ಮಂಗಳೂರು ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನದ ಆಶ್ರಯದಲ್ಲಿ ನಾಳೆಯಿಂದ 18 ದಿನಗಳ ತುಳು ಭಗವದ್ಗೀತೆ ಪ್ರವಚನ

ಮಂಗಳೂರು: ಇಸ್ಕಾನ್ ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನ, ಕುಳಾಯಿ ಮಂಗಳೂರು ಇದರ ಆಶ್ರಯದಲ್ಲಿ ಜುಲೈ 3 ರಿಂದ ಬೆಳಗ್ಗೆ 6 ಗಂಟೆಗೆ ಮತ್ತು ರಾತ್ರಿ 8 ಗಂಟೆಗೆ 18 ದಿವಸಗಳ ಉಚಿತವಾಗಿ ನಡೆಯುವ ತುಳು ಭಗವದ್ಗೀತೆ ಪ್ರವಚನದ 38ನೇ ಬ್ಯಾಚ್ ನಡೆಯಲಿದೆ. ಭಗವದ್ಗೀತೆಯನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವ ಸುವರ್ಣ ಅವಕಾಶ ಇಲ್ಲಿದೆ. https://chat.whatsapp.com/JtIbDzma2xtIyp3rFnFWJS ಭಗವದ್ಗೀತೆಯ ಪ್ರವಚನ ಪಡೆದುಕೊಳ್ಳಲು ಈ ಮೇಲಿನ ಲಿಂಗನ್ನು ಕ್ಲಿಕ್ ಮಾಡಿ ವಾಟ್ಸಾಪ್ ಗ್ರೂಪಿಗೆ ಸೇರಿಕೊಳ್ಳಬಹುದು.

ಇಂದಿನಿಂದ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ‘ವಿರಾಟ್ ರಾಮಾಯಣ ‘ದ ನಿರ್ಮಾಣ ಕಾರ್ಯ ಆರಂಭ

ಪಾಟ್ನಾ(ಬಿಹಾರ): ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಲಿರುವ ವಿರಾಟ್​ ರಾಮಾಯಣ ದೇವಾಲಯವು ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾದಲ್ಲಿ ನಿರ್ಮಾಣವಾಗಲಿದೆ. ಮಹಾವೀರ ಮಂದಿರ ನ್ಯಾಸ್‌ನ ಮಹತ್ವಾಕಾಂಕ್ಷೆಯ ಯೋಜನೆಯ ವಿರಾಟ್ ರಾಮಾಯಣ ದೇವಾಲಯದ ನಿರ್ಮಾಣ ಕಾರ್ಯವು ಜೂನ್ 20 ಮಂಗಳವಾರದಿಂದ ಅಂದರೆ ಇಂದಿನಿಂದ ಪ್ರಾರಂಭವಾಗುತ್ತಿದೆ. ದೊಡ್ಡ ಹೈಡ್ರಾಲಿಕ್ ಮತ್ತು ಇತರ ಯಂತ್ರಗಳು ಕೇಸರಿಯಾ – ಚಾಕಿಯಾ ರಸ್ತೆಯ ಕಥ್ವಾಲಿಯಾ-ಬಹುರಾದ ಜಾಂಕಿ ನಗರವನ್ನು ಈಗಾಗಲೇ ತಲುಪಿದೆ. ಇಂದು ಬೆಳಗ್ಗೆ 11.50 ಕ್ಕೆ ವಿಜಯ್ ಮುಹೂರ್ತದಲ್ಲಿ ಕೆಲಸ ಆರಂಭವಾಗಲಿದೆ. ಮೊದಲು ದೇವಸ್ಥಾನದ ಒಟ್ಟು […]

ಕೇಂದ್ರದ ‘ಪ್ರಸಾದ್ ಯೋಜನೆ’ಗೆ ಒಪ್ಪಿಗೆ; ಚಾಮುಂಡಿ ಬೆಟ್ಟದಲ್ಲಿ ,ಧಾರ್ಮಿಕ ಕ್ಷೇತ್ರದಲ್ಲಾಗುವ ಅಭಿವೃದ್ಧಿಗಳೇನು?

ಮೈಸೂರು : ಪ್ರವಾಸೋದ್ಯಮ ಇಲಾಖೆಯಿಂದ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಪ್ರಸಾದ್ ಯೋಜನೆ ಜಾರಿಗೆ ತಂದಿದೆ.ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಗೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವಾಸಸ್ಥಾನ ಚಾಮುಂಡಿ ಬೆಟ್ಟ ಆಯ್ಕೆಯಾಗಿತ್ತು. ಬೆಟ್ಟವನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅಂದಾಜು 45.75 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಆಡಳಿತಾತ್ಮಕವಾಗಿ ಕೇಂದ್ರ ಅನುಮೋದನೆ ನೀಡಿದೆ. ಈ ಹಿಂದೆ ಕೇಂದ್ರದ ಮಹತ್ವದ ಯೋಜನೆ ಪ್ರಸಾದ್‌ಗೆ […]

ಹಾವೇರಿಯ ಕರ್ಜಿಗಿಯಲ್ಲಿ ಕಾರಹುಣ್ಣಿಮೆ ಸಂಭ್ರಮ

ಹಾವೇರಿ : ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ವಿಶೇಷ ಅಲಂಕಾಲ ಮಾಡುವ ಮೂಲಕ ಪೂಜಾ ಕೈಂಕರ್ಯಗಳು ನೆರವೇರಿದವು. ಕಾರಹುಣ್ಣಿಮೆ ರೈತರ ಪಾಲಿನ ಸಂಭ್ರಮದ ಹಬ್ಬಗಳಲ್ಲೊಂದು. ಪ್ರತಿ ವರ್ಷ ಉತ್ತರ ಕನಾ೯ಟಕ ಭಾಗದ ರೈತರು ಕಾರಹುಣ್ಣಿಮೆ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಹಾವೇರಿಯ ಕರ್ಜಗಿ ಗ್ರಾಮದಲ್ಲೂ ಸಹ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಹಬ್ಬದ ಆಚರಣೆ ಹೇಗಿರುತ್ತದೆ? : ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸಕ್ಕೆ ಬ್ರಹ್ಮಲಿಂಗೇಶ್ವರ […]

ಬೊರಿವಲಿ ಪಶ್ಚಿಮ: ಶ್ರೀ ಕ್ಷೇತ್ರ ಜಯರಾಜನಗರದ ಶ್ರೀಮಹಿಷಮರ್ಧಿನಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ

ಬೊರಿವಲಿ: ಉತ್ತರ ಮುಂಬಯಿ ಬೊರಿವಲಿ ಪಶ್ಚಿಮ ಪರಿಸರದ ಶ್ರೀ ಕ್ಷೇತ್ರ ಜಯರಾಜನಗರದ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಜರುಗುತ್ತಿರುವ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಜೂ. 1ರಂದು ಬೆಳಿಗ್ಗೆ ಶ್ರೀದೇವಿಯ ಸನ್ನಿಧಾನದಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಯವರ ನೇತೃತ್ವದಲ್ಲಿ ಅಷ್ಟ ಬಂಧ ಬ್ರಹ್ಮಕಲಶ ಹಾಗೂ ಧಾರ್ಮಿಕ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅದ್ದೂರಿಯಿಂದ ಜರುಗಿತು. ಪೂಜಾ ವಿಧಿ ನೆರವೇರಿಸಿ ಕಲಶವುಗಳನ್ನು ಮೆರವಣಿಗೆ ಬಿರುದಾವಳಿಗಳ ಮೂಲಕ ಶ್ರೀ ಮಹಿಷಮರ್ಧಿನಿ ಆದಿ ಗಣಪತಿ ಮತ್ತು ಆಂಜನೇಯ ದೇವರಿಗೆ ಅಭಿಷೇಕ ಸಮರ್ಪಿಸಲಾಯಿತು. ಬಳಿಕ […]