ಕೃಷ್ಣನೆಂದರೆ ಭಕ್ತಿ ಭಾವಗಳ ಸಂಗಮ: ಉಡುಪಿ ಅಷ್ಟಮಿ ವಿಶೇಷ ಬರಹ.

ಮತ್ತೆ ಬಂದಿದೆ ಉಡುಪಿ ಅಷ್ಟಮಿ.ಕೃಷ್ಣನ ಸಂಭ್ರಮದ ಹಬ್ಬ,ಉಡುಪಿಯವರೆಲ್ಲರೂ ಹರುಷದಿಂದ ಕುಣಿಯುವ ಹಬ್ಬ. ಭಾರತದ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಒಂದು. ಭಗವಾನ್ ಶ್ರೀಕೃಷ್ಣರು ಜನಿಸಿದ ದಿನವೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಚಾಂದ್ರಮಾನ ಪ್ರಕಾರ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ಪ್ರಕಾರ ಸಿಂಹಮಾಸದ ರೋಹಿಣಿ ನಕ್ಷತ್ರದಂದು ಜನ್ಮಾಷ್ಟಮಿ ಹಬ್ಬ ಬರುತ್ತದೆ. ಪುರಾಣಗಳ ಪ್ರಕಾರ ಮಥುರೆಯ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ ಎಂಟನೇ ಮಗನಾಗಿ ಕೃಷ್ಣ ಜನಿಸಿದರು. ಕಂಸನು ಅವರ ಮಕ್ಕಳನ್ನು ಕೊಲ್ಲುತ್ತಿದ್ದುದರಿಂದ, ವಸುದೇವನು ಕೃಷ್ಣನನ್ನು ಗುಪ್ತವಾಗಿ ಗೋಕುಲಕ್ಕೆ […]
ಸೆಪ್ಟೆಂಬರ್ 14 ರಂದು ಮಲ್ಪೆ ಬೀಚ್ನಲ್ಲಿ ಉಡುಪಿದ ಪಿಲಿನಲಿಕೆ ಕಾರ್ಯಕ್ರಮ

ಉಡುಪಿ; ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಲ್ಪೆ ಕೊಳ ಫ್ರೆಂಡ್ಸ್ ವತಿಯಿಂದ ಸೆಪ್ಟೆಂಬರ್ 14 ರಂದು ಮಲ್ಪೆ ಬೀಚ್ನಲ್ಲಿ ಮೂರನೇ ವರ್ಷದ ‘ಉಡುಪಿದ ಪಿಲಿನಲಿಕೆ -2025’ ಕಾರ್ಯಕ್ರಮ ಮಲ್ಪೆ ಬೀಚ್ನಲ್ಲಿ ನಾಡೋಜ ಡಾ. ಜಿ. ಶಂಕರ್ ವೇದಿಕೆಯಲ್ಲಿ ನಡೆಯಲಿದೆ ಎಂದು ಆಯೋಜಕರಾದ ವಿವೇಕ್ ಜಿ. ಸುವರ್ಣ ಹೇಳಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಕಲೆ, ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಯನ್ನು ವೈಭವೀಕರಿಸುವುದು ಈ ಕಾರ್ಯಕ್ರಮದ ಉದ್ದೇಶ. ಸಾಂಪ್ರದಾಯಿಕ ಹುಲಿವೇಷದ ಈ ಪ್ರದರ್ಶನವು ಉಡುಪಿ […]
ಉಡುಪಿ ಶ್ರೀಕೃಷ್ಣಮಠದಲ್ಲಿ ಅಷ್ಟಮಿ ಸಂಭ್ರಮಕ್ಕೆ ಭರದ ಸಿದ್ಧತೆ

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಶ್ರೀಕೃಷ್ಣನ ಬಾಲಲೀಲೆಗಳನ್ನು ತೋರಿಸುವ ವಿಟ್ಲಪಿಂಡಿ ಉತ್ಸವ ಉಡುಪಿ ಅಷ್ಟಮಿಯ ಪ್ರಮುಖ ಆಕರ್ಷಣೆಯಾಗಿದೆ. ಸೆ.14ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 15ರಂದು ಕೃಷ್ಣ ಲೀಲೋತ್ಸವಕ್ಕೆ (ವಿಟ್ಲಪಿಂಡಿ) ಭರದ ಸಿದ್ಧತೆ ನಡೆಯುತ್ತಿದ್ದು, ಮೊಸರು ಕುಡಿಕೆ ಉತ್ಸವಕ್ಕೆ ರಥಬೀದಿಯ ಸುತ್ತಲೂ 13 ಮರದ ತ್ರಿಕೋನಾಕೃತಿಯ ಗುರ್ಜಿಗಳ ನಿರ್ಮಾಣ ಪ್ರಕ್ರಿಯೆ ಈಗಾಗಲೇ ಸಂಪೂರ್ಣಗೊಂಡಿದೆ. ಶ್ರೀ ಕೃಷ್ಣಮಠದ ಪರ್ಯಾಯದ ನಂತರ ಅಷ್ಟಮಿ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಎರಡು ದಿನಗಳ ಕಾಲ ನಡೆಯುವ ಅಷ್ಟಮಿಗೆ […]
ಉಡುಪಿ: ಸೆ.15ರಂದು ಮುಂಬೈಯ ಅಲಾರೆ ಗೋವಿಂದ ತಂಡದಿಂದ 10 ಕಡೆ ಮಡಿಕೆ ಒಡೆಯುವ ಪ್ರದರ್ಶನ

ಉಡುಪಿ: ಶ್ರೀ ಸಾಯಿಲಕ್ಷ್ಮೀ ಉಡುಪಿ ಸಂಸ್ಥೆಯ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮುಂಬಯಿ ಬಾಲಮಿತ್ರ ವ್ಯಾಯಾಮ ಶಾಲೆಯ 200 ಮಂದಿ ಸದಸ್ಯರ ಅಲಾರೆ ಗೋವಿಂದ ತಂಡವು ಸೆ.15ರಂದು ವಿಟ್ಲಪಿಂಡಿ ಸಂದರ್ಭದಲ್ಲಿ ಉಡುಪಿ ಶ್ರೀ ಕೃಷ್ಣಮಠದ ಕನಕಗೋಪುರದ ಎದುರು ಸಹಿತ ನಗರದ 10 ಕಡೆ 50 ಅಡಿ ಎತ್ತರದ ಮಡಿಕೆ ಒಡೆಯುವ ಪ್ರದರ್ಶನ ನೀಡಲಿದ್ದಾರೆ ಎಂದು ಸಹ ಸಂಯೋಜಕ ಸಂತೋಷ ಡಿ. ಸುವರ್ಣ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೆ.15ರಂದು ಬೆಳಗ್ಗೆ 9.30ಕ್ಕೆ ಶ್ರೀ […]
ಕೇಂಬ್ರಿಡ್ಜ್ ವಿ.ವಿಯೊಂದಿಗೆ ಕರ್ನಾಟಕ ಸರ್ಕಾರದ ಸಂಶೋಧನೆ ಮತ್ತು ಶೈಕ್ಷಣಿಕ ಸಹಯೋಗ: ಕರ್ನಾಟಕದ ಶೈಕ್ಷಣಿಕ ಕ್ಷೇತ್ರಕ್ಕೆ ಜಾಗತಿಕ ಪ್ರಾಮುಖ್ಯತೆ

ಬೆಂಗಳೂರು: ಕರ್ನಾಟಕ ಸರ್ಕಾರವು ಜಾಗತಿಕ ಶೈಕ್ಷಣಿಕ ವಲಯದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಇಂಗ್ಲೆಂಡ್ನ ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತೇಜಿಸುವ ನಿಟ್ಟಿನಲ್ಲಿ ದೀರ್ಘಾವಧಿಯ ಶೈಕ್ಷಣಿಕ ಸಹಯೋಗವನ್ನು ಘೋಷಿಸಲಾಗಿದೆ. ಈ ಸಹಯೋಗವು ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವುದರೊಂದಿಗೆ, ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ಅಂತರಾಷ್ಟ್ರೀಯ ಮಟ್ಟದ ಜ್ಞಾನ ವಿನಿಮಯ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ಅವಕಾಶಗಳನ್ನು ಒದಗಿಸುವುದೇ ಪ್ರಧಾನ ಉದ್ದೇಶವಾಗಿದೆ. ಶೈಕ್ಷಣಿಕ ಸಹಯೋಗವನ್ನು ಮುನ್ನಡೆಸಲು ಪ್ರೊ. ರಾಜೀವ್, ಪ್ರೊ. ಟೊನ್ನಿ, ಸಂಶೋಧನೆ ಮತ್ತು […]