ಪೆರಾರ ಬಲವಂಡಿ ಕ್ಷೇತ್ರ: ಜ.15 ರಂದು ಬಂಟಕಂಬ ಅನುಜ್ಞಾ ವಿಧಿ

ಬಜಪೆ: ಇಲ್ಲಿನ ಐತಿಹಾಸಿಕ ಶ್ರೀಕ್ಷೇತ್ರ ಪೆರಾರದಲ್ಲಿ ಬ್ರಹ್ಮ ದೇವರು, ಇಷ್ಟದೇವತಾ ಮತ್ತು ಬಲವಂಡಿ ಪಿಲಿಚಂಡಿ ದೈವಸ್ಥಾನದ ಅಜೀರ್ಣ ಸ್ಥಿತಿಯಲ್ಲಿದ್ದ ಛತ್ರದರಸ ಚಾವಡಿ ಬಂಟಕಂಬ ರಾಜಾಂಗಣ, ಪಿಲಿಚಂಡಿ ಡೈವಸ್ಥಾನದ ಪುನರ್ ನಿರ್ಮಾಣಕಾಯವು ಅಂತಿಮ ಹಂತದಲ್ಲಿದ್ದು, ಪವಿತ್ರ ಬಂಟಕಂಬದ ಅನುಜ್ಞಾ ವಿಧಿವಿಧಾನಗಳು ಜ.15 ರಂದು ಬೆಳಗ್ಗೆ 8.30 ಕ್ಕೆ ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರ ಪೌರೋಹಿತ್ಯ ಹಾಗೂ ಕದಳಿ ಯೋಗೀಶ್ವರ ಮಠದ ಶ್ರೀ ರಾಜಯೋಗಿ ನಿರ್ಮಲನಾಥ ಮಹಾರಾಜ್ ಇವರ ಶುಭಾಶೀರ್ವಾದದೊಂದಿಗೆ ನಡೆಯಲಿದೆ.

ಈ ನೂತನ ಬಂಟಕಂಬವನ್ನು ತೈಲದಲ್ಲಿ ಇಡಲಾಗುವ್ದು ಮತ್ತು ಭಕ್ತಾದಿಗಳಿಗೆ ತೈಲ್ ಅರ್ಪಿಸುವ ಅವಕಾಶವಿರುತ್ತದೆ. ಶುದ್ದ ತೈಲವನ್ನು ದೈವಸ್ಥಾನದಿಂದ ನೀಡಲಾಗುತ್ತದೆ. ಬಂಟಕಂಬ ಪುನರ್ ಪ್ರತಿಷ್ಠೆಯಾಗುವವರೆಗೆ ಗ್ರಾಮಸ್ಥರು ಶುದ್ದಾಚರಣೆಯಿಂದಿರುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.