ಉಡುಪಿ: ಡಿ. 31 ರಂದು ವಿದ್ಯುತ್ ವ್ಯತ್ಯಯ

ಉಡುಪಿ: 110/33/11 ಕೆವಿ ವಿದ್ಯುತ್ ಸ್ಥಾವರ ಮಣಿಪಾಲದಲ್ಲಿ 110ಕೆ.ವಿ ಬಸ್‌ನ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಸದರಿ ಸ್ಥಾವರದಿಂದ ಹೊರಡುವ 110ಕೆ.ವಿ ಮಣಿಪಾಲ, 110ಕೆ.ವಿ ನಿಟ್ಟೂರು, 110ಕೆ.ವಿ ಬ್ರಹ್ಮಾವರ, 33ಕೆ.ವಿ ಶಿರ್ವ, 33ಕೆ.ವಿ ಕುಂಜಿಬೆಟ್ಟು 1 ಮತ್ತು 2 ಮಾರ್ಗಗಳಲ್ಲಿ, 33 ಕೆ.ವಿ ಮಲ್ಪೆ/ಉದ್ಯಾವರ ಹಾಗೂ ಎಲ್ಲಾ 11ಕೆ.ವಿ ಫೀಡರಿನಲ್ಲಿ ಉಡುಪಿ, ಮಣಿಪಾಲ, ಕುಂಜಿಬೆಟ್ಟು, ನಿಟ್ಟೂರು, ಮಲ್ಪೆ, ಉದ್ಯಾವರ, ಶಿರ್ವ, ಬ್ರಹ್ಮಾವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 31 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ […]

ಬ್ರಹ್ಮಾವರ: ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಟಿ.ವಿ.ರಿಪೇರಿ ತರಬೇತಿ

ಬ್ರಹ್ಮಾವರ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅವರ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕ್ ನ ಸಹಯೋಗದೊಂದಿಗೆ ನಡೆಯುತ್ತಿರುವ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ , ತರಬೇತಿ ಕಿಟ್ ನೊಂದಿಗೆ ಸಂಪೂರ್ಣ ಉಚಿತ ಟಿ.ವಿ ರಿಪೇರಿ ತರಬೇತಿ ಯುವಜನರಿಗೆ ದಿನಾಂಕ 02.01.2023 ರಿಂದ 31.01.2023ರ ವರೆಗೆ 30ದಿನಗಳ ನಡೆಯಲಿದೆ. ಈ ತರಬೇತಿಗೆ ಹೆಚ್ಚು ಬೇಡಿಕೆ ಇದ್ದು ಹಾಗೂ ಇಂದಿನ ಆಧುನಿಕ ರೀತಿಯ ಎಲ್.ಸಿ.ಡಿ, ಎಲ್.ಇ.ಡಿ, ಆಂಡ್ರಾಯಿಡ್ ಮುಂತಾದ ಆನೇಕ ಹೊಸ […]

ದೇಶೀಯ ವಲಸಿಗರ ಮತ ಚಲಾವಣೆಗಾಗಿ ರಿಮೋಟ್ ಇವಿಎಂ ಅಭಿವೃದ್ದಿ ಪಡಿಸಿದ ಚುನಾವಣಾ ಆಯೋಗ

ನವದೆಹಲಿ: ದೇಶಾದ್ಯಂತ ಕೆಲಸ ನಿಮಿತ್ತ ವಲಸೆ ಮಾಡುವ ವಲಸಿಗರು ತಮ್ಮ ಮತ ಚಲಾಯಿಸಲು ಊರಿಗೆ ಹಿಂದಿರುಗುವ ಸಮಸ್ಯೆಗಳನ್ನು ಒತ್ತಿಹೇಳುತ್ತಾ, ಚುನಾವಣಾ ಆಯೋಗವು ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು ಅಭಿವೃದ್ಧಿಪಡಿಸಿದೆ ಎಂದು ಗುರುವಾರ ಹೇಳಿದೆ. ತಾಂತ್ರಿಕ ಪ್ರಗತಿಯ ಯುಗದಲ್ಲಿ ವಲಸೆ ಆಧಾರಿತ ಹಕ್ಕು ನಿರಾಕರಣೆಯು ಒಂದು ಆಯ್ಕೆಯಾಗಿಲ್ಲ. 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ 67.4% ಮತದಾನವಾಗಿದೆ ಮತ್ತು 30 ಕೋಟಿಗೂ ಹೆಚ್ಚು ಮತದಾರರು ತಮ್ಮ ಮತವನ್ನು ಚಲಾಯಿಸದಿರುವ ಬಗ್ಗೆ ಮತ್ತು ವಿವಿಧ ರಾಜ್ಯಗಳು/ಕೇಂದ್ರಾಡಳಿತಗಳಲ್ಲಿ ವಿಭಿನ್ನ ಮತದಾರರ ಮತದಾನದ ಬಗ್ಗೆ ಭಾರತದ […]

ಕಮಲಾಕ್ಷಿ ಸಹಕಾರಿ ಸಂಘ ಬಹುಕೋಟಿ ಹಗರಣ: ಸೊಸೈಟಿ ಅಧ್ಯಕ್ಷರಿಗೆ ಜ.11ರವರೆಗೆ ನ್ಯಾಯಾಂಗ ಬಂಧನ

ಉಡುಪಿ: ಸುಮಾರು 100 ಕೋಟಿ ರೂಪಾಯಿಗೂ ಮಿಕ್ಕಿ ವಂಚನೆ ನಡೆದಿದೆ ಎನ್ನಲಾದ ಕಮಲಾಕ್ಷಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಬಿ ವಿ ಲಕ್ಷ್ಮೀನಾರಾಯಣ ಅವರನ್ನು ಉಡುಪಿ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಹಗರಣ ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ ಇವರನ್ನು ಪತ್ತೆ ಹಚ್ಚುವಲ್ಲಿ ಸೆನ್ ಪೊಲೀಸರು ಬ್ರಹ್ಮಾವರ ಸಮೀಪದ ಮಟಪಾಡಿ ಬಳಿ ಬಂಧಿಸಿದ್ದಾರೆ. ಇವರ ಮೇಲೆ ವಂಚನೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗದ ಮುಂದೆ ಹಾಜರು ಪಡಿಸಲಾಗಿದೆ. ಉಡುಪಿ ಜೆಎಂಎಫ್‌ಸಿ ನ್ಯಾಯಾಲಯವು ಲಕ್ಷ್ಮೀನಾರಾಯಣ ಅವರನ್ನು 2023ರ ಜನವರಿ 11ರವರೆಗೆ ನ್ಯಾಯಾಂಗ […]

ಶಾರುಖ್ ಖಾನ್ ಪಠಾಣ್ ಗೆ ಸೆನ್ಸರ್ ಸರ್ಜರಿ: ಚಿತ್ರದಲ್ಲಿ ಬದಲಾವಣೆ ಮಾಡಿ ಪರಿಷ್ಕೃತ ಆವೃತ್ತಿ ಸಲ್ಲಿಸಲು ಸಿ.ಬಿ.ಎಫ್.ಸಿ ಸೂಚನೆ

ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಮುಂಬರುವ ಬಿಡುಗಡೆಯ ಸುತ್ತಲಿನ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಅಧ್ಯಕ್ಷ ಪ್ರಸೂನ್ ಜೋಶಿ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದ ಹಾಡುಗಳು ಸೇರಿದಂತೆ “ಸಲಹೆ ಮಾಡಲಾದ ಬದಲಾವಣೆಗಳನ್ನು ಜಾರಿಗೆ ತರಲು” ತಯಾರಕರಿಗೆ ಸಿ.ಬಿ.ಎಫ್.ಸಿ ಪರೀಕ್ಷಾ ಸಮಿತಿ ಸೂಚಿಸಿದೆ ಎಂದು ಸುದ್ದಿ ಸಂಸ್ಥೆ ಪಿ.ಟಿ.ಐ ತಿಳಿಸಿದೆ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಪಠಾಣ್, ಅದರ ಮೊದಲ ಹಾಡು ‘ಬೇಷರಂ ರಂಗ್’ ಬಿಡುಗಡೆಯಾದ ನಂತರ ದೊಡ್ಡ ವಿವಾದವನ್ನು […]