ಭಾರತೀಯ ಆಯುರ್ವೇದ ಪರಂಪರೆಗೆ ಪಕೃತಿ ನೀಡಿದ ವರದಾನ: ‘ಅಮೃತಬಳ್ಳಿಯ’ ಅನನ್ಯ ಆರೋಗ್ಯ ಪ್ರಯೋಜನಗಳು

ವಿಶ್ವದಾದ್ಯಂತ ನಡೆಸಿದ ಅನೇಕ ಅಧ್ಯಯನಗಳ ಆಧಾರದಲ್ಲಿ ಭಾರತದ ಆಯುರ್ವೇದ ಚಿಕಿತ್ಸೆಯನ್ನು ಸರ್ವಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ರೋಗ ಚಿಕಿತ್ಸೆಯಲ್ಲಿ ಬಳಸಿಕೊಳ್ಳಲಾಗಿದೆ. ಭಾರತದ ಆಯುರ್ವೇದ ಪರಂಪರೆಯಲ್ಲಿ ಪಕೃತಿ ವರವಾಗಿ ನೀಡಿರುವ ಮೂರು ಅಮೃತ ಸಸ್ಯಗಳಿವೆ. ಬೆಳ್ಳುಳ್ಳಿ, ಹರೀತಕಿ ಮತ್ತು ಅಮೃತಬಳ್ಳಿ ಇವೇ ಆ ಮೂರು ಸಸ್ಯಗಳು. ಹೆಸರೇ ಸೂಚಿಸುವಂತೆ ಸಾವಿನದವಡೆಯಲ್ಲಿರುವವರನ್ನೂ ಬದುಕಿಸುವ ಶಕ್ತಿ ಉಳ್ಳ ಸಸ್ಯವೇ ಅಮೃತ ಬಳ್ಳಿ. ಸಂಸ್ಕೃತದಲ್ಲಿ ಅಮೃತವಲ್ಲಿ, ಅಮೃತ, ಗುಡೂಚಿ ಮತ್ತು ಹಿಂದಿಯಲ್ಲಿ ಗಿಲೋಯ್ ಎಂದು ಕರೆಯಲ್ಪಡುವ […]
ಹೃದಯ ಸ್ತಂಭನ ಸಮಯದಲ್ಲಿ ಸಿಪಿಆರ್ ನೀಡಿ ವ್ಯಕ್ತಿಯ ಜೀವ ಉಳಿಸಿ: ಸಿಪಿಆರ್ ನೀಡುವ ವಿಧಾನದ ಬಗ್ಗೆ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನಗಳು ಸಾಮಾನ್ಯವೆಂಬಂತಾಗಿದ್ದು, ಬಾಳಿ ಬದುಕಬೇಕಾಗಿರುವ ಎಳೆ ಜೀವಗಳು ತರಗೆಲೆಗಳಂತೆ ಧರೆಗುರುಳುತ್ತಿರುವ ದೃಶ್ಯಗಳು ಎಲ್ಲೆಲ್ಲೂ ಕಂಡುಬರುತ್ತಿದೆ. ಹೃದಯಾಘಾತ ಅಥವಾ ಹೃದಯಸ್ತಂಭನವಾದಾಗ ಹತ್ತಿರದಲ್ಲೇ ವ್ಯಕ್ತಿಗಳಿದ್ದರೂ ಈ ಸಂದರ್ಭದಲ್ಲಿ ಯಾವ ರೀತಿ ವರ್ತಿಸಬೇಕುನ್ನುವುದು ಬಹುತೇಕರಿಗೆ ತಿಳಿದಿರುವುದಿಲ್ಲ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಗಾಬರಿಯಾಗದೆ ಹೃದಯ ಸ್ತಂಭನವಾದ ವ್ಯಕ್ತಿಗೆ ತಕ್ಷಣ ಸಿಪಿಆರ್ ನೀಡಿದಲ್ಲಿ ವ್ಯಕ್ತಿಯ ಪ್ರಾಣ ಉಳಿಸಬಹುದು. ಸಿಪಿಆರ್ ಎಂದರೇನು ಮತ್ತು ನಾವು ಅದನ್ನು ಯಾವಾಗ ಬಳಸಬೇಕು? ಕಾರ್ಡಿಯೋಪಲ್ಮನರಿ ಪುನರುಜ್ಜೀವನ (ಸಿಪಿಆರ್) ಎನ್ನುವುದು ತುರ್ತು ವಿಧಾನವಾಗಿದ್ದು, ಉಸಿರಾಟ […]
ಆಟಿಸಂ ಮಕ್ಕಳನ್ನು ಪ್ರೀತಿಸೋಣ: ಆಟಿಸಂ ಮಗುವಿನ ಪಾಲಕರಿಗೊಂದು ಕಿವಿಮಾತು!

ಆಟಿಸಂ (Autism) ಮಗು ಬೆಳೆಯುವ ಹಂತದಲ್ಲಿ ಪೋಷಕರು ತನ್ನ ಮಗು ಉಳಿದ ಮಕ್ಕಳಿಗಿಂತ ಭಿನ್ನವಾಗಿದೆ, ಎಂದು ತಿಳಿದನಂತರ ಪೋಷಕರಿಗೆ ಆ ಸತ್ಯವನ್ನು ಸ್ವೀಕರಿಸಲು ಮತ್ತು ತನ್ನ ಮಗುವನ್ನು ಬೆಳೆಸಲು ಸರಿಯಾದ ವಿಧಾನ ಮತ್ತು ಸಂಬಂಧಿತ ಹೊಸ ವಿಷಯಗಳನ್ನು ಕಲಿತು (ಆಟಿಸಂ ಇರುವ ಮಕ್ಕಳನ್ನು ಬೆಳೆಸುವ ಮತ್ತು ಅವರನ್ನು ತರಬೇತಿ ನೀಡುವ ವಿಧಾನಗಳಿಂದ ) ಆ ಮಗುವನ್ನು ಬೆಳೆಸುವ ಅಗತ್ಯ ವಿರುತ್ತದೆ. ಮಗುವಿನ ಭವಿಷ್ಯಕ್ಕಾಗಿ ಪೋಷಕರ ಮತ್ತು ಕುಟುಂಬದವರು ತುಂಬಾ ಸಹಕರಿಸಬೇಕಾಗುತ್ತದೆ. ಆದರೆ ಹೆಚ್ಚಿನ ಪೋಷಕರು ತನ್ನ ಮಗು […]
ನಿದ್ರಾಹೀನತೆ ನಿಮ್ಮನ್ನು ಬಾಧಿಸುತ್ತಿದೆಯೆ? ಇಲ್ಲಿವೆ ಸುಖ ನಿದ್ದೆಗೆ ಜಾರಲು ಸುಲಭ ಸೂತ್ರಗಳು

ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆಯು ವಯೋಭೇದವಿಲ್ಲದೆ ಎಲ್ಲರನ್ನೂ ಕಾಡುತ್ತಿದೆ. ತಂತ್ರಜ್ಞಾನದ ಅತಿಯಾದ ಬಳಕೆ, ಒತ್ತಡ ಭರಿತ ಜೀವನ, ಕುಡಿತ ಮತ್ತಿತರ ದುರಾಭ್ಯಾಸಗಳಿಂದಾಗಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದು ಮನಸ್ಸು ಮತ್ತು ದೇಹದ ಆರೋಗ್ಯವನ್ನು ಕೆಡಿಸಿಕೊಳ್ಳುವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆರೋಗ್ಯವಂತ ದೇಹಕ್ಕೆ ಪೋಷಕಾಂಶಯುಕ್ತ ಆಹಾರ ಎಷ್ಟು ಮುಖ್ಯವೋ ಆರೋಗ್ಯವಂತ ಮನಸ್ಸಿಗೆ ಗಡದ್ದಾದ ನಿದ್ದೆಯೂ ಅಷ್ಟೇ ಮುಖ್ಯ ಎನ್ನುವುದನ್ನು ಆಯುರ್ವೇದ ಕೂಡಾ ಹೇಳುತ್ತದೆ. ಸುಲಭವಾಗಿ ನಿದ್ದೆಗೆ ಜಾರಲು ಮಂತ್ರದಂಡದ ಪರಿಹಾರೋಪಾಯಗಳು ಇಲ್ಲದಿದ್ದರೂ, ದೈನಂದಿನ ದಿನಚರಿಯನ್ನು ಶಿಸ್ತುಬದ್ದವಾಗಿಸಿಕೊಳ್ಳುವ ಮೂಲಕ ನೆಮ್ಮದಿಯ ನಿದ್ದೆಯನ್ನು […]
ಪ್ರಕೃತಿಯ ವರದಾನ ತೆಂಗಿನೆಣ್ಣೆಯಿಂದ ಚಳಿಗಾಲದ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಮುಕ್ತಿ ಹಾಡಿ

ಸಂಸ್ಕೃತದಲ್ಲಿ ನಾರೀಕೇಳವೆಂದು ಕರೆಸಿಕೊಳ್ಳುವ ಕಲಿಯುಗದ ಕಲ್ಪವೃಕ್ಷವೆಂಬ ತೆಂಗಿನಕಾಯಿಯ ಉಪಯೋಗಗಳು ಒಂದಲ್ಲ ಎರಡಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಮೊದಲನೆ ಸ್ಥಾನ ಗೋವಿಗಾದರೆ ಎರಡನೆ ಸ್ಥಾನ ತೆಂಗಿನಕಾಯಿಗೆ ಮೀಸಲು. ಗೋವು ಮತ್ತು ತೆಂಗಿನಕಾಯಿಯ ಪ್ರತಿಯೊಂದು ಅಂಶಗಳೂ ಬಹುಉಪಯೋಗಿ. ಪ್ರಕೃತಿ ಮನುಕುಲಕ್ಕೆ ನೀಡಿದ ಅತ್ಯಂತ ಉತ್ಕೃಷ್ಟ ಉಡುಗೊರೆಗಳೆಂದರೆ ಅದು ಗೋವಿನ ಹಾಲು ಮತ್ತು ತೆಂಗಿನಎಣ್ಣೆ. ತೆಂಗಿನೆಣ್ಣೆಯ ವಿಶಿಷ್ಟತೆ ಉಷ್ಣವಲಯದ ಪ್ರಾಕೃತಿಕ ಬೆಳೆಯಾಗಿರುವ ತೆಂಗಿನೆಣ್ಣೆಯ ವಿಶಿಷ್ಟತೆ ಒಂದೆರೆಡಲ್ಲ. # ಲಾರಿಕ್ ಆಸಿಡ್ ಅನ್ನು ಹೊಂದಿರುವುದರಿಂದ ಉತ್ತಮವಾದ ಚರ್ಮ-ಸ್ನೇಹಿ ಕೊಬ್ಬಿನಾಮ್ಲವಾಗಿದೆ # ಒಲೀಕ್ ಆಸಿಡ್ ಅನ್ನು […]