾನ್ […]
ಸದ್ದು ಮಾಡುತ್ತಿದೆ ಪುಷ್ಪ- 2: ದಿ ರೂಲ್ ಟ್ರೈಲರ್ ….. ಪುಷ್ಪ ಎಲ್ಲಿದ್ದಾನೆ?

ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ ಪುಷ್ಪ ಚಿತ್ರದ ಮುಂದುವರಿದ ಭಾಗ ಪುಷ್ಪ-2 : ದಿ ರೂಲ್ ಚಿತ್ರದ ಟ್ರೈಲರ್ ಅಲ್ಲು ಅರ್ಜುನ್ ಜನ್ಮದಿನದಂದು ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ಸುಕುಮಾರ್ ಬರೆದು ನಿರ್ದೇಶಿಸಿರುವ, ಸುಕುಮಾರ್ ರೈಟಿಂಗ್ಸ್ ಸಹಯೋಗದಲ್ಲಿ ಮೈತ್ರಿ ಮೂವೀ ಮೇಕರ್ಸ್ನ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ನಿರ್ಮಿಸಿರುವ ಪುಷ್ಪ-1: ದಿ ರೈಸ್ ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ಅಲ್ಲು ಅರ್ಜುನ್, ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಧನುಂಜಯ್, ರಾವ್ ರಮೇಶ್, […]
ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮರ್ಡರ್ ಮಿಸ್ಟ್ರಿ ಸಿನಿಮಾ ಅಜ್ಞಾತವಾಸಿ ಟೀಸರ್ ಬಿಡುಗಡೆ

ದಾಕ್ಷಾಯಣಿ ಟಾಕೀಸ್ ಪ್ರಸ್ತುತಪಡಿಸುತ್ತಿರುವ “ಅಜ್ಞಾತವಾಸಿ” ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲಕಾರಿಯಾಗಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಮತ್ತು ಸಪ್ತಸಾಗರದಾಚೆ ಎಲ್ಲೋ ತಯಾರಕರಿಂದ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಅಜ್ಞಾತವಾಸಿ ಚಿತ್ರದ ಟೀಸರ್ ಚಿತ್ರದ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸುತ್ತಿದೆ. ರಂಗಾಯಣ ರಘು, ಪಾವನ, ರವಿಶಂಕರ್ ತಾರಾಗಣವಿದ್ದು, ಗುಲ್ಟೂ ಚಿತ್ರ ನಿರ್ದೇಶಿಸಿದ್ದ ಜನಾರ್ಧನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರವನ್ನು ಹೇಮಂತ್ ಎಂ ರಾವ್, ಪ್ರಚುರ ಪಿ ಪಿ, ಜಯಲಕ್ಷ್ಮಿ ನಿರ್ಮಿಸಿದ್ದಾರೆ. ಕೃಷ್ಣರಾಜ್ ಚಿತ್ರಕಥೆ ಇದೆ. ಚಿತ್ರದ […]