ಶಾಲಾ ಪ್ರವಾಸದ ದೋಣಿ ಮಗುಚಿ ಇಬ್ಬರು ಶಿಕ್ಷಕರ ಸಹಿತ 12 ಶಾಲಾ ಮಕ್ಕಳ ಸಾವು; ವಡೋದರಾದಲ್ಲೊಂದು ದಾರುಣ ಘಟನೆ

ಅಹಮದಾಬಾದ್: ಗುರುವಾರ ಶಾಲಾ ಪ್ರವಾಸದ ವೇಳೆ ವಡೋದರಾದ ಹರ್ನಿ ಸರೋವರದಲ್ಲಿ ದೋಣಿಯೊಂದು ಮಗುಚಿಬಿದ್ದ ಪರಿಣಾಮ 10-13 ವರ್ಷದೊಳಗಿನ ಕನಿಷ್ಠ 12 ಶಾಲಾ ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ. ದೋಣಿಯು 16 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಘಟನೆಯ ಸಮಯದಲ್ಲಿ ಅದರಲ್ಲಿ 34 ಪ್ರಯಾಣಿಕರಿದ್ದರು. ಒಟ್ಟು 30 ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕರು ದೋಣಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪಲ್ಟಿಯಾದ ನಂತರ 18 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ರಕ್ಷಿಸಲಾಗಿದೆ. ಕೆರೆಯ ಕೆಳಭಾಗದಲ್ಲಿರುವ ಹೂಳಿನಿಂದಾಗಿ […]
ಕೋಚಿಂಗ್ ಸೆಂಟರ್ ಗಳ ಆಟಾಟೋಪಕ್ಕೆ ಕಡಿವಾಣ: ನಿಯಮ ಜಾರಿಗೊಳಿಸಿದ ಕೇಂದ್ರ ಶಿಕ್ಷಣ ಸಚಿವಾಲಯ

ನವದೆಹಲಿ: ದೇಶಾದ್ಯಂತ ಅಣಬೆಗಳಂತೆ ತಲೆ ಎತ್ತಿರುವ ಕೋಚಿಂಗ್ ಕೇಂದ್ರಗಳಿಗೆ ಮಾರ್ಗಸೂಚಿಗಳನ್ನು ಕೇಂದ್ರ ಶಿಕ್ಷಣ ಸಚಿವಾಲಯ ಜಾರಿಗೊಳಿಸಿದೆ. ದೇಶದ ಕೋಚಿಂಗ್ ಕ್ಯಾಪಿಟಲ್ ಎಂದು ಕರೆಯಲ್ಪಡುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಆತಂಕಕಾರಿ ಏರಿಕೆ ಪ್ರಕರಣದ ನಡುವೆ ಈ ಕ್ರಮವು ಬಂದಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಇನ್ನೂ ಪೂರ್ಣಗೊಳಿಸದ ಯಾವುದೇ ವಿದ್ಯಾರ್ಥಿಗಳ ಪ್ರವೇಶಾತಿ ಅತಿಯಾದ ಶುಲ್ಕ ವಸೂಲಿ, ಮೂಲಸೌಕರ್ಯ, ಸರಿಯಾದ ದೂರು ಪರಿಹಾರ ವ್ಯವಸ್ಥೆ, ತಪ್ಪುದಾರಿಗೆಳೆಯುವ ಜಾಹೀರಾತುಗಳ ಪ್ರಕಟಣೆ ಮತ್ತು ಪ್ರವೇಶಾತಿಗೂ ಮುನ್ನ […]
ರಾಮ ಮಂದಿರದ ಗರ್ಭಗುಡಿಯೊಳಗೆ ಶ್ರೀರಾಮಚಂದ್ರನ ಮೊದಲ ನೋಟದ ಅನಾವರಣ

ಅಯೋಧ್ಯೆ: ರಾಮ ಮಂದಿರ ಗರ್ಭಗುಡಿಯಲ್ಲಿ ರಾಮನ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದ್ದು, ಅದರ ಮೊದಲನೆ ಫೋಟೋವನ್ನು ವಿಶ್ವ ಹಿಂದೂ ಪರಿಷತ್ತಿನ ಮಾಧ್ಯಮ ಉಸ್ತುವಾರಿ ಶರದ್ ಶರ್ಮಾ ಬಹಿರಂಗಪಡಿಸಿದ್ದಾರೆ. ಐದು ತಲೆಮಾರಿನ ಪ್ರಸಿದ್ಧ ಶಿಲ್ಪಿಗಳ ಕುಟುಂಬದ ಹಿನ್ನೆಲೆಯುಳ್ಳ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ 51 ಇಂಚಿನ ಕೃಷ್ಣಶಿಲೆಯ ಶ್ರೀರಾಮನ ವಿಗ್ರಹವನ್ನು ಗುರುವಾರದಂದು ಗರ್ಭಗೃಹದೊಳಗೆ ಇರಿಸಲಾಗಿದೆ. ದೇವಾಲಯದ ಪವಿತ್ರ ಆವರಣದಲ್ಲಿ ವೈದಿಕ ಬ್ರಾಹ್ಮಣರು ಮತ್ತು ಆಚಾರ್ಯರು ಪ್ರಮುಖ ಪೂಜಾ ವಿಧಿಗಳನ್ನು ಕೈಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. […]
ಜ. 22 ರಂದು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಅರ್ಧ ದಿನದ ರಜೆ ಘೋಷಣೆ

ನವದೆಹಲಿ: ದೇಶವೇ ಕಾಯುತ್ತಿರುವ ಅಮೃತ ಘಳಿಗೆ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆ. ಅಂದು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಆಚರಣೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಭಾರತ ಸರ್ಕಾರವು ಜನವರಿ 22 ರಂದು ಮಧ್ಯಾಹ್ನ 2.30 ರವರೆಗೆ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರೀಯ ಕೈಗಾರಿಕಾ ಸಂಸ್ಥೆಗಳಲ್ಲಿ ಅರ್ಧ ದಿನದ ರಜೆ ಘೋಷಿಸಿದೆ. ಈ ಬಗ್ಗೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯವು ಸುತ್ತೋಲೆ ಹೊರಡಿಸಿದೆ.
ರಾಮಮಂದಿರದ ಗರ್ಭಗೃಹ ಪ್ರವೇಶಿಸಿದ ‘ಬಾಲರಾಮ’ನ ವಿಗ್ರಹ: ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ

ಅಯೋಧ್ಯೆ: ಗುರುವಾರ ಮುಂಜಾನೆ ಅಯೋಧ್ಯೆಯ ರಾಮಮಂದಿರಕ್ಕೆ ರಾಮಲಲ್ಲಾನ ವಿಗ್ರಹವನ್ನು ತರಲಾಯಿತು. ಗರ್ಭಗುಡಿಯೊಳಗೆ ವಿಶೇಷ ಪೂಜೆಯನ್ನು ನಡೆಸಲಾಯಿತು. ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಕ್ರೇನ್ ಮೂಲಕ ವಿಗ್ರಹವನ್ನು ಒಳತರಲಾಯಿತು. ಮೂಲಗಳ ಪ್ರಕಾರ ರಾಮಲಲ್ಲಾ ಮೂರ್ತಿಯನ್ನು ಗರ್ಭಗೃಹದೊಳಗೆ ಇರಿಸಲಾಗಿದೆ. ಜ.22 ರಂದು ಪ್ರಾಣಪ್ರತಿಷ್ಠೆ ನಡೆಯಲಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಕೃಷ್ಣಶಿಲೆಯ ಬಾಲರಾಮನ ವಿಗ್ರಹ ಆಯ್ಕೆಯಾಗಿದೆ. ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಗೂ ಮುನ್ನ ಹಲವು ವಿಧಿ ವಿಧಾನಗಳನ್ನು ಕೈಗೊಳ್ಳಲಾಗುತ್ತಿದೆ.