ಸಂಚಾರ ಪುನಾರಂಭ : ಆಂಧ್ರ ರೈಲು ದುರಂತ: ಹಳಿಗಳ ಮರುಜೋಡಣೆ

ವಿಜಯನಗರ (ಆಂಧ್ರಪ್ರದೇಶ): ನಿರಂತರ ಕಾರ್ಯಾಚರಣೆಯ ಬಳಿಕ ನಾಶವಾಗಿದ್ದ ಹಳಿಗಳನ್ನು ಸೋಮವಾರ ಮರುಜೋಡಿಸಲಾಗಿದೆ. ಸರಕು ಸಾಗಣೆ ರೈಲಿನ ಬಳಿಕ, ಪ್ರಶಾಂತಿ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸಿದವು.ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಒಡಿಶಾದ ಬಾಲಾಸೋರ್ ದುರಂತದ ಮಾದರಿ ನಡೆದ ಪ್ಯಾಸೆಂಜರ್ ರೈಲು ಅಪಘಾತದಲ್ಲಿ 14 ಮಂದಿ ಸಾವಿಗೀಡಾಗಿದ್ದು, 100ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.ಆಂಧ್ರಪ್ರದೇಶ ರೈಲು ದುರಂತದ ಮಾರ್ಗವನ್ನು ಮರುಸ್ಥಾಪಿಸಲಾಗಿದ್ದು, ಸಂಚಾರ ಪುನಾರಂಭವಾಗಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ವೈಮಾನಿಕ ಸಮೀಕ್ಷೆ ನಡೆಸಿದರು. ವಿಜಯವಾಡದಿಂದ ಅವರು ವಿಶಾಖಪಟ್ಟಣಕ್ಕೆ ವಿಮಾನದಲ್ಲಿ ಬಂದಿಳಿದರು. ಬಳಿಕ ನೇರವಾಗಿ […]
ಎಸ್ಇಸಿಎಲ್ ನಿಂದ ದಾಖಲೆಯ 100 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ

ನವದೆಹಲಿ: ಛತ್ತೀಸಗಢ ಮೂಲದ ಈ ಕಂಪನಿಯು ಪ್ರಾರಂಭವಾದಾಗಿನಿಂದ ಸಾಧಿಸಿದ ಅತ್ಯಂತ ವೇಗದ 100 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದನೆ ಇದಾಗಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.ಕೋಲ್ ಇಂಡಿಯಾದ ಅಂಗಸಂಸ್ಥೆಯಾದ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಎಸ್ಇಸಿಎಲ್) 2023-24ರ ಹಣಕಾಸು ವರ್ಷದಲ್ಲಿ ದಾಖಲೆಯ 100 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ ಮಾಡಿದೆ.ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ದಾಖಲೆಯ 100 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸಿದೆ. ಕೊರ್ಬಾ ಜಿಲ್ಲೆಯಲ್ಲಿರುವ ಎಸ್ಇಸಿಎಲ್ನ ಮೆಗಾ ಯೋಜನೆಗಳಾದ […]
ಮೊಬೈಲ್ ಕಂಟೆಂಟ್ ಗಳನ್ನು 100-ಇಂಚಿನ ಸ್ಕ್ರೀನ್ ನಲ್ಲಿ ನೋಡಿ ಆನಂದಿಸಲು ಮಾರುಕಟ್ಟೆಗೆ ಬರಲಿದೆ JioGlass

ನವದೆಹಲಿ: JioGlass ಇದು ಭಾರತೀಯ ಕಂಪನಿಯಿಂದ ತಯಾರಾದ ಅತ್ಯಾಕರ್ಷಕ ಉತ್ಪನ್ನಗಳಲ್ಲಿ ಒಂದಾಗಿದೆ. ಇದು ನಿಮ್ಮ ಸ್ಮಾರ್ಟ್ಫೋನ್ ಅನ್ನು ಸಂಪರ್ಕಿಸುವ ಒಂದು ಜೋಡಿ ಸ್ಮಾರ್ಟ್ ಗ್ಲಾಸ್ ಆಗಿದೆ. ಮೊಬೈಲ್ ನಲ್ಲಿರುವ ಕಂಟೆಂಟ್ ಗಳನ್ನು 100-ಇಂಚಿನ ವರ್ಚುವಲ್ ಸ್ಕ್ರೀನ್ ಆಗಿ ಪರಿವರ್ತಿಸುತ್ತದೆ. JioGlass 2019 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸ್ವಾಧೀನಪಡಿಸಿಕೊಂಡ ಡೀಪ್-ಟೆಕ್ ಸ್ಟಾರ್ಟಪ್ ‘ಟೆಸ್ಸೆರಾಕ್ಟ್’ನ ಉತ್ಪನ್ನವಾಗಿದೆ. ಕ್ಯಾಮೆರಾಗಳು, ಹೆಡ್ಸೆಟ್ಗಳು ಮತ್ತು ಸ್ಮಾರ್ಟ್ ಗ್ಲಾಸ್ಗಳಂತಹ ವಿವಿಧ ಉತ್ಪನ್ನಗಳಿಗೆ ಆಗ್ಮೆಂಟೆಡ್ ರಿಯಾಲಿಟಿ (ಎಆರ್) ಮತ್ತು ವರ್ಚುವಲ್ ರಿಯಾಲಿಟಿ (ವಿಆರ್) ತಂತ್ರಜ್ಞಾನವನ್ನು […]
ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ತೀವ್ರ ಕೋವಿಡ್ ನಿಂದ ಬಳಲಿದವರು ಶ್ರಮದಾಯಕ ವ್ಯಾಯಾಮದಿಂದ ದೂರವಿರಲು ಸೂಚನೆ

ನವದೆಹಲಿ: ಇತ್ತೀಚಿನ ತಿಂಗಳುಗಳಲ್ಲಿ ಯುವಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು ತೀವ್ರವಾದ ಕೋವಿಡ್ -19 ಸೋಂಕಿನಿಂದ ಬಳಲಿದ್ದವರು ವ್ಯಾಯಾಮ ಮಾಡುವಾಗ ಹೆಚ್ಚು ಶ್ರಮಪಡಬಾರದು ಮತ್ತು ಸ್ವಲ್ಪ ಸಮಯದವರೆಗೆ ಕಠಿಣ ಪರಿಶ್ರಮದಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ. ಗುಜರಾತ್ನ ಭಾವನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಂಡವಿಯಾ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ವಿಷಯದ ಬಗ್ಗೆ […]
ಮುಂಬೈ ರಸ್ತೆಗಳಿಂದ ಮಾಯವಾಗಲಿದ್ದಾಳೆ ‘ಪ್ರೀಮಿಯರ್ ಪದ್ಮಿನಿ’ : ಇತಿಹಾಸದ ಪುಟ ಸೇರಲಿವೆ ಕಪ್ಪು-ಹಳದಿ ಕಾರುಗಳು

ಮುಂಬೈ: ಆರು ದಶಕಗಳಿಂದ ಮುಂಬೈಯ ಜೀವನಾಡಿಯಾಗಿದ್ದ, ಪ್ರಯಾಣಿಕರನ್ನು ಸುರಕ್ಷಿತವಾಗಿ ತಮ್ಮ ಗಮ್ಯ ಸ್ಥಾನಕ್ಕೆ ತಲುಪಿಸುತ್ತಿದ್ದ ಕಪ್ಪು ಹಳದಿ ಬಣ್ಣದ ‘ಪ್ರೀಮಿಯರ್ ಪದ್ಮಿನಿ’ ಕಾರುಗಳು ಇನ್ನು ಮುಂದೆ ಇತಿಹಾಸದ ಪುಟ ಸೇರಲಿವೆ. ಇತ್ತೀಚೆಗೆ ಮುಂಬೈ ಸಾರಿಗೆ ಇಲಾಖೆಯು ಮಹಾನಗರದಲ್ಲಿ ಓಡುತ್ತಿರುವ ಟ್ಯಾಕ್ಸಿಗಳನ್ನು ತೆಗೆದುಹಾಕಲು ಆದೇಶವನ್ನು ಹೊರಡಿಸಿದೆ. 20 ವರ್ಷ ಅಥವಾ ಅದಕ್ಕಿಂತ ಹಿಂದಿನ ನೋಂದಣಿ ಇರುವ ಟ್ಯಾಕ್ಸಿಗಳನ್ನು ತೆಗೆದುಹಾಕಲು ಈ ಆದೇಶವನ್ನು ನೀಡಲಾಗಿದೆ. 2008 ರಲ್ಲಿ, ಮಹಾರಾಷ್ಟ್ರ ಸರ್ಕಾರವು ಕ್ಯಾಬ್ ಗಳ ವಯಸ್ಸಿನ ಮಿತಿಯನ್ನು 25 ವರ್ಷಗಳಿಗೆ ನಿಗದಿಪಡಿಸಿತು, […]