ಎರ್ಲಾಪಾಡಿ: ಶಂಕರ ಆಚಾರ್ಯ ಕೆಳಗಿನಮನೆ ಅವರಿಗೆ ಸನ್ಮಾನ

ಬೈಲೂರು: ಕಾರ್ಕಳ ಬೈಲೂರು ಎರ್ಲಾಪಾಡಿ ಗ್ರಾಮದಲ್ಲಿ ಶ್ರೀದೇವಿ ಪಾತ್ರಿಯಾಗಿ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಆದಿಶಕ್ತಿ ಕಾಳಿಕಾಂಬ ಭಜನಾ ಮಂಡಳಿಯ ಮುಖ್ಯಸ್ಥರು ಆಗಿರುವ ಶಂಕರ ಆಚಾರ್ಯ ಕೆಳಗಿನಮನೆ ಅವರನ್ನು ಕಾಂತರಗೋಳಿ ಉದಯಗಿರಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ತುಂಬು ಹರೆಯದ ಹುಡುಗಿ ನಾನು: ಪ್ರತೀ ವಾರ ನನ್ನ ಕತೆ ಹೇಳ್ತೇನೆ: ಹೊಸ ಅಂಕಣ “ಹುಡುಗಿಯೊಬ್ಬಳ ಪಿಸುಮಾತು”

ನಾನೊಬ್ಬಳು ಹುಡುಗಿ. ಅಷ್ಟೇನೂ ಬಿಳುಪೂ ಅಲ್ಲದ, ಕಪ್ಪೂ ಇಲ್ಲದ ಸಾಧಾರಣ ರೂಪಿನ, ಸ್ವಲ್ಪ ದಪ್ಪ ಮೈಕಟ್ಟಿನ ಹರೆಯದ ಹುಡುಗಿ. ನಾನು ಹುಟ್ಟಿದಾಗ ಚೊಚ್ಚಲ ಹೆರಿಗೆ ನನ್ನಮ್ಮನಿಗೆ. ಎಲ್ಲರೂ ಸೇರಿ ಸಿಹಿ ಹಂಚಿ ಸಂಭ್ರಮಿಸಿದ್ದರಂತೆ. ನನ್ನ ನಸು ನಗು, ಮೊದಮೊದಲ ತೊದಲು ಮಾತು, ಎದ್ದು-ಬಿದ್ದು ಪುಟು ಪುಟು ನಡೆಯೋ ನನ್ನಂದ ಎಲ್ಲರ ದೃಷ್ಟಿ ಬೀಳುವಂತಿತ್ತಂತೆ. ಗೊಂಬೆಯಂತಿದ್ದ ನನ್ನ ಬಾಲ್ಯದ ಪ್ರತಿ ಕ್ಷಣಗಳನ್ನೂ ನನ್ನಪ್ಪ- ಅಮ್ಮ, ಅಜ್ಜ- ಅಜ್ಜಿ ಅವರ ಬಾಲ್ಯದಂತೆಯೇ ಅಚ್ಚರಿಯಿಂದ ಸಂಭ್ರಮಿಸಿದ್ದರಂತೆ. ನನ್ನ ಬೇಕು-ಬೇಡಗಳಿಗೆ ಇಲ್ಲವೆನ್ನದೆ ಪ್ರೀತಿಯ […]

ಶಿರ್ಲಾಲು ನಿಡ್ಲೆಪಾದೆ ಗರಡಿ ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ದೈವಗಳ ಮಾಯಾಂದಲೆ ಕೋಲ

ಕಾರ್ಕಳ: ತಾಲೂಕಿನ ಶಿರ್ಲಾಲು ಗ್ರಾಮದ ನಿಡ್ಲೆಪಾದೆ ಗರಡಿ ಕೊಡಮಣಿತ್ತಾಯ ಹಾಗೂ ಬ್ರಹ್ಮಬೈದರ್ಕಳ ದೈವಗಳ ಮಾಯಾಂದಲೆ ಕೋಲ ಇತ್ತೀಚೆಗೆ ನಡೆಯಿತು. ಇದೇ ಸಂದರ್ಭದಲ್ಲಿ ದಾನಿಗಳಾದ ಜಯಶ್ರೀ ರಾಜು ಪೂಜಾರಿ, ಪ್ರಕಾಶ್ ಪೂಜಾರಿ ,ದಿನೇಶ್ ಪೂಜಾರಿ ‌,ಸುಂದರ ಮಡಿವಾಳ ,ಸುಮಿತ್ರಾ ದಾನಿಗಳನ್ನು ಸನ್ಮಾನಿಸಲಾಯಿತು . ಕಾರ್ಯಕ್ರಮದಲ್ಲಿ ಅನಂತರಾಜ ಪೂವಾಣಿ ದೊಡ್ಡಮನೆ , ದಯಾನಂದ ನಾಯಕ್ , ಸತೀಶ್ ಮುದ್ಯ ,ವೆಂಕಟೇಶ್ ಪ್ರಭು , ಗುಣಾಕಾರ ಪುಜಾರಿ ಧರಣೇಂದ್ರ ಜೈನ್ ಊರ ಭಕ್ತಾದಿಗಳು, ಭಾಗವಹಿಸಿದ್ದರು

ಕೊರೊನಾ: ಉಡುಪಿ ಜಿಲ್ಲೆಯಲ್ಲಿ 210, ಎಂಐಟಿ ಕ್ಯಾಂಪಸ್ ನಲ್ಲಿ 184 ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಜನರಲ್ಲಿ ಭೀತಿ ಹುಟ್ಟಿಸುತ್ತಿದೆ. ಇಂದು ಜಿಲ್ಲೆಯಲ್ಲಿ 210 ಕೊರೊನಾ ಕೇಸ್ ಕಾಣಿಸಿಕೊಂಡಿದ್ದು, ಕಂಟೈನ್ ಮೆಂಟ್ ಝೋನ್ ಆಗಿರುವ ಮಣಿಪಾಲದ ಎಂಐಟಿ ಕ್ಯಾಂಪಸ್ ನಲ್ಲಿ 184 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.

ಉಡುಪಿ: ಕಟ್ಟಡದಿಂದ ಜಿಗಿದು ಪೆಟ್ರೋಲ್ ಬಂಕ್ ಮಾಲೀಕ ಆತ್ಮಹತ್ಯೆ

ಉಡುಪಿ: ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಕಟ್ಟಡದ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಗರದ ಮಠದಬೆಟ್ಟು ಎಂಬಲ್ಲಿ ಸಂಭವಿಸಿದೆ. ಆತ್ರಾಡಿ ಪೆಟ್ರೋಲ್ ಬಂಕ್ ಮಾಲೀಕ ಉತ್ತಮ್ ನಾಯಕ್(30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ನಾಲ್ಕೈದು ತಿಂಗಳ ಹಿಂದೆ ವಿವಾಹವಾಗಿದ್ದು, ಪತ್ನಿ ಮುಂಬೈನಲ್ಲಿ ನೆಲೆಸಿದ್ದಾರೆ. ಇವರು ಮಠದ ಬೆಟ್ಟುವಿನಲ್ಲಿರುವ ಫ್ಲ್ಯಾಟ್ ನ 3ನೇ ಮಹಡಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು ಎಂದು ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇವರ ಮೃತದೇಹವನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಸಾಗಿಸುವಲ್ಲಿ ಸಮಾಜ […]