ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ ಯುವತಿ: ದೂರಿನ ಕಂಪ್ಲೀಟ್ ವಿವರ ಇಲ್ಲಿದೆ.!

ಬೆಂಗಳೂರು: ಸಿ.ಡಿ.ಪ್ರಕರಣ ಸಂಬಂಧ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಂತ್ರಸ್ತ ಯುವತಿ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರ ಮೂಲಕ ದೂರು ಸಲ್ಲಿಸಿದ್ದಾರೆ. ಯುವತಿ ತಮ್ಮ ಕೈಯಿಂದ ಬರೆದಿರುವ ದೂರಿನ ಪ್ರತಿಯನ್ನು ನಮಗೆ ತಲುಪಿಸಿದ್ದಾರೆ. ಇದನ್ನೇ ಕಮಿಷನರ್ ಅವರಿಗೆ ನೀಡಿ, ಮುಂದಿನ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದೇನೆ ಎಂದು ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ. ಯುವತಿಗೆ ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆ ಇದೆ. ಅವರಿಗೆ ಸೂಕ್ತ ಭದ್ರತೆ ನೀಡಬೇಕು. ನಂತರವೇ ಯುವತಿ, ಕಮಿಷನರ್ ಎದುರು ಹಾಜರಾಗಿ ಹೇಳಿಕೆ […]

ಸುಯೆಜ್ ಕಾಲುವೆಯಲ್ಲಿ ಸಿಲುಕಿದ ಬೃಹತ್ ಸರಕು ಸಾಗಣೆ ಹಡಗು: ಹಡಗಿನಲ್ಲಿದ್ದ 25 ಭಾರತೀಯ ಸಿಬ್ಬಂದಿ ಸುರಕ್ಷಿತ

ಈಜಿಪ್ಟ್: ಇಲ್ಲಿನ ಸುಯೆಜ್ ಕಾಲುವೆಯಲ್ಲಿ ಜಪಾನ್ ಮೂಲದ ಬೃಹತ್ ಸರಕು ಸಾಗಣೆ ‘ಎವರ್ ಗಿವನ್’ ಹಡಗೊಂದು ಸಿಲುಕಿದ್ದು, ಹಡಗಿನಲ್ಲಿರುವ ಎಲ್ಲ 25 ಸಿಬ್ಬಂದಿ ಭಾರತೀಯರು ಎಂದು ತಿಳಿದುಬಂದಿದೆ. ಹಡಗಿನಲ್ಲಿರುವ ಎಲ್ಲ ಸಿಬ್ಬಂದಿ ಸುರಕ್ಷಿತರಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಯತ್ನಿಸಲಾಗುತ್ತಿದೆ ಎಂದು ಎವರ್ ಗಿವನ್ ಹಡಗಿನ ಮಾಲೀಕರು ಹೇಳಿದ್ದಾರೆ. ಹಡಗು ಸುಮಾರು 1,300 ಅಡಿ ಉದ್ದ ಮತ್ತು 2,00,000 ಮೆಟ್ರಿಕ್ ಟನ್ ಭಾರ ಹೊಂದಿದೆ. ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು […]

ವಕೀಲರ ಮೂಲಕ ದೂರು ನೀಡಲು ಮುಂದಾದ ಸಂತ್ರಸ್ತ ಯುವತಿ; ಜಾರಕಿಹೊಳಿಗೆ ಸಂಕಷ್ಟ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿಯೇ ಸ್ವತಃ ದೂರು ಬರೆದುಕೊಟ್ಟಿದ್ದಾರೆ. ದೂರಿನ ಪ್ರತಿಯನ್ನು ನಾನು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಲ್ಲಿಸುತ್ತೇನೆ ಎಂದು ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ಕೆ ಎನ್​ ಮಹದೇವ್​ ಹೇಳಿದ್ದಾರೆ. ಯುವತಿ ಆರೋಪಿಸುತ್ತಿರುವ ವ್ಯಕ್ತಿ ಪ್ರಭಾವಶಾಲಿಯಾಗಿದ್ದಾರೆ. ಹೀಗಾಗಿ ಭದ್ರತೆಯ ಕಾರಣದಿಂದ ನಮ್ಮ ಮುಖಾಂತರ ದೂರು ಕೊಡಿಸುತ್ತಿದ್ದಾರೆ. ಈ ಮೊದಲೇ ಕಾನೂನು ಬೆಂಬಲ ನೀಡುವುದಾಗಿ ಹೇಳಿದ್ದೆ. ನನ್ನನ್ನೂ ಸೇರಿ 8 ವಕೀಲರು ಸಹಾಯ ಮಾಡುತ್ತಿದ್ದೇವೆ. ಸಿಡಿಯಲ್ಲಿರುವ […]

ರಕ್ತದ ಆಪತ್ಬಾಂಧವ ಸತೀಶ್ ಸಾಲಿಯಾ‌ನ್ ಮಣಿಪಾಲ ಅವರಿಗೆ ಮಂಗಳೂರಿನಲ್ಲಿ ಸನ್ಮಾನ

ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ವತಿಯಿಂದ ನಾಳೆ (ಮಾ. 27) ಮಂಗಳೂರು ಮುಳಿಹಿತ್ಲುವಿನ ಫೆಡರೇಷನ್ ಪ್ರಧಾನ ಕಚೇರಿಯಲ್ಲಿ ನಡೆಯುವ ಉಚಿತ ಮಣಿಪಾಲ್ ಸಿಗ್ನಾ ಪ್ರೋಹೆಲ್ತ್ ಇನ್ಶ್ಯೂರೆನ್ಸ್ ಕಾರ್ಡ್ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ರಕ್ತದ ಆಪತ್ಬಾಂಧವ ಸತೀಶ್ ಸಾಲಿಯಾನ್ ಮಣಿಪಾಲ್ ಅವರನ್ನು ಸನ್ಮಾನಿಸಲಾಗುವುದು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ಜಿ. ಶಂಕರ್, ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ, ದ.ಕ. ಮೊಗವೀರ […]

ಫ್ಯಾಷನ್ ಫ್ರುಟ್‍ ಪೆಪ್ಸಿ ತಯಾರಿಸಿ ಸೈ ಎನ್ನಿಸಿಕೊಂಡ ಕೃಷಿಕ: ಆಹಾ ಏನ್ ಟೇಸ್ಟು ಇವರು ಮಾಡುವ ಫ್ಯಾಷನ್ ಫ್ರುಟ್‍ನ ಪೆಪ್ಸಿ

«ಗಣಪತಿ ಹಾಸ್ಪುರ ನೀವು ಮಾರುಕಟ್ಟೆಯಲ್ಲಿ ಸಿಗುವ ಮ್ಯಾಂಗೋ, ಆರೆಂಜ್ ಇತ್ಯಾದಿಗಳಿಂದ ಸಿದ್ಧಗೊಂಡ ರುಚಿರುಚಿಯಾದ ಪೆಪ್ಸಿಗಳನ್ನು ಸವಿದಿರಬಹುದು. ಆದ್ರೆ, ಫ್ಯಾಷನ್ ಫ್ರುಟ್‍ನಿಂದ ತಯಾರಿಸಿದ ಪೆಪ್ಸಿಯ ರುಚಿಯನ್ನು ಸವಿದಿದ್ದೀರಾ? ಅಂತಹ ಹಣ್ಣಿನ ರಸದಿಂದ ಪೆಪ್ಸಿ ಮಾಡಬಹುದು ಎಂಬುದು ಸಹಾ ಗೊತ್ತಿರಲಿಕ್ಕಿಲ್ಲ ಅಲ್ಲವೇ? ಅಂಥದೊಂದು ಸಾಧನೆ ಮಾಡಿ ತೋರಿಸಿದ್ದಾರೆ ಕಾನಕೊಡ್ಲಿನ ಕೃಷಿಕ ಪ್ರಸಾದ ಹೆಗಡೆ. ಇವರು ಉ.ಕ.ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೆಮ್ಮಾಡಿ (ಕುಂದರಗಿ ಗ್ರಾಂ. ಪಂ.) ಸಮೀಪದ ಕಾನಕೊಡ್ಲಿನವರು. ಬಿ. ಎ. ಪದವೀಧರರಾದ ಇವರು ಕೃಷಿಯನ್ನೆ ಉಸಿರಾಗಿಸಿಕೊಂಡವರು. ಕೃಷಿಯಲ್ಲಿ ವಿಶಿಷ್ಟ ಸಾಧನೆ […]