ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಜಂಬೂ ಸವಾರಿ, ಜೀಪ್ ಸಫಾರಿ

ಗುವಾಹಾಟಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಮಾರ್ಚ್ 9 ರಂದು ಪ್ರಧಾನಿ ನರೇಂದ್ರ ಮೋದಿ ಆನೆ ಸವಾರಿ ಮಾಡಿದರು. ಪಾರ್ಕ್‌ನ ಸೆಂಟ್ರಲ್ ಕೊಹೊರಾ ರೇಂಜ್‌ನ ಮಿಹಿಮುಖ್ ವಿಭಾಗದಲ್ಲಿ, ಮೊದಲು ಆನೆ ಸಫಾರಿ, ನಂತರ ಅದೇ ವ್ಯಾಪ್ತಿಯಲ್ಲಿ ಅವರು ಜೀಪ್ ಸಫಾರಿ ನಡೆಸಿದರು. ಅವರ ಭೇಟಿಯ ಸಂದರ್ಭದಲ್ಲಿ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳಾ ಅರಣ್ಯ ರಕ್ಷಕರ ತಂಡ ‘ವನ ದುರ್ಗ’ ದೊಂದಿಗೆ ಸಂವಾದ ನಡೆಸಿದರು. ಲಖಿಮಾಯಿ, ಪ್ರದ್ಯುಮ್ನ ಮತ್ತು […]

ರಾಮಲಲ್ಲಾನ ದರ್ಶನ ಪಡೆದು ಮಂತ್ರಮುಗ್ದರಾದ ರಕ್ಷಿತ್ ಶೆಟ್ಟಿ; ಅರುಣ್ ಯೋಗಿರಾಜ್ ಅವರನ್ನು ಭೇಟಿಯಾಗುವ ಬಯಕೆ ತೋಡಿಕೊಂಡ ಸಿಂಪಲ್ ಹುಡುಗ

ಅಯೋಧ್ಯಾ: ಕನ್ನಡ ಚಿತ್ರನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅಯೋಧ್ಯಾ ರಾಮಜನ್ಮಸ್ಥಾನದಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರಕ್ಕೆ ಭೇಟಿ ನೀಡಿದ್ದು, ರಾಮಲಲ್ಲಾನ ದರ್ಶನ ಪಡೆದು ಮಂತ್ರಮುಗ್ಧರಾಗಿದ್ದಾರೆ. ಪ್ರಾಣಪ್ರತಿಷ್ಠೆ ನಡೆದಾಗಿನಿಂದಲೂ ರಾಮನನ್ನು ನೇರವಾಗಿ ನೋಡಬೇಕುನ್ನುವ ಹಂಬಲವನ್ನು ನಿಜವಾಗಿಸಿಕೊಂಡಿರುವ ರಕ್ಷಿತ್, ಸುಮಾರು ಅರ್ಧ ಗಂಟೆಗಳ ಕಾಲ ರಾಮನ ಮೂರ್ತಿಯನ್ನು ಆತನ ಸೂಜಿಗಲ್ಲಿನಂತೆ ಆಕರ್ಷಿಸುವ ಕಣ್ಣುಗಳನ್ನು ತದೇಕಚಿತ್ತದಿಂದ ನೋಡಿ ಶಿಲ್ಪಕಾರನ ಕಲಾ ನೈಪುಣ್ಯಕ್ಕೆ ತಲೆದೂಗಿದ್ದಾರೆ. ರಾಮ ಕೇವಲ ದೇವರಾಗಿರದೆ, ಜೀವ ತುಂಬಿರುವ ಒಂದು ಕಲಾಪ್ರಕಾರದಂತೆ ಕಂಡಿದ್ದು, ಮೂರ್ತಿಯನ್ನು ಕೆತ್ತಿದ ಅರುಣ್ ಯೋಗಿರಾಜ್ ಒಂದು ದಂತ ಕತೆಯಾಗಿ […]

ಮೊಡವೆಗಾಗಿ ಮುಖಕ್ಕೆ ಹಚ್ಚುವ ಉತ್ಪನ್ನಗಳಲ್ಲಿದೆ ಕ್ಯಾನ್ಸರ್ ಕಾರಕ ಅಂಶಗಳು!! ಅಮೇರಿಕಾದ ಸ್ವತಂತ್ರ ಪರೀಕ್ಷಾ ಪ್ರಯೋಗಾಲಯದ ವರದಿಯಲ್ಲಿ ಬಹಿರಂಗ

ಪ್ರೊಆಕ್ಟಿವ್, ಟಾರ್ಗೆಟ್ ಕಾರ್ಪೊರೇಷನ್‌ನ ಅಪ್ & ಅಪ್ ಮತ್ತು ಕ್ಲಿನಿಕ್ ಸೇರಿದಂತೆ ಹಲವು ಬ್ರಾಂಡ್‌ಗಳ ಮೊಡವೆ ಉತ್ಪನ್ನಗಳು ಕ್ಯಾನ್ಸರ್ ಕಾರಕ ಅಂಶಗಳ ಮಟ್ಟವನ್ನು ಹೆಚ್ಚಿಸಿವೆ ಎಂದು ಸ್ವತಂತ್ರ ಪರೀಕ್ಷಾ ಪ್ರಯೋಗಾಲಯವು US ಆಹಾರ ಮತ್ತು ಔಷಧ ಮಂಡಳಿಗೆ ಸಲ್ಲಿಸಿದ ಅರ್ಜಿಯಲ್ಲಿ ಮಂಗಳವಾರ ತಡರಾತ್ರಿ ತಿಳಿಸಿದೆ ಎಂದು ವರದಿಯಾಗಿದೆ. ನಿಯಂತ್ರಕರು ತನಿಖೆ ನಡೆಸಿ ಸಕ್ರಿಯ ಘಟಕಾಂಶವಾದ ಬೆಂಜಾಯ್ಲ್ ಪೆರಾಕ್ಸೈಡ್ ಅನ್ನು ಒಳಗೊಂಡಿರುವ ಎಲ್ಲಾ ಸಂಬಂಧಿತ ಚಿಕಿತ್ಸೆಗಳನ್ನು ಹಿಂಪಡೆಯಲು ಲ್ಯಾಬ್ FDA ಯನ್ನು ಕೇಳಿದೆ. ಹ್ಯಾಂಡ್ ಸ್ಯಾನಿಟೈಸರ್‌ಗಳು, ಸನ್‌ಸ್ಕ್ರೀನ್‌ಗಳು ಮತ್ತು […]

ಭಾಷಣ ಮಾಡುವಾಗ ಜಾಗರೂಕರಾಗಿರಿ: ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಸಲಹೆ

ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು (EC) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭವಿಷ್ಯದಲ್ಲಿ ಸಾರ್ವಜನಿಕವಾಗಿ ಪ್ರತಿಕ್ರಿಯೆಗಳನ್ನು ನೀಡುವಾಗ “ಹೆಚ್ಚು ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರುವಂತೆ” ಮತ್ತು ಚುನಾವಣಾ ಪ್ರಚಾರದ ಸಮಯದಲ್ಲಿ ಸ್ಟಾರ್ ಪ್ರಚಾರಕರು ಮತ್ತು ಅಭ್ಯರ್ಥಿಗಳಿಗೆ ಆಯೋಗವು ಇತ್ತೀಚೆಗೆ ನೀಡಿದ ಸಲಹೆಯನ್ನು ಅನುಸರಿಸುವಂತೆ ತಿಳಿಸಿದೆ. 2023ರ ನವೆಂಬರ್‌ನಲ್ಲಿ ರಾಜಸ್ಥಾನದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಾಗ ರಾಹುಲ್ ಗಾಂಧಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮಾಡಿದ ಟಿಪ್ಪಣಿಗೆ […]

ಸಂದೇಶ್‌ಖಾಲಿ ಜಾರಿ ನಿರ್ದೇಶನಾಲಯ ತಂಡದ ಮೇಲೆ ದಾಳಿ ಪ್ರಕರಣ ಸಿಬಿಐಗೆ ಹಸ್ತಾಂತರಿಸಿದ ಕಲ್ಕತ್ತಾ ಹೈಕೋರ್ಟ್

ಕೋಲ್ಕತ್ತಾ: ಭ್ರಷ್ಟಾಚಾರ ಪ್ರಕರಣ ಸಂಬಂಧಿಸಿ ತೃಣಮೂಲ ಕಾಂಗ್ರೆಸ್‌ನ ಮಾಜಿ ನಾಯಕ ಶೇಖ್ ಷಹಜಹಾನ್ ಮನೆಯಲ್ಲಿ ತನಿಖೆ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯ (ED) ತಂಡದ ಮೇಲೆ ದಾಳಿ ನಡೆಸಿದ ಸಂದೇಶ್‌ಖಾಲಿ ಘಟನೆಯ ಪ್ರಕರಣವನ್ನು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಕೇಂದ್ರೀಯ ತನಿಖಾ ದಳ (CBI)ಕ್ಕೆ ವಹಿಸಿದೆ ಮತ್ತು ಷಹಜಹಾನ್‌ನನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸುವಂತೆ ಪೊಲೀಸರಿಗೆ ಸೂಚಿಸಿದೆ. ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಅವರನ್ನೊಳಗೊಂಡ ವಿಭಾಗೀಯ ಪೀಠವು ನಝತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 8 […]