ಉಚಿತ ಮಾಸಿಕ ಉನ್ನತಿ ಉದ್ಯೋಗ ಮೇಳ ಸಂಪನ್ನ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಹಾಗೂ ಉದ್ಯೋಗಾಧಾರಿತ ತರಬೇತಿಗಳಿಗೆ ಪ್ರಸಿದ್ಧಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ಜನವರಿ 2023ರಿಂದ ಜನವರಿ 2024ರ ವರೆಗೆ ಪ್ರತಿ ತಿಂಗಳು ಉಚಿತ ಮಾಸಿಕ “ಉನ್ನತಿ ಉದ್ಯೋಗ ಮೇಳ”ಗಳನ್ನು ಪ್ರಾರಂಭಿಸಿದೆ. ಈ ಮೂಲಕ ಜಿಲ್ಲೆಯ ಹಾಗೂ ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಭವಿಷ್ಯ ನಿರ್ಮಿಸಲು ಇದೊಂದು ಉತ್ತಮ ಅವಕಾಶ ಕಲ್ಪಿಸಿಕೊಡಲಿದೆ” ಎಂದು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ತಿಳಿಸಿದರು. ವರ್ಷವಿಡೀ ನಡೆಯುವ ಈ […]

ಜನವರಿ 29ರಂದು ಮೈಸೂರಿನಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಸ್ಮಾರಕ ಉದ್ಘಾಟನೆ

ಮೈಸೂರು: ಇಲ್ಲಿನ ಎಚ್​.ಡಿ. ಕೋಟೆ ರಸ್ತೆಯ ಅಲ್ಲಾಳು ಗ್ರಾಮದಲ್ಲಿ ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ಡಾ.ವಿಷ್ಣುವರ್ಧನ್​ ಅವರ ಸ್ಮಾರಕದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಚಿತ್ರನಟ ಅನಿರುದ್ದ್ ಹೇಳಿದ್ದಾರೆ. ‘ಸಾಹಸ ಸಿಂಹ’ ಡಾ.ವಿಷ್ಣವರ್ಧನ್ ರವರ ಸ್ಮಾರಕದ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಲಿದ್ದಾರೆ.ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಅನಿರುದ್ಧ್ ಹೇಳಿದ್ದಾರೆ.

ಬಿಎಂಡಬ್ಲ್ಯೂ ಅನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟೆಸ್ಲಾ: 25 ವರ್ಷಗಳಲ್ಲಿ ಮೊದಲ ಬಾರಿಗೆ ಅಮೇರಿಕಾ ಕಾರು ಕಂಪನಿಯ ಸಾಧನೆ

25 ವರ್ಷಗಳಲ್ಲಿ ಅಮೇರಿಕಾದ ವಾಹನ ತಯಾರಕರು ಮಾಡಲಾಗದ್ದನ್ನು ಟೆಸ್ಲಾ ಮಾಡಿ ತೋರಿಸಿದೆ. 2022 ರಲ್ಲಿ ಯುಎಸ್‌ನ ಅಗ್ರ ಐಷಾರಾಮಿ ಬ್ರಾಂಡ್‌ ಕಾರ್ ನ ಶೀರ್ಷಿಕೆಯನ್ನು ಪಡೆದ ಟೆಸ್ಲಾ, ಇದುವರೆಗೂ ಅಗ್ರಸ್ಥಾನದಲ್ಲಿದ್ದ ಜರ್ಮನಿಯ ಬಿಎಂಡಬ್ಲ್ಯೂ ಕಾರುಗಳನ್ನು ಹಿಂದಿಕ್ಕಿದೆ. 2021 ರಲ್ಲಿ ಟೆಸ್ಲಾ ಅಮೇರಿಕಾದಲ್ಲಿ ಬಿಎಂಡಬ್ಲ್ಯೂ ಗಿಂತ ಕೇವಲ 23,244 ಕಡಿಮೆ ವಾಹನಗಳನ್ನು ಮಾರಾಟ ಮಾಡಿತ್ತು, ಆದರೆ 2022 ರಲ್ಲಿ ಟೆಸ್ಲಾ ಇದನ್ನು ಸಂಪೂರ್ಣವಾಗಿ ತಿರುಗಿಸಿತು. ಆಟೋಮೋಟಿವ್ ನ್ಯೂಸ್ ರಿಸರ್ಚ್ ಮತ್ತು ಡಾಟಾ ಸೆಂಟರ್‌ನ ಅಂದಾಜಿನ ಪ್ರಕಾರ ಟೆಸ್ಲಾ ಕಳೆದ […]

ಪೆರಾರ ಬಲವಂಡಿ ಕ್ಷೇತ್ರ: ಜ.15 ರಂದು ಬಂಟಕಂಬ ಅನುಜ್ಞಾ ವಿಧಿ

ಬಜಪೆ: ಇಲ್ಲಿನ ಐತಿಹಾಸಿಕ ಶ್ರೀಕ್ಷೇತ್ರ ಪೆರಾರದಲ್ಲಿ ಬ್ರಹ್ಮ ದೇವರು, ಇಷ್ಟದೇವತಾ ಮತ್ತು ಬಲವಂಡಿ ಪಿಲಿಚಂಡಿ ದೈವಸ್ಥಾನದ ಅಜೀರ್ಣ ಸ್ಥಿತಿಯಲ್ಲಿದ್ದ ಛತ್ರದರಸ ಚಾವಡಿ ಬಂಟಕಂಬ ರಾಜಾಂಗಣ, ಪಿಲಿಚಂಡಿ ಡೈವಸ್ಥಾನದ ಪುನರ್ ನಿರ್ಮಾಣಕಾಯವು ಅಂತಿಮ ಹಂತದಲ್ಲಿದ್ದು, ಪವಿತ್ರ ಬಂಟಕಂಬದ ಅನುಜ್ಞಾ ವಿಧಿವಿಧಾನಗಳು ಜ.15 ರಂದು ಬೆಳಗ್ಗೆ 8.30 ಕ್ಕೆ ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರ ಪೌರೋಹಿತ್ಯ ಹಾಗೂ ಕದಳಿ ಯೋಗೀಶ್ವರ ಮಠದ ಶ್ರೀ ರಾಜಯೋಗಿ ನಿರ್ಮಲನಾಥ ಮಹಾರಾಜ್ ಇವರ ಶುಭಾಶೀರ್ವಾದದೊಂದಿಗೆ ನಡೆಯಲಿದೆ. ಈ ನೂತನ ಬಂಟಕಂಬವನ್ನು ತೈಲದಲ್ಲಿ ಇಡಲಾಗುವ್ದು ಮತ್ತು […]

ಸುರತ್ಕಲ್: ಅನಾಥ ಮಗು ಪತ್ತೆ; ಪೋಷಕರ ಪತ್ತೆಗೆ ಮನವಿ

ಸುರತ್ಕಲ್: ಸುರತ್ಕಲ್ ಠಾಣಾ ವ್ಯಾಪ್ತಿಯ ಸದಾನಂದ ಹೋಟೆಲಿನ ಬಳಿ ಬುಧವಾರದಂದು ಅಂದಾಜು 3-4 ವರ್ಷ ಪ್ರಾಯದ ಹೆಣ್ಣು ಮಗುವೊಂದು ಪತ್ತೆಯಾಗಿದ್ದು, ಮಗುವಿನ ಹೆತ್ತವರಿಗಾಗಿ ಶೋಧ ನಡೆಯುತ್ತಿದೆ. ಒಂಟಿಯಾಗಿದ್ದ ಮಗುವನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಗುವಿನ ಹೆತ್ತವರನ್ನು ಶೋಧಿಸುತ್ತಿರುವ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದಲ್ಲಿ ಸುರತ್ಕಲ್ ಠಾಣಾ ಫೋನ್ ದೂ.ಸಂ.- 0824-2220540, ಪೊಲೀಸ್ ನಿರೀಕ್ಷಕರ ಮೊ.ಸಂ.- 9480805360, ಪೊಲೀಸ್ ಉಪನಿರೀಕ್ಷಕ- 9480802344, ನಗರ ನಿಸ್ತಂತು ನಿಯಂತ್ರಣ ಕೊಠಡಿ ಮೊ. […]